ಯಕ್ಷಲೋಕಕ್ಕೆ ಇಳಿದು ಬಂದ “ದೇವಗಂಗೆ’


Team Udayavani, Sep 2, 2017, 2:59 PM IST

15.jpg

ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಷ್ಟೇ ಸಾಮಾಜಿಕ ಪ್ರಸಂಗಗಳೂ ಸದ್ದು ಮಾಡುತ್ತದೆ. ವಾಸುದೇವಮಯ್ಯ ಅವರ ಕಥಾ ಸಂರಚನೆಯಲ್ಲಿ “ದೇವಗಂಗೆ’ ಎಂಬ ಪ್ರಸಂಗ ಇದೀಗ ಯಕ್ಷರೂಪ ಪಡೆದುಕೊಳ್ಳುತ್ತಿದೆ. ಪೆರ್ಡೂರು ಮೇಳದ ಕಲಾವಿದರು ಸೆ.2ರ ಶನಿವಾರ ರಾತ್ರಿ 10ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರದರ್ಶನವನ್ನು ನಡೆಸಿಕೊಡಲಿದ್ದಾರೆ.

ಯುವ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ನಿರ್ದೇಶನ, ಪ್ರಸಾದ್‌ ಮೊಗೆಬೆಟ್ಟು ಪದ್ಯಸಾಹಿತ್ಯ ಮತ್ತು ರಮೇಶ್‌ ಬೇಗಾರ್‌ ರಂಗ ಸಂಯೋಜನೆಯನ್ನು “ದೇವಗಂಗೆ’ ಹೊಂದಿದೆ. ಮನುಷ್ಯ ಕನಸು ಕಾಣುವುದು ತಪ್ಪಲ್ಲ. ಆದರೆ, ಕಂಡ ಕನಸು ಅರ್ಥಪೂರ್ಣವಾಗಿರದಿದ್ದರೆ, ಏನೆಲ್ಲಾ ಪ್ರಸಂಗವನ್ನು ಅನುಭವಿಸಬೇಕಾದೀತು ಎಂಬ ಸಂಗತಿಯನ್ನು ದೇವಗಂಗಾ ಎನ್ನುವ ಹೆಣ್ಣಿನ ಬದುಕಿನ ಸ್ಥಿತ್ಯಂತರದ ಮೂಲಕ ವಾಸುದೇವ ಮಯ್ಯ ಪಡಿಮೂಡಿಸಿದ್ದಾರೆ. ಯಲಗುಪ್ಪಸುಬ್ರಮಣ್ಯ ಇಲ್ಲಿ ದೇವಗಂಗೆಯಾಗಿ ಬಣ್ಣಹಚ್ಚಲಿದ್ದಾರೆ.

 “ಪೆದ್ದಸಮೀರ’ ಎಂಬ ಹಾಸ್ಯಪಾತ್ರದಲ್ಲಿ ಮೂರೂರು ರಮೇಶ್‌ ಭಂಡಾರಿ ಅಭಿನಯಿಸಲಿದ್ದಾರೆ. ಇವರೊಂದಿಗೆ ರವೀಂದ್ರ ದೇವಾಡಿಗ ಸಾಥ್‌ ನೀಡಲಿದ್ದಾರೆ. ಥಂಡಿಮನೆ ಶ್ರೀಪಾದ ಭಟ್‌, ಕಡಬಾಳು ಉದಯ ಹೆಗಡೆ ರಂಗಸ್ಥಳ ಏರಲಿದ್ದಾರೆ. ತೊಂಭಟ್ಟು ವಿಶ್ವನಾಥ ಆಚಾರ್ಯ, ಕಿರಾಡಿ ಪ್ರಕಾಶ ಮೊಗವೀರ, ಮಾಗೋಡು ಅಣ್ಣಪ್ಪ, ಹೆನ್ನಾಬೈಲು ಸಂಜೀವ ಶೆಟ್ಟಿ, ವಿಜಯಗಾಣಿಗ, ರಮೇಶ ಸೀತೂರು, ಆನಂದ ಭಟ್‌, ಪ್ರಣವ ಭಟ್‌, ಆದಿತ್ಯ ಭಟ್‌, ಉಮೇಶ್‌ ತೋಟಾಡಿ- ಮುಂತಾದ ಕಲಾವಿದರ ತಾರಾಗಣವನ್ನು “ದೇವಗಂಗೆ’ ಹೊಂದಿದೆ. ಜನ್ಸಾಲೆ, ಬ್ರಹೂ¾ರು, ಸುನೀಲ್‌, ಸುಜನ್‌, ಪ್ರಸನ್ನ ಮತ್ತು ಭಾಸ್ಕರ ಇವರ ಹಿಮ್ಮೇಳವನ್ನು ಪ್ರದರ್ಶನ ಒಳಗೊಂಡಿದೆ.

ಹೊಸತನದ ಸಿಂಹರಾಜ
ಅಂದಹಾಗೆ, ಈ ಪ್ರಸಂಗದಲ್ಲಿ ಪುರಾಣದ ಜಾಂಬವಂತನನ್ನು ಹೋಲುವ ಸಿಂಹರಾಜನ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮಖ ಪ್ರತಿಭೆ ಕೆಕ್ಕಾರು ಆನಂದ ಭಟ್‌ ಇದನ್ನು ನಿರ್ವಹಿಸಲಿದ್ದು, ಹೊಸತನದ ಆಹಾರ್ಯದ ಸಿದ್ಧತೆ ನಡೆಸಿದ್ದಾರೆ. ಯಕ್ಷಗಾನೀಯವಾದ ಅಂಗಾಭರಣ- ಕಿರೀಟಗಳ ಜೊತೆಗೆ ಮುಖವಾಡವನ್ನು ಅಳವಡಿಸಿದ ಈ ಪ್ರಾಯೋಗಿಕ ದಿರಿಸಿನೊಂದಿಗೆ, ಕರ್ಕಿ ಹಾಸ್ಯಗಾರ ಸಂಪ್ರದಾಯದಿಂದ ಪ್ರೇರಣೆ ಪಡೆದ ತೆರೆಒಡ್ಡೋಲಗವನ್ನು ಈ ಪಾತ್ರಕ್ಕೆ ಅಳವಡಿಸಲಾಗಿದೆ.

ಯಾವಾಗ?: ಸೆ.2, ಶನಿವಾರ, ರಾ.10 
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಸಂಪರ್ಕ: ಮೊ. 9448101708, 9900808109

ಟಾಪ್ ನ್ಯೂಸ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.