ಮಾಸ್ಕಿಟೊ ಮ್ಯಾನ್‌


Team Udayavani, Aug 5, 2019, 5:00 AM IST

c-15

“ಪ್ಯಾಡ್‌ ಮ್ಯಾನ್‌’ ಖ್ಯಾತಿಯ ಅರುಣಾಚಲಂ- ಊರವರು, ಅಷ್ಟೇ ಯಾಕೆ ಮನೆಯವರು ಮತ್ತು ಬಹುರಾಷ್ಟ್ರೀಯ ಕಂಪನಿಗಳ ವಿರೋಧ ಕಟ್ಟಿಕೊಂಡು ಸ್ಯಾನಿಟರಿ ಪ್ಯಾಡ್‌ಅನ್ನು ಕಡಿಮೆ ದರದಲ್ಲಿ ಒದಗಿಸುವ ಕನಸನ್ನು ಸಾಕಾರಗೊಳಿಸಿದ್ದರು. ಅದೇ ಹಾದಿಯಲ್ಲಿ ದಶಕಗಳಿಂದ ನಡೆಯುತ್ತಿರುವವರು ಮಂಗಳೂರಿನ ಆರ್ವಿನ್‌ ನೊರೋನ್ಹಾ. ಅವರು ಅಭಿವೃದ್ಧಿ ಪಡಿಸಿರುವ ಸೊಳ್ಳೆ ಹಿಡಿಯುವ ಉಪಕರಣಕ್ಕೆ ನಮ್ಮಲ್ಲಿ ಸಿಗದೇ ಇದ್ದ ಮನ್ನಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿದೆ…

ಯಾವುದೇ ಒಂದು ಹೊಸ ಉತ್ಪನ್ನವನ್ನು ಅಭಿವೃದ್ಧಿ ಪಡಿಸಿದಾಗ ಜನರು ಅದನ್ನು ಅನುಮಾನದ ದೃಷ್ಟಿಯಲ್ಲಿ ನೋಡುವುದು ಸಹಜ. ಆದರ ಜೊತೆಗೆ, ಅದೇ ಉದ್ಯಮದಲ್ಲಿ ದಶಕಗಳಿಂದ ತೊಡಗಿರುವ ದೊಡ್ಡ ದೊಡ್ಡ ಸಂಸ್ಥೆಗಳ ವಿರೋಧವೂ ಸಹಜವೇ. ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಮುಂದೆ ಸಾಗಿದವರಿಗೇ ಯಶಸ್ಸು ಕೈ ಹಿಡಿಯುತ್ತದೆ ಎಂಬ ಮಾತು ಸತ್ಯ. ಅದಕ್ಕೆ “ಪ್ಯಾಡ್‌ ಮ್ಯಾನ್‌’ ಖ್ಯಾತಿಯ ಅರುಣಾಚಲಂ ಮುರುಗನಾಥಂನಂಥವರು ಸಾಕ್ಷಿ. ಊರವರಿಂದ, ಅಷ್ಟೇ ಯಾಕೆ? ಮನೆಯವರಿಂದ ತಿರಸ್ಕೃತನಾದರೂ ಹಠ ಬಿಡದೆ, ಬಹುರಾಷ್ಟ್ರೀಯ ಕಂಪನಿಗಳ ಒತ್ತಡದ ನಡುವೆಯೂ ಸ್ಯಾನಿಟರಿ ಪ್ಯಾಡ್‌ಅನ್ನು ಕಡಿಮೆ ದರದಲ್ಲಿ ನೀಡುವ ಕನಸನ್ನು ಆತ ಸಾಕಾರಗೊಳಿಸಿದ್ದು ಕಡಿಮೆ ಸಾಧನೆಯಲ್ಲ. ಈ ವರ್ಗಕ್ಕೆ ಸೇರಿದವರು “ಮೋಝಿ ಕ್ವಿಟ್‌’ ಎನ್ನುವ ಸೊಳ್ಳೆ ಹಿಡಿಯುವ ಉಪಕರಣವನ್ನು ಅಭಿವೃದ್ಧಿಪಡಿಸಿದ ಮಂಗಳೂರಿನ ಆರ್ವಿನ್‌ ನೊರೋನ್ಹಾ. ತಾವು ಅಭಿವೃದ್ದಿ ಪಡಿಸಿರುವ ಉಪಕರಣ ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕೆನ್ನುವುದು ಅವರ ಕನಸು. ಅದನ್ನು ನನಸು ಮಾಡಿಕೊಳ್ಳಲು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಸಂಘಸಂಸ್ಥೆಗಳ ಪ್ರತಿರೋಧದ ನಡುವೆಯೂ ಅವರು ತಮ್ಮ ಕನಸನ್ನು ಕಳೆದುಕೊಂಡವರಲ್ಲ. ಇತ್ತೀಚಿಗಷ್ಟೆ ಸಾರ್ವಜನಿಕ ಬಳಕೆಗೆ ಪ್ರಧಾನಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಡೆಂಗ್ಯೂ, ಮಲೇರಿಯಾ, ಹಳದಿ ಜ್ವರ, ಪೈಲೇರಿಯಾ ಮತ್ತಿತರ ಕಾಯಿಲೆಗಳು ಸುದ್ದಿ ಮಾಡುತ್ತಿರುವ ಈ ದಿನಗಳಲ್ಲಿ ಮನೆಗಳನ್ನು ಸೊಳ್ಳೆಗಳಿಂದ ಮುಕ್ತವಾಗಿಸುವ ಕಾಯಿಲ್‌ಗ‌ಳು, ಮ್ಯಾಟ್‌ಗಳು, ಲೋಷನ್‌ಗಳು, ಬ್ಯಾಟ್‌ಗಳು ಮತ್ತಿತರ ಸಾಮಗ್ರಿಗೆ ಬೇಡಿಕೆಯೂ ಕುದುರುತ್ತಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಜೈವಿಕವಾಗಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ತಂತ್ರ ಹೆಚ್ಚು ಪರಿಣಾಮಕಾರಿ ಹಾಗೂ ಸೂಕ್ತ ಎನ್ನುವುದು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ವಿಜ್ಞಾನದ ಪ್ರತಿಪಾದನೆ. ಆದರೂ ನಾವ್ಯಾರೂ ಅದನ್ನು ಪಾಲಿಸುತ್ತಿಲ್ಲ ಎನ್ನುವುದು ವಿಪರ್ಯಾಸ. ಮಾಸ್ಕಿಟೋ ರೆಪಲ್ಲೆಂಟುಗಳ ಮಾರುಕಟ್ಟೆ ತುಂಬಾ ದೊಡ್ಡದು ಮತ್ತು ಪ್ರಭಾವಶಾಲಿಯೂ ಹೌದು. ಅವ್ಯಾವುದನ್ನೂ ಲೆಕ್ಕಿಸದೆ, ಆರೋಗ್ಯ ಇಲಾಖೆಯ ಪ್ರತಿಪಾದನೆಯಂತೆಯೇ ಸೊಳ್ಳೆ ಹಿಡಿಯುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಆರ್ವಿನ್‌ ನೊರೋನ್ಹಾ.

ಉಪಕರಣದ ಉಗಮ
ಇಗ್ನೇಶಿಯಸ್‌ ಒರ್ವಿನ್‌ ನೊರೋನ್ಹಾ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಅವರ ಆಸಕ್ತಿ ವಿಜ್ಞಾನ. ಅದರಲ್ಲೂ ಮುಖ್ಯವಾಗಿ ಸಂಶೋಧನಾ ಕ್ಷೇತ್ರ. ಅವರ ಸೊಳ್ಳೆ ವಿರುದ್ಧದ ಹೋರಾಟಕ್ಕೆ ಮುಖ್ಯ ಸ್ಫೂರ್ತಿ ತಾಯಿಯ ಅನಾರೋಗ್ಯ. ಅವರು ಸೊಳ್ಳೆ ಕಡಿತದಿಂದ ಬರುವ ಆನೆ ಕಾಲು (ಫೈಲೇರಿಯಾಸಿಸ್‌)ನಿಂದ ಬಳಲುತ್ತಿದ್ದರು. ಅದು ಅವರ ಮನಸ್ಸನ್ನು ತೀವ್ರವಾಗಿ ಕಾಡಿತ್ತು. ಸೊಳ್ಳೆ ಕಾಟ ನಿಯಂತ್ರಿಸಲು ಏನಾದರೂ ಮಾಡಬೇಕೆನ್ನುವ ನಿರ್ಧಾರವನ್ನು ಅವತ್ತೇ ಕೈಗೊಂಡರು.

2001ರಲ್ಲಿ ಹೈದರಾಬಾದ್‌ಗೆ ಹೋಗಿದ್ದಾಗ ಅಲ್ಲಿ ಅಮೆರಿಕಾದ ಬಯೋ ಫಿಸಿಕ್ಸ್‌ ಇನ್‌ಕಾರ್ಪೊರೇಶನ್‌ ಸಂಸ್ಥೆಯವರು ಸೊಳ್ಳೆಗಳನ್ನು ಕೊಲ್ಲುವ (ಮಾಸ್ಕಿಟೊ ಮ್ಯಾಗ್ನೆಟ್‌) ಉತ್ಪನ್ನದ ಪ್ರಾತ್ಯಕ್ಷಿಕೆ ಆಯೋಜಿಸಿದ್ದರು. ಆ ಯಂತ್ರದ ಬೆಲೆ 1,10,000 ರು. ಆಗಿತ್ತು. ಅಲ್ಲದೆ ತಿಂಗಳ ನಿರ್ವಹಣಾ ವೆಚ್ಚ 5,000 ರು. ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ “ಒಕ್ಟೆನಾಲ್‌’ನ್ನು ಅದರಲ್ಲಿ ಬಳಸಲಾಗುತ್ತಿತ್ತು. ಅ ಸಮಯದಲ್ಲಿ ಸೊಳ್ಳೆ ನಿರ್ಮೂಲನೆಗೆ ಇಷ್ಟೊಂದು ದುಬಾರಿಯಾದ ಯಂತ್ರ ಬೇಕೇ ಎನ್ನುವ ಪ್ರಶ್ನೆಯಿಂದ “ಮೋಝಿ ಕ್ವಿಟ್‌’ ಯಂತ್ರ ಆವಿಷ್ಕರಿಸಲು ಪ್ರೇರಣೆ ಸಿಕ್ಕಿತ್ತು. ಈ ಉಪಕರಣ ಎರಡು ಮಾಡೆಲ್‌ಗ‌ಳಲ್ಲಿ ಲಭ್ಯವಿದೆ.

ಜಾನುವಾರುಗಳ ಹಾಲು ಉತ್ಪಾದನೆ ಹೆಚ್ಚುತ್ತದೆ
ಮೋಝಿ ಕ್ವಿಟ್‌ ಉಪಕರಣ ಬಳಸುವುದಕ್ಕೂ, ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವುದಕ್ಕೂ ಏನು ಸಂಬಂಧ ಎಂದು ಮೊದಲಿಗೆ ಅನ್ನಿಸಬಹುದು. ಆದರೆ ಸೊಳ್ಳೆಗಳ ಕಾಟ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ. ಮೋಝಿ ಕ್ವಿಟ್‌ ಉಪಕರಣವನ್ನು ಹಟ್ಟಿಯಲ್ಲಿ ಇರಿಸುವುದರಿಂದ ಲಾಭವಿದೆ. ಸೊಳ್ಳೆಗಳು ಇಲ್ಲವಾದರೆ ಜಾನುವಾರುಗಳು ಯಾವುದೇ ತೊಂದರೆಯಿಲ್ಲದೆ ವಿಶ್ರಾಂತಿ ಪಡೆಯಬಹುದು, ನಿದ್ದೆ ಮಾಡಬಹುದು. ಇದರಿಂದ ಗೋವುಗಳ ದೇಹದ ತೂಕ ಜಾಸ್ತಿಯಾಗಿ ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ ಈ ವಿಚಾರವಾಗಿ ಅಧ್ಯಯನ ನಡೆಸಿ ವರದಿ ನೀಡಿದೆ.

ಮುಖ್ಯ ತೊಡಕು ಇರುವುದು ಇಲ್ಲೇ…
ನ್ಯಾಶನಲ್‌ ಹೆಲ್ತ್‌ ರಿಸೋರ್ಸ್‌ ಸಿಸ್ಟಂ ಸೆಂಟರ್‌, 5 ವರ್ಷಗಳ ಹಿಂದೆ “ಮೋಝಿಕ್ವಿಟ್‌’ ಕೇವಲ ಶೈಕ್ಷಣಿಕ ಸಂಶೋಧನೆಯ ಉದ್ದೇಶಕ್ಕೆ ಬಳಸಲು ಮಾತ್ರ ಅರ್ಹವಾಗಿದೆಯೇ ಹೊರತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತಿಲ್ಲ’ ಎಂದು ಶಿಫಾರಸು ಮಾಡಿತ್ತು. ಇದರಿಂದಾಗಿ ಸರ್ಕಾರಿ ಅನುದಾನಗಳು ಕೈತಪ್ಪಿಹೋಗಿದ್ದವು. ಇದು ಯಾರದೋ ಒತ್ತಡಕ್ಕೆ ಮಣಿದು ನೀಡಿದ ವರದಿ ಎನ್ನುವುದು ಆರ್ವಿನ್‌ರ ದೂರು. ಒಂದೊಳ್ಳೆಯ ಉದ್ದೇಶವನ್ನು ಹೊಂದಿದ ಸಂಶೋಧನೆ ಜನರ ಬಳಿ ತಲುಪಲು ಎಷ್ಟೊಂದು ತೊಡಕುಗಳು ಬರುತ್ತವೆ ಎನ್ನುವುದು ಆರ್ವಿನ್‌ ಅವರಿಗೂ ಗೊತ್ತಿರಲಿಲ್ಲ. ಈಗ ಪ್ರಧಾನಿಯವರು ಬಿತ್ತಿರುವ “ಮೇಕ್‌ ಇನ್‌ ಇಂಡಿಯಾ’ ಬೀಜದ ನೆಪದಿಲ್ಲಾದರೂ ತಮ್ಮ ಕನಸು ಚಿಗುರೊಡೆಯಲಿದೆ, “ಮೋಝಿ ಕ್ವಿಟ್‌’ ಉತ್ಪನ್ನ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂಬ ಆಶಾಭಾವ ಆವರದು.

ಹೇಗೆ ಸೊಳ್ಳೆ ಹಿಡಿಯುತ್ತೆ?
ಸೊಳ್ಳೆಗಳಿರುವ ಕೊಠಡಿಯಲ್ಲಿ ಕೆಲವು ಸಮಯ ಲೈಟ್‌ ಆರಿಸಿ ಬಾಗಿಲು ಮುಚ್ಚಿ ಮೋಝಿ ಕ್ವಿಟ್‌ ಅನ್ನು ಕರೆಂಟ್‌ಗೆ ಪ್ಲಗ್‌ ಮಾಡಿ ಆನ್‌ಮಾಡಬೇಕು. ಈ ಉಪಕರಣ ಸುರಕ್ಷಿತವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಇದರಲ್ಲಿ ರಾಸಾಯನಿಕ ಬಳಕೆ ಇಲ್ಲ. ಇದು, ಹೊಗೆ/ ಹಬೆಯನ್ನು ಹೊರಸೂಸುವುದಿಲ್ಲ. ಇದು ಬೆಳಕಿನ ಸಹಾಯದಿಂದ ಕಾರ್ಯಾಚರಿಸುತ್ತದೆ. ಆದರೆ ಅದು ಅಲ್ಟ್ರಾವಯಲೆಟ್‌ ಕಿರಣಗಳಲ್ಲ. ಈ ಉಪಕರಣದ ಸೀಕ್ರೆಟ್‌ ಇರುವುದು “ಫ‌ುಡ್‌ ಗ್ರೇಡ್‌ ಅಡಿಟಿವ್ಸ್‌’ನಲ್ಲಿ. ಅಂದರೆ ಸೇವಿಸಲು ಯೋಗ್ಯವಾದ ಪೌಡರ್‌ನಲ್ಲಿ.ಈ ವಸ್ತುವನ್ನು ಈ ಉಪಕರಣದ ಪ್ಲಾಸ್ಟಿಕ್‌ ಭಾಗಗಳ ತಯಾರಿಕೆಯ ಸಮಯದಲ್ಲಿ ಮಿಶ್ರಣ ಮಾಡಲಾಗುತ್ತದೆ. ಇದರಿಂದಾಗಿ ವಿಶೇಷ ರೀತಿಯ ಬೆಳಕು ಅದರಿಂದ ಉತ್ಪತ್ತಿಯಾಗುತ್ತದೆ. ಅಲ್ಲದೆ, ಉಪಕರಣದೊಳಗೆ ಒಂದು ಎಲೆಕ್ಟ್ರಾನಿಕ್‌ ಸರ್ಕ್ನೂಟ್‌ ಇದ್ದು, ಅದು ಮನುಷ್ಯ ದೇಹದ ತಾಪಮಾನದಷ್ಟೇ ತಾಪಮಾನವನ್ನು ಕೃತಕವಾಗಿ ಸೃಜಿಸುತ್ತದೆ.ಇವೆಲ್ಲದರಿಂದಾಗಿ ಸೊಳ್ಳೆಗಳು ಉಪಕರಣದತ್ತ ಆಕರ್ಷಿತಗೊಳ್ಳುತ್ತವೆ. ಈ ಸೊಳ್ಳೆಗಳು ಹತ್ತಿರ ಬಂದ ಕೂಡಲೆ; ಉಪಕರಣ ಅವನ್ನು ತನ್ನೊಳಗೆ ಸೆಳೆದುಕೊಂಡುಬಿಡುತ್ತದೆ. ವ್ಯಾಕ್ಯೂಮ್‌ ಕ್ಲೀನರ್‌ ರೀತಿ. ಹೇಗೆಂದರೆ, ಉಪಕರಣದಲ್ಲಿ ಒಂದು ಪುಟ್ಟ ಫ್ಯಾನ್‌ ಕೂಡಾ ಇದೆ. ಅದು ವ್ಯಾಕ್ಯೂಮ್‌ ಕ್ಲೀನರ್‌ನ ತಂತ್ರವನ್ನು ಅನುಸರಿಸುತ್ತದೆ. ಆದರೆ, ಇಲ್ಲಿ ಕಸಕ್ಕೆ ಬದಲಾಗಿ ಹತ್ತಿರ ಬಂದ ಸೊಳ್ಳೆಗಳನ್ನು ಒಳಕ್ಕೆಳೆದುಕೊಂಡು ಪುಟ್ಟ ಡಬ್ಬಿಯೊಳಕ್ಕೆ(ಕಂಟೈನರ್‌) ತಳ್ಳುತ್ತದೆ. ಅಲ್ಲಿ ಅವು ಸಾಯುತ್ತವೆ.

4 ಕೋಟಿ ಸೊಳ್ಳೆಗೆ 3 ಲಕ್ಷ ರು.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌(ಐಸಿಎಂಆರ್‌) ಮಹಾ ನಿರ್ದೇಶಕರಾಗಿದ್ದ ಡಾ| ಸೌಮ್ಯಾ ಸ್ವಾಮಿನಾಥನ್‌ ಅವರು ನಾಲ್ಕು ಪೆಟ್‌ ಜಾರ್‌ಗಳಲ್ಲಿ ತುಂಬಿದ್ದ 4 ಕೋಟಿಗಿಂತಲೂ ಹೆಚ್ಚಿನ ಸತ್ತ ಸೊಳ್ಳೆಗಳನ್ನು ಗಮನಿಸಿ 3 ಲಕ್ಷ ರೂ. ಅನುದಾನವನ್ನು ಬೆಂಗಳೂರಿನ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ (ಎನ್‌ಐಎಂಆರ್‌) ಗೆ ಮಂಜೂರು ಮಾಡಿ ಮೋಝಿ ಕ್ವಿಟ್‌ ಯಂತ್ರದ ಬಗ್ಗೆ ಕ್ಷೇತ್ರ ಮೌಲ್ಯಮಾಪನ ವರದಿ ಸಲ್ಲಿಸಲು ಸೂಚನೆ ನೀಡಿದ್ದರು.

ಅಂತಾರಾಷ್ಟ್ರೀಯ ಮನ್ನಣೆ
ಎನ್‌ಐಎಂಆರ್‌ ವಿಜ್ಞಾನಿಗಳು ತಿಂಗಳುಗಳ ಕಾಲ “ಮೋಝಿ ಕ್ವಿಟ್‌’ ಮತ್ತು ಅಮೆರಿಕದಿಂದ ತರಿಸಲಾದ ಸೊಳ್ಳೆ ಹಿಡಿಯುವ ಯಂತ್ರವನ್ನು ಪರೀಕ್ಷೆಗೊಳಪಡಿಸಿದ್ದರು. ಅಮೆರಿಕಾದ ಯಂತ್ರಕ್ಕಿಂತ ಎರಡೂವರೆ ಪಟ್ಟು ಅಧಿಕ ಸೊಳ್ಳೆಗಳನ್ನು ಮೋಝಿ ಕ್ವಿಟ್‌ ಹಿಡಿಯುತ್ತದೆ ಹಾಗೂ ಎಲ್ಲಾ ರೀತಿಯ ರೋಗಗಳನ್ನು ಹರಡುವ ಎಲ್ಲಾ ಜಾತಿಯ ಸೊಳ್ಳೆಗಳನ್ನು ಹಿಡಿಯುಲು ಶಕ್ತವಾಗಿದೆ ಎಂಬ ವರದಿಯನ್ನು ವಿಜ್ಞಾನಿಗಳು ಸಲ್ಲಿಸಿದರು. ಸ್ವಿಟ್ಜರ್‌ಲ್ಯಾಂಡಿನ ಜಿನೇವಾದಲ್ಲಿ ನಡೆದ 14 ನೇ ವಾರ್ಷಿಕ ಅಧಿವೇಶನದಲ್ಲಿ ಮೋಝಿ ಕ್ವಿಟ್‌ ಪ್ರದರ್ಶನಗೊಂಡಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯು “ಮೋಝಿ ಕ್ವಿಟ್‌” ಉಪಕರಣವನ್ನು ಸಾರ್ವಜನಿಕ ಬಳಕೆಗೆ ಅರ್ಹವೆಂದು ತೀರ್ಪು ನೀಡಿದ್ದು 91 ಮಲೇರಿಯಾ ಪೀಡಿತ ದೇಶಗಳಲ್ಲಿ ಇದನ್ನು ವಿತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ನಿಖರವಾದ ಬೆಲೆ
ಮಿನಿ ಮತ್ತು ಮ್ಯಾಕ್ಸ್‌ ಎಂಬ ಎರಡು ಮಾಡೆಲ್‌ನಲ್ಲಿ ಉತ್ಪನ್ನ ದೊರೆಯುತ್ತಿದೆ. ಮ್ಯಾಕ್ಸ್‌ನಲ್ಲಿ ಸೊಳ್ಳೆಗಳನ್ನು ಹಿಡಿದಿಡುವ ಕಂಟೈನರ್‌ ದೊಡ್ಡದಿರುತ್ತದೆ ಎನ್ನುವುದು ಬಿಟ್ಟರೆ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮಿನಿಯ ಬೆಲೆ 1,800 ರು ಆಗಿದ್ದರೆ ಮ್ಯಾಕ್ಸ್‌ 3,300 ರು.ಗೆ ಸಿಗುತ್ತದೆ.

ಜಾಲತಾಣ: www.mozziquit.com

-1 ಟೈಮ್‌ ಪೇಮೆಂಟ್‌
– ರೀ ಫಿಲ್ಲಿಂಗ್‌ ಬೇಡ
– 10 ಪೈಸೆ- ದಿನದ ವಿದ್ಯುತ್‌ ಖರ್ಚು
– 5- 10 ವರ್ಷ ಬಾಳಿಕೆ
– ಝೀರೊ ಕೆಮಿಕಲ್‌ ಝೀರೊ UV ಕಿರಣ
– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Ajekar-mahajar

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.