ಖಾರ ತಂದ ಸಿಹಿ!


Team Udayavani, Mar 30, 2020, 4:02 PM IST

ಖಾರ ತಂದ ಸಿಹಿ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿಯ ಸಾವಜಿ ಕುಟುಂಬವೊಂದು ಸಸ್ಯಹಾರಿ ಖಾದ್ಯಗಳಿಗೇ ಹೆಸರುವಾಸಿ! ವಿಶೇಷವಾಗಿ ಇವರ “ಖಾರ’ ಮತ್ತಿಗೆ ಫಿದಾ ಆಗದವರಿಲ್ಲ. ಅನೇಕರು ಇದರ ರುಚಿ ಸವಿಯುವ ಮುನ್ನ ಖಾರದ ಆಕಾರ, ಬಣ್ಣ ನೋಡಿಯೇ ಇದು “ಮರಾಠರ ಖಾರ’ ಎಂದು ಗುರುತಿಸಿ ಬಿಡುತ್ತಾರೆ!

ಇವರು ಮೂಲತಃ ಗದಗಿನವರು. ಮೂರು ದಶಕದ ಕೆಳಗೆ ಅಲ್ಲಿ ಕೈಮಗ್ಗಕ್ಕೆ ಕರಾಳ ದಿನ ಆರಂಭ ಆದವು. ಆಗ ರಘುನಾಥ ತಮ್ಮ ಕುಟುಂಬ ಸಮೇತ ಕೂಡ್ಲಿಗಿಗೆ ವಲಸೆ ಬಂದರು. ಇಡ್ಲಿ, ಚಟ್ನಿ ಮಾಡಿ ಓಣಿ ಓಣಿ ತಿರುಗಿ ಮಾರಿದರು. ಸ್ವಾದಿಷ್ಟ ಇಡ್ಲಿ ಚಟ್ನಿಗೆ ಜನ ಮನೆ ಮುಂದೆ ಕ್ಯೂ ನಿಂತರು! ತಿರುಗಾಟ ನಿಲ್ಲಿಸಿ, ಮನೆ ಮುಂದೆಯೇ ಹೋಟೆಲ್‌ ತೆಗೆದರು. ಬೆಳಗ್ಗೆ ಇಡ್ಲಿ - ಚಟ್ನಿ, ಸಂಜೆ ಅಲಸಂದಿ ವಡೆ ಮಾಡಿ ಫೇಮಸ್‌ ಆದರು.

ನಂತರ ಖಾರ ಪರಿಚಯಿಸಿದರು. ಶುಚಿ- ರುಚಿಯ ಕಾರಣಕ್ಕೆ ಇದೂ ಬೇಗನೆ ಹೆಸರಾಯ್ತು. ಈ ನಡುವೆ ಮನೆಯ ಮಾಲಿಕ ರಘುನಾಥ ತೀರಿಕೊಂಡ ನಂತರ ಪತ್ನಿ ರತ್ನಬಾಯಿ ತನ್ನ ಮಕ್ಕಳಾದ ಭಾಗ್ಯಶ್ರೀ ಮತ್ತು ಸಂತೋಷರೊಂದಿಗೆ ಈ ವ್ಯಾಪಾರ ಮುಂದುವರಿಸಿದ್ದಾರೆ. ಬಣ್ಣರಹಿತ ಢಾಣೆ ಸೇವು ಬಾಯಲ್ಲಿಟ್ಟರೆ ಸಾಕು ಕರಗುತ್ತೆ. ಅಷ್ಟು ಮೃದು!. ಇನ್ನು ಖಾರದ ಪುಡಿ, ಬೆಳ್ಳುಳ್ಳಿಯನ್ನು ಹದವಾಗಿ ಬೆರೆಸಿ ಮಾಡಿದ ಬುಗ್ಗಿ ಹೆಚ್ಚು ರುಚಿ ಬರುತ್ತೆ.

ಗಿರಾಕಿಗಳಿಗೆ, ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಖಾರ ಖರೀದಿಸಲು ದುಂಬಾಲು ಬೀಳಲ್ಲ. ಖಾರದ ರುಚಿ ನೋಡಿದವರೇ ಇವರಿಗೆ ಪ್ರಚಾರಕರು!. ಮೊದಲು ಅವರು ಸಂತೆ ಮಾರ್ಕೆಟ್‌ ಜಾಗದಲ್ಲಿದ್ದರು. ಸಂತೆಗೆ ಬರುವವರೆಲ್ಲ ಕಡ್ಡಾಯವಾಗಿ ಖಾರ ಖರೀದಿಸುತ್ತಿದ್ದರು.  ಈಗ ಅಲ್ಲಿಲ್ಲ. ಆದರೂ ವ್ಯಾಪಾರ ಚೆನ್ನಾಗಿಯೇ ಆಗುತ್ತಿತ್ತು. ಅವರಿಗೆ ಕಾಯಂ ಗಿರಾಕಿ ಇದ್ದಾರೆ. “ಖಾರ’ದ ವ್ಯಾಪಾರ ಜೀವನಕ್ಕೆ ಆಸರೆ…’ ಎನ್ನುತ್ತಾರೆ ಸಂತೋಷ್‌.

“ಇಲ್ಲಿಯವರು ದೂರದೂರಿನ ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಖಾರ ಕಳುಹಿಸುತ್ತಾರೆ. ಇದರಿಂದ ಇವರಿಗೇನೋ ಖುಷಿ. ಅವರ ನಾಲಿಗೆಗೂ ರುಚಿ!. ಅಷ್ಟೇಕೆ ಹಾಸ್ಟೆಲ್‌ ಮಕ್ಕಳಿಗೆ ಇದೇ ಸ್ನ್ಯಾಕ್ಸ್‌. ಒಟ್ಟಿನಲ್ಲಿ ಖಾರ ಖರೀದಿ ಕಿಂಚಿತ್ತೂ ಕರಗಿಲ್ಲ. ತಿಂಗಳಲ್ಲಿ 20 ಸಾವಿರ ನಿವ್ವಳ ಆದಾಯ ಸಂಪಾದಿಸಬಹುದು ಎನ್ನುವುದು ಭಾಗ್ಯಶ್ರೀ ಅವರ ಅಭಿಪ್ರಾಯ. ಇತ್ತೀಚೆಗೆ ಇವರು ಸಣ್ಣಪುಟ್ಟ ಊಟದ ಆರ್ಡರನ್ನೂ ಪಡೆಯುತ್ತಾರೆ. ವಿಶೇಷವಾಗಿ ಇವರು ಮಾಡುವ ಕೆಂಪು ಚಟ್ನಿ ಎಲ್ಲರಿಗೂ ಅಚ್ಚುಮೆಚ್ಚು. ­

 

-ಸ್ವರೂಪಾನಂದ ಎಂ. ಕೊಟ್ಟೂರು

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.