ಗತ ವೈಭವ ನೆನಪಿಸಿದ ವಜ್ರದ ಮೂಂಕುತ್ತಿ


Team Udayavani, Jan 3, 2020, 1:10 AM IST

56

ಹಿಂದೆಲ್ಲಾ ಕರಾವಳಿಯಲ್ಲಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಊರ ಜಾತ್ರೆ ಉತ್ಸವಗಳ ಸಂದರ್ಭದಲ್ಲೆಲ್ಲ ಸ್ಥಳೀಯ ಯುವಕರು ಸೇರಿ ಅಭಿನಯಿಸುವ ನಾಟಕಗಳನ್ನು ಕಾಣಬಹುದಿತ್ತು. ಸಂಸಾರ ಧರ್ಮ, ಅತ್ತೆ ಸೊಸೆ, ಅಣ್ಣ ತಂಗಿ, ಕರುಳಬಳ್ಳಿಯ ಅಗಾಧತೆಯನ್ನೂ, ಸಾಮಾಜಿಕ ನ್ಯಾಯ ಮೌಲ್ಯಪ್ರಜ್ಞೆಯನ್ನೂ ಸತ್ವಪೂರ್ಣವಾಗಿ ಮನವರಿಕೆ ಮಾಡುವ ನೂರಾರು ನಾಟಕಗಳು ಪ್ರದರ್ಶನಗೊಳ್ಳುತಿದ್ದವು. ಈ ನಾಟಕಗಳ ಮೂಲಕ ಅನೇಕ ನಾಟಕ ರಚನೆಕಾರರು, ಹಿನ್ನೆಲೆ ಸಂಗೀತ ಕಲಾವಿದರು, ರಂಗಸಜ್ಜಿಕೆ ಕಲಾವಿದರು ಹೆಸರುವಾಸಿಯಾಗಿದ್ದರು. ಸ್ಥಳೀಯ ಪ್ರತಿಭೆಗಳ ಅಭಿನಯದ ಬಗ್ಗೆ ಗದ್ದೆ, ತೋಟ, ಹೋಟೆಲ್, ಸೆಲೂನ್‌ಗಳಲ್ಲಿ ಚರ್ಚೆಯಾಗುತಿದ್ದವು.

ಯುವಕರ ಆಸಕ್ತಿಯ ಕ್ಷೇತ್ರ ಬದಲಾಗುತ್ತಿದ್ದಂತೆ ಹಳ್ಳಿ ನಾಟಕಗಳು ಅಪರೂಪವೆನಿಸತೊಡಗಿದವು. ಹಾಗೂ ಈ ಜಾಗವನ್ನು ಸಂಗೀತ ಕಛೇರಿಗಳು, ನೃತ್ಯತಂಡಗಳು ಆಕ್ರಮಿಸಿದವು. ಇನ್ನೂ ಅನಿವಾರ್ಯವೆನಿಸಿದಾಗ ಪೇಟೆಯ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.

ಆದರೆ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಕೆಲವೇ ಊರುಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮವೂ ಒಂದು. ಇಲ್ಲಿ ಇತ್ತೀಚಿಗೆ ನಡೆದ ಮಲೆಯಾಳಿ ಬಿಲ್ಲವ ಸೇವಾ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಥಳೀಯ ಯುವಕರು ಪ್ರದರ್ಶಿಸಿದ ಶಶಿಧರ ಬಂಡಿತಡ್ಕ ರಚಿಸಿ, ವೈ.ಬಿ. ಸುಂದರ್‌ ಮುಂದಾಳತ್ವದಲ್ಲಿ, ನಿತಿನ್‌ ಹೊಸಂಗಡಿ ನಿರ್ದೇಶಿಸಿದ “ವಜ್ರದ ಮೂಂಕುತ್ತಿ’ ನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸುವುದರಲ್ಲಿ ಯಶಸ್ವಿಯಾಯಿತು.

ಪ್ರೀತಿಸಿದ ಯುವತಿಯನ್ನು ಮದುವೆಯಾಗದೆ ಚಡಪಡಿಸುವ ಮನಮಿಡಿಯುವ ಸೂರಜ್‌ನ ಪಾತ್ರದಲ್ಲಿ ವೈ.ಬಿ. ಪ್ರವೀಣ್‌ ಮನೋಜ್ಞ ಅಭಿನಯ ನೀಡಿದರೆ, ನಾಯಕಿಯ ಮನಮುಟ್ಟುವ ಪಾತ್ರದ ಮೂಲಕ ಮಿಥುನ್‌ ಪ್ರೇಕ್ಷಕರಿಂದ ಶಹಬಾಸ್‌ಗಿರಿ ಪಡೆದರು.ಇನ್ನು ವಿಶೇಷವಾಗಿ ತನ್ನ ವಿಭಿನ್ನ ಹಾಸ್ಯ ಅಭಿನಯದ ಅಜ್ಜಿಯ ಪಾತ್ರದಲ್ಲಿ ದಿನೇಶ್‌ ಚಪ್ಪಾಳೆ ಗಿಟ್ಟಿಸಿದರು. ಧೀರಜ್‌ ಮುಗುಳ್ಯ, ಸಂಜಿತ್‌ ಕುಕ್ಕಾಜೆ, ಅಶೋಕ್‌ ಚಟ್ಟೆಕಲ್ಲು, ಶರತ್‌ ಕೆಂಜಿಲ ಹೊಟ್ಟೆಹುಣ್ಣಾಗುವಷ್ಟು ನಗಿಸುವಲ್ಲಿ ಯಶಸ್ವಿಯಾದರು. ನಾಗೇಶ್‌ ಪೂಜಾರಿ-ದೇಜಪ್ಪ ಪೂಜಾರಿ ಅವರೂ ನಗು ತರಿಸಿದರು. ವೈ.ಬಿ ಸುಂದರ್‌, ಗಣೇಶ್‌ ಕಿನ್ನಿಮಜಲು, ರಕ್ಷಿತ್‌ ಇರಾ, ನಾರಾಯಣ ಸೂತ್ರಬೈಲ್, ಗೋಪಾಲ್‌ ಅಶ್ವಥಡಿ ಮುಂತಾದವರ ಉತ್ತಮ ಅಭಿನಯ ಎರಡೂವರೆ ತಾಸುಗಳ ಕಾಲ ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ದೊರಕಿದರೆ ರಂಗಭೂಮಿ ಇನ್ನಷ್ಟು ಪ್ರಜ್ವಲಿಸಬಹುದು ಎಂಬುದು ನಿಜವಾಗಿದೆ.

ಸತೀಶ್‌ ಇರಾ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.