![UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!](https://www.udayavani.com/wp-content/uploads/2024/12/5-37-415x249.jpg)
ದೇವಸ್ಥಾನದಲ್ಲಿ ಸುಶ್ರಾವ್ಯ ಸಂಗೀತ
Team Udayavani, Sep 15, 2017, 12:10 PM IST
![15-KLAA-4.jpg](https://www.udayavani.com/wp-content/uploads/2017/09/15/15-KLAA-4.jpg)
ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸಿಂಹಮಾಸದ ಪೂಜೆಯ ಸಂದರ್ಭದಲ್ಲಿ ವಿ| ಗೀತಾ ಸಾರಡ್ಕ ಮತ್ತು ಬಳಗದವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸುಶ್ರಾವ್ಯವಾಗಿ ಮೂಡಿ ಬಂತು. “ಸರಸೀರುಪಾಸನಾ ಪ್ರಿಯೆ’ ನಾಟಿ ರಾಗದ ಶ್ರೀದೇವಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
“ನಾಗ ಗಾಂಧಾರ’ ರಾಗದ “ಸರಸಿಜನಾಭ ಸೋದರಿ’ ಮತ್ತು “ಅಮೃತ ವರ್ಷಿಣಿ’ ರಾಗದ “ಆನಂದಾಮೃತಕರ್ಷಿಣಿ’ ಸೂಕ್ತ ಆಲಾಪನೆ ಸ್ವರ ಪ್ರಸ್ತಾರದಿಂದ ಮಹತ್ವಯುತವಾದ ಕೀರ್ತನೆ. ಕಿರಿದಾದ ಆಲಾಪನೆಯಿಂದ “ರಂಜಿನಿ’ ರಾಗದ “ಪದ್ಮರಾಗಮಣಿ ಭೂಷಣೆ’ ಕೃತಿ ಕರ್ಣ ಮನೋಹರವಾಗಿತ್ತು. “ಕಾನಡ’ ರಾಗದ “ಮಾಮವ ಸದಾಜನನಿ’ ಸೂಕ್ತ ಆಲಾಪನೆಯಿಂದ ಸ್ಫೂರ್ತಿದಾಯಕವಾಗಿತ್ತು. “ಮೋಹನ ಕಲ್ಯಾಣಿ’ ರಾಗದ “ಭುವನೇಶ್ವರಿಯ ನೆನೆ ಮಾನಸವೆ’, “ವರವ ಕೊಡು ಎನಗೆ ವಾಗ್ದೇವಿ’ ಕನಕದಾಸರ ರಚನೆಯ ಹಾಡು ಕೀರ್ತನಾಸಕ್ತರ ಮನ ಸೆಳೆಯಿತು.
“ಷಣ್ಮುಖ ಪ್ರಿಯ’ ರಾಗದ “ದಯಾಮಯಿ ಶಾರದಾ’ ದೇವರನಾಮ ವಿದ್ವತ್ ಪೂರ್ಣವಾಗಿ ಮೂಡಿ ಬಂತು. “ಮಧ್ಯಮಾವತಿ’ ರಾಗದ “ಭಾಗ್ಯಲಕ್ಷ್ಮೀ ಬಾರಮ್ಮ’ ಜನಪ್ರಿಯ ಕೃತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪ್ರಾರಂಭದಲ್ಲಿ ಕಿರಿಯ ಸಂಗೀತ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡಿದರು. ಹಿರಿಯ ಸಂಗೀತ ವಿದ್ಯಾರ್ಥಿಗಳಾದ ಅನಘಾ ಮರಕ್ಕಿಣಿ ಮತ್ತು ಕ್ಷಮಾಶ್ರೀ ಕೋಡಂದೂರು ಉತ್ತಮ ಹಾಡುಗಾರಿಕೆ ಪ್ರದರ್ಶಿಸಿದರು. ಬಾಲರಾಜ್ ಬೆದ್ರಡಿ ವಯಲಿನ್ನಲ್ಲಿ ಮತ್ತು ಮುರಳಿಕೃಷ್ಣ ಕುಕ್ಕಿಲ ಮೃದಂಗದಲ್ಲಿ ಸಹಕರಿಸಿ, ಒಳ್ಳೆಯ ಹಿಮ್ಮೇಳದಿಂದ ಕಾರ್ಯಕ್ರಮ ರಂಜಿಸಿತು. ಸೇರಿದ್ದ ಭಕ್ತರೂ ಮಕ್ಕಳನ್ನು ಪ್ರೋತ್ಸಾಹಿಸಿದರು.
ಅನೂಷಾ ಹೊನ್ನೇಕೂಲು
ಟಾಪ್ ನ್ಯೂಸ್
![UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!](https://www.udayavani.com/wp-content/uploads/2024/12/5-37-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![3-1](https://www.udayavani.com/wp-content/uploads/2024/12/3-1-150x90.jpg)
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
![19](https://www.udayavani.com/wp-content/uploads/2024/09/19-3-150x90.jpg)
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
![Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !](https://www.udayavani.com/wp-content/uploads/2024/08/14-19-150x90.jpg)
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
![1-trrr](https://www.udayavani.com/wp-content/uploads/2024/07/1-trrr-1-150x88.jpg)
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
![Idu Entha Lokavayya: “ಕೋಸ್ಟಲ್” ನಿಂದ ಕರುನಾಡು!](https://www.udayavani.com/wp-content/uploads/2024/07/27-150x90.jpg)
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
![UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!](https://www.udayavani.com/wp-content/uploads/2024/12/5-37-150x90.jpg)
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
![ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ](https://www.udayavani.com/wp-content/uploads/2024/12/sid-1-150x87.jpg)
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.