ಆತ್ಮ ಸಂಘರ್ಷದ “ಅತೀತ’- ಮಾನವೀಯತೆ ಮುಖಾಮುಖಿ “ಐಸಿಯು ನೋಡುವೆ ನಿನ್ನ


Team Udayavani, Oct 12, 2018, 6:00 AM IST

z-6.jpg

ನಾಟಕದ ಕೊನೆಯಲ್ಲಿ ಅವನ ಆತ್ಮಚರಿತ್ರೆ ಬರೆಯಲು ಬಂದವಳು ಸ್ವಾರ್ಥಕ್ಕಾಗಿ ಸೋತ ಖಟ್ಲೆಯಲ್ಲಿ ತನ್ನ ಬದುಕನ್ನು ಹಾಳು ಮಾಡಿಕೊಂಡ ಅಮಾಯಕಿಯ ಮಗಳು ಅನ್ನೋ ಸತ್ಯ ಬಯಲಾಗುತ್ತದೆ. ಆಧುನಿಕ ಮನಸ್ಸುಗಳ ನಡುವೆ ದುರಾಭಿಮಾನದ ಲೋಕದಲ್ಲಿ ಸತ್ಯ ಸಗಣಿ, ಹೊಲಸು, ಅಸಹ್ಯ ಅಂದಮೇಲೆ ಪ್ರೀತಿ ಎಲ್ಲಿಂದ ಹುಟ್ಟಬೇಕು ಕಂಡ್ರಿ? ಈ ಪ್ರಶ್ನೆ ಪ್ರಸಕ್ತದಲ್ಲಿ ಎಲ್ಲರನ್ನೂ ಕಾಡುತ್ತದೆ.

ರಂಗ ಸಂಗಾತಿಯ ದಶಮಾನೋತ್ಸವದಂಗವಾಗಿ ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಉಡುಪಿ ರಂಗಭೂಮಿ ತಂಡದಿಂದ ಶಶಿರಾಜ್‌ ಕಾವೂರ್‌ ರಚನೆಯ ರವಿರಾಜ್‌ ನಿರ್ದೇಶನದ ನಾಟಕ “ಐಸಿಯು ನೋಡುವೆ ನಿನ್ನ’ ಮತ್ತು ಸೇತುರಾಮ್‌ ಅವರ ರಚನೆ ಮತ್ತು ನಿರ್ದೇಶನದ “ಅತೀತ’ ನಾಟಕಗಳು ಪ್ರದರ್ಶನಗೊಂಡವು. 

 ಯಂತ್ರವನ್ನು ಸೃಷ್ಟಿಸಿದವನು ಮನುಷ್ಯ, ಆದರೆ ಮನುಷ್ಯನೇ ಯಂತ್ರವಾದರೆ ಬದುಕು ದುಸ್ತರವಾಗುತ್ತದೆ ಎನ್ನುವುದನ್ನು ಐಸಿಯು ನೋಡುವೆ ನಿನ್ನ ನಾಟಕದ ಪಾತ್ರಗಳು ಚಿತ್ರಿಸುತ್ತವೆ. ಮನುಷ್ಯ ಭಾವಜೀವಿ ಆದರೆ ಭಾವನೆಗಳೇ ಇಲ್ಲದೆ ಬದುಕಿದರೆ ಹೇಗೆ? ಸಂಬಂಧಗಳ ನಡುವೆ ಪ್ರೀತಿ, ಮಮತೆ, ವಾತ್ಸಲ್ಯ, ಪ್ರೇಮ ಇವುಗಳು ಇಲ್ಲವಾಗಿ ಕೇವಲ ಹಣ, ಆಸ್ತಿ, ಸಂಪತ್ತು ಮುಖ್ಯವಾಗುತ್ತಿದೆ. ಕಥಾ ಹಂದರವು ಆಸ್ಪತ್ರೆಯ ಒಳ ಪ್ರಾಂಗಣದಲ್ಲಿರುವ ಐಸಿಯು ಮುಂಭಾಗದಲ್ಲಿ ನಡೆಯುತ್ತದೆ. ಅಂತರಂಗ ಮತ್ತು ಬಹಿರಂಗಗಳ ಒಳ ಮತ್ತು ಹೊರ ಮನಸ್ಸುಗಳ ಸಂಘರ್ಷವನ್ನು ತೆರೆಯ ಮೇಲೆ ತರುತ್ತದೆ. ಆರು ಮಕ್ಕಳಿಗೆ ಜನ್ಮಕೊಟ್ಟ ಅಪ್ಪ ಆಸ್ಪತ್ರೆ ಪಾಲಾಗಿದ್ದಾನೆ. ಅವನ ವೈದ್ಯಕೀಯ ವೆಚ್ಚ ಸರಿದೂಗಿಸಲು ಮಕ್ಕಳ ಜಗಳ, ಬಡಿದಾಟ ನಾಟಕದೊಳಗೆ ನಾಟಕೀಯ ಸನ್ನಿವೇಶ. ಚುರುಕುತನದ ಪಾತ್ರಗಳು ಲವವಿಕೆಯ ನಟನೆಯಿಂದ ರಂಗದ ಮೇಲೆ ಜೀವ ತುಂಬಿದವು. ಕಿರಿಯ ಮಗ ಮೌನೇಶ, ಗಿರೀಶ್‌, ರಮೇಶ್‌, ಸತೀಶ್‌, ಮಂಗಳಾ, ದಿನೇಶ್‌, ಆಸ್ಪತ್ರೆ ಅಟೆಂಡರ್‌, ಡಾಕ್ಟರ್‌ ನರ್ಸ್‌, ಗ್ರಾಹಕ ವಿಲ್‌ಫ್ರೆಡ್‌, ಜಸಿಂತಾ, ಈ ಎಲ್ಲಾ ಪಾತ್ರಗಳು ಕಥೆಯನ್ನು ಮುಂದೆ ಸಾಗಿಸುತ್ತವೆ. ಮನೆಯ ಚಾವಡಿಯೊಳಗೆ ಅಪ್ಪ, ಅಮ್ಮ, ಮಕ್ಕಳ ಬಾಲ್ಯದ ನೆನಪುಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತವೆ. ಮನುಷ್ಯ ಮಾನವೀಯತೆ ಇಲ್ಲದೆ ಕೇವಲ ಅಸ್ಥಿಪಂಜರದ ಬದಕನ್ನು ಸಾಗಿಸುತ್ತಿದ್ದಾನೆ ಎನ್ನುವುದನ್ನು ನಾಟಕ ಮಾರ್ದನಿಸುತ್ತ, ಮನ ಕಲುಕುತ್ತದೆ. ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ಗೀತಂ ಗಿರೀಶ್‌ ಅವರ  ಸಂಗೀತದ ಕಣ್ಣಾಮುಚ್ಚಾಲೆ ಹಾಗೂ ಬೆಂಕಿ ಮುಟ್ಟಿಲ್ಲ ರೆಕ್ಕೆ ಸುಟ್ಟಿಲ್ಲ… ಹಾಡು ಮನಕಲಕಿತು. 

ಅನಂತರ ನಡೆದ ಅನನ್ಯ ತಂಡ, ಬೆಂಗಳೂರು ಇವರು ಪ್ರಸ್ತುತ ಪಡಿಸಿದ ನಾಟಕ “ಅತೀತ’ ಹೊಸ ಮನ್ವಂತರವನ್ನು ಬರೆಯಿತು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದ ಕಲಾವಿದರು, ಪ್ರಸ್ತುತ ಬದುಕಿನ ತಲ್ಲಣ, ಸ್ವ ವಿಮರ್ಶೆ ತಳಮಳ, ವಿಡಂಬನೆ, ಪಾತ್ರಗಳ ಚುರುಕು ಅಭಿನಯ, ಮಾತಿನ ಮೋಡಿ ಉತ್ಕೃಷ್ಟ ಮಟ್ಟದ ಕಥಾ ಹಂದರವೇ “ಅತೀತ’. 

ಸಮಾಜದೊಳಗೆ ಮುಖವಾಡಗಳ ಬದುಕು, ಹಾದರ, ಅನೈತಿಕತೆ, ಹೆಸರಿನ ಸೆಳೆತ, ವ್ಯವಸ್ಥೆ ಯೊಳಗಿನ ಮಾನವ ನಿರ್ಮಿತ ಸಂಬಂಧಗಳು ಮುಖವಾಡ ಧರಿಸಿ ಬದುಕುವ ಸಂಘರ್ಷದ ವಾದ-ವಿವಾದಗಳ ಹೂರಣವೇ ಈ ನಾಟಕದ ಕಥಾ ವಸ್ತು. 

ಮಂದಬೆಳಕಿನಲ್ಲಿ ಕಾಣಿಸುವ ವ್ಯಕ್ತಿ ನಿವೃತ್ತ ವಕೀಲ, ವಯಸ್ಸು 85. ವೃತ್ತಿ ಬದುಕಿನಿಂದಷ್ಟೇ ಅಲ್ಲ ಈ ಸಮಾಜದ ಬದುಕಿನಿಂದ ಕೂಡ ನಿವೃತ್ತಿ ಹೊಂದಿದ್ದಾನೆ. ಹೆಂಡತಿ ಸತ್ತು 30 ವರ್ಷ ಕಳೆದಿವೆ, ಆ ಬಗ್ಗೆ ಮರುಕವಿಲ್ಲ. ಇರಲು ದೊಡ್ಡ ಅರಮನೆ, ಖರ್ಚಿಗೆ ಸಾಕಷ್ಟು ಹಣ, ಮನುಷ್ಯರ ಸಮಾಜದಿಂದ ಹೊರಬಂದು ಯಂತ್ರಗಳ ಜೊತೆಗೆ ಜೀವನದ ಉಳಿದ ದಿನಗಳನ್ನು, ತನ್ನದೇ ಆದ ನಿಯಮಗಳನ್ನು ನಿರ್ಮಿಸಿಕೊಂಡು ಸಂತೋಷದಿಂದ ಬದುಕು ದೂಡುವ ಕರ್ತವ್ಯ ನಿರ್ಲಕ್ಷದ ವ್ಯಕ್ತಿ. ವಕೀಲ ವೃತ್ತಿಯಲ್ಲಿ ಸಾಧಿಸಿದ ಯಶಸ್ಸಿನ ನೆಪ. ಆತ್ಮಚರಿತ್ರೆಗಾಗಿ ದಾಖಲಿಸುವ ನೆನಪುಗಳಿಗಾಗಿ ಹುಡುಗಿಯ ಪ್ರಶ್ನೆಗಳ ಸುರಿಮಳೆ. ಪ್ರಶ್ನೆಗಳೇ ವಕಾಲತ್ತಿನ ಸಿದ್ಧಹಸ್ತ ಉತ್ತರಗಳು. ಹುಡುಗಿ ಮತ್ತು ನಿವೃತ್ತ ವಕೀಲನ ಮುಖಾಮುಖಿಯ ನಡುವೆ ಕಥೆ ಸಾಗುತ್ತದೆ. 
 
ಕರುಣಾಕರ ಬಳ್ಕೂರು 

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.