Health: ಮಾತನಾಡುವ ಕಲೆ ಮತ್ತು ಆಲಿಸುವ ಶಕ್ತಿ


Team Udayavani, Oct 20, 2024, 4:40 PM IST

7

ಪ್ರತೀ ವರ್ಷ ಅಕ್ಟೋಬರ್‌ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆಯ ಅರಿವು ದಿನ  (ಇಂಟರ್‌ನ್ಯಾಶನಲ್‌ ಸ್ಟಟರಿಂಗ್‌ ಅವೇರ್‌ನೆಸ್‌ ಡೇ)ವನ್ನು ಆಚರಿಸಲಾಗುತ್ತದೆ. ಈ ವರ್ಷ ಇದರ ಧ್ಯೇಯವಾಕ್ಯವು ‘ಆಲಿಸುವಿಕೆಯ ಶಕ್ತಿ’ ಆಗಿದೆ. ಇನ್ನೊಬ್ಬರು ಹೇಳುವುದನ್ನು ಗಮನವಿರಿಸಿ ಆಲಿಸುವುದು ಯಾಕೆ ಮತ್ತು ಎಷ್ಟು ಮುಖ್ಯ ಎನ್ನುವುದನ್ನು ಉಗ್ಗುವಿಕೆಯನ್ನು ಹೊಂದಿರುವ ವ್ಯಕ್ತಿಗಳ ಜತೆಗಿನ ಸಂಭಾಷಣೆಯಿಂದ ನಾವು ಅರಿತುಕೊಳ್ಳಬೇಕಿದೆ. ಈ ವರ್ಷದ ಧ್ಯೇಯವಾಕ್ಯ ಇದನ್ನೇ ಆಧರಿಸಿದೆ.

ಗಮನವಿರಿಸಿ ಕೇಳುವುದು ಎಷ್ಟು ಮೌಲ್ಯಯುತವಾದುದು, ಎಷ್ಟು ಮಹತ್ವದ್ದು ಎನ್ನುವುದನ್ನು ಜಗತ್ತಿಗೆ ಕಲಿಸಿಕೊಡುವ ಶಕ್ತಿಯನ್ನು ಉಗ್ಗುವಿಕೆಯ ತೊಂದರೆಯನ್ನು ಹೊಂದಿರುವ ವ್ಯಕ್ತಿಗಳು ಹೊಂದಿರುತ್ತಾರೆ. ಪರಿಣಾಮಕಾರಿ ಸಂವಹನವು ಗಮನವಿರಿಸಿ ಕೇಳುವುದನ್ನು ಬಹಳವಾಗಿ ಅಂದರೆ ಶೇ. 90ರಷ್ಟು ಅವಲಂಬಿಸಿದೆ. ಏಕಾಗ್ರತೆಯಿಂದ, ಗಮನ ಇರಿಸಿ ಕೇಳುವುದರ ಮೂಲಕ ಇನ್ನೊಬ್ಬರ ಅನುಭವ ಮತ್ತು ಭಾವನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಮತ್ತು ವಿಶ್ವಾಸವನ್ನು ಮೂಡಿಸಲು ಸಾಧ್ಯ. ಪ್ರತಿಯೊಬ್ಬರೂ ತಾನು ಹೇಳಿದ್ದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು, ಬೆಲೆ ಕೊಡಬೇಕು ಮತ್ತು ಗಮನಿಸಬೇಕು ಎಂದು ಭಾವಿಸುತ್ತಾರೆ. ಜತೆಗೆ ಉಗ್ಗುವಿಕೆಯ ಮಟ್ಟಿಗೆ ಹೇಳುವುದಾದರೆ, ಕೇಳುಗನು ಹೇಗೆ ವರ್ತಿಸುತ್ತಾನೆ ಎನ್ನುವುದು ಉಗ್ಗುವಿಕೆಯ ಅನುಭವದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರಬಲ್ಲುದಾಗಿದೆ.

ಉಗ್ಗುವಿಕೆಯ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳ ಜತೆಗೆ ಮಾತುಕತೆಯ ಅನುಭವ ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಆಗಿಯೇ ಆಗಿರುತ್ತದೆ. ನಮ್ಮ ಗೆಳೆಯ-ಗೆಳತಿಗೇ ಆ ಸಮಸ್ಯೆ ಇರಬಹುದು, ಕುಟುಂಬದಲ್ಲಿ ಒಬ್ಬರು ಆಗಿರಬಹುದು ಅಥವಾ ಬಂಧುಗಳಲ್ಲಿ ಯಾರಾದರೂ ಇರಬಹುದು; ಉಗ್ಗುವಿಕೆಯ ತೊಂದರೆ ಇರುವ ಯಾರಾದರೊಬ್ಬರು ಅಪರಿಚಿತರು ನಮಗೆ ಎದುರಾಗಿರಬಹುದು. ಸಿನೆಮಾಗಳಲ್ಲಿ ಮತ್ತು ಸಾಮಾಜಿ ಮಾಧ್ಯಮಗಳಲ್ಲಿ ಕೂಡ ಉಗ್ಗುವಿಕೆಯ ತೊಂದರೆ ಹೊಂದಿರುವ ಪಾತ್ರಗಳು ಎದುರಾಗುತ್ತವೆ. ಉಗ್ಗುವಿಕೆಯ ತೊಂದರೆ ಹೊಂದಿರುವ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸುವಾಗ ನಮ್ಮ ಮೊತ್ತಮೊದಲ ಪ್ರತಿಕ್ರಿಯೆ ಏನು? ಅವರು ಮಾತನಾಡಲು ಆರಂಭಿಸಿದಾಗ ಮತ್ತು ವಾಕ್ಯವೊಂದನ್ನು ಪೂರ್ಣಗೊಳಿಸಲು ಅಸಮರ್ಥರಾದಾಗ ಅಥವಾ ಮಾತು ಮುಗಿಸಲು ದೀರ್ಘ‌ ಕಾಲ ತೆಗೆದುಕೊಂಡಾಗ ನಮಗೆ ಕಿರಿಕಿರಿ ಎನಿಸುತ್ತದೆ. ತಂತ್ರಜ್ಞಾನವು ಅನೂಹ್ಯ ವೇಗದಿಂದ ಮುನ್ನಡೆಯುತ್ತಿರುವ ಮತ್ತು ಯುಟ್ಯೂಬ್‌ ಶಾರ್ಟ್ಸ್ ಅಥವಾ ಇನ್‌ಸ್ಟಾಗ್ರಾಂ ರೀಲ್‌ಗ‌ಳಲ್ಲಿ 60 ಸೆಕೆಂಡುಗಳಲ್ಲಿ ಬಹಳಷ್ಟು ಮಾಹಿತಿಗಳನ್ನು ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ ನಮ್ಮ ತಾಳ್ಮೆ ಮಟ್ಟ ತೀರಾ ಸೀಮಿತವಾಗಿಬಿಟ್ಟಿದೆ ಮತ್ತು ಉಗ್ಗುವಿಕೆಯ ಸಮಸ್ಯೆ ಹೊಂದಿರುವ ವ್ಯಕ್ತಿ ಏನಾದರೂ ಹೇಳಲು ಹೊರಟಾಗ ನಮಗೆ ಸಿಟ್ಟೇ ಬಂದುಬಿಡುತ್ತದೆ. ಕೆಲವೊಮ್ಮೆ ಅಂತಹ ವ್ಯಕ್ತಿಗಳ ಬಗ್ಗೆ ನಮಗೆ ಕನಿಕರ ಉಂಟಾಗಿ ಅವರು ಹೇಳಲು ಹೊರಟಿರುವುದನ್ನು ನಾವೇ ಪೂರ್ತಿಗೊಳಿಸಿಬಿಡುವುದೂ ಇದೆ. ಹಾಗೆ ಮಾಡಿದರೆ ಅವರಿಗೆ ಸುಲಭವಾಗುತ್ತದೆ ಎಂಬ ಅಭಿಪ್ರಾಯ ನಮ್ಮದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಗ್ಗುವಿಕೆಯ ಅರಿವು ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯ ಮಹತ್ವ ಹೊಂದಿದೆ – ಅದು ಕೇಳುವಿಕೆಗೆ ಇರುವ ಶಕ್ತಿಗೆ ಒತ್ತು ನೀಡುತ್ತದೆ. ಆಲಿಸುವಿಕೆಗೆ ಇರುವ ಶಕ್ತಿ, ಮಹತ್ವವನ್ನು ನಾವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆ, ಕೀಳಂದಾಜು ಹೊಂದಿದ್ದೇವೆ ಎಂಬ ಸತ್ಯವನ್ನು ಈ ಧ್ಯೇಯವಾಕ್ಯ ಸರಳವಾಗಿ ನಿರೂಪಿಸುತ್ತದೆ.

ಉಗ್ಗುವಿಕೆ ಅಥವಾ ‘ಸ್ಟಟರಿಂಗ್‌’ ಶೀಘ್ರವಾಗಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ಒದಗಿಸಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾದ ಒಂದು ಸಮಸ್ಯೆಯಾಗಿದೆ. ಇದಕ್ಕಾಗಿ ನೆರವು ಪಡೆಯಬೇಕಾದ ವೃತ್ತಿಪರ ವ್ಯಕ್ತಿ ಎಂದರೆ ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌. ಉಗ್ಗುವಿಕೆಯ ಸಮಸ್ಯೆಯನ್ನು ನಿವಾರಿಸಲು ಸ್ಪೀಚ್‌ ಥೆರಪಿಯ ಮೂಲಕ ಅನೇಕ ತಂತ್ರಗಳು ಮತ್ತು ಕಾರ್ಯವಿಧಾನಗಳು ಇವೆ. ಸ್ಪೀಚ್‌ ಥೆರಪಿಯ ಅವಧಿಗಳಿಗೆ ಶಿಫಾರಸು ಮಾಡಿರುವಂತೆ ತಪ್ಪದೆ ಹಾಜರಾಗುವುದು ಅತ್ಯವಶ್ಯಕವಾಗಿರುತ್ತದೆ.

ಯಾವುದೇ ವೈದ್ಯಕೀಯ ಚಿಕಿತ್ಸೆಯಲ್ಲಿ ಅನಾರೋಗ್ಯವನ್ನು ಗುಣಪಡಿಸಲು ಔಷಧಗಳನ್ನು ನೀಡಲಾಗುತ್ತದೆ. ಆದರೆ ಸ್ಪೀಚ್‌ ಥೆರಪಿ ಅಥವಾ ಭಾಷಿಕ-ಮಾತಿನ ಚಿಕಿತ್ಸೆಯು ಹಾಗಲ್ಲ. ಇದೊಂದು ವರ್ತನಾತ್ಮಕ ಚಿಕಿತ್ಸೆಯಾಗಿದ್ದು, ರೋಗಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿರುತ್ತದೆ. ಹೀಗೆ ಸಕ್ರಿಯ ಪಾಲ್ಗೊಳ್ಳುವಿಕೆ, ಚಿಕಿತ್ಸೆಯನ್ನು ಶಿಫಾರಸು ಮಾಡಿರುವಂತೆ ಸರಿಯಾಗಿ ಅನುಸರಿಸುವ ಮೂಲಕ ಉಗ್ಗುವಿಕೆಯ ತೊಂದರೆ ಹೊಂದಿರುವವರು ತಮ್ಮ ಸ್ಪಷ್ಟವಾಗಿ ಮಾತನಾಡುವ ಸಾಮರ್ಥ್ಯದಲ್ಲಿ ಪ್ರಗತಿ ಉಂಟಾಗುವುದನ್ನು ಸ್ವತಃ ಕಾಣಬಹುದು ಮತ್ತು ಆತ್ವವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು.

ಡಾ| ಐಶ್ವರ್ಯಾ ಲಿಝ್ ವರ್ಗೀಸ್‌, ಅಸೋಸಿಯೇಟ್‌ ಪ್ರೊಫೆಸರ್‌, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!

Airport

Compensation: ವಿಮಾನ ಅಪಘಾತದಲ್ಲಿ ಸತ್ತರೆ 1.7 ಕೋಟಿ ರೂ. ಪರಿಹಾರ

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Health: ರೋಗಿ ಸುರಕ್ಷೆಗೆ ಒಂದು ನಮನ

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.