![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 13, 2017, 6:25 AM IST
ಹಿಂದಿನ ವಾರದಿಂದ – ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದಂತ ವೈದ್ಯರು, ನಿಮ್ಮ ಮನೆಯಲ್ಲಿ , ನಿಮ್ಮ ತಂದೆ, ತಾಯಿಗಳ ಹಲ್ಲಿನ, ವಸಡಿನ ರೋಗವಿರುವ, ಅವರಿಗೆ ಯಾವ ಪ್ರಾಯದಲ್ಲಿ ಹಲ್ಲು ಉದುರಿ ಹೋಗಿತ್ತು. ಅಥವಾ ಅವರಿಗೆ, ಸಕ್ಕರೆ ಕಾಯಿಲೆ ಇರುವ ಬಗ್ಗೆ ಅಥವಾ ನಿಮಗೆ ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಬಹುದು, ಕೆಲವೊಮ್ಮೆ ನಿಮ್ಮ ತಂದೆ, ತಾಯಿ, ಅಥವಾ ನಿಮ್ಮ ಅಣ್ಣ ತಮ್ಮಂದಿರನ್ನು , ಅಥವಾ ನಿಮ್ಮ ಹತ್ತಿರದ ಸಂಬಂಧಿಗಳಲ್ಲಿ ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಲೂ ಬಹುದು. ಹೀಗೆ ದಂತ ವೈದ್ಯರು ಕೇಳಲು ಪ್ರಮುಖ ಕಾರಣವಿರುತ್ತದೆ. ಸಕ್ಕರೆ ಕಾಯಿಲೆ ರೋಗಕ್ಕೂ, ವಸಡು ರೋಗಕ್ಕೂ ಸಂಬಂಧವಿದೆ. ಹೀಗೆ ನಿಮ್ಮ ದೇಹದ ಇತರೇ ರೋಗಗಳನ್ನು ಗುಣಪಡಿಸಿಕೊಳ್ಳುವುದರಿಂದ ವಸಡು ರೋಗದಿಂದಲೂ ದೂರವಿರಬಹುದು.
ಹಲ್ಲು ಕೀಳಿಸಿಕೊಂಡ ನಂತರ ಸರಿಯಾದ ಸಮಯದಲ್ಲಿ ಕೃತಕ ಹಲ್ಲನ್ನು ಜೋಡಿಸಿಕೊಳ್ಳಿ. ಕೆಲವೊಮ್ಮೆ ಹಲ್ಲನ್ನು ಕೀಳಿಸಿದ ನಂತರ, ಆ ಜಾಗದಲ್ಲಿ ಕೃತಕ ಹಲ್ಲನ್ನು ಇಟ್ಟುಕೊಳ್ಳದೇ ಇರುವುದರಿಂದ, ಅಕ್ಕಪಕ್ಕದ ಹಲ್ಲುಗಳು ಈ ಜಾಗಕ್ಕೆ ಸರಿದು, ಅದಲ್ಲದೇ ಮೇಲಿನ ದವಡೆಹಲ್ಲು ಈ ಜಾಗಕ್ಕೆ ಸರಿದು, ಹಲ್ಲಿನ ಮಧ್ಯೆ ಜಾಗವಾಗಲು ಸಾಧ್ಯವಗಾಉವುದಲ್ಲದೇ, ಬೇರೆ ಬೇರೆ ಹಲ್ಲುಗಳ ಮೇಲೆ, ಬೇರೆ ಬೇರೆ ರೀತಿಯ ಭಾರ ಬೀಳುವುದರಿಂದ ಅತಿಯಾದ ಭಾರದಿಂದಾಗಿ ಅಥವಾ ಮೇಲಿನ ಹಲ್ಲಿನ ಭಾರವು ಸರಿಯಾಗಿ, ನೇರವಾಗಿ ಕೆಳಗಿನ ಹಲ್ಲಿನ ಮೇಲೆ ಬೀಳದೇ ಇರುವುದರಿಂದ ಹಲ್ಲಿನ ಸುತ್ತಲು ಇರುವ ಎಲುಬು ಹಾಳಾಗುತ್ತಾ ಇರುವುದು. ಇದರಿಂದಾಗಿ, ಹಲ್ಲಿನ ಸುತ್ತಲೂ ಇರುವ ಎಲುಬು ನಶಿಸಿ, ಹಲ್ಲಿನ ಸುತ್ತ ಪರೆ, ರೋಗಗಳಿಗೆ ತುತ್ತಾಗುವುದು ಕೂಡ. ಹಾಗಾಗಿ ಮೇಲಿನ ಹಲ್ಲಿನ ಕಚ್ಚುವ ಭಾರ, ಕೆಳಗಿನ ಹಲ್ಲಿಗೆ ಅದರ ಭಾರ ಬೀಳುವ ದಾರಿ ಮತ್ತು ಅವಧಿ ಎಲ್ಲವೂ ನಿಯಮಿತವಾಗಿರಬೇಕು.
ವಸಡಿನ ರೋಗಗಳಿಗೆ, ಬ್ಯಾಕ್ಟೀರಿ ಯಾಗಳಿಂದ ಕೂಡಿದ ದಂತ ಪಾಚಿ (ಪ್ಲಾಶ್) ಪ್ರಮುಖ ಕಾರಣವಾದರೂ, ಇದು, ಇತರೇ ಕಾರಣಗಳಿಂದ ಜಾಸ್ತಿಯಾಗಬಹುದು. ಬೇರೆ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆವಾಗಾವಾಗ ದಂತ ವೈದ್ಯರನ್ನು ಸಂದರ್ಶಿಸುವುದು ಉತ್ತಮ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.