ಆನ್‌ಲೈನ್‌ ಪಾಠಶಾಲೆ!

ಮೈಕ್ರೋಸಾಫ್ಟ್ ಟೀಮ್‌ ಅಪ್ಲಿಕೇಶನ್‌

Team Udayavani, Apr 20, 2020, 3:21 PM IST

ಆನ್‌ಲೈನ್‌ ಪಾಠಶಾಲೆ!

ಕೋವಿಡ್ ವೈರಸ್‌ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಶಾಲೆಗಳು, ಅನೇಕ ಕಚೇರಿ ವ್ಯವಹಾರಗಳನ್ನು ಮನೆಯಿಂದಲೇ ನಿರ್ವಹಿಸಲಾಗುತ್ತಿದೆ. ಇದನ್ನು ಸಾಧ್ಯವಾಗಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಅನೇಕರು ಕಚೇರಿ ಕೆಲಸಗಳನ್ನು ಮನೆಯಿಂದಲೇ ಮಾಡಲು, ತಮ್ಮ ತಂಡದ ಜೊತೆ ಆನ್‌ ಲೈನ್‌ ಮೀಟಿಂಗ್‌ಗಳನ್ನು  ನಡೆಸಲು ಕೆಲ ಆ್ಯಪ್‌ಗ್ಳ ಮೊರೆ ಹೋಗಿದ್ದಾರೆ. ಆದರೆ, ಎಲ್ಲ ಆ್ಯಪ್‌ಗಳು ಸುರಕ್ಷಿತವಲ್ಲ. ಇಂಥ ಸಂದರ್ಭದಲ್ಲಿ ವಿಶ್ವಾಸಾರ್ಹವಾದ ಮೈಕ್ರೋಸಾಸ್ಟ್, ಸಾಮೂಹಿಕ ವಿಡಿಯೋ ಮೀಟಿಂಗ್‌ಗಳನ್ನು ನಡೆಸಲು, ವೀಡಿಯೋ ಕಾಲ್‌ಗ‌ಳನ್ನು ಮಾಡಲು ಟೀಮ್‌ ಆ್ಯಪ್‌ ಅನ್ನು ಪರಿಚಯಿಸಿದೆ.

ಭೌತಿಕ ತರಗತಿಯಿಲ್ಲದೆ ವಿದ್ಯಾರ್ಥಿಗಳ ಕಲಿಕೆ, ಚಟುವಟಿಕೆಗಳು ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಈ ಪ್ರಕ್ರಿಯೆಯನ್ನು ಸರಾಗಗೊಳಿಸಲು, ಮೈಕ್ರೋಸಾಫ್ಟ್ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಿರುವ ಮೈಕ್ರೋಸಾಫ್ಟ್ ಟೀಮ್‌ ಅಪ್ಲಿಕೇಶನ್‌ ಅನ್ನು ಉಚಿತವಾಗಿ ಒದಗಿಸಲು ಮುಂದಾಗಿದೆ. ಇದು ತರಗತಿಯ ತಂಡದ ಕೆಲಸಗಳಿಗೆ ವಿಡಿಯೊ ಮೀಟಿಂಗ್‌ ಗಳು ಆಫಿಸ್‌ 365 ಅಪ್ಲಿಕೇಶನ್‌ಗಳ ಆನ್‌ಲೈನ್‌ ಆವೃತ್ತಿಗಳು, ಅನುಸರಣೆ ಪರಿಕರಗಳು ಮತ್ತು ಮಾಹಿತಿಯ ರಕ್ಷಣೆಯನ್ನು ಒಳಗೊಂಡಿರುವ ಸಂಪೂರ್ಣ ಉಚಿತ ವೈಯಕ್ತೀಕರಿಸಿದ ಹಬ್‌ ಅನ್ನು ಒದಗಿಸುತ್ತದೆ. ಕಾರ್ಪೋರೇಟ್‌ ಕಂಪನಿಗಳಂತೆಯೇ, ಭಾರತದಾದ್ಯಂತ ಶಾಲೆಗಳು ಕೂಡ ದೂರದ ಕಲಿಕೆಗಾಗಿ ತಂಡಗಳನ್ನು ಬಳಸುತ್ತಿವೆ. ಕರ್ನಾಟಕದ
ಅನೇಕ ಜನಪ್ರಿಯ ಶಾಲೆಗಳು ಮನೆಯಿಂದಲೇ ಕಲಿಕೆಗಾಗಿ ಮೈಕ್ರೋಸಾಫ್ಟ್ ಟೀಮ್‌ ಅಪ್ಲಿಕೇಶನ್‌ ಬಳಸುತ್ತಿವೆ.

ಈ ಬಿಕ್ಕಟ್ಟಿನ ಸಮಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ದೈನಂದಿನ ಕೆಲಸ, ಕಲಿಕೆ ಮತ್ತು ವೈಯಕ್ತಿಕ ಸಂಪರ್ಕಗಳನ್ನು ಸಕ್ರಿಯಗೊಳಿಸುವ ಸಾಧನವನ್ನು ಎದುರು ನೋಡುತ್ತಿದ್ದಾರೆ. ಆದರೆ, ತಂತ್ರಜ್ಞಾನ ಆಧರಿತ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಸೈಬರ್‌ ಕ್ರೈಂಗಳ ಅಪಾಯ ಎದುರಿಸಬೇಕಾಗಬಹುದು. ಬಳಕೆದಾರರು, ಪಾಲನೆ ಮಾಡುವವರು ಮತ್ತು ಶಿಕ್ಷಣ ತಜ್ಞರು ವಿಡಿಯೋ ಸಭೆಗಳು, ಸಂಭಾಷಣೆಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಿಳಿದಿರಬೇಕು, ಪ್ರೀತಿಪಾತ್ರರನ್ನು, ವಿಶೇಷವಾಗಿ ಮಕ್ಕಳು ಮತ್ತು ವೃದಟಛಿರನ್ನು ಸೈಬರ್‌ ಅಪರಾಧಿಗಳಿಂದ ಸುರಕ್ಷಿತವಾಗಿರಿಸಿಕೊಳ್ಳಬೇಕು. ಆದ್ದರಿಂದ ಮೈಕ್ರೋಸಾಫ್ಟ್ ಟೀಮ್‌ ವಿಶ್ವಾಸಾರ್ಹ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಸಹಕರಿಸುತ್ತದೆ. ದತ್ತಾಂಶದ ಗೌಪ್ಯತೆಯನ್ನು
ಖಚಿತಪಡಿಸುತ್ತದೆ.

ಯೋಜಿತವಲ್ಲದ ಸಭೆಗಳಲ್ಲಿ, ಅನಿರೀಕ್ಷಿತವಾಗಿ ಪಾಲ್ಗೊಳ್ಳುವವರ ಜೊತೆ ಬಳಕೆದಾರರು ಸೂಕ್ಷ್ಮ ಮಾಹಿತಿಯನ್ನು ಚರ್ಚಿಸುವುದನ್ನು ತಡೆಯಬೇಕು. ಸೆಷನ್‌ ರೆಕಾರ್ಡಿಂಗ್‌ಗಳಲ್ಲಿ, ಪ್ರವೇಶ ಅನುಮತಿ ಸುವಾಗ ಜಾಗರೂಕರಾಗಿರಬೇಕು. ಲ್ಯಾಪ್‌ ಟಾಪ್‌, ಪಿ.ಸಿಗಳಲ್ಲಿ ಸಹಜವಾಗಿಯೇ ಮೈಕ್ರೋಸಾಫ್ಟ್ ಟೀಮ್ ಅನ್ನು ಬಳಸಬಹುದು. ಅಲ್ಲದೇ ಟೀಮ್‌ ಟೀಮ್‌ ಆಪ್‌
ಅನ್ನು ಅಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿದ ಬಳಿಕ ಫಾರ್‌ ಸ್ಕೂಲ್, ಫಾರ್‌ ಫ್ರೆಂಡ್ಸ್ ಆ್ಯಂಡ್‌ ಫ್ಯಾಮಿಲಿ, ಫಾರ್‌ ವರ್ಕ್‌ ಎಂಬ ಆಯ್ಕೆಗಳಿವೆ. ನಿಮ್ಮ ಅಗತ್ಯಕ್ಕನುಸಾರವಾಗಿ ಅದನ್ನು ಆಯ್ಕೆಮಾಡಿಕೊಂಡು, ನಿಮ್ಮದೇ ತಂಡ ರಚಿಸಿಕೊಂಡು ಬಳಸಬಹುದು.
ಡೌನ್‌ಲೋಡ್‌ ಲಿಂಕ್‌: bit.ly/2Xy0fYC

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.