ಹಳೆ ಹೀರೋ ಹೊಸ ಎಂಟ್ರಿ

ಬರುತ್ತಿದೆ ಹಮಾರಾ ಬಜಾಜ್‌!

Team Udayavani, Oct 21, 2019, 4:30 AM IST

top-gear-bajaj-(5)-copy-copy

ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ,
ನಿಜ ಹೇಳಲೇನು, ನನ್ನ ಜೀವ ನೀನು…
ಡಾ. ರಾಜಕುಮಾರ್‌ ಅಭಿನಯದ ಈ ಹಾಡುಗಳಿಗೆ ಮನಸೋಲದವರಿಲ್ಲ. ಈ ಹಾಡಿನಲ್ಲಿ ಅಣ್ಣಾವ್ರು, ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ಹಳ್ಳಿಗೆ ಓಡೋಡುತ್ತಾ ಬರೋದೇನು? ಹಾದಿಯಲ್ಲೇ ಕನಸು ಕಾಣೋದೇನು? ಮಧ್ಯಮ ವರ್ಗದ ಮೆಚ್ಚುಗೆ ಗಳಿಸಿದ್ದ ಅದೇ ಬಜಾಜ್‌ ಚೇತಕ್‌, ಇದೀಗ ಹೊಸ ರೂಪದೊಂದಿಗೆ ರೀ ಲಾಂಚ್‌ ಆಗುತ್ತಿದೆ!

ಭಾರತೀಯ ದ್ವಿಚಕ್ರ ಸವಾರರ ಮನದಲ್ಲಿ ಬಜಾಜ್‌ ಚೇತಕ್‌ಗೆ ಯಾವತ್ತಿಗೂ ಕ್ಲಾಸಿಕ್‌ ಸ್ಥಾನ ಇದ್ದೇ ಇರುತ್ತದೆ. ಹಳೇ ಸಿನಿಮಾಗಳಲ್ಲಷ್ಟೇ ಅಲ್ಲ, ತೀರಾ 15-20 ವರ್ಷಗಳ ಹಿಂದೆಯೂ ಬಜಾಜ್‌ ಚೇತಕ್‌ ಸ್ಕೂಟರ್‌ ಮಧ್ಯಮ ವರ್ಗದವರಲ್ಲಿ ಅಂಥ ಹುಚ್ಚನ್ನೇ ಹಿಡಿಸಿತ್ತು. ಅದಕ್ಕೆ ಕಾರಣ, ಆ ಬೈಕಿನ ವಿನ್ಯಾಸ. ಆದರೆ, ಅದೇಕೋ ಗೊತ್ತಿಲ್ಲ, ಬಜಾಜ್‌ ಕಂಪನಿ, 14 ವರ್ಷಗಳ ಹಿಂದೆ ಈ ಬೈಕ್‌ನ ತಯಾರಿಕೆಯನ್ನೇ ನಿಲ್ಲಿಸಿಬಿಟ್ಟಿತ್ತು. ಬಳಿಕ ಹೊಸ ಮಾದರಿಯ ಸ್ಕೂಟರ್‌ಗಳ ಜಮಾನಕ್ಕೆ ತಿರುಗಿತ್ತು ಆ ಮಾತು ಬೇರೆ…

ಈಗ ಮತ್ತೆ 14 ವರ್ಷಗಳ ನಂತರ, ಬಜಾಜ್‌ ಚೇತಕ್‌ ಗಾಡಿಯನ್ನು ರೀ ಲಾಂಚ್‌ ಮಾಡಲಾಗುತ್ತಿದೆ. ಆದರೆ, ಬಜಾಜ್‌ ಚೇತಕ್‌ ಹಿಂದಿನ ರೀತಿಯಲ್ಲಿ ಪೆಟ್ರೋಲ್‌ ಗಾಡಿಯಾಗಿ ಬರುತ್ತಿಲ್ಲ. ಬದಲಾಗಿ, ಎಲೆಕ್ಟ್ರಿಕ್‌ ಮಾದರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲ್ಪಡುತ್ತಿದೆ.

ಮಾರುಕಟ್ಟೆ ಪ್ರವೇಶ ಯಾವತ್ತು?
ವಿಶೇಷವೆಂದರೆ, ಸೆ.25 ರಿಂದಲೇ ಈ ಗಾಡಿಯ ಉತ್ಪಾದನೆ ಆರಂಭವಾಗಿದೆ. ಅಧಿಕೃತವಾಗಿ 2020ರ ಜನವರಿಯಲ್ಲಿ, ಪುಣೆಯಲ್ಲಿ ಈ ಸ್ಕೂಟರ್‌ ಲಾಂಚ್‌ ಆಗಲಿದೆ. ಇದಾದ ನಂತರ, ಬೆಂಗಳೂರಿನಲ್ಲಿ ಅನಾವರಣ ಮಾಡಲಿದ್ದೇವೆ ಎಂದು ಬಜಾಜ್‌ ಆಟೋ ಕಂಪನಿಯ ಎಂ.ಡಿ ರಾಜೀವ್‌ ಬಜಾಜ್‌ ಹೇಳಿದ್ದಾರೆ. ಮೊದಲಿಗೆ ಈ ಎರಡು ನಗರಗಳಲ್ಲಿ ಸ್ಕೂಟರನ್ನು ಪ್ರಯೋಗಾತ್ಮಕವಾಗಿ ಓಡಿಸಿ, ಬಳಿಕ ಉಳಿದ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ ಎಂದಿದ್ದಾರೆ ಅವರು.

ರೆಟ್ರೊ ವಿನ್ಯಾಸ
ಈ ಸ್ಕೂಟರ್‌, ಹೊಸ ವಿನ್ಯಾಸದೊಂದಿಗೆ ಡಿಸೈನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ನಿಯೋ ರೆಟ್ರೋ ಮಾದರಿಯಲ್ಲಿ ಮೆಟಲ್‌ ಬಾಡಿ ಜತೆಗೆ ಸ್ಕೂಟರ್‌ಅನ್ನು ಸಿದ್ಧ ಪಡಿಸಲಾಗಿದೆ. 12 ಇಂಚಿನ ಅಲಾಯ್‌ ವೀಲ್‌ ಇದೆ. ಎಲ್‌ಇಡಿ ಹೆಡ್‌ಲೈಟ್‌ ಹಾಗೂ ಸಾಲಿಂಗ್‌ ಎಲ್‌ಇಡಿ ಬ್ಲಿಂಕರ್ಗಳಿವೆ. ರೆಟ್ರೋ ಸ್ಟೈಲ್‌ ನ ಡಿಜಿಟಲ್‌ ಮೀಟರ್‌ಅನ್ನು ಅಳವಡಿಸಲಾಗಿದೆ. ಈ ಬೈಕು, ಇತರೆ ಎಲೆಕ್ಟ್ರಿಕ್‌ ಬೈಕುಗಳಿಗಿಂತ ಭಿನ್ನವಾಗಿರಲಿದೆ.

ಫಾಸ್ಟ್‌ ಚಾರ್ಜಿಂಗ್‌
ಸದ್ಯದ ಮಾಹಿತಿಯ ಪ್ರಕಾರ, ಐಪಿ67 ಶ್ರೇಣಿಯ ಅತ್ಯಂತ ಹೆಚ್ಚು ತಾಂತ್ರಿಕತೆಯುಳ್ಳ ಲಿಥಿಯಂ-ಇಯಾನ್‌ ಬ್ಯಾಟರಿ, ಜತೆಗೆ ನಿಕ್ಕೆಲ್‌ ಕೋಬಾಲ್ಟ… ಅಲ್ಯೂಮಿನಿಯಂ ಆಕ್ಸೆçಡ್‌ ಸೆಲ್‌ಗ‌ಳನ್ನು ಬಳಕೆ ಮಾಡಲಾಗಿದೆ. ಇವುಗಳನ್ನು ಸ್ವಾಪ್‌ ಮಾಡಲು ಸಾಧ್ಯವಿಲ್ಲ. ಅಂದರೆ ಇವು ರಿಮೂವೆಬಲ್‌ ಬ್ಯಾಟರಿಗಳಲ್ಲ. ಸಂಸ್ಥೆ ಹೇಳಿಕೊಂಡಿರುವಂತೆ ಅತ್ಯಂತ ವೇಗವಾಗಿ ಚಾರ್ಜ್‌ ಆಗುವ ಗುಣ ಹೊಂದಿರುವುದೇ ಈ ಬ್ಯಾಟರಿಗಳ ಹೆಗ್ಗಳಿಕೆ. ಹಾಗೆಯೇ, ಇದರಲ್ಲಿ ಸ್ಪೋರ್ಟ್ಸ್ ಮತ್ತು ಎಕಾನಮಿ ಎಂಬ ಎರಡು ಮಾದರಿಗಳಿವೆ. ಎಕಾನಮಿಯಲ್ಲಿ ಒಮ್ಮೆ ಚಾರ್ಜ್‌ ಮಾಡಿದರೆ 100 ಕಿ.ಮೀ. ಓಡಿಸಬಹುದು ಎಂದು ಹೇಳಲಾಗುತ್ತಿದೆ.

ಬೆಲೆ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಜನವರಿಯಲ್ಲಿ ಪುಣೆಯಲ್ಲಿ ಲಾಂಚ್‌ ಮಾಡುವಾಗಲೇ ಬೆಲೆಯನ್ನೂ ಘೋಷಿಸುವುದಾಗಿ ಹೇಳಲಾಗಿದೆ. ಆದರೂ, 1.5 ಲಕ್ಷ ರೂ.ಗಳ ಒಳಗೆಯೇ ದರವನ್ನು ಫಿಕ್ಸ್ ಮಾಡಲಾಗುತ್ತದೆ ಎಂದು ರಾಜೀವ್‌ ಬಜಾಜ್‌ ಹೇಳಿದ್ದಾರೆ. ಮಾರುಕಟ್ಟೆಯ ತಜ್ಞರ ಪ್ರಕಾರ ಇದರ ಬೆಲೆ ಸುಮಾರು 1.25 ಲಕ್ಷ ರೂ.ಗಳಿರಬಹುದು.

ಸಿವಿಟಿ ಮಾದರಿಯಲ್ಲಿ ಡಟ್ಸನ್‌
ಇದು ಫೇಸ್‌ ಲಿಫ್ಟ್ ನ ಕಾಲ. ಈಗಾಗಲೇ ಹಲವಾರು ಕಾರುಗಳು ಮತ್ತೂಂದಿಷ್ಟು ಸವಲತ್ತುಗಳನ್ನು ತುಂಬಿಕೊಂಡು ಮಾರುಕಟ್ಟೆ ಪ್ರವೇಶಿಸಿವೆ. ಇದೀಗ ನಿಸ್ಸಾನ್‌ ಸರದಿ. ಇದು, ಡಟ್ಸನ್‌ ಗೊ ಮತ್ತು ಗೊ+ನಲ್ಲಿ ಸಿವಿಟಿ ಎಂಬ ಜಪಾನ್‌ ತಂತ್ರಜ್ಞಾನವನ್ನು ಸೇರಿಸಿಕೊಂಡು ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಸಿವಿಟಿ ತಂತ್ರಜ್ಞಾನವು ಎಎಂಟಿ ತಂತ್ರಜ್ಞಾನಕ್ಕಿಂತಲೂ ಚೆನ್ನಾಗಿದ್ದು, ಈ ರೇಂಜಿನ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿದೆ. ಸಿವಿಟಿಯಲ್ಲಿ ಕಡಿಮೆ ಪೆಟ್ರೋಲ್‌ ಬಳಕೆ ಮತ್ತು ಕಡಿಮೆ ಹೊಗೆ ಉಗುಳುತ್ತದೆ. ಹೀಗಾಗಿ ಡ್ರೈವರ್‌ಗೆ ಹೊಸ ರೀತಿಯ ಫೀಲ್‌ ಸಿಕ್ಕುತ್ತದೆ. ಜತೆಗೆ, 7 ಇಂಚಿನ ಇನ್ಫೋಟೈನ್‌ಮೆಂಟ್‌, ವಾಯ್ಸ ರೆಕಗ್ನೆ„ಸಿಂಗ್‌ ಸಿಸ್ಟಮ್‌(ಧ್ವನಿ ಪತ್ತೆ ಪಚ್ಚುವ ತಂತ್ರಜ್ಞಾನ), ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್‌ ಕಾರ್‌ ಪ್ಲೇ ಸೌಲಭ್ಯವೂ ಇದೆ. ಎಕ್ಸ್‌ ಶೋರೂಂ ಬೆಲೆ 5.94 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

-ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.