ಫ್ಯಾಮಿಲಿಗೆ ಬಿಆರ್‌


Team Udayavani, Nov 27, 2017, 1:02 PM IST

27-32.jpg

ಪ್ರತಿಯೊಬ್ಬರಿಗೂ ಕಾರು ಕೊಂಡುಕೊಳ್ಳುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ಹಣ ಹೇಗೇ ಜೋಡಿಸೋದು ಅನ್ನೋದು ಒಂದಾದರೆ, ಬಜೆಟ್‌ ಏನು ಅನ್ನೋದನ್ನೂ  ನಿರ್ಧರಿಸಬೇಕಾಗುತ್ತದೆ. ಇಷ್ಟಕ್ಕೇ ಮುಗಿಯುತ್ತಾ? ಯಾವ ಕಂಪನಿಯ ಯಾವ ಕಾರಾದರೆ ಒಳ್ಳೆಯದು? ಯಾವ ವೇರಿಯಂಟ್‌ ಉತ್ತಮ? ಐಷಾರಾಮಿ ಪ್ರಯಾಣ ಬೇಕಾ?  ಮೈಲೇಜ್‌ ಇದ್ದರೆ ಸಾಕಾ? ಹೈಎಂಡ್‌ ಆಗಿರಬೇಕಾ, ಮಿಡ್‌ ಎಂಡ್‌ ಆಗಿದ್ದರೆ ಸಾಕಾ? ಪ್ರತಿದಿನ ಬಳಸುತ್ತೀರಾ, ಅಪರೂಪಕ್ಕೊಮ್ಮೆ ಬಳಸಲಿಕ್ಕಾ? ಹೀಗೆ ತರಹೇವಾರಿ ಪ್ರಶ್ನೆಗಳು ಕಾಡುತ್ತವೆ. ಅದೆಷ್ಟೋ ಸಲ ಕಾರು ಬುಕ್‌ ಮಾಡಲಿಕ್ಕೆಂದು ಶೋರೂಂವರೆಗೆ ಹೋಗಿ ಇಂಥ ಕಾರಣಗಳಿಗೆ ಉತ್ತರ ಸಿಗದೇ ಹಿಂದಿರುಗಿರುವ ಉದಾಹರಣೆಗಳೂ ಸಿಗುತ್ತವೆ.

 ಆದರೆ ಒಂದಂತೂ ಖರೆ, ಬಜೆಟ್‌ ಮಿತಿಯೂ ಇಲ್ಲದೇ ಮಲ್ಟಿ ಪರ್ಪಸ್‌ ಬಳಕೆಗೆ ಕೊಂಡುಕೊಳ್ಳಬೇಕೆನ್ನುವ ಉದ್ದೇಶ ಹೊಂದಿದ್ದರೆ ಆಯ್ಕೆ ಸುಲಭವಾಗಲಿದೆ. ಇಂಥ ಸಮಯದಲ್ಲಿ ಕೆಲವೊಂದು ಕಾರುಗಳು ಉದ್ದೇಶಕ್ಕೆ ಪೂರಕವಾಗಿವೆ ಅನಿಸುವುದುಂಟು. ಅಷ್ಟೇ ಅಲ್ಲ, ಯಾವುದೇ ಮುಲಾಜಿಲ್ಲದೇ ಕೊಂಡುಕೊಳ್ಳಲೂ ಅಡ್ಡಿ ಏನಿರುವುದಿಲ್ಲ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಬಹುತೇಕ ಮಂದಿಯ ಮೊದಲ ಆಯ್ಕೆಗಳಲ್ಲಿ ಹೋಂಡಾ ಕಂಪನಿಯ ಕಾರುಗಳು ಇದ್ದೇ ಇರುತ್ತವೆ. ಇತ್ತೀಚೆಗಷ್ಟೇ 7 ಇಂಚಿನ ಟಚ್‌ ಸ್ಕ್ರೀನ್‌ ಡಿಜಿಪ್ಯಾಡ್‌ ಅಳವಡಿಕೆಯೊಂದಿಗೆ ಒಂದಿಷ್ಟು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿರುವ, ಎಸ್‌ಯು ಸೆಗೆ¾ಂಟ್‌ನ ಹೋಂಡಾ ಬಿಆರ್‌- ಎಕ್ಸ್‌ ವೇರಿಯಂಟ್‌ ಇದೀಗ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯಕ್ಕೆ ಎಕ್ಸ್‌ ವೇರಿಯಂಟ್‌ನಲ್ಲಿ ಮಾತ್ರ ಇದು ಲಭ್ಯವಿದೆ. ಹೊಸ ಮಾಡೆಲ್‌ನ ಸಿಟಿ, ಅಮೇಜ್‌ ಮತ್ತು ಜಾಜ್‌ನಲ್ಲೂ ಇದನ್ನೇ ಬಳಸಲಾಗಿದೆ. 

ಹೋಂಡಾ ಬಿಆರ್‌- ಆರಂಭದಲ್ಲಿ ಟಚ್‌ಸ್ಕ್ರೀನ್‌ ಹೊಂದಿರಲಿಲ್ಲ.  ಡಿಜಿಟಲ್‌ ಯುಗದಲ್ಲಿ ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ತಂತ್ರಜ್ಞಾನ ಅಳವಡಿಕೆಯಲ್ಲೂ ಒಂದು ಹೆಜ್ಜೆ ಮುಂದಿಟ್ಟಿರುವ ಹೋಂಡಾ ಕಂಪನಿ ತನ್ನ ಕಾರುಗಳಲ್ಲಿನ ಎಂದಿನ ಐಷಾರಾಮಿತನವನ್ನೂ ಹಾಗೇ ಉಳಿಸಿಕೊಂಡು ಬಂದಿದೆ. ಚಾಲಕ, ಇಬ್ಬರು ಮಕ್ಕಳು ಸೇರಿ ಐವರು ಆರಾಮದಾಯಕವಾಗಿ ಪ್ರಯಾಣ ಬೆಳೆಸಲು ಅನುಕೂಲಕರವಾಗಿರುವಂಥ ಕಾರುಗಳಲ್ಲಿ ಬಿಆರ್‌- ಕೂಡ ಒಳ್ಳೆಯ ಆಯ್ಕೆಯೇ ಆಗಿದೆ.

ಎಂಜಿನ್‌ ಪರ್ಫಾರ್ಮನ್ಸ್‌
 ಸಾಮಾನ್ಯವಾಗಿ ಕಾರುಗಳ ಬಳಕೆಯ ವೇಳೆ ಎಂಜಿನ್‌ ಬಳಕೆ ಬಹಳ ಮಹತ್ವದ್ದಾಗಿರುತ್ತದೆ. ಬಿಆರ್‌- 1.5 ಲೀಟರ್‌ನ ಐ-ಟೆಕ್‌ ಪೆಟ್ರೋಲ್‌ ಹಾಗೂ ಐ-ಡಿಟೆಕ್‌ ಡೀಸೆಲ್‌ ವರ್ಷನ್‌ಗಳು ಲಭ್ಯದೆ. ಪೆಟ್ರೋಲ್‌ ಎಂಜಿನ್‌ 119ಪಿಎಸ್‌ ಮತ್ತು 145ಎನ್‌ಎಂ ಟಾರ್ಕ್‌ ಸಾಮರ್ಥ್ಯ ಹೊಂದಿದೆ. 4 ಸಿಲಿಂಡರ್‌ ಅಳವಡಿಕೆಯ ಡೀಸೆಲ್‌ ಎಂಜಿನ್‌ 100ಪಿಎಸ್‌ ಮತ್ತು 200ಎನ್‌ಎಂ ಟಾರ್ಕ್‌ ಸಾಮರ್ಥ್ಯದ್ದಾಗಿದೆ. 6ಸ್ಪೀಡ್‌ ಮ್ಯಾನ್ಯುವಲ್‌ ಸ್ಪೀಡ್‌ನ‌ ಬಿಆರ್‌- 5ಮತ್ತು 6ನೇ ಗೇರ್‌ನಲ್ಲಿ ತ್ರಾಸಲ್ಲದ ಪ್ರಯಾಣದ ಅನುಭವ ನೀಡುತ್ತದೆ. ಮೊಬಿಲಿಯೋ ಪ್ಲಾಟ್‌ಫಾರ್ಮ್ನಲ್ಲೇ ಬಿಆರ್‌-ಅನ್ನು 2016ರ ಆಟೋ ಎಕ್ಸ್‌ಪೋನಲ್ಲಿ ಮೊದಲಬಾರಿಗೆ ಪರಿಚಯಿಸಿದ ಹೋಂಡಾ ಕಂಪನಿ ಇಂದು ಉತ್ತಮವಾದ ಮಾರುಕಟ್ಟೆಯನ್ನೇ ಕಂಡುಕೊಂಡಿದೆ.

ಸುರಕ್ಷತೆಗೆ ನೋ ಕಾಂಪ್ರಮೈಸ್‌
ಹೋಂಡಾ ಸುರಕ್ಷತೆಯಲ್ಲಿ ಅಷ್ಟು ಬೇಗ ಕಾಂಪ್ರಮೈಸ್‌ ಆಗುವ ಕಂಪನಿ ಅಲ್ಲ. ಅದರಲ್ಲೂ ಇಂದಿನ ಗ್ರಾಹಕರಿಗೆ ಬೇಕಾದ ಆಧುನಿಕ ವ್ಯವಸ್ಥೆಗಳನ್ನೆಲ್ಲ ಅಳವಡಿಸಿದೆ. ಮುಂಭಾಗದಲ್ಲಿ ಎರಡು ಎಸ್‌ಆರೆಸ್‌ ಏರ್‌ ಬ್ಯಾಗ್‌, ಎಬಿಡಿಯ ಎಬಿಎಸ್‌ ವ್ಯವಸ್ಥೆ ಸೇರಿ ಉಳಿದ ಆಧುನಿಕ ಲಾಕಿಂಗ್‌ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

 ಡಿಜಿಪ್ಯಾಡ್‌ನ‌ಲ್ಲಿ ಏನೆಲ್ಲಾ ಇವೆ?
– 7 ಇಂಚಿನ ಟಎನ್‌ ಮಾದರಿಯ ಡಿಜಿಪ್ಯಾಡ್‌ ಬಳಕೆ
– ಸ್ಯಾಟ್‌ಲೆçಟ್‌ ಸಂಪರ್ಕದ ತ್ರಿಡಿ ನೇವಿಗೇಷನ್‌ ವ್ಯವಸ್ಥೆ
– 1.5ಜಿಬಿ ಡೇಟಾ ಸ್ಟೋರೇಜ್‌ ಇಂಟರ್ನಲ್‌ ಮೆಮೋರಿ
– ಮಿರರ್‌ ಲಿಂಕ್‌ಗೆ ನೆರವಾಗಬಲ್ಲ ಸ್ಮಾರ್ಟ್‌ಫೋನ್‌ ಸಂಪರ್ಕ ವ್ಯವಸ್ಥೆ
– ಬ್ರೌಸಿಂಗ್‌ಗೆ ಇಂಟರ್ನೆಟ್‌ ಸಂಪರ್ಕ ಸಾಧ್ಯ
– ಮೀಡಿಯಾ, ನೇವಿಗೇಷನ್‌ ಮತ್ತು ಮೊಬೈಲ್‌ ಕರೆಗಳಿಗೆ ವೈಸ್‌ ಕಮಾಂಡ್‌
– ಆಡಿಯೋ, ಟೆಲಿಫೋನ್‌ ಸ್ಟ್ರೀಮಿಂಗ್‌ ವ್ಯವಸ್ಥೆ

ಮೈಲೇಜ್‌
ಪೆಟ್ರೋಲ್‌ ವೇರಿಯಂಟ್‌: ಪ್ರತಿ ಲೀಟರ್‌ಗೆ 12ರಿಂದ 18 ಕಿಮೀ.
ಡೀಸೆಲ್‌ ವೇರಿಯಂಟ್‌: ಪ್ರತಿ ಲೀಟರ್‌ಗೆ 16ರಿಂದ 21 ಕಿಮೀ.

ಶೋ ರೂಂ ಬೆಲೆ
112.5 ಲಕ್ಷ ರೂ.ನಿಂದ 16ಲಕ್ಷ ರೂ.

ಅಗ್ನಿಹೋತ್ರಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.