![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 9, 2022, 10:06 AM IST
ನಮ್ಮ ಪಾದಗಳು ದೇಹದ ಪ್ರಮುಖವಾದ ಒಂದು ಅಂಗ. ಒಂದು ಸ್ಥಳದಿಂದ ಇನ್ನೊಂದು ಕಡೆಗೆ ನಾವು ಚಲಿಸುವುದಕ್ಕೆ ಪಾದಗಳು ಸಹಾಯ ಮಾಡುತ್ತವೆ. ನಮ್ಮ ಪಾದಗಳು ಬಲಿಷ್ಠ ಮತ್ತು ಆರೋಗ್ಯವಾಗಿದ್ದಾಗ ಸ್ವತಂತ್ರವಾಗಿ ಬದುಕುವ ಅವಕಾಶ ನಮಗಿರುತ್ತದೆ. ಆದರೆ ಪಾದಗಳಲ್ಲಿ ಕಿಂಚಿತ್ ತೊಂದರೆಯಾದರೂ ಅದು ನಾವು ಎಷ್ಟು ಚಟುವಟಿಕೆಯುಕ್ತರಾಗಿ ಬದುಕುತ್ತೇವೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವು ಒಂದು ದೀರ್ಘಕಾಲಿಕ ಅನಾರೋಗ್ಯವಾಗಿದ್ದು, ನಮ್ಮ ಕಣ್ಣುಗಳು, ನರಗಳು, ಮೂತ್ರಪಿಂಡಗಳು, ಹೃದಯ, ಪಾದಗಳು ಎಲ್ಲವೂ ಅದರಿಂದ ಬಾಧಿತವಾಗುತ್ತವೆ. ಹೀಗಾಗಿಯೇ ಮಧುಮೇಹವು “ನಿಶ್ಶಬ್ದ ಕೊಲೆಗಾರ’ ಎಂಬ ಕುಖ್ಯಾತಿಯನ್ನು ಹೊಂದಿದೆ. ಇಂದು ವೈದ್ಯಕೀಯ ವೃತ್ತಿಪರರು ಮಧುಮೇಹಕ್ಕೆ ಕೈಗೆಟಕುವ ಮತ್ತು ಯಶಸ್ವಿಯಾದ ಚಿಕಿತ್ಸೆಯ ಆಯ್ಕೆಗಳ ಹುಡುಕಾಟದಲ್ಲಿದ್ದಾರೆ.
ನಾವು ನಡೆದಾಡುವಾಗ ಅಥವಾ ಚಲಿಸುವಾಗ ನಮ್ಮ ಇಡೀ ದೇಹದ ಭಾರವನ್ನು ಹೊರುವಂತೆ ಪಾದಗಳು ವಿನ್ಯಾಸಗೊಂಡಿವೆ. ಮಧುಮೇಹ ರೋಗಿಯು ತನ್ನ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅಶಕ್ತನಾದಾಗ ಅವರ ಪಾದಗಳಲ್ಲಿರುವ ನರಗಳಿಗೆ ಘಾಸಿಯಾಗುತ್ತದೆ. ಇದನ್ನು “ಡಯಾಬಿಟಿಕ್ ಪೆರಿಫರಲ್ ನ್ಯೂರೋಪತಿ’ ಎಂದು ಕರೆಯುತ್ತಾರೆ. ಮುಂದುವರಿದು, ಪಾದಗಳ ನರಗಳಿಗೆ ಉಂಟಾಗುವ ಈ ಹಾನಿ (ನ್ಯೂರೋಪತಿ)ಯನ್ನು ಸಂವೇದನ, ಚಲನ ಮತ್ತು ಆಟೊನಾಮಿಕ್ ನ್ಯೂರೋಪತಿ ಎಂದು ವರ್ಗೀಕರಿಸಲಾಗಿದೆ.
ಸಂವೇದನ ಅಥವಾ ಸೆನ್ಸರಿ ನ್ಯೂರೋಪತಿಯಲ್ಲಿ ಪಾದಗಳಲ್ಲಿ ಪಾದಗಳು ಜುಮುಗುಟ್ಟುವುದು, ಉರಿ ಅಥವಾ ಚುಚ್ಚಿದಂತಹ ಅಸಹಜ ಸಂವೇದನೆಗಳು ಉಂಟಾಗುತ್ತವೆ. ಚಲನೆಯ ನ್ಯೂರೋಪತಿ ಅಥವಾ ಮೋಟರ್ ನ್ಯೂರೋಪತಿಯಲ್ಲಿ ಪಾದಗಳ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಬಹುತೇಕ ಬಾರಿ ರೋಗಿಗಳು ನಡೆಯುವಾಗ ಪಾದರಕ್ಷೆಗಳು ಜಾರುವುದು, ಪಾದಗಳನ್ನು ಭದ್ರವಾಗಿ ಊರುವುದು ಕಷ್ಟವಾಗುತ್ತದೆ ಮತ್ತು ಅಸ್ಥಿರತೆಯ ಅನುಭವವಾಗುತ್ತದೆ. ಪಾದಗಳಲ್ಲಿ ಉಂಟಾಗುವ ಈ ಬದಲಾವಣೆಯಿಂದ ಮಧುಮೇಹಿಗಳ ಪಾದಗಳ ಚರ್ಮದಲ್ಲಿ ಅಸಹಜ ಬದಲಾವಣೆಗಳು ಉಂಟಾಗುತ್ತವೆ. ಹೀಗಾಗಿ ಪಾದಗಳ ಚರ್ಮದ ಬದಲಾವಣೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ (ಆಟೊನಾಮಿಕ್ ನ್ಯೂರೋಪತಿ).
ಪಾದಗಳ ಕೆಳಭಾಗ ತೀರಾ ಶುಷ್ಕವಾಗುತ್ತದೆ ಮತ್ತು ಹುರುಪೆಗಳೇಳುತ್ತವೆ, ದಪ್ಪವಾಗಿ ಒರಟಾಗುತ್ತದೆ (ಕ್ಯಾಲಸ್ ಎನ್ನುತ್ತಾರೆ), ಪಾದಗಳ ಚರ್ಮದಲ್ಲಿ ಬಿರುಕುಗಳು/ ಗಾಯಗಳು ಉಂಟಾಗುತ್ತವೆ (ಫಿಶರ್ ಎನ್ನುತ್ತಾರೆ). ಬಹುತೇಕ ಬಾರಿ ಇದಕ್ಕೆ ಪ್ರಧಾನ ಕಾರಣ ಪಾದಗಳ ನಿರ್ಜಲೀಕರಣ ಮತ್ತು ಅಸಮರ್ಪಕ ಆದ್ರìತೆ ಆಗಿರುತ್ತದೆ. ಇವೆಲ್ಲವನ್ನೂ ಒಟ್ಟಾಗಿ “ಮಧುಮೇಹ ಪಾದ ಸಿಂಡ್ರೋಮ್’ ಅಥವಾ ಇಂಗ್ಲಿಷ್ನಲ್ಲಿ “ಡಯಾಬಿಟಿಕ್ ಫೂಟ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಇಂತಹ ಸಮಸ್ಯೆಯುಳ್ಳವರಿಗೆ ಪಾದಗಳ ಆರೈಕೆಯನ್ನು ಈ ವಿಭಾಗದಲ್ಲಿ ತಜ್ಞರಾಗಿರುವ “ಪೋಡಿಯಾಟ್ರಿಸ್ಟ್’ ಅಥವಾ “ಮಧುಮೇಹ ಪಾದ ರೋಗ ತಜ್ಞ’ರು ಒದಗಿಸುತ್ತಾರೆ.
ಪ್ರತೀ ವರ್ಷ “ಅಂತಾರಾಷ್ಟ್ರೀಯ ಮಧುಮೇಹ ಪಾದ ರೋಗಗಳ ದಿನ’ ಅಥವಾ “ಇಂಟರ್ನ್ಯಾಶನಲ್ ಪೋಡಿಯಾಟ್ರಿ ಡೇ’ಯನ್ನು ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾಹೆಯ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಂಟರ್ ಫಾರ್ ಡಯಾಬಿಟಿಕ್ ಫೂಟ್ ಕೇರ್ ಮತ್ತು ರಿಸರ್ಚ್ (ಸಿಡಿಎಫ್ಸಿಆರ್) ಭಾರತೀಯ ಪೋಡಿಯಾಟ್ರಿ ಅಸೋಸಿಯೇಶನ್ (ಐಪಿಎ)ನ ಕರ್ನಾಟಕ ಆವೃತ್ತಿಯ ಸಹಯೋಗದಲ್ಲಿ ಎಲ್ಲರಿಗೂ ಪಾದ ಆರೋಗ್ಯದ ಶುಭಾಶಯಗಳನ್ನು ಸೂಚಿಸುತ್ತಿದೆ. ಮಧುಮೇಹಿಗಳು ತಮ್ಮ ಪಾದಗಳ ಆರೋಗ್ಯದ ಬಗ್ಗೆ ಎಷ್ಟು ಕಳಕಳಿಯನ್ನು ಹೊಂದಿರುತ್ತಾರೆ ಎಂಬುದನ್ನು ನಾವು ಬಲ್ಲವರಾಗಿದ್ದೇವೆ. ಮಧುಮೇಹ ಪಾದ ಆರೈಕೆಯ ಬಗ್ಗೆ ಆಗಾಗ ಕೆಳಿಬರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಈ ವಿಚಾರದಲ್ಲಿ ಸಾರ್ವಜನಿಕ ಅರಿವನ್ನು ವಿಸ್ತರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.
ಮಧುಮೇಹಿಗಳಲ್ಲಿ ಪಾದಗಳ ಆರೋಗ್ಯ: ಆಗಾಗ ಕೇಳಿಬರುವ ಪ್ರಶ್ನೆಗಳು
ನನ್ನ ಮಧುಮೇಹ ಪಾದಕ್ಕೆ ಎಲ್ಲಿ ಪೋಡಿಯಾಟ್ರಿ ಆರೈಕೆಯನ್ನು ಪಡೆದುಕೊಳ್ಳಬಹುದು? ಉತ್ತರ: ಮಾಹೆ – ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಇರುವ ಸೆಂಟರ್ ಫಾರ್ ಡಯಾಬಿಟಿಕ್ ಫೂಟ್ ಕೇರ್ ಆ್ಯಂಡ್ ರಿಸರ್ಚ್ (ಸಿಡಿಎಫ್ಸಿಆರ್) ಮಧುಮೇಹಿ ಪಾದ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಗೆ ಸಮಗ್ರ ನಿರ್ವಹಣ ಸೇವೆಗಳನ್ನು ಒದಗಿಸುತ್ತಿದೆ. ನಿಮ್ಮ ನಿಯಮಿತ ತಪಾಸಣೆ ಮತ್ತು ಸಮಯೋಚಿತ ಚಿಕಿತ್ಸೆಗಾಗಿ ನೀವು ಈ ವಿಭಾಗವನ್ನು ಸಂದರ್ಶಿಸಬಹುದು. 0820-29-23054 ಸಂಖ್ಯೆಯನ್ನು ಸಂಪರ್ಕಿಸಿ ಸಂದರ್ಶನವನ್ನು ಕಾಯ್ದಿರಿಸಿಕೊಳ್ಳಬಹುದು.
–ಮೇಘಾ ನಟರಾಜ್, ಪಿಎಚ್ಡಿ ಸ್ಕಾಲರ್,
-ಡಾ| ಜಿ. ಅರುಣ್ ಮಯ್ಯ, ಮುಖ್ಯಸ್ಥರು, ಸೆಂಟರ್ ಫಾರ್ ಡಯಾಬಿಟಿಕ್ ಫೂಟ್ ಕೇರ್ ಮತ್ತು ರಿಸರ್ಚ್ (ಸಿಡಿಎಫ್ಸಿಆರ್) ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸರು, ಸೆಂಟರ್ ಫಾರ್ ಡಯಾಬಿಟಿಕ್ ಫೂಟ್ ಕೇರ್ ಆ್ಯಂಡ್ ರಿಸರ್ಚ್, ಕೆಎಂಸಿ, ಮಂಗಳೂರು)
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.