ಯುವ ಜನತೆಯಲ್ಲಿ  ಅಧಿಕ ರಕ್ತದೊತ್ತಡ


Team Udayavani, May 16, 2021, 3:08 PM IST

Hypertension in young people

ಪ್ರಶ್ನೆ: ಡಾಕ್ಟರ್‌, ನನಗೆ ಅಧಿಕ  ರಕ್ತದೊತ್ತಡ ಇದೆಯೇ?

ಉತ್ತರ: ಪ್ರಸ್ತುತ ಲಭ್ಯವಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಎರಡು ಅಥವಾ ಹೆಚ್ಚು ರಕ್ತದೊತ್ತಡ ತಪಾಸಣೆಗಳ ಸಂದರ್ಭದಲ್ಲಿ 140/90 ಎಂಎಂ ಎಚ್‌ಜಿಗಿಂತ ಹೆಚ್ಚು ರಕ್ತದೊತ್ತಡ ಕಂಡುಬಂದರೆ ಅದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. 130-139/85-89 ಎಂಎಂ ಎಚ್‌ಜಿ ಸಿಸ್ಟಾಲಿಕ್‌ ರಕ್ತದೊತ್ತಡವು ಗಡಿರೇಖೆಯಾಗಿದ್ದು, ಅಧಿಕ ರಕ್ತದೊತ್ತಡದ ಪೂರ್ವಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ: ನನಗೆ 35 ವರ್ಷ ವಯಸ್ಸು. ಆದರೂ ನನಗೆ ಅಧಿಕ ರಕ್ತದೊತ್ತಡ ಉಂಟಾಗಬಹುದೇ?

ಉತ್ತರ: ಅಧಿಕ ರಕ್ತದೊತ್ತಡವು ಹಿರಿಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂಬುದು ನಿಜವಾದರೂ ಯುವಜನರಲ್ಲಿ ಕೂಡ ಈ ಅನಾರೋಗ್ಯ ಉಂಟಾಗಬಹುದು. 20ರಿಂದ 40 ವರ್ಷ ವಯೋಮಾನದ ಭಾರತೀಯ ಯುವಜನರಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿಯು ಶೇ. 22ರಷ್ಟಿದೆ. ಇದು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಹೆಚ್ಚು. ಯುವ ಜನರಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವುದಕ್ಕೆ ಪರ್ಯಾಯ ಕಾರಣಗಳು ಯಾವುವು ಎಂಬುದನ್ನು ಪರಿಗಣಿಸಿ ವಿಶ್ಲೇಷಿಸುವುದು ಮುಖ್ಯವಾಗಿದೆ.

ಪ್ರಶ್ನೆ: ರೂಢಿಗತ ತಪಾಸಣೆಯ ಸಂದರ್ಭದಲ್ಲಿ  ನನಗೆ ಅಧಿಕ ರಕ್ತದೊತ್ತಡ ಇರುವುದು  ಪತ್ತೆಯಾಗಿದೆ. ಆದರೆ, ಅಧಿಕ ರಕ್ತದೊತ್ತಡದ

ಸಾಮಾನ್ಯ ಲಕ್ಷಣಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಅಪಾಯಕಾರಿ ಮಟ್ಟಕ್ಕೆ ಏರದ ವಿನಾ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಯಾವುದೇ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ಕೆಲವರಲ್ಲಿ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ತಲೆತಿರುಗುವಿಕೆ, ಉಸಿರುಗಟ್ಟುವುದು ಅಥವಾ ಮೂಗಿನಿಂದ ರಕ್ತಸ್ರಾವದಂತಹ ಲಕ್ಷಣಗಳು ಉಂಟಾಗಬಹುದು. 18 ವರ್ಷಕ್ಕಿಂತ ಅಧಿಕ ವಯೋಮಾನದವರು ಎರಡು ವರ್ಷಗಳಿಗೆ ಒಮ್ಮೆ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು, ಅಧಿಕ ರಕ್ತದೊತ್ತಡದ ಗಡಿಯಲ್ಲಿ ಇರುವವರು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.

ಪ್ರಶ್ನೆ: ನೀವು ಯಾವ ತಪಾಸಣೆಗಳನ್ನು  ಶಿಫಾರಸು ಮಾಡುತ್ತೀರಿ?

ಉತ್ತರ: ಎಲ್ಲ ಯುವ ಜನರು ಅಧಿಕ ರಕ್ತದೊತ್ತಡದ ಪರ್ಯಾಯ ಕಾರಣಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡುವ ಇಸಿಜಿ, ಕಿಡ್ನಿ ಪರೀಕ್ಷೆಗಳು, ಮೂತ್ರ ಪರೀಕ್ಷೆಗಳು, ಥೈರಾಯ್ಡ ಪರೀಕ್ಷೆಗಳು, ಸಕ್ಕರೆ ಪರೀಕ್ಷೆ, ಹೊಟ್ಟೆಯ ಅಲ್ಟ್ರಾಸೌಂಡ್‌, ಮೂತ್ರಪಿಂಡದ ರಕ್ತನಾಳಗಳ ಡಾಪ್ಲರ್‌ ಪರೀಕ್ಷೆ ಮತ್ತು ಎಕೊಕಾರ್ಡಿಯಾಗ್ರಾಮ್‌ ಮಾಡಿಸಿಕೊಳ್ಳಬೇಕು. ಇವುಗಳಲ್ಲದೆ, ಕೆಲವು ನಿರ್ದಿಷ್ಟ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಶಿಫಾರಸಿನಂತೆ ಸ್ಲಿàಪ್‌ ಸ್ಟಡಿಯಂತಹ ಪರೀಕ್ಷೆಗಳನ್ನು ನಡೆಸಬಹುದು.

ಪ್ರಶ್ನೆ: ಅನಿಯಂತ್ರಿತ ರಕ್ತದೊತ್ತಡಕ್ಕೆ  ಸಂಬಂಧಪಟ್ಟ ಸಮಸ್ಯೆಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಲಕ್ವಾ, ಇಂಟ್ರಾಕ್ರೇನಿಯಲ್‌ ಹೆಮರೇಜ್‌, ಕೊರೊನರಿ ಹಾರ್ಟ್‌ ಡಿಸೀಸ್‌, ಹೃದಯಾಘಾತ, ಮೂತ್ರಪಿಂಡ ವೈಫ‌ಲ್ಯ ಮತ್ತು ಕಾಲುಗಳ ರಕ್ತನಾಳಗಳಲ್ಲಿ ತಡೆ ಮುಂತಾದ ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ಪ್ರಮುಖ ಮತ್ತು ಪ್ರಧಾನವಾದ ಅಪಾಯಾಂಶವಾಗಿದೆ. ದೀರ್ಘ‌ಕಾಲದವರೆಗೆ ಅನಿಯಂತ್ರಿತವಾಗಿ ಉಳಿಯುವ ಅಧಿಕ ರಕ್ತದೊತ್ತಡವು ದೇಹದ ಪ್ರಮುಖ ರಕ್ತನಾಳಗಳಿಗೆ ಹಾನಿಯನ್ನು ಉಂಟುಮಾಡಬಹುದಾಗಿದ್ದು, ಇದು ಪ್ರಾಣಾಪಾಯಕಾರಿ ಸ್ಥಿತಿಯಾಗಿರುತ್ತದೆ.

ಪ್ರಶ್ನೆ: ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು  ಡಾಕ್ಟರ್‌. ಹಾಗಾದರೆ, ರಕ್ತದೊತ್ತಡವನ್ನು  ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ  ಜೀವನ ಶೈಲಿಯಲ್ಲಿ ಯಾವ ರೀತಿಯ  ಬದಲಾವಣೆಗಳನ್ನು ತರಬೇಕು?

ಉತ್ತರ:  1. ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.

  1. ಹೆಚ್ಚು ದೇಹತೂಕ/ ಬೊಜ್ಜು ಹೊಂದಿದ್ದರೆ ದೇಹತೂಕ ಇಳಿಸಿಕೊಳ್ಳಿ. ದೇಹತೂಕದಲ್ಲಿ ಪ್ರತೀ ಒಂದು ಕೆ.ಜಿ.ಯಷ್ಟು ಇಳಿಕೆಯು ರಕ್ತದೊತ್ತಡದಲ್ಲಿ 1ರಿಂದ 2 ಎಂಎಂ ಎಚ್‌ಜಿಯಷ್ಟು ಇಳಿಕೆಗೆ ಕಾರಣವಾಗುತ್ತದೆ.
  2. ದಿನಕ್ಕೆ 30 ನಿಮಿಷಗಳ ಕಾಲ – ವಾರದಲ್ಲಿ ಐದು ದಿನ ಜಾಗಿಂಗ್‌, ಬಿರುಸಾದ ನಡಿಗೆಯಂತಹ ವ್ಯಾಯಾಮಗಳನ್ನು ಮಾಡಬೇಕು. ಇದಲ್ಲದೆ ಈಜು, ಸೈಕಲ್‌ ಸವಾರಿ ಮತ್ತು ಇತರ ಏರೋಬಿಕ್‌ ವ್ಯಾಯಾಮಗಳು ಕೂಡ ಸಹಾಯ ಮಾಡುತ್ತವೆ.
  3. ಸಿಟ್ಟು ಮತ್ತು ಒತ್ತಡ ನಿಭಾಯಿಸಬೇಕು.

ಪ್ರಶ್ನೆ: ಸಹಜ ರಕ್ತದೊತ್ತಡವನ್ನು  ಕಾಪಾಡಿಕೊಳ್ಳಲು ಆಹಾರ ಶೈಲಿ  ಹೇಗಿರಬೇಕು/ ಯಾವ  ಮಾರ್ಪಾಟುಗಳನ್ನು ತರಬೇಕು?

ಉತ್ತರ:

1.ಅಧಿಕ ಉಪ್ಪಿನಂಶ ಸೇವಿಸುವುದಕ್ಕೂ ಅಧಿಕ ರಕ್ತದೊತ್ತಡಕ್ಕೂ ನಿಕಟ ಸಂಬಂಧ ಇದೆ. ದಿನಕ್ಕೆ 4.5 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಉಪ್ಪಿನಂಶ ಸೇವನೆಯು ಸಿಸ್ಟಾಲಿಕ್‌ ರಕ್ತದೊತ್ತಡವನ್ನು 5 ಮತ್ತು ಡಯಾಸ್ಟಾಲಿಕ್‌ ರಕ್ತದೊತ್ತಡವನ್ನು 2.5 ಎಂಎಂ ಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ.

  1. ಡ್ಯಾಶ್‌ ಡಯಟ್‌ (ಈಅಖಏ ಡಯಟ್‌ – ಡಯಟರಿ ಎಪ್ರೋಚಸ್‌ ಟು ಸ್ಟಾಪ್‌ ಹೈಪರ್‌ಟೆನ್ಶನ್‌) ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ಹೊಂದಿದೆ. ಡ್ಯಾಶ್‌ ಡಯಟ್‌ನಲ್ಲಿ ಹಣ್ಣುಹಂಪಲು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹೈನು ಉತ್ಪನ್ನಗಳನ್ನು ಹೊಂದಿರುತ್ತದೆ; ಸ್ನ್ಯಾಕ್ಸ್‌, ಸಿಹಿತಿನಿಸುಗಳು, ಮಾಂಸಾಹಾರ, ಸ್ಯಾಚ್ಯುರೇಟೆಡ್‌ ಮತ್ತು ಸಂಪೂರ್ಣ ಕೊಬ್ಬು ಕಡಿಮೆ ಇರುತ್ತದೆ.
  2. ಹಸುರು ಅಥವಾ ಬ್ಲ್ಯಾಕ್‌ ಟೀ ಸೇವನೆಯಿಂದ ರಕ್ತದೊತ್ತಡ ಕೊಂಚ ಕಡಿಮೆಯಾಗಬಹುದು.
  3. ಸಕ್ಕರೆ ಬೆರೆಸಿದ ಸಾಫ್ಟ್ ಡ್ರಿಂಕ್‌ಗಳು ಮೆಟಬಾಲಿಕ್‌ ಸಿಂಡ್ರೋಮ್‌ ಮತ್ತು ಅಧಿಕ ರಕ್ತದೊತ್ತಡ ಉಂಟು ಮಾಡುತ್ತವೆ.

ಪ್ರಶ್ನೆ: ನಾನು ಈಗಲೇ ಔಷಧೋಪಚಾರ  ಆರಂಭಿಸಬೇಕೇ?

ಉತ್ತರ: ರಕ್ತದೊತ್ತಡವು 150-160/80-90 ಎಂಎಂ ಎಚ್‌ಜಿ ಇದ್ದು, ಹೃದ್ರೋಗಗಳು, ಮೂತ್ರ ಪಿಂಡ ಕಾಯಿಲೆಗಳು, ಲಕ್ವಾ ಮತ್ತು ಹೃದ್ರೋಗ ಗಳಂತಹ ಸಮಸ್ಯೆಗಳು ಇಲ್ಲದವರಿಗೆ ಆರಂಭಿಕ ಕೆಲವು ತಿಂಗಳುಗಳ ಕಾಲ ಆಹಾರ ಶೈಲಿಯಲ್ಲಿ ಬದಲಾವಣೆ, ಜೀವನ ಶೈಲಿ ಬದಲಾವಣೆಗಳಿಂದ ನಿಭಾಯಿಸಬಹುದು. ಆದರೂ ಈ ಆರಂಭಿಕ ಕ್ರಮಗಳ ಹೊರತಾಗಿಯೂ ರಕ್ತದೊತ್ತಡವು ಹೆಚ್ಚೇ ಇದ್ದರೆ ಔಷಧೋಪಚಾರ ಆರಂಭಿಸಬೇಕಾದೀತು.

ಪ್ರಶ್ನೆ: ನನ್ನ ರಕ್ತದೊತ್ತಡವನ್ನು ಯಾವಾಗೆಲ್ಲ  ಪರೀಕ್ಷಿಸಿಕೊಳ್ಳಬೇಕು?

ಉತ್ತರ: ಜೀವನಶೈಲಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ಮೂರು ತಿಂಗಳುಗಳ ಅವಧಿಯಲ್ಲಿ ನಿಮ್ಮ ರಕ್ತದೊತ್ತಡವು ಉದ್ದೇಶಿತ ಗುರಿಯನ್ನು ಸಾಧಿಸದೆ ಇದ್ದರೆ ನಿಮಗೆ ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳನ್ನು ನೀಡಬೇಕಾಗುತ್ತದೆ. ಆರಂಭಿಕವಾಗಿ ಪ್ರತೀ 2 ತಿಂಗಳಿಗೆ ಒಮ್ಮೆ ನೀವು ಫಾಲೊ ಅಪ್‌ ಮಾಡಬೇಕಾಗುತ್ತದೆ. ಒಮ್ಮೆ ಅದು ನಿಯಂತ್ರಣಕ್ಕೆ ಬಂದ ಬಲಿಕ 3ರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಾಕು.

ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಡಾಕ್ಟರ್‌. ಮೂರು ತಿಂಗಳುಗಳ ಬಳಿಕ ಮತ್ತೆ ನಿಮ್ಮನ್ನು ಕಾಣುವೆ.

ಪ್ರಶ್ನೆ: ಡಾಕ್ಟರ್‌, ನನಗೆ ಅಧಿಕ  ರಕ್ತದೊತ್ತಡ ಇದೆಯೇ?

ಉತ್ತರ: ಪ್ರಸ್ತುತ ಲಭ್ಯವಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಎರಡು ಅಥವಾ ಹೆಚ್ಚು ರಕ್ತದೊತ್ತಡ ತಪಾಸಣೆಗಳ ಸಂದರ್ಭದಲ್ಲಿ 140/90 ಎಂಎಂ ಎಚ್‌ಜಿಗಿಂತ ಹೆಚ್ಚು ರಕ್ತದೊತ್ತಡ ಕಂಡುಬಂದರೆ ಅದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. 130-139/85-89 ಎಂಎಂ ಎಚ್‌ಜಿ ಸಿಸ್ಟಾಲಿಕ್‌ ರಕ್ತದೊತ್ತಡವು ಗಡಿರೇಖೆಯಾಗಿದ್ದು, ಅಧಿಕ ರಕ್ತದೊತ್ತಡದ ಪೂರ್ವಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ: ನನಗೆ 35 ವರ್ಷ ವಯಸ್ಸು. ಆದರೂ ನನಗೆ ಅಧಿಕ ರಕ್ತದೊತ್ತಡ ಉಂಟಾಗಬಹುದೇ?

ಉತ್ತರ: ಅಧಿಕ ರಕ್ತದೊತ್ತಡವು ಹಿರಿಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂಬುದು ನಿಜವಾದರೂ ಯುವಜನರಲ್ಲಿ ಕೂಡ ಈ ಅನಾರೋಗ್ಯ ಉಂಟಾಗಬಹುದು. 20ರಿಂದ 40 ವರ್ಷ ವಯೋಮಾನದ ಭಾರತೀಯ ಯುವಜನರಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿಯು ಶೇ. 22ರಷ್ಟಿದೆ. ಇದು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಹೆಚ್ಚು. ಯುವ ಜನರಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವುದಕ್ಕೆ ಪರ್ಯಾಯ ಕಾರಣಗಳು ಯಾವುವು ಎಂಬುದನ್ನು ಪರಿಗಣಿಸಿ ವಿಶ್ಲೇಷಿಸುವುದು ಮುಖ್ಯವಾಗಿದೆ.

ಪ್ರಶ್ನೆ: ರೂಢಿಗತ ತಪಾಸಣೆಯ ಸಂದರ್ಭದಲ್ಲಿ  ನನಗೆ ಅಧಿಕ ರಕ್ತದೊತ್ತಡ ಇರುವುದು  ಪತ್ತೆಯಾಗಿದೆ. ಆದರೆ, ಅಧಿಕ ರಕ್ತದೊತ್ತಡದ  ಸಾಮಾನ್ಯ ಲಕ್ಷಣಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಅಪಾಯಕಾರಿ ಮಟ್ಟಕ್ಕೆ ಏರದ ವಿನಾ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಯಾವುದೇ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ಕೆಲವರಲ್ಲಿ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ತಲೆತಿರುಗುವಿಕೆ, ಉಸಿರುಗಟ್ಟುವುದು ಅಥವಾ ಮೂಗಿನಿಂದ ರಕ್ತಸ್ರಾವದಂತಹ ಲಕ್ಷಣಗಳು ಉಂಟಾಗಬಹುದು. 18 ವರ್ಷಕ್ಕಿಂತ ಅಧಿಕ ವಯೋಮಾನದವರು ಎರಡು ವರ್ಷಗಳಿಗೆ ಒಮ್ಮೆ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು, ಅಧಿಕ ರಕ್ತದೊತ್ತಡದ ಗಡಿಯಲ್ಲಿ ಇರುವವರು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.

ಪ್ರಶ್ನೆ: ನೀವು ಯಾವ ತಪಾಸಣೆಗಳನ್ನು  ಶಿಫಾರಸು ಮಾಡುತ್ತೀರಿ?

ಉತ್ತರ: ಎಲ್ಲ ಯುವ ಜನರು ಅಧಿಕ ರಕ್ತದೊತ್ತಡದ ಪರ್ಯಾಯ ಕಾರಣಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡುವ ಇಸಿಜಿ, ಕಿಡ್ನಿ ಪರೀಕ್ಷೆಗಳು, ಮೂತ್ರ ಪರೀಕ್ಷೆಗಳು, ಥೈರಾಯ್ಡ ಪರೀಕ್ಷೆಗಳು, ಸಕ್ಕರೆ ಪರೀಕ್ಷೆ, ಹೊಟ್ಟೆಯ ಅಲ್ಟ್ರಾಸೌಂಡ್‌, ಮೂತ್ರಪಿಂಡದ ರಕ್ತನಾಳಗಳ ಡಾಪ್ಲರ್‌ ಪರೀಕ್ಷೆ ಮತ್ತು ಎಕೊಕಾರ್ಡಿಯಾಗ್ರಾಮ್‌ ಮಾಡಿಸಿಕೊಳ್ಳಬೇಕು. ಇವುಗಳಲ್ಲದೆ, ಕೆಲವು ನಿರ್ದಿಷ್ಟ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಶಿಫಾರಸಿನಂತೆ ಸ್ಲಿàಪ್‌ ಸ್ಟಡಿಯಂತಹ ಪರೀಕ್ಷೆಗಳನ್ನು ನಡೆಸಬಹುದು.

ಪ್ರಶ್ನೆ: ಅನಿಯಂತ್ರಿತ ರಕ್ತದೊತ್ತಡಕ್ಕೆ  ಸಂಬಂಧಪಟ್ಟ ಸಮಸ್ಯೆಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಲಕ್ವಾ, ಇಂಟ್ರಾಕ್ರೇನಿಯಲ್‌ ಹೆಮರೇಜ್‌, ಕೊರೊನರಿ ಹಾರ್ಟ್‌ ಡಿಸೀಸ್‌, ಹೃದಯಾಘಾತ, ಮೂತ್ರಪಿಂಡ ವೈಫ‌ಲ್ಯ ಮತ್ತು ಕಾಲುಗಳ ರಕ್ತನಾಳಗಳಲ್ಲಿ ತಡೆ ಮುಂತಾದ ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ಪ್ರಮುಖ ಮತ್ತು ಪ್ರಧಾನವಾದ ಅಪಾಯಾಂಶವಾಗಿದೆ. ದೀರ್ಘ‌ಕಾಲದವರೆಗೆ ಅನಿಯಂತ್ರಿತವಾಗಿ ಉಳಿಯುವ ಅಧಿಕ ರಕ್ತದೊತ್ತಡವು ದೇಹದ ಪ್ರಮುಖ ರಕ್ತನಾಳಗಳಿಗೆ ಹಾನಿಯನ್ನು ಉಂಟುಮಾಡಬಹುದಾಗಿದ್ದು, ಇದು ಪ್ರಾಣಾಪಾಯಕಾರಿ ಸ್ಥಿತಿಯಾಗಿರುತ್ತದೆ.

ಪ್ರಶ್ನೆ: ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು  ಡಾಕ್ಟರ್‌. ಹಾಗಾದರೆ, ರಕ್ತದೊತ್ತಡವನ್ನು  ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ  ಜೀವನ ಶೈಲಿಯಲ್ಲಿ ಯಾವ ರೀತಿಯ  ಬದಲಾವಣೆಗಳನ್ನು ತರಬೇಕು?

ಉತ್ತರ:

  1. ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.
  2. ಹೆಚ್ಚು ದೇಹತೂಕ/ ಬೊಜ್ಜು ಹೊಂದಿದ್ದರೆ ದೇಹತೂಕ ಇಳಿಸಿಕೊಳ್ಳಿ. ದೇಹತೂಕದಲ್ಲಿ ಪ್ರತೀ ಒಂದು ಕೆ.ಜಿ.ಯಷ್ಟು ಇಳಿಕೆಯು ರಕ್ತದೊತ್ತಡದಲ್ಲಿ 1ರಿಂದ 2 ಎಂಎಂ ಎಚ್‌ಜಿಯಷ್ಟು ಇಳಿಕೆಗೆ ಕಾರಣವಾಗುತ್ತದೆ.
  3. ದಿನಕ್ಕೆ 30 ನಿಮಿಷಗಳ ಕಾಲ – ವಾರದಲ್ಲಿ ಐದು ದಿನ ಜಾಗಿಂಗ್‌, ಬಿರುಸಾದ ನಡಿಗೆಯಂತಹ ವ್ಯಾಯಾಮಗಳನ್ನು ಮಾಡಬೇಕು. ಇದಲ್ಲದೆ ಈಜು, ಸೈಕಲ್‌ ಸವಾರಿ ಮತ್ತು ಇತರ ಏರೋಬಿಕ್‌ ವ್ಯಾಯಾಮಗಳು ಕೂಡ ಸಹಾಯ ಮಾಡುತ್ತವೆ.
  4. ಸಿಟ್ಟು ಮತ್ತು ಒತ್ತಡ ನಿಭಾಯಿಸಬೇಕು.

ಪ್ರಶ್ನೆ: ಸಹಜ ರಕ್ತದೊತ್ತಡವನ್ನು  ಕಾಪಾಡಿಕೊಳ್ಳಲು ಆಹಾರ ಶೈಲಿ  ಹೇಗಿರಬೇಕು/ ಯಾವ  ಮಾರ್ಪಾಟುಗಳನ್ನು ತರಬೇಕು?

ಉತ್ತರ:

  1. ಅಧಿಕ ಉಪ್ಪಿನಂಶ ಸೇವಿಸುವುದಕ್ಕೂ ಅಧಿಕ ರಕ್ತದೊತ್ತಡಕ್ಕೂ ನಿಕಟ ಸಂಬಂಧ ಇದೆ. ದಿನಕ್ಕೆ 4.5 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಉಪ್ಪಿನಂಶ ಸೇವನೆಯು ಸಿಸ್ಟಾಲಿಕ್‌ ರಕ್ತದೊತ್ತಡವನ್ನು 5 ಮತ್ತು ಡಯಾಸ್ಟಾಲಿಕ್‌ ರಕ್ತದೊತ್ತಡವನ್ನು 2.5 ಎಂಎಂ ಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ.
  2. ಡ್ಯಾಶ್‌ ಡಯಟ್‌ (ಈಅಖಏ ಡಯಟ್‌ – ಡಯಟರಿ ಎಪ್ರೋಚಸ್‌ ಟು ಸ್ಟಾಪ್‌ ಹೈಪರ್‌ಟೆನ್ಶನ್‌) ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ಹೊಂದಿದೆ. ಡ್ಯಾಶ್‌ ಡಯಟ್‌ನಲ್ಲಿ ಹಣ್ಣುಹಂಪಲು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹೈನು ಉತ್ಪನ್ನಗಳನ್ನು ಹೊಂದಿರುತ್ತದೆ; ಸ್ನ್ಯಾಕ್ಸ್‌, ಸಿಹಿತಿನಿಸುಗಳು, ಮಾಂಸಾಹಾರ, ಸ್ಯಾಚ್ಯುರೇಟೆಡ್‌ ಮತ್ತು ಸಂಪೂರ್ಣ ಕೊಬ್ಬು ಕಡಿಮೆ ಇರುತ್ತದೆ.
  3. ಹಸುರು ಅಥವಾ ಬ್ಲ್ಯಾಕ್‌ ಟೀ ಸೇವನೆಯಿಂದ ರಕ್ತದೊತ್ತಡ ಕೊಂಚ ಕಡಿಮೆಯಾಗಬಹುದು.
  4. ಸಕ್ಕರೆ ಬೆರೆಸಿದ ಸಾಫ್ಟ್ ಡ್ರಿಂಕ್‌ಗಳು ಮೆಟಬಾಲಿಕ್‌ ಸಿಂಡ್ರೋಮ್‌ ಮತ್ತು ಅಧಿಕ ರಕ್ತದೊತ್ತಡ ಉಂಟು ಮಾಡುತ್ತವೆ.

ಪ್ರಶ್ನೆ: ನಾನು ಈಗಲೇ ಔಷಧೋಪಚಾರ  ಆರಂಭಿಸಬೇಕೇ?

ಉತ್ತರ: ರಕ್ತದೊತ್ತಡವು 150-160/80-90 ಎಂಎಂ ಎಚ್‌ಜಿ ಇದ್ದು, ಹೃದ್ರೋಗಗಳು, ಮೂತ್ರ ಪಿಂಡ ಕಾಯಿಲೆಗಳು, ಲಕ್ವಾ ಮತ್ತು ಹೃದ್ರೋಗ ಗಳಂತಹ ಸಮಸ್ಯೆಗಳು ಇಲ್ಲದವರಿಗೆ ಆರಂಭಿಕ ಕೆಲವು ತಿಂಗಳುಗಳ ಕಾಲ ಆಹಾರ ಶೈಲಿಯಲ್ಲಿ ಬದಲಾವಣೆ, ಜೀವನ ಶೈಲಿ ಬದಲಾವಣೆಗಳಿಂದ ನಿಭಾಯಿಸಬಹುದು. ಆದರೂ ಈ ಆರಂಭಿಕ ಕ್ರಮಗಳ ಹೊರತಾಗಿಯೂ ರಕ್ತದೊತ್ತಡವು ಹೆಚ್ಚೇ ಇದ್ದರೆ ಔಷಧೋಪಚಾರ ಆರಂಭಿಸಬೇಕಾದೀತು.

ಪ್ರಶ್ನೆ: ನನ್ನ ರಕ್ತದೊತ್ತಡವನ್ನು ಯಾವಾಗೆಲ್ಲ  ಪರೀಕ್ಷಿಸಿಕೊಳ್ಳಬೇಕು?

ಉತ್ತರ: ಜೀವನಶೈಲಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ಮೂರು ತಿಂಗಳುಗಳ ಅವಧಿಯಲ್ಲಿ ನಿಮ್ಮ ರಕ್ತದೊತ್ತಡವು ಉದ್ದೇಶಿತ ಗುರಿಯನ್ನು ಸಾಧಿಸದೆ ಇದ್ದರೆ ನಿಮಗೆ ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳನ್ನು ನೀಡಬೇಕಾಗುತ್ತದೆ. ಆರಂಭಿಕವಾಗಿ ಪ್ರತೀ 2 ತಿಂಗಳಿಗೆ ಒಮ್ಮೆ ನೀವು ಫಾಲೊ ಅಪ್‌ ಮಾಡಬೇಕಾಗುತ್ತದೆ. ಒಮ್ಮೆ ಅದು ನಿಯಂತ್ರಣಕ್ಕೆ ಬಂದ ಬಲಿಕ 3ರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಾಕು. ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಡಾಕ್ಟರ್‌. ಮೂರು ತಿಂಗಳುಗಳ ಬಳಿಕ ಮತ್ತೆ ನಿಮ್ಮನ್ನು ಕಾಣುವೆ.

ಟಾಪ್ ನ್ಯೂಸ್

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Cabinet approves: ರೈತಗೆ ಬಂಪರ್‌; ಹಿಂಗಾರು ಬೆಳೆಗೆ ಬೆಂಬಲ ಬೆಲೆ ಹೆಚ್ಚಳ

Mangaluru-VV

Research: ಮಂಗಳೂರು ವಿಶ್ವವಿದ್ಯಾನಿಲಯ “ಪೇಟೆಂಟ್‌’ ಮಹತ್ವದ ಮೈಲುಗಲ್ಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

By Election: ಮುಂದುವರಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕಗ್ಗಂಟು

kalla

Koni: ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ- ಹೈದರಾಬಾದ್‌ನಿಂದ ಎಚ್ಚರಿಸಿದ ಸೆಕ್ಯುರಿಟಿ ಸಂಸ್ಥೆ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Krishna-Mata-Udupi

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.