ಮಳೆ ಬಂದರೆ ಹುಲ್ಲು, ಬರ ಬಂದರೆ ಬಣವೆ…


Team Udayavani, Feb 3, 2020, 5:00 AM IST

filler–Keelu-Banive

ವರ್ಷ ಪೂರ್ತಿ ಮೇವನ್ನು ಕೆಡದ ಹಾಗೆ ಸಂರಕ್ಷಿಸಲು ರೈತರು ಬಣವೆಯನ್ನು ಒಟ್ಟುತ್ತಾರೆ. ಮಳೆ- ಬಿಸಿಲಿನಿಂದ ಹಾನಿಯಾಗದಂತೆ ಬಣವೆಯನ್ನು ಒಟ್ಟುವುದು ಜಾಣ್ಮೆಯ ಕಲೆ.

ದನ-ಕರುಗಳಿಗೆ ಆಹಾರಕ್ಕಾಗಿ ಉಪಯೋಗಿಸುವ ಮೇವು ಮರುವರ್ಷ ಬೆಳೆ ಬರುವವರೆಗೆ ಆಸರೆಯಾಗುತ್ತದೆ. ಇದನ್ನು ವರ್ಷ ಪೂರ್ತಿ ಕೆಡದ ಹಾಗೆ ಸಂರಕ್ಷಿಸಲು ಹಿಂದೆ ರೈತರು ಬಣವೆಯನ್ನು ಒಟ್ಟುತ್ತಿದ್ದರು. ಬಿಸಿಲಿಗೆ ಅದು ಬಂಗಾರದ ಬಣ್ಣ ಪಡೆಯುತ್ತಿದ್ದುದರಿಂದ ಅದನ್ನು “ಬಂಗಾರದ ಬಣವೆ’ ಎಂದೂ ಕರೆಯುತ್ತಿದ್ದರು. ಗಾಳಿ, ಸಿಡಿಲು, ಮಳೆಯಿಂದ ಯಾವುದೇ ರೀತಿ ಬಣವೆಗೆ ಅಪಾಯ ಆಗದೆ ಇರಲಿ ಎಂದು ಒಳ್ಳೆಯ ದಿನ ನಕ್ಷತ್ರ ನೋಡಿ ಒಟ್ಟಲು ಪ್ರಾರಂಭಿಸುತ್ತಾರೆ. ಅದರ ಮುಕ್ತಾಯಕ್ಕೂ ಒಳ್ಳೆಯ ದಿನ ನೋಡುತ್ತಾರೆ. ಬಣವೆಯಲ್ಲಿ ಎರಡು ವಿಧ‌ಗಳಿವೆ. ಹಿಂದಿನ ತಲೆಮಾರಿನಿಂದ ಬಂದದ್ದು “ಕೀಲು ಬಣವೆ’. ಇನ್ನೊಂದು ಹೊಲದಲ್ಲಿ ಒಟ್ಟುವುದು “ಮಾಳಿಗೆ ಬಣವೆ’.

ಒಟ್ಟುವ ಪ್ರಕ್ರಿಯೆ
ಹಿಂದಿನ ಕಾಲದಲ್ಲಿ ರಾಶಿ ಮಾಡುವ ಯಂತ್ರ ಇಲ್ಲದಿದ್ದರಿಂದ ಸುಗ್ಗಿ ಕಾಲ ಬಂದರೆ ಬಿತ್ತನೆ ಮಾಡಿದ ಬೆಳೆಯ ರಾಶಿ ಮಾಡಲು ರೈತರು ವಾರಪೂರ್ತಿ ಹೊಲದಲ್ಲಿಯೇ ಬಿಡಾರ ಹೂಡುತ್ತಿದ್ದರು. ಹೊಲದಲ್ಲಿ ತೆನೆ ಮುರಿದು ಮೇವಿನ ಚಾಪನ್ನು ಹಾಕಿ ಬಂಡಿಯಲ್ಲಿ ತಂದು, ಊರಿಗೆ ಸಮೀಪವಿರುವ ದಡ್ಡಿಯಲ್ಲಿ ಒಟ್ಟುತ್ತಿದ್ದರು. ಮಳೆಗೆ ಹಾನಿಯಾಗದಂತೆ ಬಣಿವೆಯನ್ನು ಒಟ್ಟುವುದೂ ಜಾಣ್ಮೆಯ ಕಲೆ. ಮೊದಲು ನೆಲದ ಮೇಲೆ ಕೆಂಪು ಮಣ್ಣನ್ನು ಹಾಕಿ ಅಡಿಪಾಯದಂತೆ ಕೀಲು ಸೂಡು ಹಾಕಿ ಅದರ ಮೇಲೆ ಸೂಡುದಾರ ಹಾಕುತ್ತಾ ಮಧ್ಯಭಾಗದ ಹಂತ ಬರುವವರೆಗೆ ಸ್ವಲ್ಪ ಅಗಲವನ್ನು ಕಡಿಮೆ ಮಾಡುತ್ತಾ ಪುನಃ ಅಲ್ಲಿಂದ ಅಗಲ ಮಾಡುತ್ತಾ ಬಣವೆ ಸುತ್ತಲೂ ಬಡಮಣಿಯಿಂದ ಬಡಿಯುತ್ತಾ ಕ್ರಮಬದ್ಧವಾಗಿ ಒಟ್ಟುತ್ತಾರೆ. ಮುಕ್ತಾಯದ ಹಂತ ಬರುವಷ್ಟರಲ್ಲಿ ಬಣವೆ, ಕುದುರೆ ದೇಹದ ಆಕಾರ ಪಡೆಯುತ್ತದೆ.

ಜೋಳದ ದಂಟಿನ ಬೇರು ಭಾಗವಾದ ಬುಡುಚಿಯನ್ನು 1 ಅಡಿಯಷ್ಟು ಸುತ್ತಲೂ ಹೊರಗೆ ಮುಖ ಮಾಡಿ ಅದರ ಮೇಲೆ ಅಗಸಿ ಹೊಟ್ಟು ಹಾಕಿ ಮತ್ತದರ ಮೇಲೆ ಹಾಳು ಮಣ್ಣು ಹಾಕುತ್ತಾರೆ. ನಡುವೆ ಕೀಲನ್ನು ಹಾಕುವುದರ ಉದ್ದೇಶ, ಮಳೆ- ಗಾಳಿಗೆ ಬಣವೆ ಬೀಳದಂತೆ ಗಟ್ಟಿಯಾಗಿ ಹೊಯ್ದಾಡದೆ ನಿಲ್ಲಲಿ ಎಂದು. ಮಳೆಯಾದರೆ ಹನಿ ನೀರೂ ನಿಲ್ಲದ ಹಾಗೆ ಬಣವೆ ಒಟ್ಟುವ ಈ ಕಲೆ ವಿಶಿಷ್ಟವಾದುದು.

ಚಿತ್ರ- ಲೇಖನ: ಶ್ರೀಶೈಲ ಹೊಸಮನಿ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.