ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…


Team Udayavani, Aug 3, 2020, 2:58 PM IST

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

ಸಾಂದರ್ಭಿಕ ಚಿತ್ರ

ಬಹುತೇಕ ಸಿಟಿಜನರ ಪರ್ಸಿನಲ್ಲಿ ಕ್ರೆಡಿಟ್‌ ಕಾರ್ಡ್‌ ಸಾಮಾನ್ಯ ಅತಿಥಿ. ಎಷ್ಟೋ ಸಲ ಆ ಕಾರ್ಡ್‌ ಕಳೆದುಹೋದಾಗ ಜನ ಗಾಬರಿಗೆ ಬೀಳುತ್ತಾರೆ. ಈ ವೇಳೆ ಸುರಕ್ಷಾ ಕ್ರಮ ಅನುಸರಿಸಿದರಷ್ಟೇ ಕಾರ್ಡಿನ ಹಣಕ್ಕೆ ರಕ್ಷಣೆ ಸಿಗುತ್ತೆ… ಕಾರ್ಡು ರಕ್ಷಿಸಿ!

ನಗರಪ್ರದೇಶದಲ್ಲಿ ದುಡಿಯುತ್ತಿರುವ ಮಂದಿಯನ್ನೇ
ಹೆಚ್ಚಾಗಿ ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಟಾರ್ಗೆಟ್‌ ಮಾಡುತ್ತವೆ. ಅವರಿಗೆ ಮೇಲಿಂದ ಮೇಲೆ ಕರೆಮಾಡಿ ಒಂದಿಲ್ಲೊಂದು ಆಕರ್ಷಕ ಸವಲತ್ತಿನ ಆಮಿಷ ಒಡ್ಡಿ, ಕ್ರೆಡಿಟ್‌ ಕಾರ್ಡ್‌ ಬಳಕೆದಾರರನ್ನಾಗಿ ಮಾಡಿಬಿಡುತ್ತವೆ. ಕೆಲವರ ಪರ್ಸುಗಳನ್ನು, ಹ್ಯಾಂಡ್‌ ಬ್ಯಾಗುಗಳನ್ನು ತೆರೆದರೆ, ಅಲ್ಲಿ ಮೂರು- ನಾಲ್ಕು ಕ್ರೆಡಿಟ್‌ ಕಾರ್ಡುಗಳನ್ನು ಕಾಣಬಹುದು. ಮಾಲ್‌ ಗಳಲ್ಲಿ, ಶೋರೂಂಗಳ ಶಾಪಿಂಗ್‌ ಕೌಂಟರ್‌ ಗಳಲ್ಲಿ ಬಿಲ್ಲನ್ನು ಸ್ಪ್ಲಿಟ್‌ ಮಾಡಿ, ಹಲವು ಕ್ರೆಡಿಟ್‌ ಕಾರ್ಡುಗಳನ್ನು ಸ್ವೆ„ಪ್‌ ಮಾಡುವುದನ್ನು ನೋಡಿರಬಹುದು. ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡುಗಳಿದ್ದಾಗ, ಅದನ್ನು ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಕ್ರೆಡಿಟ್‌ ಕಾರ್ಡನ್ನು ದುರುಪಯೋಪಡಿಸಿಕೊಳ್ಳುವ ರಿಸ್ಕ್ ಇರುವುದರಿಂದ, ಆತಂಕ ಸಹಜ. ಕ್ರೆಡಿಟ್‌ ಕಾರ್ಡ್‌ ಕಳುವಾದ ಸಮಯದಲ್ಲಿ ಈ ಕೆಳಕಂಡ ಸೂಚನೆಗಳನ್ನು ಪಾಲಿಸಿ.

1 ಕಾರ್ಡ್‌ ಒದಗಿಸಿದ ಸಂಸ್ಥೆಯನ್ನು ಸಂಪರ್ಕಿಸಿ 
ಕ್ರೆಡಿಟ್‌ ಕಾರ್ಡ್‌ ಕಳುವಾಗಿದೆ ಎಂದು ತಿಳಿದು ಬಂದ ತಕ್ಷಣ, ಕೈಗೊಳ್ಳಬೇಕಾದ ಮೊದಲ ನಡೆ ಇದು. ಕಾರ್ಡ್‌ ನೀಡಿದ ಸಂಸ್ಥೆಗೆ ಕರೆ ಮಾಡಿ, ಕಳುವಾಗಿರುವ ವಿಚಾರ ತಿಳಿಸಬೇಕು. ಕ್ರೆಡಿಟ್‌ ಕಾರ್ಡ್‌ ಸಿಕ್ಕವರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಕ್ಕೆ ಮುಂಚೆಯೇ ಹಣಕಾಸು ಸಂಸ್ಥೆಗೆ ಸುದ್ದಿ ಮುಟ್ಟಿಸಿದರೆ, ಒಂದು ವೇಳೆ ಕ್ರೆಡಿಟ್‌ ಕಾರ್ಡ್‌ ಅನ್ನು ದುರುಪಯೋಗ ಪಡಿಸಿಕೊಂಡರೂ ಕಾರ್ಡ್‌ ಮಾಲೀಕರನ್ನು ಹೊಣೆಗಾರರನ್ನಾಗಿಸುವುದಿಲ್ಲ. ಕರೆ
ಮಾಡುವಾಗ ಅಕೌಂಟ್‌ ನಂಬರ್‌, ಕಳವಾದ ದಿನಾಂಕ, ಈ ಹಿಂದೆ ಕ್ರೆಡಿಟ್‌ ಕಾರ್ಡ್‌ ಬಳಸಿದ ಮೊತ್ತವನ್ನು ತಿಳಿದುಕೊಂಡಿರಿ.

2 ಕಾರ್ಡ್‌ ಲಾಕ್‌
ಕ್ರೆಡಿಟ್‌ ಕಾರ್ಡ್‌ ಕಳುವಾದ ಸಂದರ್ಭದಲ್ಲಿ, ಆದಷ್ಟು ಬೇಗನೆ ಕ್ರೆಡಿಟ್‌ ಕಾರ್ಡನ್ನು ಲಾಕ್‌ ಮಾಡಿಸಬೇಕು. ಇದರಿಂದ ಕ್ರೆಡಿಟ್‌ ಕಾರ್ಡ್‌ ಅನ್ನು ಯಾರೂ ಬಳಸಲು
ಸಾಧ್ಯವಾಗುವುದಿಲ್ಲ. ಹಲವು ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು, ಕ್ರೆಡಿಟ್‌ ಕಾರ್ಡನ್ನು ಮೊಬೈಲ್‌ ಆ್ಯಪ್‌/ ಜಾಲತಾಣ/ ಫೋನ್‌ ಕರೆಯ ಮೂಲಕ ಲಾಕ್‌ ಮಾಡುವ,
ಇಲ್ಲವೇ ತಾತ್ಕಾಲಿಕವಾಗಿ ನಿರುಪಯುಕ್ತಗೊಳಿಸುವ ಸವಲತ್ತನ್ನು ಒದಗಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಡ್‌ ಸ್ಟೇಟ್‌ಮೆಂಟ್‌ ಅನ್ನು ಪರಿಶೀಲಿಸುತ್ತಾ  ಇರಬೇಕಾಗುತ್ತದೆ. ಅನಧಿಕೃತ ವೆಚ್ಚ ಕಂಡುಬಂದರೆ, ತಕ್ಷಣವೇ ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳಿಗೆ ವಿಷಯ ತಿಳಿಸಬೇಕು.

3 ಹೊಸ ಕಾರ್ಡ್‌ ನೀಡಿಕೆ
ಕಾರ್ಡ್‌ ಕಳವಾದ ವಿಚಾರವನ್ನು ಸಂಸ್ಥೆಗೆ ತಿಳಿಸಿದ ನಂತರ ಮತ್ತು ಕಾರ್ಡ್‌ ಬ್ಲಾಕ್‌ ಆದ ನಂತರ, ಸಂಸ್ಥೆ ಪ್ರಕರಣವನ್ನು ಪರಿಶೀಲಿಸುತ್ತದೆ. ಕಾರ್ಡ್‌
ಬದಲಾಯಿಸಲು ಅಗತ್ಯ ನಡೆಗಳನ್ನು ಕೈಗೊಳ್ಳುತ್ತದೆ. ಸಾಮಾನ್ಯವಾಗಿ, ಸಂಸ್ಥೆ ಹಳೆಯ ಕಾರ್ಡನ್ನು ಕ್ಯಾನ್ಸಲ್‌ ಮಾಡಿ ಹೊಸತನ್ನು ನೀಡುತ್ತದೆ. ಇದರಿಂದ ಕ್ರೆಡಿಟ್‌ ಸ್ಕೋರ್‌ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎನ್ನುವ ಆತಂಕ ಬೇಡ. ಕ್ರೆಡಿಟ್‌ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸುವುದರ ಮೇಲೆ ಮಾತ್ರ ಕ್ರೆಡಿಟ್‌ ಸ್ಕೋರ್‌ ನಿರ್ಧಾರ ವಾಗುತ್ತದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.