ಕ್ವಾನ್ವಾಸ್‌ಗಳಲ್ಲಿ ಅರಳಿದ ಕರಾವಳಿಯ ಸಂಸ್ಕೃತಿ 


Team Udayavani, Apr 13, 2018, 6:00 AM IST

11.jpg

ಕರುನಾಡಿನ ನೆಲ ಮತ್ತು ಸಂಸ್ಕೃತಿಯ ಸೊಬಗಿಗೆ ಸೊಡರು ಕಟ್ಟಿ ಬಣ್ಣದ ಸೊಗಸು ಚೆಲ್ಲಿ ಕೃತಿಗಳ ತೋರಣ ಕಟ್ಟಿದವರು ಮಂಗಳೂರಿನ ಚಿತ್ರಕಲಾ ಚಾವಡಿಯ ಕಲಾವಿದರು. ಕರುನಾಡಿನ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಣ್ಣಗಳಲ್ಲಿ ಬರೆದು ಅದರೊಳಗಿನ ಹೊನ್ನಿನ ಬೆಳಕನ್ನು ಅರಸಿ ಹೊಂಬೆಳಕು ಎಂಬ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ಪ್ರದರ್ಶಿಸಿದರು.ರಾಜ್ಯದ ಸಂಸ್ಕೃತಿ ಬಗ್ಗೆ ಕಲಾಕೃತಿಗಳಿದ್ದರೂ ಕರಾವಳಿಯ ವಸ್ತು ವಿಚಾರಗಳೇ ಹೆಚ್ಚಿನ ಕೃತಿಗಳಿಗೆ ವಸ್ತುವಾಗಿತ್ತು. 

 ಕರಾವಳಿಯ ಹಿನ್ನಲೆಯು ವಿಶೇಷವಾಗಿರುವುದರಿಂದ ಇಲ್ಲಿನ ಧಾರ್ಮಿಕ ಹಾಗೂ ಪ್ರಾಕೃತಿಕ ವಸ್ತು ವಿಷಯಗಳು ಕಲಾಕೃತಿಗೆ ಹೆಚ್ಚು ಪೂರಕವಾಗಿದ್ದುದರಿಂದ ಅವುಗಳೇ ಈ ಪ್ರದರ್ಶನದಲ್ಲಿ ಒಪ್ಪ ಓರಣವಾದ ತೋರಣವಾಗಿತ್ತು. 23 ಕಲಾವಿದರು ಬಣ್ಣದ ಬೆಳಕನ್ನು ಪಸರಿಸಿ ನಾಡಿನ ಸಂಸ್ಕೃತಿಯ ಬೆಡಗನ್ನು ಚಿತ್ರಿಸಿ ಹೊಂಬೆಳಕಿನ ಯಶಸ್ಸಿನ ಪಾತ್ರಧಾರಿಗಳಾಗಿದ್ದು ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವಕ್ಕೆ ಸಾರ್ಥಕರಾಗಿದ್ದರು. ಶುಭ ಸಮಾರಂಭಗಳಿಗೆ ಆರಂಭದಲ್ಲಿ ಗಣಪತಿ ಶ್ಲೋಕವೊಂದು ಇರುವ ಪದ್ಧತಿಯಂತೆ ಪೆರ್ಮುದೆ ಮೋಹನ್‌ ಕುಮಾರ್‌ರವರ ಗಣಪತಿ ಮತ್ತು ಜಾಗಟೆಯಿಂದ ಈ ಕಲಾಪ್ರರ್ಶನ ಆರಂಭವಾಗುತ್ತದೆ. ಮುಂದೆ ವಿಷ್ಣು ಶೇವಗೂರ್‌ರವರು ಮತ್ತು ಸುಧೀರ್‌ ಕಾವೂರ್‌ರವರು ವೀಕ್ಷಕರನ್ನು ನಾಗಬನದ ಒಳ ಹೊಕ್ಕಿಸುತ್ತಾರೆ. ಇನ್ನೂ ಮುಂದುವರಿದಾಗ ಗಣೇಶ್‌ ಸೋಮಯಾಜಿಯವರು ಕಂಬಳವನ್ನು ತೋರಿಸುತ್ತಾರೆ. ಕಮಾಲ್‌ರವರು ತುಳುನಾಡಿನ ಕೋಳಿ ಅಂಕವನ್ನು ಪ್ರದರ್ಶಿಸಿದರೆ ರಚನಾ ಸೂರಜ್‌, ನವೀನ್‌ ಬಂಗೇರ, ಈರಣ್ಣ ತಿಪ್ಪಣ್ಣನವರು ಯಕ್ಷಗಾನದ ಮೆರುಗನ್ನು ತಿಳಿಸುತ್ತಾರೆ. ಮುರಳೀಧರ್‌ರವರು ಭೂತಾರಾಧನೆಯನ್ನು, ಸಪ್ನಾ ನೊರೋನ್ಹರವರು ಬಾಹುಬಲಿಯನ್ನು, ತಾರಾನಾಥ ಕೈರಂಗಳರವರು ಜಲಪಾತವನ್ನು, ಅನಂತ ಪದ್ಮನಾಭ ಮತ್ತು ಶರತ್‌ ಹೊಳ್ಳ ಮೀನುಗಾರ ಮಹಿಳೆಯರನ್ನು, ಸತೀಶ್‌ ರಾವ್‌, ಸುಲ್ತಾನ್‌ ಬತ್ತೇರಿಯನ್ನು, ಜಯಶ್ರೀಯವರು ಬತ್ತ ಕುಟ್ಟುವ ಮಹಿಳೆಯರನ್ನು, ಪಾಂಡುರಂಗ ರಾವ್‌ ಚೆಂಡೆವಾದನವನ್ನು, ಜಾನ್‌ ಚಂದ್ರನ್‌ರವರು ದೃಷ್ಟಿ ಸೂಚಕ ಸಂಪ್ರದಾಯವನ್ನು, ಪುನೀತ್‌ ಶೆಟ್ಟಿಯವರು ಕೃಷ್ಣನನ್ನು, ಸಂತೋಷ್‌ ಅಂದ್ರಾದೆಯವರು ತುಳುನಾಡಿನ ಸಾಂಪ್ರದಾಯಿಕ ಗುತ್ತಿನ ಮನೆಯನ್ನು, ಪೂರ್ಣೇಶ್‌ರವರು ತುಳುನಾಡಿನ ದೈವದ ಗಗ್ಗರವನ್ನು ಪ್ರದರ್ಶಿಸಿ ಈ ಹೊಂಬೆಳಕಿನ ತಳುಕಿನಲ್ಲಿ ಇಡೀ ತುಳುನಾಡಿನ ಸಾರ್ವಕಾಲಿಕ ಸಂಸ್ಕೃತಿಯನ್ನು ಬಣ್ಣಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಒಟ್ಟಾರೆ ಈ ಕಲಾಕೃತಿಗಳ ವರ್ಣ ಪಥದಲ್ಲೇ ಸಾಗಿದಾಗ ಕರಾವಳಿ-ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಏತ್‌ ಪೊರ್ಲುದ ತುಳುನಾಡು? ಎಂಬ ಮಾತನ್ನು ಬರಿಸುವುದರೊಂದಿಗೆ ಚಾವಡಿಯ ಕಲಾವಿದರು ಸಮರ್ಥರಾಗಿದ್ದರು. ಈ ಹೊಂಬೆಳಕಿಗೆ ವಿಶೇಷ ಪ್ರಖರತೆಯ ಶೋಭೆಯನ್ನು ನೀಡಿದವರು ದ್ಘಾಟನೆ ನೆರವೇರಿಸಿದ ಮಂಗಳೂರಿನ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್‌ರವರು. 
 
ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.