ರಂಗ ಜಂಗಮನ ಸ್ಥಾವರ


Team Udayavani, Apr 7, 2018, 2:46 PM IST

2586.jpg

ರಂಗಜಂಗಮ ಬಿ.ವಿ. ಕಾರಂತರು ಎಪ್ಪತ್ತರ ದಶಕದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು ತಂದವರು; ರಂಗಸಂಗೀತದ ಮೂಲಕ ಹೊಸ ಶಕೆ ಆರಂಭಿಸಿದವರು. ತಮ್ಮ ಪ್ರತಿ ಪ್ರಯೋಗವನ್ನೂ ಮಾಂತ್ರಿಕವಾಗಿಸಿದವರು. ಅದರ ಬೆರಗಿಗೆ ಕಣ್ಣರಳಿಸದವರೇ ಇಲ್ಲ. ಇಂಥವರು ಅನೇಕ ಶಿಷ್ಯರನ್ನೂ ಹುಟ್ಟುಹಾಕಿದರು. ಅವರಿಗೆಲ್ಲ ರಂಗಬದ್ಧತೆ ಮತ್ತು ರಂಗಪ್ರೀತಿ ಮೈಗೂಡಿಸಿಕೊಟ್ಟು ಭೌತಿಕವಾಗಿ ನಮ್ಮಿಂದ ದೂರಾದರು ಅಷ್ಟೇ. ಆದರೆ, ಅವರು ರಂಗದ ಬಗೆಗೆ ಹೊಂದಿದ್ದ ನಿಲುವುಗಳು, ಚಿಂತನೆ ಎಲ್ಲವೂ ಇನ್ನೂ ಜೀವಂತವಾಗಿ ಇದೆ ಎನ್ನುವುದಕ್ಕೆ ಈಚೆಗೆ ಕೆ.ಎಚ್‌ ಕಲಾಸೌಧದಲ್ಲಿ ಪ್ರಯೋಗಗೊಂಡ “ರಂಗಜಂಗಮನ ಸ್ಥಾವರ’ ನಾಟಕವೇ ಸಾಕ್ಷಿ. 

 ಕಾರಂತರ ಜೊತೆ ದೀರ್ಘ‌ಕಾಲ ಒಡನಾಡಿ, ಅವರಿಂದ ರಂಗಪಾಠಗಳನ್ನು ಮೈಗೂಡಿಸಿಕೊಂಡಿರುವ ಎಸ್‌. ರಾಮನಾಥ್‌ ಈ ಪ್ರಯೋಗ ಅಣಿಗೊಳಿಸಿದ್ದರು. ಇದರಲ್ಲಿ ಮೊದಲಿಗೆ ಕಂಡದ್ದು ಗುರುವಿನೆಡೆಗೆ ಅವರಿಗೆ ಇರುವ ಅಪರಿಮಿತ ಆರಾಧನಾಭಾವ. ಈ ಆರಾಧನೆಯೇ ಅವರನ್ನು ತಮ್ಮ ಗುರುವಿನ ಪ್ರತಿ ಮಾತು, ಚಿಂತನೆ, ನಿಲುವುಗಳನ್ನು ತುಂಬ ಸೂಕ್ಷ್ಮವಾಗಿ ಅರಿಯುವ ನಿಟ್ಟಿನಲ್ಲಿ ಸಜ್ಜುಗೊಳಿಸಿದೆ. “ನಾಟಕವೆಂದರೆ ಬರೆಯುವುದಲ್ಲ, ಅದನ್ನು ಕಟ್ಟುವುದಲ್ಲ. ಅದು ಘಟಿಸುವುದು ಅಷ್ಟೆ’ ಎನ್ನುತ್ತಿದ್ದ ಕಾರಂತರ ಮಾತುಗಳು ರಾಮನಾಥ್‌ರನ್ನು ಚಿಂತನೆಗೆ ಹಚ್ಚಿವೆ. ಸ್ವತಃ ನಟ ಹಾಗೂ ನಾಟಕಕಾರರಾಗಿರುವ ರಾಮನಾಥ್‌ ಕನ್ನಡ ರಂಗಭೂಮಿಗೆ “ಪುಗಳೇಂದಿ ಪ್ರಹಸನ’, “ಅರಹಂತ’ದಂಥ ನಾಟಕಗಳನ್ನು ಕೊಟ್ಟವರು. ಇವರಲ್ಲಿರುವ ಸೃಜನಶೀಲ ತುಡಿತ ಮತ್ತು ಗುರುವಿನ ಅನುಪಸ್ಥಿತಿಯಲ್ಲಿ ರಂಗದ ಬಗೆಗೆ ಹರಿಸಬೇಕಾದ ನೋಟಕ್ರಮ ಎರಡನ್ನೂ ಮಿಳಿತ ಮಾಡಿ “ರಂಗಜಂಗಮನ ಸ್ಥಾವರ’ ಸಿದ್ಧಗೊಳಿಸಿದ್ದಾರೆ. ಈ ನಾಟಕದ ವೈಶಿಷ್ಟéವಿರುವುದು ಅದರ ರಚನೆಯ ಮಾದರಿಯಲ್ಲಿ. 

ಈ ಪ್ರಯೋಗದಲ್ಲಿ ಒಂದು ಕ್ರಮಬದ್ಧ ಕತೆಯಿಲ್ಲ. ಹಾಗೆಂದು ಕತೆ ಇಲ್ಲ ಎನ್ನಲೂ ಸಾಧ್ಯವಿಲ್ಲ. ರೂಢಿಗತ ಚೌಕಟ್ಟಿನ ಕತೆ ಇಲ್ಲಿಲ್ಲ ಅಷ್ಟೆ. ಇಲ್ಲಿ ಬಿ.ವಿ. ಕಾರಂತರು ಒಂದು ರೂಪ ಕಟ್ಟಿಕೊಟ್ಟು ಅವುಗಳಿಗೆ ಮೆರುಗು ತಂದ ಆಯಾ ನಾಟಕದ ಪಾತ್ರಗಳಿವೆ; ನಾಟಕಕಾರನಿದ್ದಾನೆ. ಪಾತ್ರಗಳು ಕಾರಂತರೆಡೆಗೆ ಇರಿಸಿಕೊಂಡಿರುವ ಪ್ರೀತಿ ಮತ್ತು ಬೆರಗು ಇದೆ. ಕಾರಂತರು ನಟರ ಬಗ್ಗೆ, ಅವರು ಕಾಯಬೇಕಾದ ಪಾತ್ರಗಳ ಬಗ್ಗೆ, ಅದಕ್ಕೆ ಪಾತ್ರಗಳ ಪ್ರತಿಸ್ಪಂದನ ಹೇಗಿರುತ್ತದೆ ಎಂಬುದರಿಂದ ರಾಮ್‌ನಾಥ್‌ ನಾಟಕ ಆರಂಭಿಸಿದ್ದಾರೆ.

ಹಾಗಾಗಿ ಇದು ಒಂದು ರೀತಿ ರಂಗದ ಪಾತ್ರಗಳ ಬಗೆಗೆ ಕಾರಂತರು ನಡೆಸಿದ ತಾತ್ವಿಕ ಜಿಜಾnಸೆಗಳನ್ನೇ ರಾಮನಾಥ್‌ ಇಲ್ಲಿ ಪಾತ್ರಗಳ ಮೂಲಕ ಹೇಳಿಸಿದ್ದಾರೆ. ಇದು ನಿಜಕ್ಕೂ ಕುತುಹೂಲಕಾರಿ; ಆದರೆ ಈ ಎಲ್ಲಕ್ಕೂ ತಿರುವುಗಳಿವೆ. ಮೃತ್ಛಕಟಿಕ ನಾಟಕದ ಕಳ್ಳನ ಮುಖವಾಡ ಧರಿಸುವ ನಟನೊಬ್ಬ ಉಳಿದ ಬೇರೆ ಪಾತ್ರಗಳನ್ನು ಕದ್ದು ಬಚ್ಚಿಟ್ಟುಬಿಡುತ್ತಾನೆ. ಈ ತಿರುವಿನಲ್ಲೇ ಕಾರಂತರ ಬಹುತೇಕ ಮಾತುಗಳು ಅನುರಣಿಸುತ್ತವೆ. ಅವ‌ರು ನಟನಾ ಮೀಮಾಂಸೆಯ ಬಗ್ಗೆ ತಳೆದಿದ್ದ ನಿಲುವುಗಳು ಎಂಥವೆಂಬುದು ಸೂಚ್ಯವಾಗಿ ತಿಳಿಯುತ್ತದೆ. 

ಆದರೆ ಇಲ್ಲಿ ಒಂದು ತೊಡಕೂ ಇದೆ. ಕಾರಂತರು ನಿರ್ದೇಶಿಸಿದ ನಾಟಕಗಳ ಬಗೆಗೆ ಅರಿವಿಲ್ಲದವರಿಗೆ ಈ ಪ್ರಯೋಗ ಒಗಟಾಗಿಯೇ ಪ್ರವೇಶ ದೊರಕಿಸಿಕೊಡುತ್ತದೆ. “ಗೋಕುಲ ನಿರ್ಗಮನ’ ನಾಟಕ ನೋಡದವರಿಗೆ ಕೃಷ್ಣ ಹೇಳುವ ಕಾರಂತರ ವಿಚಾರಗಳು ನಿಲುಕುವುದು ಕಷ್ಟ. ಹಾಗಾಗಿ ರಂಗಪಥದಲ್ಲಿ ದೀರ್ಘ‌ಕಾಲ ನಡೆದವರಿಗೆ ಮತ್ತು ದಶಕಗಳಿಂದ ರಂಗದ ಬೆರಗಿಗೆ ಒಳಗಾದವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಕಾರಂತರ ಬಗ್ಗೆ ಚೂರಾದರೂ ತಿಳಿದುಕೊಂಡವರಿಗೆ ಈ ಪ್ರಯೋಗ ಚಿಂತನೆಗೆ ಹಚ್ಚುತ್ತದೆ. ಈ ಯಾವುವೂ ಇಲ್ಲದವರಿಗೆ ಕಡೇಪಕ್ಷ ಕುತೂಹಲವನ್ನಾದರೂ ಹುಟ್ಟುಹಾಕುತ್ತದೆ. 

ಈ ಎಲ್ಲದರ ಆಚೆಗೆ ನಾಟಕದಲ್ಲಿ ಮಾತುಗಳು ಒಂದು ಹಂತದಿಂದ ಆಚೆಗೆ ತೀರಾ ತಾತ್ವಿಕವಾದವು. ಸುಮ್ಮನೆ ಸುಳಿ ತಿರುಗಿದಂತೆ ತಿರುಗಿದವು. ಈ ಸುಳಿಗಳು ವಿಪರೀತವಾಗುತ್ತಿದ್ದಂತೆ ಇವು ಕಾರಂತರ ನಿಲುವುಗಳ್ಳೋ ಅಥವಾ ರಾಮ್‌ನಾಥ್‌ರ ದರ್ಶನವೋ ತಿಳಿಯದಷ್ಟು ಬೆರೆತುಹೋಗಿದ್ದವು.  ಮಾತುಗಳು ತೀರಾ ತಾತ್ವಿಕವಾದವು ಅನಿಸಿದ ಕಡೆಗಳೂ  ತುಂಬಾ ಇವೆ. ಅಲ್ಲಿ ಚೂರೂ ಸರಳಗೊಳಿಸಿಕೊಂಡರೆ ಪ್ರಯೋಗದಲ್ಲಿನ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತವೆ.
ಇದರ ಹೊರತಾಗಿ ವಿನ್ಯಾಸದಲ್ಲಿ ರಂಗಾಯಣದ ನಟನಾ ಮಾದರಿಯ ಸೆಳವುಗಳಿವೆ. ಇದು ಸಹಜವೂ ಹೌದು. ಆದರೆ ರಂಗ ಮತ್ತು ರಂಗಸಜ್ಜಿಕೆಯನ್ನು ಬಳಸಿಕೊಂಡ ಬಗೆಯಲ್ಲಿ ಅದೇ ಹಳೆತನವಿತ್ತು. ಆದರೆ, ಚೆಂದವೂ ಇತ್ತು. ಒಂದಿಬ್ಬರು ಹೊಸಬರನ್ನು ಬಿಟ್ಟರೆ ಬಹುತೇಕ ಕಾರಂತರ ಶಿಷ್ಯರೇ ರಂಗದ ಮೇಲೆ ಇದ್ದರು. ಕಲ್ಪನಾ ನಾಗನಾಥ್‌ ಅವರ ಕಂಠದಲ್ಲಿ ಮುಂಚಿನ ಪಸೆ ಇರಲಿಲ್ಲ. ಇದು ಕೊರತೆಯಾಗಿ ಕಂಡಿತು. ಆದರೆ ವಯೋಮಾನ ಮತ್ತು ಅವರಲ್ಲಿರುವ ರಂಗಪ್ರೀತಿ ಈ ಲೋಪವನ್ನು ಮರೆಸಿತು. ರಂಗವಿನ್ಯಾಸ, ರಚನಾ ಮಾದರಿ ಚೆಂದವಿದ್ದರೂ ಸಂಗೀತ  ಕಾರಂತರ ಸಂಗೀತದಂತೆ ಕೇಳಿಸಲಿಲ್ಲ ಎನ್ನುವುದು ನಿಜ. ತಾತ್ವಿಕತೆಯನ್ನು ಚೂರು ಸರಳಗೊಳಿಸಿಕೊಂಡು ಸಂಗೀತಕ್ಕೆ ಮತ್ತೂಂದಿಷ್ಟು ಆಸ್ಥೆ ನೀಡಿದ್ದರೆ ಪ್ರಯೋಗ ಮತ್ತಷ್ಟು ಲವಲವಿಕೆಯಾಗಿರುತ್ತಿತ್ತು. 

ಎನ್‌.ಸಿ ಮಹೇಶ್‌ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

1-wewewqeqwewqe

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.