ಹಾಸಿಗೆಗಿಂತ ಕಡಿಮೆ ಕಾಲು ಚಾಚಿ


Team Udayavani, Mar 30, 2020, 3:17 PM IST

ಹಾಸಿಗೆಗಿಂತ ಕಡಿಮೆ ಕಾಲು ಚಾಚಿ

ಅವನು ಸರ್ಕಾರಿ ನೌಕರನಾಗಿರಬಹುದು, ಇಲ್ಲವೇ ಫ್ಯಾಕ್ಟರಿ ಕಾರ್ಮಿಕನಾಗಿರಬಹುದು. ಅಷ್ಟೇ ಯಾಕೆ? ತರಕಾರಿ ಮಾರಾಟಗಾರ, ಪೆಟ್ಟಿಗೆ ಅಂಗಡಿಯ ಮಾಲೀಕ, ಹೋಟೆಲ್‌ ಉದ್ಯಮಿ ಅಥವಾ ಕೃಷಿಕ- ಈ ಯಾರೇ ಆಗಿರಬಹುದು. ಎಲ್ಲರಿಗೂ ಇರುವ ಬಹು ದೊಡ್ಡ ಆಸೆಯೆಂದರೆ, ಒಂದಷ್ಟು ಕಾಸು ಮಾಡಬೇಕು ಎನ್ನುವುದು. ಕಾಸಿದ್ದ ಕಡೆಯಲ್ಲಿ ಖುಷಿ ಇರುವುದಿಲ್ಲ ಎಂಬ ಮಾತೂ ಇದೆ.

ಆದರೆ ಅದನ್ನು ಒಪ್ಪಲು ಯಾರೂ ಸಿದ್ಧರಿಲ್ಲ. ಕಾಸು ಇದ್ದರೆ ಮಾತ್ರ ಸುತ್ತಲಿನ ಸಮಾಜದಲ್ಲಿ ಪರಿಚಿತರು- ಬಂಧುಗಳ ಗುಂಪಿನಲ್ಲಿ ಮರ್ಯಾದೆ ಸಿಗುತ್ತದೆ ಎಂದು ಪದೇ ಪದೆ ಸಾಬೀತಾಗಿರುವುದರಿಂದ ಹಣವಂತರಾಗಲು ಎಲ್ಲರೂ ಆಸೆ ಪಡುವವರೇ.ಒಂದು ಬಾರಿ ಶ್ರೀಮಂತ ಎಂದು ಕರೆಸಿಕೊಂಡರೆ ಆ ಕ್ಷಣದಿಂದಲೇ ಸೋಷಿಯಲ್‌ ಸ್ಟೇಟಸ್‌ ಬದಲಾಗುತ್ತದೆ. ಶ್ರೀಮಂತ ಎಂದು ಬ್ರ್ಯಾಂಡ್‌ ಆದಮೇಲೆ ನೀವು ಬೈಕಿನಲ್ಲೋ, ಸಿಟಿ ಬಸ್ಸಿನಲ್ಲೋ ಓಡಾಡಲು ಆಗುವುದಿಲ್ಲ. ಕಾರಿನಲ್ಲೇ ಓಡಾಡಬೇಕು. ಕಾರು ಅಂದ ತಕ್ಷಣ ಒಂದು ಸಂಗತಿ ನೆನಪಾಯ್ತು.

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬುದು ಹಳೆಯ ಮಾತು. ‘ಹಾಸಿಗೆ ಇದೆಯಲ್ಲ, ಅದಕ್ಕಿಂತ ಕಡಿಮೆ ಕಾಲು ಚಾಚು’ ಎಂಬುದು ಈಗಿನ ಮಾತು. ಅಂದರೆ ನಮಗೆ ಫಾರ್ಚೂನರ್‌ ಕಾರು ಖರೀದಿಸುವ ಸಾಮರ್ಥ್ಯ ಇದ್ದರೂ ಅದಕ್ಕಿಂತ ಐದಾರು ಲಕ್ಷ ಕಡಿಮೆ ಬೆಲೆಯ ಕಾರು ಖರೀದಿಸುವುದು ಸೂಕ್ತ. ಏಕೆಂದರೆ ನಾಳಿನ ಪರಿಸ್ಥಿತಿ, ಸವಾಲುಗಳನ್ನು ಬಲ್ಲವರಾರು? ದಿಢೀರನೆ ಪೆಟ್ರೋಲ್‌ ಬೆಲೆ, ದಿನಸಿ, ಮೆಡಿಕಲ್‌ ಬಿಲ್ಲುಗಳೆಲ್ಲಾ ಒಮ್ಮೆಲೇ ಏರಿದರೆ? ನಮ್ಮೆಲ್ಲಾ ಉಳಿತಾಯ ಒಂದೇ ಸಲ ಅವಕ್ಕೆ ಖರ್ಚಾಗಿ ಬಿಟ್ಟರೆ? ಹೀಗಾಗಿ ಯಾವುದೇ ವಸ್ತು ಖರೀದಿಸುವ ಮುನ್ನ ಹಲವು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ.

ಈಗ ಮತ್ತೆ ಮೊದಲಿನ ಮಾತಿಗೆ ಹೋಗುವುದಾದರೆ, ಕಾರ್ಮಿಕ, ಪೆಟ್ಟಿಗೆ ಅಂಗಡಿ ಮಾಲೀಕ, ಹೋಟೆಲ್‌ ಉದ್ಯಮಿ, ತರಕಾರಿ ಮಾರಾಟಗಾರ- ಇವರೆಲ್ಲರೂ ಒಂದಷ್ಟು ಹೆಚ್ಚುವರಿ ಲಾಭ ಮಾಡಲು ಯೋಚಿಸುತ್ತಾರಲ್ಲ, ಅಂಥವರು ತಮಗೆ ಪರಿಚಿತವಾಗಿರುವ ಕ್ಷೇತ್ರದಲ್ಲಿ ಸಣ್ಣದೊಂದು ಬಂಡವಾಳ ಹೂಡಿ ರಿಸ್ಕ್ ತೆಗೆದುಕೊಂಡಾಗ ಮಾತ್ರ ಗೆಲ್ಲಲು ಸಾಧ್ಯ. ಒಬ್ಬ ಜಮೀನ್ದಾರ, ತಾನು ಕೃಷಿಯಲ್ಲಿ ಗೆದ್ದಿದ್ದೇನೆ ಎಂದು ಹೋಟೆಲ್‌ ಉದ್ಯಮದಲ್ಲೂ ಗೆಲ್ಲಲು ಸಾಧ್ಯವಿಲ್ಲ. ಅದು ಕಷ್ಟಕರ.

ಹೋಟೆಲ್‌ ಉದ್ಯಮದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಜನರ ಮಾರ್ಗದರ್ಶನ ಇದ್ದರೆ ಮಾತ್ರಗೆಲುವು ಸಾಧ್ಯ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಕಿಂಗ್‌ ಎನ್ನಿಸಿಕೊಂಡವ ಚಿತ್ರರಂಗಕ್ಕೆ ಬಂದು ಹಣ ಕಳೆದುಕೊಳ್ಳುವುದು, ಅಕೌಂಟೆಂಟ್‌ ಅನಿಸಿಕೊಂಡ ನೌಕರ ಬೇಕರಿ ಶುರು ಮಾಡಿ ಕೈಸುಟ್ಟುಕೊಳ್ಳುವುದು ಇವೆಲ್ಲಾ ನಿರ್ಲಕ್ಷ್ಯದಿಂದ ಆಗುವ ಅನಾಹುತ. ಹೀಗಾಗಿ ಹಾಸಿಗೆ ಇದ್ದಷ್ಟು ಅಲ್ಲ, ಇರುವುದಕ್ಕಿಂತ ಕಡಿಮೆ ಕಾಲು ಚಾಚಿದರೆ ಮಾತ್ರ ನೆಮ್ಮದಿ ಕಾಣಬಹುದು. ­

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.