ನೂರನೇ ಹೆಜ್ಜೆಯಲ್ಲಿ ಮದುಮಗಳ ಗುಂಗು

ಸಿಟಿಜನರನ್ನು ಮಲೆನಾಡು ಕಾಡಿದ ಬಗೆ

Team Udayavani, Feb 15, 2020, 6:09 AM IST

noorane

ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ…

ಕುವೆಂಪು ಸರ್ವ ಶತಮಾನಗಳಿಗೂ ಸಲ್ಲುವ ಕವಿ. ರಸಋಷಿ ಕಲ್ಪಿತ “ಮಲೆಗಳಲ್ಲಿ ಮದುಮಗಳು’ ರಂಗ ದೃಶ್ಯದಲ್ಲಿ ಅರಳಿ, ಶತಕದ ನಗು ಬೀರುತ್ತಿದೆ. “ಕಾವ್ಯೇಶು ನಾಟಕಂ ರಮ್ಯಂ’ ಎನ್ನುವ ಕಾಳಿದಾಸನ ಮಾತಿನಂತೆ, ಕಾವ್ಯಕ್ಕಿಂತ ನಾಟಕ ಆಸ್ವಾದಿಸುವ ಸುಖವೇ ಒಂದು ರಮ್ಯ ಅನುಭೂತಿ. ಮೂಲ ಕಾದಂಬರಿಯನ್ನು ಕವಿ ಕೆ.ವೈ. ನಾರಾಯಣಸ್ವಾಮಿಯವರು ಅದ್ಭುತವಾಗಿ ರಂಗರೂಪಕ್ಕೆ ಅಳವಡಿಸಿದ್ದಾರೆ.

ಸಿ. ಬಸವಲಿಂಗಯ್ಯ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ರಂಗದ ಮೇಲೆ ತಂದಿರುವುದರ ಹಿಂದೆ ಅಪಾರ ಶ್ರಮ ಕಾಣುತ್ತದೆ. ಹಂಸಲೇಖ ಅವರ ಹಿನ್ನೆಲೆ ಸಂಗೀತ (ನಿರ್ವಹಣೆ ಗಜಾನನ ನಾಯಕ್‌), ನಾಲಕ್ಕು ರಂಗಮಂದಿರಗಳ ರಂಗವಿನ್ಯಾಸದ ಹೊಣೆ ಹೊತ್ತವರು ಶಶಿಧರ ಅಡಪ, ಮಳೆಗಾಲದ ಮಲೆನಾಡಿನ ಜಿಗಣೆ, ಸಗಣಿ ಹುಳು, ಬಸವನ ಹುಳುಗಳನ್ನು ರಂಗದ ಮೇಲೆ ತಂದಿರುವ ಅವರ ಕಲೆ ಅನೂಹ್ಯ.

ಅಹೋರಾತ್ರಿ ನಡೆಯುವ ಈ ರಂಗಪ್ರಯೋಗವನ್ನು ಬೇರೆ ಬೇರೆ ರಂಗಸ್ಥಳಗಳಲ್ಲಿ ಆಯೋಜಿಸಿರುವುದು ಕಲ್ಪನೆಗೂ ನಿಲುಕದ್ದು. ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ. ಹೊಸ ರೂಪವನ್ನು ಕೊಡುವ ಈ ಪಾತ್ರಗಳು ಅವರದೇ ಶೈಲಿಯ ಹಾಡಿನ ಮೂಲಕ ಕಾದಂಬರಿಯನ್ನು ನೋಡುಗರ ಮನಮುಟ್ಟುವಂತೆ ಹೇಳಿರುವುದು ಕವಿಯ ಕಲ್ಪನೆಗೆ ಹತ್ತಿರವಾಗಿದೆ.

ಇನ್ನು ರಂಗದ ಮೇಲೆ ಕಾಣಿಸಿಕೊಳ್ಳುವ ಕಾದಂಬರಿಯ ಪಾತ್ರಗಳು, ಕಾದಂಬರಿ ಓದಿದವರ ಸ್ಮತಿಪಟಲದಲ್ಲಿ ಮೂಡಿದ್ದ ಪಾತ್ರಗಳು ಜೀವ ತುಂಬಿ ಬಂದತೆ ಮೂರ್ತರೂಪವನ್ನು ಕಟ್ಟಿಕೊಡುತ್ತವೆ. ಕಾದಂಬರಿ ಓದಿದವರು ತಮ್ಮ ಕಲ್ಪನೆಯ ನಾಯಿಗುತ್ತಿ, ಚಿನ್ನಮ್ಮ, ದೇವಯ್ಯ, ಪೀಂಚಲುವಿನ ನಿರೀಕ್ಷೆಯಲ್ಲೇ ಇರುತ್ತಾರೆಂಬುದು ದಿಟ. ಈ ಪಾತ್ರ ನಿರ್ವಹಿಸಿರುವ ಕಲಾವಿದರು, ಒಬ್ಬರಿಗಿಂತಲೂ ಒಬ್ಬರು ನಟನೆಯಲ್ಲಿ ಮೇಲುಗೈ ತೋರುತ್ತಿದ್ದರೆ, ಗುತ್ತಿಯ ನಾಯಿ “ಹುಲಿಯ’ ಪಾತ್ರಧಾರಿಯ ನಟನೆ ಎಲ್ಲರನ್ನೂ ಮೀರಿಸುವಂತಿದೆ.

ಕಿರಿಸ್ತಾನರ ಪ್ರವೇಶ, ಜಕ್ಕಣಿ ಪ್ರವೇಶ, ಬೀಸೋಕಲ್ಲಿನ ದೃಶ್ಯಗಳಿಗೆ ಜನರ ಚಪ್ಪಾಳೆ ಮೇಳೈಸಿ ಹೊಸ ಹುರುಪು ಕೊಡುತ್ತದೆ. ಶತಮಾನದ ಹಿಂದೆ (ಮತ್ತು ಇಂದಿಗೂ) ಮಲೆನಾಡಿನ ಜನರ ನಡುವೆ ಇರುವ ಜಾತಿಯ ತಾರತಮ್ಯ, ಹೆಣ್ಣಿನ ಬವಣೆಗಳನ್ನು 700 ಪುಟಗಳಿಗೂ ಹೆಚ್ಚಿನ ಕಾದಂಬರಿಯನ್ನು 70ಕ್ಕೂ ಹೆಚ್ಚು ಕಲಾವಿದರು ವೇದಿಕೆಯಲ್ಲಿ ತಂದಿರುವುದು ಶ್ಲಾಘನೀಯ. ಪ್ರತಿಯೊಂದು ಪಾತ್ರವೂ ಮಲೆನಾಡಿನ ಮಣ್ಣಿನ ಭಾವನೆಗಳನ್ನು ಹೊತ್ತು ತಂದಿವೆ.

ಮಲೆನಾಡಿನ ಅಡಿಕೆ ಮರಗಳು, ಹಳ್ಳ ಕೊಳ್ಳಗಳು, ಸಣ್ಣದಾಗಿ ಹರಿವ ಝರಿಗಳು, ಕೆರೆ ಎಲ್ಲವೂ ರಂಗಸ್ಥಳದಲ್ಲಿ ನೈಸರ್ಗಿಕವಾಗಿ ಕಾಣುತ್ತವೆ. ಇವೆಲ್ಲವನ್ನೂ ಸಜ್ಜುಗೊಳಿಸಲು ಕಲಾ ನಿರ್ದೇಶಕ ಶಶಿಧರ ಅಡಪ ಹಾಗೂ ಅವರ ತಂಡ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಕೆಲಸ ಮಾಡಿರುವುದು ಶ್ಲಾಘನೀಯ.

100ನೇ ಶೋ
– ಫೆ.15, ಶನಿವಾರ, ಸಂ.7.30ಕ್ಕೆ ಚಾಲನೆ
– ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ ಆವರಣ
– 249 ರೂ.

ಮೂಲತಃ ಮಲೆನಾಡಿನವನೇ ಆದ ನನಗೆ ಇಲ್ಲಿನ ಪಾತ್ರಗಳು ನನ್ನೂರಿನವೇ ಅಂತನಿಸಿದವು. ವಸ್ತ್ರ ವಸನಾದಿಯಾಗಿ ಇನ್ನೂರು ವರ್ಷಗಳ ಹಿಂದೆ ಹೇಗಿದ್ದೀತು ನನ್ನೂರು ಎಂಬುದನ್ನು ಈ ನಾಟಕದ ಮೂಲಕ ನೋಡಲು ಸಾಧ್ಯವಾಯಿತು.
-ಚೈತ್ರಿಕಾ ಹೆಗಡೆ, ಪ್ರೇಕ್ಷಕಿ

* ಕಿರಣ್‌ ವಟಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.