ಬೆಟ್ಟದ ಬುಡದಲ್ಲೊಂದು ದಿನ!


Team Udayavani, Nov 4, 2017, 3:13 PM IST

betta1.jpg

ಸ್ವಾತಿ ಮಳೆ ತಡವಾಗಿ ಶುರುವಾಗಿದೆ… ನೀವು ತಡ ಮಾಡ್ಬೇಡಿ… ಬೇಗ ಸೇರಿಕೊಳ್ಳಿ! ಬೆಂಗಳೂರಿನ ಬ್ಯುಸಿ ಲೈಫಿನ ಮಧ್ಯೆ ನಿಂತು ಹೀಗೊಂದು ಕರೆಕೊಡುತ್ತಿರೋದು “ಮಣ್ಮಯಿ’ ಎಂಬ ಸಂಸ್ಥೆ. ಅವರು ಕರೆದರು ಅಂತ ನೀವೇನಾದ್ರೂ ಹೋದ್ರೆ, ನಿಮ್ಮ ಕಣ್ಣೆದುರು ಒಂದು ಮಾಯಾಲೋಕವನ್ನು ನೋಡಿಬರಬಹುದು.

ಅಲ್ಲೊಂದು ಸೊಗಸಾದ ಲಾಂಗ್‌ ಡ್ರೈವ್‌, ಸ್ವಾತಿ ಮಳೆಯ ಕೆಸರಿನಲ್ಲಾಟ, ರಾತ್ರಿಯ ಚುಮುಚುಮು ಚಳಿಯಲ್ಲಿ ಬೆಳದಿಂಗಳ ಹಬ್ಬದೂಟ, ಒಂದು ಟೆಂಟ್‌ ಸಿನಿಮಾ, ಸಿರಿಧಾನ್ಯಗಳ ತೋಟದಲ್ಲಿ ಕಾಲ್ನಡಿಗೆ, ಬಗೆಬಗೆಯ ಪಕ್ಷಿಗಳ ಕಲರವ, ರೈತರೊಟ್ಟಿಗೆ ಮಾತುಕತೆ- ಹರಟೆ, ಆ ಹಳ್ಳಿಯ ದೇಸೀ ಬೀಜ ಬ್ಯಾಂಕ್‌ನಲ್ಲಿ ನಿಮ್ಮದೂ ಒಂದು ಖಾತೆ ತೆರೆಯುವ ಯೋಗ, ದೇಸಿ ಹಸುಗಳೊಂದಿಗೆ ಒಂದೊಂದು ಸೆಲ್ಫಿ…

ಆ ಹಸಿರಿನ ಸ್ವರ್ಗದಲ್ಲಿ ಸಂಭ್ರಮಿಸಲು ಇನ್ನೂ ಸಾಕಷ್ಟು ಸಂಗತಿಗಳು ಜತೆಗೂಡುತ್ತವೆ. ಈ ವಿಸ್ಮಯಗಳೆಲ್ಲ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿರುವ “ಅಮೃತಭೂಮಿ’ಯಲ್ಲಿ ಘಟಿಸಲಿವೆ. ಅಲ್ಲಿನ 80 ಎಕರೆ ಕೃಷಿ ಭೂಮಿಯಲ್ಲಿ ನೀವೂ ಒಂದು ದಿನದ ರೈತರಾಗಲು “ಮಣ್ಮಯಿ’ ಅವಕಾಶ ಕಲ್ಪಿಸುತ್ತಿದೆ. ಅಲ್ಲಿ ನಗರದ ಮಂದಿಯನ್ನು, ಹಳ್ಳಿಯ ಮಂದಿಯನ್ನೂ ಸೇರಿಸಿ,

ಪರಸ್ಪರ ಎರಡು ಸಂಸ್ಕೃತಿಯ ಮಿಲನ ಮಾಡಿಸಲು  “ಮಣ್ಮಯಿ’ ಹೊರಟಿದೆ. ಒಂದು ದಿನ ಮಟ್ಟಿಗೆ ಬೆಟ್ಟದ ಬುಡದಲ್ಲಿ ಕಳೆದು, ರೈತರೊಂದಿಗೆ ಅನುಭವ ಹಂಚಿಕೊಳ್ಳುವ ಯೋಗ ನಿಮ್ಮದಾಗಲಿದೆ. ಆಸಕ್ತರು, ನವೆಂಬರ್‌ 4ರ ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ತೆರಳಬೇಕಾಗುತ್ತದೆ. ಮೊದಲ 50 ಮಂದಿಗೆ ಮಾತ್ರ ಪ್ರವೇಶ.

ಎಲ್ಲಿ?: ಅಮೃತಭೂಮಿ, ಹೊಂಡರಬಾಳು, ಚಾಮರಾಜನಗರ
ಯಾವಾಗ?: ನವೆಂಬರ್‌ 4- 5, ಮಧ್ಯಾಹ್ನ 12.30 ಶುರು
ವೆಬ್‌ಸೈಟ್‌: manmayeeblr.blogspot.in
ಸಂಪರ್ಕ: 9611105029, 9743731223

ಟಾಪ್ ನ್ಯೂಸ್

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.