ಶ್ವಾಸಕೋಶ ರೋಗಿಗಳಲ್ಲಿ ಕೋವಿಡ್ ನಂತರದ ಸಂಕೀರ್ಣ ಸಮಸ್ಯೆಗಳು


Team Udayavani, Oct 25, 2020, 2:49 PM IST

Arogyavani-tdy-2

ಕೋವಿಡ್ ಸಾಂಕ್ರಾಮಿಕೋತ್ತರ ಹಂತವನ್ನು ಪ್ರವೇಶಿಸುತ್ತಿರುವಾಗ, ಕೋವಿಡ್‌-19ನಿಂದ ಚೇತರಿಸಿಕೊಂಡ ರೋಗಿಗಳು ರೋಗಲಕ್ಷಣಗಳು ಮರುಕಳಿಸುವ ಅಥವಾ ಹಾಗೆಯೇ ಉಳಿದುಕೊಂಡ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶವನ್ನು ಗಮನಿಸಬಹುದು.

ಇವುಗಳಲ್ಲಿ ಶ್ವಾಸಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು, ಇತರ ಸಮಸ್ಯೆಗಳೂ ಇರಬಹುದು. ಶ್ವಾಸಾಂಗಕ್ಕೆ ಸಂಬಂಧಿಸದ ಸಮಸ್ಯೆಗಳಲ್ಲಿ ಕೊರೊನಾದಿಂದ ಮಾನಸಿಕ ಆರೋಗ್ಯದ ಮೇಲೆ ಉಂಟಾದ ಪ್ರತಿಕೂಲ ಪರಿಣಾಮಗಳಿಂದಾಗಿ ದಣಿವು, ಮಯಾಲ್ಜಿಯಾ, ಮಲೈಸ್‌ ಮತ್ತು ಅನೊರೆಕ್ಸಿಯಾ ಕಂಡುಬರುತ್ತವೆ. ಇವು ತನ್ನಿಂದ ತಾನಾಗಿಯೇ ಕಡಿಮೆಯಾಗಬಲ್ಲಂಥವು ಮತ್ತು ಕಾಲಾಂತರದಲ್ಲಿ ಸರಿಹೋಗುತ್ತವೆ.

ಕೋವಿಡ್‌ಗೆ ತುತ್ತಾದ ರೋಗಿಗಳಲ್ಲಿ ಶ್ವಾಸಾಂಗಕ್ಕೆ ಸಂಬಂಧಪಟ್ಟು ಸ್ಥೂಲವಾಗಿ ಎರಡು ವಿಧವಾದ ಲಕ್ಷಣಗಳನ್ನು ಗಮನಿಸಬಹುದು. ಒಂದನೆಯದು ಸೋಂಕಿನ ಬಳಿಕ ಶ್ವಾಸನಾಳದ ಅತಿಯಾದ ಪ್ರತಿಸ್ಪಂದನೆ. ಯಾವುದೇ ವೈರಾಣು ಸೋಂಕು ಶ್ವಾಸನಾಳದಲ್ಲಿರುವ ಲೋಳೆಯಾದ ಮ್ಯುಕೋಸಾದಲ್ಲಿ ಸತತ ಉರಿಯೂತವನ್ನು ಉಂಟುಮಾಡುತ್ತದೆ. ಇದಕ್ಕೆ ಕೊರೊನಾ ವೈರಾಣು ಕೂಡ ಹೊರತಲ್ಲ. ಇದು ಒಣಕೆಮ್ಮು, ಉಸಿರುಕಟ್ಟುವಿಕೆ, ಎದೆಯಲ್ಲಿ ಅಸ್ವಾಸ್ಥ್ಯ ಮತ್ತು ಉಸಿರಾಡುವಾಗ ಕೀರಲು ಧ್ವನಿ ಹೊಮ್ಮುವಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲರ್ಜಿಯ ತೊಂದರೆ ಹೊಂದಿರುವವರಲ್ಲಿ ಈ ಲಕ್ಷಣಗಳು ದೀರ್ಘ‌ಕಾಲದವರೆಗೆ ಇರುತ್ತವೆ. ಕೆಲವು ರೋಗಿಗಳಲ್ಲಿ ಮಾತ್ರ ಈ ಲಕ್ಷಣಗಳು ಹಾಗೆಯೇ ಉಳಿದುಕೊಳ್ಳುತ್ತವಾದರೆ ಬಹುತೇಕರಲ್ಲಿ ತಾನಾಗಿ ಅಥವಾ ಔಷಧ ಉಪಚಾರದಿಂದ ಸ್ವಲ್ಪ ಸಮಯದ ಬಳಿಕ ಮಾಯವಾಗುತ್ತವೆ.

ಎರಡನೆಯದಾಗಿ, ಕೆಲವು ರೋಗಿಗಳು ಶ್ವಾಸಕೋಶವು ಪೆಡಸಾಗುವ (ಲಂಗ್‌ ಫೈಬ್ರೋಸಿಸ್‌) ಸಮಸ್ಯೆಗೆ ತುತ್ತಾಗುತ್ತಾರೆ. ಇದು ಉಸಿರುಗಟ್ಟುವ ತೊಂದರೆಯು ಶಾಶ್ವತವಾಗಿ ಉಳಿದುಕೊಳ್ಳುವ ಸ್ಥಿತಿಗೆ ಕಾರಣವಾಗಬಹುದಾದ್ದರಿಂದ ಕಳವಳಕಾರಿಯಾಗಿದೆ. ಈ ಸಮಸ್ಯೆಯು ಅಪರೂಪವಾದುದು ಮತ್ತು ಕೋವಿಡ್‌ನಿಂದಾಗಿ ತೀವ್ರ ತರಹದ ನ್ಯುಮೋನಿಯಾಕ್ಕೆ ತುತ್ತಾದ ವರ್ಗದ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ರೋಗಿಗಳು ನಿಯಮಿತವಾಗಿ ಶ್ವಾಸಾಂಗ ತಜ್ಞರನ್ನು ಭೇಟಿಯಾಗುವುದು ಹಾಗೂ ನಿಯಮಿತವಾಗಿ ಶ್ವಾಸಕೋಶಗಳ ಕಾರ್ಯಚಟುವಟಿಕೆಗಳ ಪರಿಶೀಲನೆಗೆ ಒಳಪಡುವುದು ಮತ್ತು ನಿರ್ದಿಷ್ಟ ಚಿಕಿತ್ಸೆ ಆರಂಭಿಸುವುದು ಅಗತ್ಯವಾಗಿರುತ್ತದೆ.

ಕೋವಿಡ್ ಬಳಿಕ ಶ್ವಾಸಕೋಶವು ಗುಣಮುಖವಾಗುವುದಕ್ಕೆ ಸಾಕಷ್ಟು ಕಾಲ ತೆಗೆದುಕೊಳ್ಳುತ್ತದೆ ಯಾದ್ದರಿಂದ ಶ್ವಾಸಕೋಶಗಳಿಗೆ ಮತ್ತೆ ಸೋಂಕು ತಗಲುವುದನ್ನು ತಡೆಯುವುದಕ್ಕಾಗಿ ಮತ್ತು ಶ್ವಾಸಕೋಶಗಳ ಬಲವರ್ಧನೆಗಾಗಿ ಶ್ವಾಸಕೋಶ ರಕ್ಷಕ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಅಸ್ತಮಾ, ಸಿಒಪಿಡಿಯಂತಹ ದೀರ್ಘ‌ಕಾಲಿಕ ಶ್ವಾಸಕೋಶ ಸಮಸ್ಯೆಗಳು ಮತ್ತು ಇನ್ನಿತರ ಸಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಹಿರಿಯ ರೋಗಿಗಳು ಕೊರೊನೋತ್ತರ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಹೆಚ್ಚು ಜನಸಂದಣಿ ಇರುವಲ್ಲಿಗೆ, ಗಾಳಿಯಾಟ ಕಡಿಮೆ ಇರುವ ಸ್ಥಳಗಳಿಗೆ ಹೋಗದೆ ಇರುವುದು, ಎಸಿ ಹಾಕಿರುವ ಒಳಾಂಗಣಗಳಲ್ಲಿ ದೀರ್ಘ‌ಕಾಲ ಇರುವುದನ್ನು ತಪ್ಪಿಸುವುದರಿಂದ ಮರಳಿ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಬಹುದು.

ಜ್ವರ, ಕಫ‌ದ ಬಣ್ಣ ಬದಲಾವಣೆ, ಕಫ‌ ಹೆಚ್ಚುವುದು ಮತ್ತು ಉಸಿರಾಟಕ್ಕೆ ಸಮಸ್ಯೆಯಾಗುವುದು ದ್ವಿತೀಯಕ ಸೋಂಕಿನ ಲಕ್ಷಣಗಳಾಗಿರುತ್ತವೆ. ಕೊರೊನೋತ್ತರ ಶ್ವಾಸಕೋಶ ಪೆಡಸಾಗುವ ಸಮಸ್ಯೆ ಹೊಂದಿರುವ ರೋಗಿಗಳು ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗನೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿರುತ್ತದೆ.

 

ಡಾ| ವಿಶಾಖ್‌ ಆಚಾರ್ಯ

ಕನ್ಸಲ್ಟಂಟ್‌ ಪಲ್ಮನರಿ ಮೆಡಿಸಿನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.