Diabetes: ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಪಥ್ಯಾಹಾರ


Team Udayavani, Nov 27, 2023, 8:00 AM IST

6-diet

ಮಧುಮೇಹವು ಜೀವನ ಶೈಲಿಗೆ ಸಂಬಂಧಿಸಿದ ಒಂದು ಅನಾರೋಗ್ಯ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಇದನ್ನು ತಡೆಗಟ್ಟಬಹುದು ಹಾಗೂ ಪಥ್ಯಾಹಾರ ಮತ್ತು ವ್ಯಾಯಾಮಗಳ ಮೂಲಕ ಇದರ ಮೇಲೆ ಉತ್ತಮ ನಿಯಂತ್ರಣ ಸಾಧಿಸಬಹುದು.

ಮಧುಮೇಹಿಯು ಈ ಅನಾರೋಗ್ಯಕ್ಕಾಗಿ ಮಾತ್ರೆಗಳನ್ನು ಮಾತ್ರ ಸೇವಿಸುತ್ತಿದ್ದಾರೆಯೇ ಅಥವಾ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದಾರೆಯೇ ಅಥವಾ ಆಕೆ ಗರ್ಭಿಣಿ ಅವಧಿಯಲ್ಲಿ ಮಧುಮೇಹಕ್ಕೆ ತುತ್ತಾಗಿದ್ದಾರೆಯೇ ಎಂಬ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಕಾಯಿಲೆಯ ವೈದ್ಯಕೀಯ ನಿರ್ವಹಣೆಯ ವಿಧ, ವ್ಯಕ್ತಿಯ ಆಹಾರ ಶೈಲಿ, ಆಹಾರ ಸೇವಿಸುವ ವಿಧಾನ ಇತ್ಯಾದಿಗಳನ್ನು ಆಧರಿಸಿ ಆಯಾ ರೋಗಿಗೆ ವೈಯಕ್ತಿಕ ಊಟ -ಉಪಾಹಾರ ಯೋಜನೆಯನ್ನು ವಿನ್ಯಾಸಗೊಳಿಸಲಾಗುತ್ತದೆ.

ಕಡಿಮೆ ಕೊಬ್ಬು, ಕಡಿಮೆ ಗ್ಲೈ ಸೇಮಿಕ್‌ ಇಂಡೆಕ್ಸ್‌ ಹೊಂದಿರುವ ಆಹಾರಗಳು ಮತ್ತು ಹಣ್ಣುಗಳು, ಸಂಕೀರ್ಣ ಕಾರ್ಬೊಹೈಡ್ರೇಟ್‌ ಇರುವ ಆಹಾರಗಳು ಹಾಗೂ ಹೈಪರ್‌ಇನ್ಸುಲಿನೇಮಿಯಾ ತಡೆಗಟ್ಟಲು ಆಗಾಗ ಕಿರು ಆಹಾರ ಸೇವನೆಗೆ ಆದ್ಯತೆ ನೀಡಲಾಗುತ್ತದೆ. ದಿನವೊಂದಕ್ಕೆ ಎರಡು ಬಾರಿ ಭರ್ಜರಿ ಊಟ ಮಾಡುವ ಬದಲು ಊಟ-ಉಪಾಹಾರಗಳ ನಡುವೆ 3-4 ತಾಸು ಸಮಯಾವಕಾಶ ಇರಿಸಿಕೊಂಡು 3 ಬಾರಿ ಊಟ ಮತ್ತು 2 ಬಾರಿ ಉಪಾಹಾರ ಸೇವನೆಯ ಯೋಜನೆ ಉತ್ತಮವಾಗಿರುತ್ತದೆ.

ದಿನಕ್ಕೆ ಕನಿಷ್ಠ ಕ್ಯಾಲೊರಿ ಅಗತ್ಯವು ಮಹಿಳೆಯರಿಗೆ ಸರಿಸುಮಾರು 1,200-1,500 ಕೆಸಿಎಲ್‌ ಆಗಿದ್ದರೆ ಪುರುಷರಿಗೆ 1,500-1,800 ಕೆಸಿಎಲ್‌ ಆಗಿರುತ್ತದೆ. ಇಡೀ ಧಾನ್ಯಗಳಾದ ಗೋಧಿ, ಸಿರಿಧಾನ್ಯಗಳು, ಜೋಳ, ಬಾರ್ಲಿ, ಓಟ್ಸ್‌ ಮತ್ತು ಬಾಜ್ರಾ ಮೂಲದ ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಆಹಾರದಲ್ಲಿ ಇರಬೇಕು. ಜತೆಗೆ ಹೆಚ್ಚು ಕಾರ್ಬೊಹೈಡ್ರೇಟ್‌ ಇರುವ ಪಾನೀಯಗಳು, ಜ್ಯೂಸ್‌ಗಳು, ಕ್ಯಾಂಡಿಗಳು, ಚಾಕೊಲೇಟ್‌ಗಳು, ಸಂಸ್ಕರಿತ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪವನ್ನು ವರ್ಜಿಸಬೇಕು.

ಕಾರ್ಬೊಹೈಡ್ರೇಟ್‌ ಅಧಿಕ ಪ್ರಮಾಣದಲ್ಲಿ ಇರುವ ಮೈದಾದಂತಹ ಸಂಸ್ಕರಿತ ಹಿಟ್ಟುಗಳಿಂತ ತಯಾರಿಸಿದ ಆಹಾರ, ಗೆಡ್ಡೆ ಗೆಣಸುಗಳನ್ನು ಸೇವಿಸಬಾರದು. ಪ್ರತೀ ಬಾರಿ ಊಟ-ಉಪಾಹಾರ ಸೇವಿಸಿದ ಬಳಿಕ ಕಾರ್ಬೊಹೈಡ್ರೇಟ್‌ ಲೆಕ್ಕಾಚಾರ ಹಾಕುವುದರಿಂದ ಊಟ-ಉಪಾಹಾರದ ಬಳಿಕ ರಕ್ತದಲ್ಲಿ ಸಕ್ಕರೆಯಂಶ ಎಷ್ಟು ಹೆಚ್ಚಳವಾಗಬಹುದು ಎಂಬ ಬಗ್ಗೆ ಅಂದಾಜು ಸಿಗುತ್ತದೆ. ಮಧುಮೇಹದ ಮೇಲೆ ಉತ್ತಮ ನಿಯಂತ್ರಣ ಹೊಂದಿರಬೇಕಾದರೆ ಕ್ಯಾಲೊರಿ ಸೇವನೆಯನ್ನು ಇಡೀ ದಿನಕ್ಕೆ ಹಂಚಿಹಾಕಬೇಕಾಗುತ್ತದೆ.

ಮಧುಮೇಹಿಯು ಇನ್ಸುಲಿನ್‌ ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದರೆ ಇನ್ಸುಲಿನ್‌ ವಿಧ ಮತ್ತು ಡೊಸೇಜ್‌ ಆಧಾರದಲ್ಲಿ ಕಾರ್ಬೊಹೈಡ್ರೇಟ್‌ ಸೇವನೆಯನ್ನು ಇಡೀ ದಿನಕ್ಕೆ ಹಂಚಿಹಾಕಬೇಕಿರುತ್ತದೆ.

ಮೊಟ್ಟೆಯ ಬಿಳಿಭಾಗ, ಬಿಳಿ ಮಾಂಸ, ಮೀನು, ಬೇಳೆಕಾಳುಗಳು ಇತ್ಯಾದಿ ಅಧಿಕ ಜೀವಶಾಸ್ತ್ರೀಯ ಪ್ರೊಟೀನ್‌ ಮೌಲ್ಯ ಹೊಂದಿರುವ ಮೂಲಗಳಿಂದ ಪ್ರೊಟೀನ್‌ ಅಗತ್ಯವನ್ನು ಪೂರೈಸಿಕೊಳ್ಳಬೇಕಾಗಿರುತ್ತದೆ. ಇವುಗಳ ಸೇವನೆಯನ್ನು ಕೂಡ ದಿನದ ಎಲ್ಲ ಊಟ-ಉಪಾಹಾರಗಳಿಗೆ ಹಂಚಿ ಹಾಕಬೇಕಾಗಿರುತ್ತದೆ. ರೋಗಿಯ ಸಹ ಅನಾರೋಗ್ಯಗಳನ್ನು ಆಧರಿಸಿ ಇದನ್ನು ಕೂಡ ರೋಗಿ ನಿರ್ದಿಷ್ಟವಾಗಿ ಮಾಡಬೇಕಾಗುತ್ತದೆ.

ಪ್ರೊಟೀನ್‌ ಮತ್ತು ಕೊಬ್ಬನ್ನು ಅನುಮತಿ ನೀಡಲಾದ ಪಥ್ಯಾಹಾರ ಪ್ರಮಾಣದಲ್ಲಿಯೇ ತೆಗೆದುಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಪ್ರೊಟೀನ್‌ ಮತ್ತು ಹೆಚ್ಚು ಕೊಬ್ಬಿನಂಶ ಮತ್ತು ಕಾರ್ಬೊಹೈಡ್ರೇಟ್‌ ಇದ್ದಲ್ಲಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕ್ರಮೇಣ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಳವಾಗಲು ಕಾರಣವಾಗುತ್ತದೆ.

ಆಹಾರದಲ್ಲಿ ನಾರಿನಂಶವು ಸಲಾಡ್‌ಗಳು, ತರಕಾರಿಗಳು, ಹಸುರು ಸೊಪ್ಪು ತರಕಾರಿಗಳು ಮತ್ತು ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಹಾಗೂ ಕಡಿಮೆ ಗ್ಲೈಸೇಮಿಕ್‌ ಇಂಡೆಕ್ಸ್‌ ಹೊಂದಿರುವ ಹಣ್ಣುಗಳಿಂದ ದೊರಕುತ್ತದೆ. ನಾರಿನಂಶವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆಯಲ್ಲದೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ದ್ರವಾಹಾರಗಳನ್ನು ನೀರು, ಮಜ್ಜಿಗೆ, ನಿಂಬೂನೀರು, ಜೀರಿಗೆ ನೀರು ಮತ್ತು ಬಾರ್ಲಿ ನೀರಿನ ರೂಪಗಳಲ್ಲಿ ಆಗಾಗ ಸೇವಿಸಬೇಕು. ಆಗಾಗ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆ ಮಧುಮೇಹದ ಲಕ್ಷಣಗಳಲ್ಲಿ ಒಂದಾಗಿದ್ದು, ಆಗಾಗ ನೀರಿನಂಶ ಪೂರೈಸಿಕೊಳ್ಳುವುದರಿಂದ ಈ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

-ಅರುಣಾ ಮಲ್ಯ,

ಹಿರಿಯ ಪಥ್ಯಾಹಾರ ತಜ್ಞೆ,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.