ವೀರ ಅಭಿಮನ್ಯು -ಸುಧನ್ವ ಮೋಕ್ಷ : ಕಲಾಕ್ಷೇತ್ರದಲ್ಲಿ ಅರಳಿದ ಕಲಾಕುಸುಮ


Team Udayavani, Oct 25, 2019, 4:29 AM IST

q-47

ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರದಲ್ಲಿ ಶಾರದಾ ಪೂಜೆ ಪ್ರಯುಕ್ತ ಮಕ್ಕಳು ಹಾಗೂ ಮಹಿಳೆಯರಿಂದ “ವೀರ ಅಭಿಮನ್ಯು’ ಮತ್ತು ಸಂಘದ ಹಿರಿಯ ಕಲಾವಿದರಿಂದ “ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗುರು ಪೆರಂಪಳ್ಳಿಯ ಉದಯಕುಮಾರ್‌ ಮಧ್ಯಸ್ಥರ ದಕ್ಷ ನಿರ್ದೇಶನದಲ್ಲಿ ಪೂರ್ವರಂಗ ಸಹಿತವಾಗಿ ಮೂಡಿಬಂದ “ವೀರ ಅಭಿಮನ್ಯು’ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗೃಹಿಣಿಯರು ಮತ್ತು ಬಾಲಕಿಯರು ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿದ್ದು ಗಮನಾರ್ಹ. ಪಾರಂಪರಿಕ ಕೋಡಂಗಿ ನೃತ್ಯ, ಬಾಲಗೋಪ, ಪೀಠಿಕಾ ಸ್ತ್ರೀವೇಷಗಳಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಬಾಲರು ಯಾವುದೇ ಅಳುಕಿಲ್ಲದೆ ನಿರ್ವಹಣೆ ನೀಡಿ ಸೈ ಎನಿಸಿಕೊಂಡರು. ಕೌರವ, ಕರ್ಣ, ದುಶ್ಯಾಸನರಾಗಿ ಸೌಮ್ಯಾ, ಕು| ಸಿಂಚನಾ, ಕು| ಲಕ್ಷ್ಮೀ ಇವರ ಸಂಪ್ರದಾಯಬದ್ಧ ಒಡ್ಡೋಲಗ ಕುಣಿತದೊಂದಿಗೆ ಹಿತಮಿತವಾದ ಅರ್ಥಗಾರಿಕೆಯಲ್ಲಿ ಗಮನ ಸೆಳೆದರು. ದ್ರೋಣನಾಗಿ ಉತ್ತಮ ನೃತ್ಯಾಭಿನಯದಿಂದ ಕು| ಅನುಷಾ ಮೆಚ್ಚುಗೆಗೆ ಪಾತ್ರರಾದರು. ಕರ್ಣಾರ್ಜುನರಾಗಿ ಕು| ಪೌಷ,

ಸುಗಂಧಿಯವರ ಜೋಡಿ ಮನ ಸೆಳೆಯಿತು. ಸಮಸಪ್ತಕರಾಗಿ ಅಟ್ಟಹಾಸದ ಪ್ರವೇಶ ಮಾಡಿದ ಮಾ| ಭುವನ್‌ ಅಬ್ಬರವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಸಫ‌ಲರಾದದ್ದು ಅವರ ಶ್ರದ್ಧೆಯನ್ನು ತೋರಿಸುತ್ತಿತ್ತು.

ಪ್ರಥಾಮಾರ್ಧದ ಅಭಿಮನ್ಯುವಾಗಿ ಕು| ಮೇಧಾ ದಣಿವಯರಿಯದ ಕುಣಿತ ಮತ್ತು ಹಸನ್ಮುಖ ಭಾವಾಭಿನಯದಲ್ಲಿ ಮಿಂಚಿದರೆ ಮಾತೆ ಸುಭದ್ರೆಯಾಗಿ ಭಾವಾನಾತ್ಮಕ ಅಭಿನಯ ನೀಡುವಲ್ಲಿ ಕು| ದೃಶ್ಯ ಮೆಚ್ಚುಗೆಗಳಿಸಿದರು. ದ್ವಿತೀಯಾರ್ಧದ ಅಭಿಮನ್ಯುವಾಗಿ ಮಿಂಚು ಹರಿಸಿದ್ದು ಕು| ಶ್ರೀಪದ್ಮಾ ಚಕ್ರವ್ಯೂಹ ಭೇದಿಸಿ ಅತಿರಥರನ್ನು ಕೆಡಹಿ ಕುರರಾಯನನ್ನು ಬಂಧಿಸಿ ಕೆಣಕುವ ಪರಿ ವೃತ್ತಿ ಕಲಾವಿದರ ನಿರ್ವಹಣೆಗೆ ಸರಿಸಾಟಿಯಾಗಿತ್ತು. ದೊಂದಿ ಬೆಳಕಿನಲ್ಲಿ ಚಕ್ರವ್ಯೂಹದ ಚಿತ್ರಣ ವಿಶಿಷ್ಟವಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಭಾಕರ್‌ ಹೇರೂರು, ಮದ್ದಲೆಯಲ್ಲಿ ರಕ್ಷಿತ್‌ ಮಲ್ಯ, ಚೆಂಡೆಯಲ್ಲಿ ಶಾಂತಾರಾಮ ಆಚಾರ್ಯರ ಉತ್ತಮ ನಿರ್ವಹಣೆ ನೀಡಿದರು.

ನಂತರ ನಡೆದ “ಸುಧನ್ವ ಮೋಕ್ಷ’ ಪ್ರಸಂಗದ ಅಶ್ವಮೇಧಯಾಗದ ತುರಗ ರಕ್ಷಕನಾಗಿ ಅರ್ಜುನ ಗಣೇಶ್‌ ಕೋಟ್ಯಾನ್‌ ರಂಗದ ಹಿಡಿತದಲ್ಲಿ ಪ್ರಬುದ್ಧತೆ ಮೆರೆದರೆ, ವೃಷಕೇತು, ಪ್ರದ್ಯುಮ್ನರಾಗಿ ದರ್ಶನ್‌, ಶ್ರೀಧರ ಭಟ್‌ ಗಮನ ಸೆಳೆದರು. ಸುಧನ್ವನಾಗಿ ನವೀನ್‌ ಭಟ್‌ ಮಿಂಚಿದರೆ, ಸತಿ ಪ್ರಭಾವತಿಯಾಗಿ ವಿಶ್ವನಾಥ ಕಾಮತ್‌ ಗಮನ ಸೆಳೆದರು. ಕೃಷ್ಣನಾಗಿ ಅನುಭವಿ ಕಲಾವಿದ

ಡಾ| ರಮೇಶ್‌ ಚಿಂಬಾಳ್ಕರ್‌ ಮೆಚ್ಚುಗೆ ಗಳಿಸಿದರು. ಹವ್ಯಾಸಿ ವಯದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣರ ಭಾಗವತಿಕೆ ಹಾಗೂ ಹಿಮ್ಮೇಳ ಪ್ರಸಂಗಕ್ಕೆ ಪೂರಕವಾಗಿ ಮೂಡಿಬಂದು ಯಶಸ್ವೀ ಪ್ರದರ್ಶನವೆನಿಸಿತು.

ಜಯಂತ್‌, ಕಾಪು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

SBI

Chhattisgarh: ಎಸ್‌ಬಿಐ ನಕಲಿ ಶಾಖೆ, ವಂಚನೆ!

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tggg

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

1-jaya

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

Maldives Muizzu

Maldives ಅಧ್ಯಕ್ಷ ಮುಯಿಜ್ಜು ಭಾರತ ಪ್ರವಾಸ ಅ.6ರಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.