ಕಾಲುಗಳ ಊತ ನಿಮಗೆ ತಿಳಿಯದ ವಿಚಾರಗಳು


Team Udayavani, Jul 31, 2023, 10:06 AM IST

ಕಾಲುಗಳ ಊತ ನಿಮಗೆ ತಿಳಿಯದ ವಿಚಾರಗಳು

ಊತ ಅಥವಾ ಬಾವು ಒಂದು ಕಾಲಿನಲ್ಲಿ ಕಂಡುಬರಬಹುದು ಅಥವಾ ಎರಡೂ ಕಾಲುಗಳಲ್ಲಿ ಕಾಣಿಸಿಕೊಳ್ಳಬಹುದು. ಒಂದು ಕಾಲಿನ ಊತವು ಸಾಮಾನ್ಯವಾಗಿ ಸೆಲ್ಯುಲೈಟಿಸ್‌, ಬಾಧಿತ ಕಾಲಿನಲ್ಲಿ ರಕ್ತನಾಳದಲ್ಲಿ ಅಡಚಣೆ, ಆನೆಕಾಲು ಇತ್ಯಾದಿ ಸ್ಥಳೀಯ ಸಮಸ್ಯೆಗಳಿಂದ ಉಂಟಾಗಬಹುದು. ಎರಡೂ ಕಾಲುಗಳಲ್ಲಿ ಊತಕ್ಕೆ ಶಾರೀರಿಕ ಕ್ರಿಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಿರುತ್ತವೆ. ಎರಡೂ ಕಾಲುಗಳ ಊತಕ್ಕೆ ಮೂರು ಪ್ರಧಾನ ಕಾರಣಗಳಿರುತ್ತವೆ: ಪಿತ್ಥಕೋಶ ಕಾಯಿಲೆ, ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳು.

ನೊರೆಯಿಂದ ಕೂಡಿದ ಮೂತ್ರ, ಮೂತ್ರದಲ್ಲಿ ರಕ್ತದ ಅಂಶ, 35ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅಧಿಕ ರಕ್ತದ ಒತ್ತಡ ಇತ್ಯಾದಿ ಸಹ ಸಮಸ್ಯೆಗಳು ಇದ್ದಲ್ಲಿ ಮೂತ್ರಪಿಂಡ ಕಾಯಿಲೆ ಉಂಟಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ವಿಷಾಂಶಗಳ ವಿಸರ್ಜನೆ, ಚಯಾಪಚಯ ಕ್ರಿಯೆ ಮತ್ತು ದೇಹದಲ್ಲಿ ಆಮ್ಲ-ಪ್ರತ್ಯಾಮ್ಲ ಸಮತೋಲನ ಕಾಯ್ದುಕೊಳ್ಳುವ ಪ್ರಾಮುಖ್ಯ ಕೆಲಸಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಆದ್ದರಿಂದ ಮೂತ್ರಪಿಂಡಗಳಿಗೆ ಆಗುವ ಯಾವುದೇ ಅಲ್ಪಕಾಲೀನ ಅಥವಾ ದೀರ್ಘ‌ಕಾಲೀನ ಹಾನಿಗಳ ಪರಿಣಾಮವಾಗಿ ಮೇಲೆ ಹೇಳಲಾದ ಚಟುವಟಿಕೆಗಳು ಬಾಧಿತವಾಗುತ್ತವೆ. ಮೂತ್ರಪಿಂಡ ಕಾಯಿಲೆಗಳಿದ್ದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಎರಡೂ ಕಾಲುಗಳ ಊತ.

ಎರಡೂ ಕಾಲುಗಳು ಹೀಗೆ ಊದಿಕೊಂಡಿದ್ದರೆ ಅನೇಕರು ಅದು ದೂರದ ಪ್ರಯಾಣ ಅಥವಾ ಹೆಚ್ಚು ಹೊತ್ತು ನಿಂತುಕೊಂಡದ್ದರ ಪರಿಣಾಮ ಎಂಬುದಾಗಿ ತಪ್ಪು ತಿಳಿದುಕೊಳ್ಳುತ್ತಾರೆ. ಮೂತ್ರಪಿಂಡದ ಕಾಯಿಲೆ ಇದ್ದಾಗ ಮೂತ್ರದ ಮೂಲಕ ಪ್ರೊಟೀನ್‌ ನಷ್ಟವಾಗುವುದು ಅಥವಾ ದೇಹದಲ್ಲಿ ಉಪ್ಪಿನಂಶ ಅಥವಾ ನೀರಿನಂಶ ಉಳಿದುಕೊಳ್ಳುವುದರಿಂದಾಗಿ ಕಾಲುಗಳ ಊತ ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣ ರಹಿತ ವ್ಯಕ್ತಿಯೊಬ್ಬನಲ್ಲಿ ಕಾಲುಗಳ ಊತ ಕಾಣಿಸಿಕೊಳ್ಳುವಷ್ಟು ವೇಳೆಗೆ ಮೂತ್ರಪಿಂಡಗಳಿಗೆ ಸಾಕಷ್ಟು ಹಾನಿ ಆಗಿರುತ್ತದೆ. ಈ ಚಿಹ್ನೆಯನ್ನು ಉಪೇಕ್ಷಿಸಿದರೆ ಅದರಿಂದ ಮೂತ್ರಪಿಂಡ ಕಾಯಿಲೆಯು ಉಲ್ಬಣಗೊಳ್ಳುತ್ತದೆ ಮತ್ತು ಕೊನೆಯದಾಗಿ ರೋಗಿಯು ಉಸಿರಾಟದ ತೊಂದರೆಯಿಂದಾಗಿ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಲಗಬೇಕಾಗುತ್ತದೆ ಮತ್ತು ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯಾವುದೇ ರೀತಿಯಲ್ಲಿ ಕಾಲುಗಳ ಊತ ಕಾಣಿಸಿಕೊಂಡಿದ್ದರೂ ಮೊತ್ತಮೊದಲಿಗೆ ಮೂತ್ರಪಿಂಡಗಳಿಗೆ ತೊಂದರೆ ಉಂಟಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮೂತ್ರಪಿಂಡ ಕಾಯಿಲೆಯನ್ನು ಶೀಘ್ರವಾಗಿ ಪತ್ತೆ ಹಚ್ಚಿದರೆ ಅದನ್ನು ನಿಯಂತ್ರಿಸಬಹುದು ಅಥವಾ ಗುಣಪಡಿಸಬಹುದು, ಅದು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಮೂತ್ರದ ಜತೆಗೆ ಪ್ರೊಟೀನ್‌ ನಷ್ಟವಾಗುತ್ತಿರುವ ಸಮಸ್ಯೆ ಇದ್ದರೆ ಅದನ್ನು ಬಹುತೇಕವಾಗಿ ಗುಣಪಡಿಸಬಹುದು ಮತ್ತು ರೋಗಿಯು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದಾಗಿದೆ.

-ಡಾ| ಭೂಷಣ್‌ ಸಿ. ಶೆಟ್ಟಿ
ಅಸಿಸ್ಟೆಂಟ್‌ ಪ್ರೊಫೆಸರ್‌, ನೆಫ್ರಾಲಜಿ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.