ಒಪ್ಪತ್ತಿನ ಒಬ್ಬಟ್ಟಿಗೆ ಹೆಸರುಬೇಳೆ ಪಾಯಸ!


Team Udayavani, Mar 25, 2017, 3:56 PM IST

74.jpg

ಪ್ರತಿ ಹಬ್ಬಕ್ಕೂ ಇರುವಂತೆ ಯುಗಾದಿ ಹಬ್ಬಕ್ಕೂ ಒಂದು ಮೆನು ಇದೆ. ಪ್ರಮುಖವಾಗಿ ಯುಗಾದಿ ಎಂದರೆ ಮೊದಲು ನೆನಪಿಗೆ ಬರುವ ಸಿಹಿತಿನಿಸು ಎಂದರೆ ಅದು ಒಬ್ಬಟ್ಟು. ವರ್ಷದ ಮೊದಲ ದಿನ ಒಬ್ಬಟ್ಟು ಮಾಡಿ ಸಂಭ್ರಮಿಸುವ ಅದೆಷ್ಟೋ ಮನೆಗಳಿವೆ. ಆದರೆ, ಈಗ ಟ್ರೆಂಡ್‌ ಬದಲಾಗಿದೆ. ಮುಂಚೆಲ್ಲಾ ಒಬ್ಬಟ್ಟು ಮನೆಯಲ್ಲೇ ಮಾಡಬೇಕಿತ್ತು. ಈಗ ಏರಿಯಾಗೊಂದರಂತೆ ಹೋಳಿಗೆ ಮಾರುವ ಅಂಗಡಿಗಳು ಹುಟ್ಟಿಕೊಂಡಿವೆ. ಬರೀ ಯುಗಾದಿಗಷ್ಟೇ ಅಲ್ಲ, ಪ್ರತಿ ದಿನ ಒಬ್ಬಟ್ಟು ಸವಿಯುವಂಥ ಅವಕಾಶವನ್ನು ಆ ಹೋಳಿಗೆ ಅಂಗಡಿಗಳು ಜನರಿಗೆ ಮಾಡಿಕೊಡುತ್ತಿವೆ. ಇದರಿಂದ ಮನೆಯಲ್ಲಿ ಒಬ್ಬಟ್ಟು ಮಾಡುವವರ ಸಂಖ್ಯೆ ಸಹ ಬಹಳ ಕಡಿಮೆಯಾಗಿಬಿಟ್ಟಿದೆ. ಹಿರಿಯರು ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಕೆಲವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಕಿರಿಯರಲ್ಲಿ ಕೆಲವರಿಗೆ ಒಬ್ಬಟ್ಟು ಮಾಡುವ ವಿಧಾನ ಗೊತ್ತಿರುವುದಿಲ್ಲ. ಗೊತ್ತಿಲ್ಲದವರಿಗೆಂದೇ ಮೈ ಫಾರ್ಚುನ್‌ ಹೋಟೆಲ್‌ನವರು ಒಬ್ಬಟ್ಟು ತಯಾರಿಸುವ ವಿಧಾನವನ್ನು ಈ ಬಾರಿ “ಐ ಲವ್‌ ಬೆಂಗಳೂರು’ ಜೊತೆಗೆ ಹಂಚಿಕೊಂಡಿದ್ದಾರೆ. ಒಬ್ಬಟ್ಟಿನ ಜೊತೆಗೆ ಬೇಳೆ ಪಾಯಸದ ರೆಸಿಪಿ ಬೋನಸ್‌!

ಒಬ್ಬಟ್ಟು ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು
ರವೆ – 500 ಗ್ರಾಂ
ಅಕ್ಕಿ ಹಿಟ್ಟು – 200 ಗ್ರಾಂ
ಉಪ್ಪು- ಒಂದು ಚಿಟಿಕೆ
ಸಕ್ಕರೆ – ಒಂದು ಚಿಟಿಕೆ
ಬೆಲ್ಲ – 50 ಗ್ರಾಂ
ಹೆಸರು ಬೇಳೆ – 50 ಗ್ರಾಂ
ಏಲಕ್ಕಿ ಪುಡಿ – ಒಂದು ಚಿಟಿಕೆ
ತುಪ್ಪ- 50 ಎಂ.ಎಲ್‌
ನೀರು – 200 ಎಂ.ಎಲ್‌

ಮಾಡುವ ವಿಧಾನ
1. ಮೊದಲಿಗೆ ರವೆ, ಅಕ್ಕಿ ಹಿಟ್ಟು, ಉಪ್ಪು, ಸಕ್ಕರೆಗೆ ನೀರು ಹಾಕಿ ಕಲಸಿಕೊಳ್ಳಿ. 
2. ಹೆಸರುಬೇಳೆಯನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ನಂತರ ಒಣಗಿಸಿ, ಹದವಾಗಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಹಾಟ್‌ ಪ್ಯಾನ್‌ನಲ್ಲಿ ಹಾಕಿ, ತುಪ್ಪಸೇರಿಸಿ ಹುರಿಯಿರಿ. ಘಮ ಬರುವವರೆಗೂ ಹುರಿಯುವುದನ್ನು ಮುಂದುವರೆಸಿ. 
3. ಅದಕ್ಕೆ ತುರಿದ ಬೆಲ್ಲ, ಏಲಕ್ಕಿ ಪುಡಿ ಮಿಕ್ಸ್‌ ಮಾಡಿಟ್ಟುಕೊಳ್ಳಿ. 
4. ನಂತರ ಮೊದಲು ಮಾಡಿಟ್ಟುಕೊಂಡ ಹಿಟ್ಟಿನಲ್ಲಿ ಈ ಮಿಕ್ಸ್‌ ತುಂಬಿ ಉಂಡೆ ಮಾಡಿಟ್ಟುಕೊಳ್ಳಿ.
5. ಚಪಾತಿ ಲಟ್ಟಿಸುವಂತೆ ಲಟ್ಟಿಸಿ, ಅದನ್ನು ಹೆಂಚಿನ ಮೇಲೆ ಹಾಕಿ.
6. ನಂತರ ಅದಕ್ಕೆ ತುಪ್ಪಹಾಕಿ ಚೆನ್ನಾಗಿ ಬೇಯಿಸಿ.
ರುಚಿರುಚಿಯಾದ ಒಬ್ಬಟ್ಟು ತಯಾರು. ಬಿಸಿಬಿಸಿ ಒಬ್ಬಟ್ಟಿಗೆ ತುಪ್ಪ ಹಾಕಿಕೊಂಡು ತಿನ್ನಿರಿ.

ಬೇಳೆ ಪಾಯಸ ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು
ಹೆಸರು ಬೇಳೆ- 50 ಗ್ರಾಂ
ಕಾಯಿ ಹಾಲು – 150 ಎಂ.ಎಲ್‌
ಉಪ್ಪು- ಒಂದು ಚಿಟಿಕೆ
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ಬೆಲ್ಲ- 150 ಗ್ರಾಂ
ಹಾಲು – 250 ಎಂ.ಎಲ್‌
ತುರಿದ ತೆಂಗಿನಕಾಯಿ – 10 ಗ್ರಾಂ
ಏಲಕ್ಕಿ ಪುಡಿ- ಒಂದು ಚಿಟಿಕೆ
ತುಪ್ಪ- 50 ಎಂ.ಎಲ್‌
ನೀರು-200 ಎಂ.ಎಲ್‌
ಡ್ರೆ„ ಫ‌ೂ›ಟ್ಸ್‌ – 50 ಗ್ರಾಂ

ಮಾಡುವ ವಿಧಾನ
1. ಮೊದಲಿಗೆ ಹೆಸರು ಬೇಳೆಗೆ ತುಪ್ಪಮತ್ತು ಸ್ವಲ್ಪ ಕಾಯಿ ಹಾಲಿನ ಜೊತೆಗೆ ಹುರಿಯಿರಿ. ಕಡಿಮೆ ಹೀಟ್‌ನಲ್ಲಿ, ಹಾಲು ಹೀರಿಕೊಳ್ಳುವವರೆಗೂ ಹದವಾಗಿ ಹುರಿದುಕೊಳ್ಳಿ
2. ನಂತರ ಉಳಿದ ಹಾಲನ್ನು ಹಾಕಿ ಚೆನ್ನಾಗಿ ಕಲಕಿರಿ
3. ಒಳಗಿರುವ ದಾಲ್‌ ಸ್ವಲ್ಪ$ಕರಗುತ್ತಿದ್ದಂತೆಯೇ ತುರಿದ ಬೆಲ್ಲ ಮತ್ತು ತೆಂಗಿನಕಾಯಿಯನ್ನು ಹಾಕಿ 
4. ಈಗ ಜಾಯಿಕಾಯಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ
5. ಚೆನ್ನಾಗಿ ಕುದಿಸಿ
ಆಗ ರುಚಿರುಚಿಯಾದ ಬೇಳೆ ಪಾಯಸ ತಯಾರು. ಸ್ವಲ್ಪ ತುಪ್ಪ ಹಾಕಿಕೊಂಡು ಕುಡಿದರೆ ಅದರ ಮಜವೇ ಬೇರೆ!

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.