ಲಾಲ್‌ಬಾಗ್‌ನ ವಿದೇಶಿ ಪ್ರಜೆಗಳು

ದೇಶ ಬೇರೆಯಾದರೂ, ಇವುಗಳದ್ದು ಹಸಿರುಭಾಷೆ

Team Udayavani, Jan 18, 2020, 6:06 AM IST

lalbhag

ಲಾಲ್‌ಬಾಗ್‌ನಲ್ಲಿ ಹೇಗೂ ಗಣರಾಜ್ಯೋತ್ಸವದ ಸಡಗರ ಏರ್ಪಟ್ಟಿದೆ. ಅಲ್ಲಿಗೆ ಹೋದಾಗ, ಸಸ್ಯಕಾಶಿಯಲ್ಲಿ ಮೌನವಾಗಿ ನಿಂತು, ನೆರಳನ್ನು ಹಬ್ಬಿಸುತ್ತಿರುವ, ವಿದೇಶಿ ಮೂಲದ ವೃಕ್ಷಗಳನ್ನು ನೋಡಲು ಮರೆಯದಿರಿ…

ಲೆಕ್ಕವಿಲ್ಲದಷ್ಟು ಸಲ ಲಾಲ್‌ಬಾಗ್‌ಗೆ ಹೋಗಿದ್ದೇವೆ. ಅಲ್ಲಿನ ಹೂವುಗಳ ಸೌಂದರ್ಯಕ್ಕೆ, ಸುಗಂಧಕ್ಕೆ, ದುಂಬಿಯಂತೆ ಮನಸೋತಿದ್ದೇವೆ. ಆಗಸ ಚುಂಬಿಸುವ ಮರಗಳ ಕೆಳಗೆ ಕುಳಿತು ತಂಪಾಗಿದ್ದೇವೆ. ಹತ್ತಾರು ಫೋಟೋ ಕ್ಲಿಕ್ಕಿಸಿ, ಫೇಸ್‌ಬುಕ್‌ ಗೋಡೆಗೆ ಅಂಟಿಸಿದ್ದೇವೆ. ಆದರೆ, ನಮ್ಮ ಇಷ್ಟೆಲ್ಲ ಖುಷಿಯ ಚಿತ್ರಗಳ ಹಿನ್ನೆಲೆಯಲ್ಲಿ ನಿಂತ ಹೆಮ್ಮರಗಳು, ನಮ್ಮ ಪಾಲಿಗೆ ಅಪರಿಚಿತವಾಗಿಯೇ ಉಳಿದಿರುತ್ತವೆ. ಆ ಮರಗಳನ್ನು ನೆಟ್ಟವರಾರು? ಅವುಗಳ ಆಯುಸ್ಸು ಎಷ್ಟಿರಬಹುದು? ನಮ್ಮ ಹಿಂದಿನ ತಲೆಮಾರು ಲಾಲ್‌ಬಾಗ್‌ಗೆ ಹೋದಾಗಲೂ, ಅದೇ ಮರಗಳೇ ಇದ್ದವಲ್ಲಾ?

ನಿಜ, ಲಾಲ್‌ಬಾಗ್‌ನಲ್ಲಿ ಬ್ರಿಟಿಷರ ಕಾಲದ ಮರಗಳೂ ಇವೆ. ಸುಮಾರು 150ರಿಂದ 250 ವರ್ಷ ವಯಸ್ಸಾದ 120 ಮರಗಳು ಇಲ್ಲಿ ಹಿರಿಯ ಜೀವದಂತೆ ನಿಂತು ತಂಪು ಚೆಲ್ಲುತ್ತಿವೆ. ಸಸ್ಯಕಾಶಿಯ ಸಿಬ್ಬಂದಿ, ಮರಗಳ ಪಾಲನೆ ಪೋಷಣೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೈದರ್‌ ಅಲಿಯ ಸಮಯದಲ್ಲಿ ನೆಟ್ಟ ಮಾವಿನಮರ, ಲಾಲ್‌ಬಾಗ್‌ನಲ್ಲಿಯೇ ಅತ್ಯಂತ ಹಿರಿಯ ವೃಕ್ಷಜೀವ. ಅದಕ್ಕೆ ಸುಮಾರು 250 ವರ್ಷ. ಶತಮಾನಗಳ ಹಿಂದೆ ಮಾರಿಷಸ್‌ನ ರಾಯಭಾರಿ ಲಾಲ್‌ಬಾಗ್‌ನಲ್ಲಿ ಗಿಡಗಳನ್ನು ನೆಡಲು 20 ಪೆಟ್ಟಿಗೆಗಳಲ್ಲಿ ಬೀಜಗಳನ್ನು ರವಾನಿಸಿದ್ದನಂತೆ. ಹಾಗೆಯೇ ವಿದೇಶದಿಂದ ಬೀಜ, ಸಸಿಗಳನ್ನು ತಂದು ಇಲ್ಲಿ ನೆಟ್ಟ ಸಸಿಯಿಂದ ಅರಳಿರುವ ಕೆಲವು ವೃಕ್ಷಗಳೂ ಗಮನ ಸೆಳೆಯುತ್ತಿವೆ.

1. ಬೂರಗದ ಹತ್ತಿ ಮರ
ಮೂಲ: ಮ್ಯಾನ್ಮಾರ್‌, ವರ್ಷ: ಅಂದಾಜು 200
ಇದು ಬ್ರಿಟಿಷರ ಕಾಲದ ಮರವಾಗಿದೆ. ಈ ಮರ, ಮಾರ್ಚ್‌- ಏಪ್ರಿಲ್‌ ಅವಧಿಯಲ್ಲಿ ಪಿಂಗ್‌ಪಾಂಗ್‌ ಚೆಂಡಿನ ಗಾತ್ರದ ಹಣ್ಣನ್ನು, ಜನವರಿ- ಮಾರ್ಚ್‌ ಅವಧಿಯಲ್ಲಿ ಕಣ್ಮನ ಸೆಳೆಯುವಷ್ಟು ಸುಂದರವಾದ ಕೆಂಪು ಹೂಗಳನ್ನು ಬಿಡುತ್ತದೆ. ಇದರ ಹಣ್ಣುಗಳು ನಾರಿನಂಶದಿಂದ ಕೂಡಿದೆ. ಇದರಿಂದ ಹತ್ತಿಯನ್ನೂ ತೆಗೆಯುತ್ತಾರೆ. ಆ ಹತ್ತಿಯನ್ನು ತಲೆದಿಂಬು, ಸೋಫಾಗಳಲ್ಲಿ ಬಳಸುತ್ತಾರೆ. ಮರದ ರೆಂಬೆಕೊಂಬೆಗಳಿಂದ ಬೆಂಕಿಪೊಟ್ಟಣ, ಪ್ಲೆ„ವುಡ್‌, ಅಚ್ಚುಗಳು, ಪೆಟ್ಟಿಗೆಗಳನ್ನು ತಯಾರಿಸುತ್ತಾರೆ. ಮ್ಯಾನ್ಮಾರ್‌ ಭಾಗಗಳಲ್ಲಿ ಇದರ ಹಣ್ಣನ್ನು ಬೇಯಿಸಿ, ಉಪ್ಪಿನಕಾಯಿ ರೀತಿಯ ಪದಾರ್ಥ ತಯಾರಿಸುತ್ತಾರೆ.

2. ಮಳೆ ಮರ
ಮೂಲ: ಬ್ರೆಜಿಲ್‌, ವರ್ಷ: 110
ಮಳೆ ಬಂದ ಸಂದರ್ಭದಲ್ಲಿ ಪಕ್ಷಿ- ಪ್ರಾಣಿಗಳಿಗೆ ಮತ್ತು ಮನುಷ್ಯರಿಗೂ ಆಸರೆಯನ್ನು ನೀಡುವ ಬೃಹತ್‌ ವೃಕ್ಷ ಇದಾಗಿರುವುದರಿಂದ, “ಮಳೆ ಮರ’ ಅಂತಲೇ ಇದನ್ನು ಕರೆಯುತ್ತಾರೆ. ಇದರ ರೆಂಬೆ ಕೊಂಬೆಗಳು ಮರದ ಸುತ್ತಾ ಚಾಚಿಕೊಂಡಿರುತ್ತವೆ. ಮನೆಯ ಚಾವಣಿ ರೂಪದಲ್ಲಿ ಮರ ಬೆಳೆದಿದೆ. 110 ವರ್ಷಗಳ ಹಿಂದೆ ಇದರ ಸಸಿಯನ್ನು ಬ್ರೆಜಿಲ್‌ ದೇಶದಿಂದ ತರಿಸಲಾಗಿತ್ತು. ಈ ಮರದ ಹಣ್ಣು, ಕೋತಿಗಳಿಗೆ ಮತ್ತು ದನಕರುಗಳಿಗೆ ಆಹಾರವಾಗಿದೆ.

3. ಆನೆ ಸೇಬು ಮರ
ಮೂಲ: ಆಸ್ಟ್ರೇಲಿಯಾ, ವರ್ಷ: 95
ಡಿಲೆನಿಯಾ ಇಂಡಿಕಾ ಜಾತಿಗೆ ಸೇರಿದ ಮರ. ಈ ಮರದ ಹಣ್ಣುಗಳು ಆನೆಗಳಿಗೆ ಪ್ರಿಯ. ಜಿಂಕೆಗಳು, ಮಂಗಗಳೂ ಇದರ ಹಣ್ಣುಗಳನ್ನು ತಿನ್ನುತ್ತವೆ. ಭಾರತದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರಗಳು ಹೆಚ್ಚಾಗಿ ಕಂಡುಬಂದರೂ, ಈ ಮರದ ಮೂಲ ಆಸ್ಟ್ರೇಲಿಯಾ. ಸುಮಾರು 15 ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆ, ಹೂವುಗಳು ದೊಡ್ಡ ಗಾತ್ರದಲ್ಲಿರುತ್ತವೆ. ಈ ಮರದ ಹಣ್ಣುಗಳು ದೊಡ್ಡದಾಗಿ ಮತ್ತು ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ, ಅನೇಕ ಬೀಜಗಳನ್ನು ಒಳಗೊಂಡಿರುತ್ತದೆ. ಸುಮಾರು 90-95 ವರ್ಷದ ಹಳೆಯಮರವಿದು.

4. ಪೇಪರ್‌ ಬಾರ್ಕ್‌ ಮರ
ಮೂಲ: ಆಸ್ಟ್ರೇಲಿಯಾ, ವರ್ಷ: 120
ಇದು ಸಣ್ಣ ಅಥವಾ ಮಧ್ಯಮ ಗಾತ್ರದ ಮರವಾಗಿದೆ. 120 ವರ್ಷದ ಹಳೆಯದಾದ, ಸುಮಾರು 70 ಅಡಿ ಎತ್ತರಕ್ಕೆ ಬೆಳೆಯುವ, ನೀಲಗಿರಿ ಜಾತಿಗೆ ಸೇರಿದ ಮರ ಇದಾಗಿದೆ. ಇದರ ಕಾಂಡವು ದಪ್ಪಗಿದ್ದು, ರಟ್ಟಿನ ತೊಗಟೆಯಿಂದ ಆವೃತ್ತವಾಗಿರುತ್ತದೆ. ಬೂದು- ಹಸಿರು ಬಣ್ಣದ, ಮೊಟ್ಟೆಯಾಕಾರದ ಎಲೆಗಳಿರುತ್ತವೆ. ವಸಂತ ಕಾಲದಲ್ಲಿ ಹೂ ಬೀಡುತ್ತದೆ.

5. ಕೃಷ್ಣ ಆಲ ಮರ
ಮೂಲ: ಮ್ಯಾನ್ಮಾರ್‌, ವರ್ಷ: 180
ಇದು ತುಂಬಾ ವೇಗವಾಗಿ ಬೆಳೆಯುವ ಮರ. 180 ವರ್ಷದ ಹಳೆಯದು. ಬರ್ಮಾ ದೇಶದಿಂದ ಇದರ ಬೀಜಗಳನ್ನು ತಂದು ನೆಟ್ಟು, ಪೋಷಿಸಲಾಗಿತ್ತು. ಮರದ ವಿಶಿಷ್ಟ ಲಕ್ಷಣವೆಂದರೆ, ಎಲೆಗಳ ತಳದಲ್ಲಿ ಪಾಕೆಟ್‌ ತರಹದ ರಚನೆ ಇರುತ್ತದೆ. ಕೃಷ್ಣನು ಬಾಲ್ಯಾವಸ್ಥೆಯಲ್ಲಿದ್ದಾಗ, ಇದೇ ಜಾತಿಯ ಮರದ ಎಲೆಗಳಿಂದ ಹಾಲನ್ನು ಕುಡಿಯುತ್ತಿದ್ದ ಎಂಬ ಕಥೆಯೂ ಇದೆ. ಆದ್ದರಿಂದ, ಇದನ್ನು “ಕೃಷ್ಣ ಆಲ’ ಎಂದು ಕರೆಯುತ್ತಾರೆ.

ಒಟ್ಟು ಮರಗಳು: 8600
ಬ್ರಿಟಿಷರ ಕಾಲದ ಮರಗಳು: 2500
ಪ್ರಭೇದಗಳು: 673
ಕುಟುಂಬಗಳು: 140

* ರವಿಕುಮಾರ ಮಠಪತಿ

ಟಾಪ್ ನ್ಯೂಸ್

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.