Mental health: ತಾಯಂದಿರ ಮಾನಸಿಕ ಆರೋಗ್ಯ


Team Udayavani, Nov 4, 2024, 2:32 PM IST

3

‘ತಾಯಿ’ ಎಂದರೆ ಮಮತೆಯ ಕಡಲು, ಪ್ರೀತಿಯ ಸೆಲೆ, ಧೈರ್ಯದ ನೆಲೆ. ತಾಯಿಯನ್ನು ಪ್ರಕೃತಿಗೆ ಹೋಲಿಸಲಾಗಿದೆ. ತಾಯಿ ಎನ್ನುವವಳು ಮೊದಲು ಹೆತ್ತವರಿಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ, ಅವಳ ಮಗುವಿಗೆ ತಾಯಿಯಾಗುತ್ತಾಳೆ. ಮಾತೃ ಸ್ವರೂಪಿ ತಾಯಿ ತನ್ನ ಗರ್ಭದಲ್ಲಿ ಮಗುವನ್ನು ಪೋಷಿಸಿ, ಹಡೆದು, ಹಾಲುಣಿಸಿ, ಬೆಳೆಸಿ ಪ್ರಪಂಚಕ್ಕೆ ಪರಿಚಯಿಸುತ್ತಾಳೆ. ತಾಯಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮೂಲ ಕಾರಣಳು ಎಂದರೆ ತಪ್ಪಾಗದು. ತಾಯಿಯಾದವಳು ತನ್ನ ಕುಟುಂಬದ ಪಾಲನೆಯ ಜತೆಗೆ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಾಳೆ. ತಾಯಿ ತನ್ನ ಜವಾಬ್ದಾರಿ ನಿಭಾಯಿಸುವ ಹಂತದಲ್ಲಿ ತನ್ನ ಆರೋಗ್ಯದ ಕಾಳಜಿ ವಹಿಸುವುದನ್ನು ಮರೆಯುತ್ತಾಳೆ. ತನ್ನ ದೈಹಿಕ ಬದಲಾವಣೆಗಳು, ಹಾರ್ಮೋನುಗಳ ವೈಪರೀತ್ಯ, ಇದರ ಜತೆಗೆ ತಾಯಿಯ ಮಾನಸಿಕ ಆರೋಗ್ಯವು ಮುಖ್ಯವಾಗಿದ್ದು, ಇದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ತಾಯಿಯ ಮಾನಸಿಕ ಆರೋಗ್ಯವು ಅವಳ, ಮಕ್ಕಳ, ಕುಟುಂಬದ, ಹಾಗು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬಲ್ಲುದು.

– ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯಕ್ಕಿರುವ ವ್ಯತ್ಯಾಸವೇನು?
– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ ಏನು ?
– ಮಕ್ಕಳು ಮತ್ತು ಕುಟುಂಬದ ಮೇಲೆ ತಾಯಂದಿರ ಮಾನಸಿಕ ಆರೋಗ್ಯದ ಪ್ರಭಾವವೇನು?
– ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳಾವುವು ?
– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಸ್ಥಿತಿ ಗುರುತಿಸುವುದು ಹೇಗೆ?
– ತಾಯಂದಿರ ಮಾನಸಿಕ ಆರೋಗ್ಯ ಸುಧಾರಿಸುವ ಮಾರ್ಗೋಪಾಯಗಳು ಯಾವುವು? ಈ ಬಗ್ಗೆ ಗಮನಹರಿಸೋಣ.

ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯ
ಮಾನಸಿಕ ಕಾಯಿಲೆಯು ತಾಯಂದಿರಲ್ಲಿ ದಿನನಿತ್ಯದ ಕೆಲಸ ನಿರ್ವಹಣೆಯಲ್ಲಿ ಒತ್ತಡ (ಕಿರಿಕಿರಿ) ಉಂಟುಮಾಡುತ್ತದೆ. ನಕಾರಾತ್ಮಕ ಭಾವನೆಗಳು, ಆಲೋಚನೆಗಳು ಹಾಗು ನಡವಳಿಕೆಗಳು, ಅನಗತ್ಯ ಒತ್ತಡಗಳು, ಕುಗ್ಗಿದ ಕಾರ್ಯಕ್ಷಮತೆ ಮತ್ತು ದಿನನಿತ್ಯದ ಕೆಲಸಗಳನ್ನು ನಿರ್ವಹಿಸುವಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಮಕ್ಕಳು, ಕುಟುಂಬ ಮತ್ತು ಸಮಾಜದ ಜತೆಗೆ ಪರಿಣಾಮಕಾರಿ ಸಂಬಂಧವನ್ನು ಬೆಳೆಸುವಲ್ಲಿ ತಡೆ ಒಡ್ಡುತ್ತದೆ. ಮಾನಸಿಕ ಕಾಯಿಲೆಯ ರೋಗಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ, ಮಾನಸಿಕ ತಜ್ಞರ ಸಲಹೆ ಪಡೆಯುವುದು ಆವಶ್ಯಕವಾಗಿದೆ.

ಮಾನಸಿಕ ಆರೋಗ್ಯವು ತಾಯಂದಿರ ಒಟ್ಟಾರೆ ಯೋಗಕ್ಷೇಮ ಮತ್ತು ಸ್ವಾಸ್ಥ್ಯದ ಬಗ್ಗೆ ತಿಳಿಸುತ್ತದೆ. ತಾಯಂದಿರು ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಣೆಯಲ್ಲಿ ತೋರಿಸುವ ಆಸಕ್ತಿ, ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅವರ ಆತ್ಮಸ್ಥೈರ್ಯ, ಮಕ್ಕಳು ಮತ್ತು ಕುಟುಂಬದ ಜತೆಗಿನ ಅವರ ಒಡನಾಟ, ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಅವರ ಸಕಾರಾತ್ಮಕ ಆಲೋಚನೆಗಳನ್ನು ತಿಳಿಸುತ್ತದೆ.

ತಾಯಿಯ ಮಾನಸಿಕ ಅಸ್ವಾಸ್ಥ್ಯದ ಪ್ರಭಾವವೇನು?
ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ನೇರ ಪ್ರಭಾವವನ್ನು ಉಂಟುಮಾಡುತ್ತದೆ. ತಾಯಿ ಮಗುವಿನ ಸಂಬಂಧ ಕರುಳ ಬಳ್ಳಿಯ ಸಂಬಂಧವಾಗಿದೆ. ಗರ್ಭಾವಾಸ್ಥೆಯಲ್ಲಿಯೇ ತಾಯಿ ಮತ್ತು ಭ್ರೂಣದ ಸಂಬಂಧ ಚಿಗುರೊಡೆಯುತ್ತದೆ. ಬೆಳೆಯುತ್ತಿರುವ ಭ್ರೂಣವು ತಾಯಿಯ ಹೃದಯ ಬಡಿತ ಹಾಗೂ ಧ್ವನಿಯ ಬಗ್ಗೆ ಅರಿವನ್ನು ಪಡೆಯುತ್ತದೆ. ಸ್ಪರ್ಶ ಮತ್ತು ಚಲನೆಗೆ ಪ್ರತಿಕ್ರಿಯಿಸುತ್ತದೆ. ತಾಯಂದಿರು ಇಂಥ ಸಮಯದಲ್ಲಿ ತಮ್ಮ ದೇಹದಲ್ಲಾಗುತ್ತಿರುವ ವೈಪರೀತ್ಯಗಳಿಗೆ ನೀಡುವ ಸ್ಪಂದನೆ ಅಥವಾ ಪ್ರಸವದ ಬಗೆಗಿನ ಅವರ ಭಯ, ಆತಂಕ ಭ್ರೂಣದ ಮೇಲೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲದೆ ಹೆರಿಗೆಯ ಅನಂತರದ ಬಾಣಂತಿಯ ಚೇತರಿಕೆ, ಹಾಲುಣಿಸುವ ಸಂದರ್ಭದ ಬದಲಾವಣೆಗಳು, ನಿದ್ರಾಭಂಗದಂತಹ ಸಂದರ್ಭದಲ್ಲಿ ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ಪ್ರಭಾವ ಬೀರುತ್ತದೆ.

ಜನನಿ ತಾನೇ ಮೊದಲ ಗುರು ಎಂಬ ಮಾತಿದೆ. ಮಕ್ಕಳು ತಾಯಿಯನ್ನು ನೋಡಿ ಕಲಿಯುವುದು, ಅನುಕರಿಸುವುದು ಸಾಮಾನ್ಯ. ತಾಯಿಯ ಭಾವನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳನ್ನು ಮಕ್ಕಳು ಕಲಿಯುತ್ತಾರೆ. ತಾಯಿಯ ದುಃಖದ ಅಭಿವ್ಯಕ್ತಿ, ಸಹಾನುಭೂತಿ ಹಾಗೂ ಸಹಾಯ ವರ್ತನೆಯನ್ನು ಪ್ರೋತ್ಸಾಹಿಸುತ್ತದೆ. ಕೋಪದ ಅಭಿವ್ಯಕ್ತಿ ಪ್ರತಿಭಟನೆ ಹಾಗೂ ಅಸ್ವಸ್ಥತೆಯನ್ನು ಸಂಕೇತಿಸುತ್ತದೆ. ತಾಯಿಯು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೋರಿಸುವ ಕೌಶಲಗಳು ಮಗುವಿಗೆ ತಾನು ಇತರರೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧವನ್ನು ಬೆಳೆಸಲು, ಕಲಿಕೆಯ ಬಗ್ಗೆ ಆಸಕ್ತಿ ಹೊಂದಲು ಮತ್ತು ಶೈಕ್ಷಣಿಕ ಸಾಧನೆಯನ್ನು ಮಾಡಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಸ್ವಾಭಿಮಾನಿಯಾಗಲು, ಸಮಾಜದೊಂದಿಗೆ ಉತ್ತಮ ಭಾಂದವ್ಯ ಹೊಂದಲು ಹಾಗೂ ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮಾಡಲು ನೆರವಾಗಬಲ್ಲದು.

ತಾಯಿಯ ಮಾನಸಿಕ ಅಸ್ವಾಸ್ಥ್ಯವು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಮತ್ತು ಕುಟುಂಬದ ಪೋಷಣೆ, ಸಾಮರಸ್ಯ, ಉತ್ತಮ ಕೌಟುಂಬಿಕ ಸಂಬಂಧ, ಕುಟುಂಬದೊಂದಿಗೆ ಸಂವಹನ ಮಾದರಿಗಳು, ಉತ್ತಮ ಕುಟುಂಬ ನಿರ್ವಹಣೆಯಲ್ಲಿ ಸಹಾಯವಾಗಬಲ್ಲದು. ಕೌಟುಂಬಿಕ ಮನಸ್ತಾಪಗಳು, ಹೊಂದಾಣಿಕೆಯ ಕೊರತೆ, ಮಾನಸಿಕ ತುಮುಲ, ತಪ್ಪು ತಿಳಿವಳಿಕೆಗಳು, ಅತಿಯಾದ ನಿರೀಕ್ಷೆಗಳು, ಜಗಳ, ದುರ್ಬಲತೆ, ಉದ್ವೇಗ, ಒತ್ತಡ ಇವೇ ಮುಂತಾದವು ಕುಟುಂಬದ ಸ್ವಾಸ್ಥ್ಯ ಕೆಡಲು ಮಾರಕವಾಗಿದೆ.

ಮಾನಸಿಕ ಆರೋಗ್ಯದ ಗುಣಲಕ್ಷಣಗಳೇನು?
1. ಸ್ವಯಂ ಕಾಳಜಿ ಮತ್ತು ಸಮತೋಲನ
ತಾಯಂದಿರು ತಮ್ಮ ವಯಕ್ತಿಕ ಕಾಳಜಿ ಹಾಗು ವೃತ್ತಿಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು. ವಿಶ್ರಾಂತಿ ಮತ್ತು ಸಮಚಿತ್ತತೆಯನ್ನು ಹೊಂದುವಲ್ಲಿ ತೊಡಗಿಕೊಳ್ಳುವುದು.
2. ಸ್ಥಿತಿಸ್ಥಾಪಕತ್ವ ಮತ್ತು ನಿಭಾಯಿಸುವ ಕೌಶಲಗಳು
ತಾಯಂದಿರು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವಲ್ಲಿ ತೊಡಗಿಕೊಳ್ಳುವುದು.
3. ಸಕಾರಾತ್ಮಕ ಸಂಬಂಧವನ್ನು ಹೊಂದುವುದು
ತಾಯಂದಿರು ತಮ್ಮ ಜತೆಗಿರುವವರೊಂದಿಗೆ ಪ್ರಾಮಾಣಿಕ, ನಂಬಿಕಾರ್ಹ, ಗೌರವಯುತವಾಗಿದ್ದು ಮುಕ್ತ ಸಂವಹನದೊಂದಿಗೆ ಸಾಮಾಜಿಕ ಸಂಬಂಧವನ್ನು ಹೊಂದುವುದು ಮತ್ತು ತನ್ನ ವಯಕ್ತಿಕ ಹಾಗು ವೃತ್ತಿಜೀವನದ ಗುರಿ ಹಾಗೂ ಉದ್ದೇಶಗಳನ್ನು ಪೂರೈಸುವಲ್ಲಿ ಸಹಾಯಕವಾಗುವಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದು.

ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ
ದೈನಂದಿನ ಒತ್ತಡಗಳು ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಂಬಂಧಗಳನ್ನು ಪೂರ್ಣವಾಗಿ ಅನುಭವಿಸಲು, ಈ ಕ್ಷಣವನ್ನು ಜೀವಿಸಲು ಮತ್ತು ಜತೆಗಿರುವವರೊಂದಿಗೆ ಆತ್ಮೀಯವಾಗಿ ಜೀವನವನ್ನು ಅನುಭವಿಸಲು ಸಹಾಯಕವಾಗಿದೆ. ಮಗುವಿನ ಭವಿಷ್ಯ ತಾಯಿಯ ಕೈಯಲ್ಲಿದೆ. ಮಗುವನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಅವಳ ಮೇಲಿದೆ. ಹೀಗಾಗಿ ತಾಯಿಯು ತನ್ನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ತಾಯಂದಿರ ಮಾನಸಿಕ ಆರೋಗ್ಯವು ಇಡೀ ಸಮಾಜದ ಹಿತ ಕಾಪಾಡುವಲ್ಲಿ ಮತ್ತು ಆರೋಗ್ಯವಂತ ಪೀಳಿಗೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ತನ್ನ ಜೀವನದ ಗುರಿಯನ್ನು ತಲುಪಲು, ಜತೆಗೆ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪರಿಣಾಮ ಬೀರುತ್ತದೆ.

ಸಂಗೀತಾ ಹೆಗ್ಡೆ, ರಿಸರ್ಚ್‌ ಅಸಿಸ್ಟೆಂಟ್‌
ಶಾಲಿನಿ ಕ್ವಾಡ್ರಸ್‌, ಅಸಿಸ್ಟೆಂಟ್‌ ಪ್ರೊಫೆಸರ್‌-ಸೀನಿಯರ್‌ ಸ್ಕೇಲ್‌
ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Gudibande-Suside

Gudibande: ಮೈಕ್ರೋ ಫೈನಾನ್ಸ್ ಹಾವಳಿ; ಸಾಲದ ಸುಳಿಗೆ ಸಿಲುಕಿ ಕೂಲಿ ಕಾರ್ಮಿಕ ಆತ್ಮಹ*ತ್ಯೆ

World Cancer ದಿನದ ಅಂಗವಾಗಿ ಕ್ಯಾನ್ಸರ್‌ ಗೆದ್ದವರಿಗೆ ಪಿಕಲ್‌ಬಾಲ್‌ ಪಂದ್ಯಾವಳಿ ಆಯೋಜನೆ

World Cancer ದಿನದ ಅಂಗವಾಗಿ ಕ್ಯಾನ್ಸರ್‌ ಗೆದ್ದವರಿಗೆ ಪಿಕಲ್‌ಬಾಲ್‌ ಪಂದ್ಯಾವಳಿ ಆಯೋಜನೆ

Sweet Recipes: ಮನೆಯಲ್ಲಿ ಶುಭ ಸಮಾರಂಭ ಇದ್ದರೆ ಈ ಸಿಹಿ ಖಾದ್ಯ ಒಮ್ಮೆ ಟ್ರೈ ಮಾಡಿ ನೋಡಿ…

Sweet Recipes: ಮನೆಯಲ್ಲಿ ಶುಭ ಸಮಾರಂಭ ಇದ್ದರೆ ಈ ಸಿಹಿ ಖಾದ್ಯ ಒಮ್ಮೆ ಟ್ರೈ ಮಾಡಿ ನೋಡಿ…

yatnal

BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್

Jaya-bacchan

Mahakumbha:ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳೆಸೆತದಿಂದ ನದಿ ನೀರು ಕಲುಷಿತ: ಜಯಾ ಬಚ್ಚನ್‌

1–RASm

Denmark; ಮುಸ್ಲಿಂ ರಾಷ್ಟ್ರದ ರಾಯಭಾರ ಕಚೇರಿ ಎದುರು ಕುರಾನ್‌ ಸುಟ್ಟ ರಾಸ್ಮಸ್ ಪಲುಡಾನ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5(1

Cardiovascular disease: ಆರೋಗ್ಯಕರ ಜೀವನ ಶೈಲಿಯ ಜತೆ ಹೃದ್ರೋಗದಿಂದ ದೂರವಿರಿ

4

Milk-Teeth: ಬಾಟಲಿ ಹಾಲೂಡುವಿಕೆ ಹಾಲು ಹಲ್ಲು ಹುಳುಕಾಗುವುದನ್ನು ಹೇಗೆ ತಡೆಯಬಹುದು?

3(2

Breast surgery: ಸ್ತ್ರೀಯರಿಗೆ ಸ್ತನ ಶಸ್ತ್ರಚಿಕಿತ್ಸೆಗಳು

2

Guillain-Barré Syndrome: ನರವಿಜ್ಞಾನಿಗಳ ಪಾತ್ರ ಮತ್ತು ರೋಗಿಯ ಶಿಕ್ಷಣ

8-health

Kidney Stones: ಮೂತ್ರಪಿಂಡದ ಕಲ್ಲುಗಳು ಕ್ಯಾನ್ಸರ್‌ ಆಗಬಲ್ಲುದೇ?

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Hunsur: ಹಾಡಹಗಲೇ ಜಾನುವಾರುಗಳ ಮೇಲೆ ಹುಲಿ ದಾಳಿ; ಗ್ರಾಮಸ್ಥರಲ್ಲಿ ಆತಂಕ

Hunsur: ಹಾಡಹಗಲೇ ಜಾನುವಾರುಗಳ ಮೇಲೆ ಹುಲಿ ದಾಳಿ; ಗ್ರಾಮಸ್ಥರಲ್ಲಿ ಆತಂಕ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Suicide 3

Koratagere; ಹೊಟ್ಟೆ ನೋವು ಬಾಧೆ; ಆಸ್ಪತ್ರೆಯಿಂದ ಮನೆಗೆ ಹೋಗಿ ಆತ್ಮಹತ್ಯೆ

Gudibande-Suside

Gudibande: ಮೈಕ್ರೋ ಫೈನಾನ್ಸ್ ಹಾವಳಿ; ಸಾಲದ ಸುಳಿಗೆ ಸಿಲುಕಿ ಕೂಲಿ ಕಾರ್ಮಿಕ ಆತ್ಮಹ*ತ್ಯೆ

1-korata

Koratagere; ಪ್ರತೀ ಭಾನುವಾರ ವಿದ್ಯುತ್ ವ್ಯತ್ಯಯ: ಸಾರ್ವಜನಿಕರಿಂದ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.