ಆಲೆಮನೆಯ ಕಾಸ್‌ಬಾತ್‌!


Team Udayavani, Jan 27, 2020, 6:14 AM IST

alemaneya

ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲ… ಇದು ಆಲೆಮನೆಗಳಲ್ಲಿ ಕಂಡುಬರುವ ದೃಶ್ಯ. ಅದರ ಇತ್ಯೋಪರಿಯನ್ನು ಲೇಖಕರಿಲ್ಲಿ ಹಂಚಿಕೊಂಡಿದ್ದಾರೆ

ಅದೊಂದು ಕಾಲವಿತ್ತು. ಡಿಸೆಂಬರ್‌-ಜನವರಿ ತಿಂಗಳು ಸಮೀಪಿಸಿದರೆ ಸಾಕು, ಗ್ರಾಮೀಣ ಭಾಗದಲ್ಲಿ ಜೋನಿ ಬೆಲ್ಲದ ಸುವಾಸನೆ ಬೀರುತ್ತಿದ್ದ “ಆಲೆಮನೆ’ಗಳು ಕಾಣಸಿಗುತ್ತಿದ್ದವು. ಕಬ್ಬಿನ ಗದ್ದೆಯ ಪಾರ್ಶ್ವದಲ್ಲಿ ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲ…

ಹೋಯ್‌ ಹೋಯ್‌ ಎಂದು ಕೋಣ ಇಲ್ಲವೇ ಎತ್ತುಗಳನ್ನು ಹೊಡೆಯುತ್ತಾ ಕಬ್ಬನ್ನು ಅರೆಯುವ ಮಂಕಿಕಾರರು, ಕಬ್ಬಿನ ರಾಶಿಯ ಹಿಂದೆ ಕಬ್ಬನ್ನು ಸವಿಯುತ್ತಾ ಕುಳಿತಿರುವ ಪುಟ್ಟ ಪುಟ್ಟ ಮಕ್ಕಳು… ಇಂತಹ ಹತ್ತು ಹಲವು ದೃಶ್ಯಗಳು ಪ್ರತಿಹಳ್ಳಿಯಲ್ಲೂ ಕಂಡುಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಿಂದ ಗ್ರಾಮೀಣ ಭಾಗದ ಇಂತಹ ದೃಶ್ಯಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.

ತಗುಲುವ ವೆಚ್ಚ: ಆಲೆಮನೆ ಕಟ್ಟಲು ತಗಲುವ ವೆಚ್ಚ ಕಡಿಮೆ. ಏಕೆಂದರೆ ಚಪ್ಪರವನ್ನು ಸೋಗೆ ಅಥವಾ ತೆಂಗಿನ ಗರಿಯಿಂದ ನಿರ್ಮಿಸುತ್ತಾರೆ. 2-3 ತಿಂಗಳುಗಳ ಕಾಲ ಈ ಆಲೆಮನೆ ನಡೆಯುತ್ತದೆ. ಕಬ್ಬನ್ನು ಅರೆಯುವವರಿಗೆ, ಕಬ್ಬನ್ನು ಕೊಯ್ಯುವವರಿಗೆ, ಆಲೆಮನೆಯಲ್ಲಿ ಸಿದ್ಧಪಡಿಸಿದ ಬೆಲ್ಲ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ಸಮಯದಲ್ಲಿ ವಾಹನದ ಖರ್ಚು, ಇಂದಿನ ದಿನಗಳಲ್ಲಿ ಗ್ಯಾಸ್‌ ದೀಪ ಅಥವಾ ಚಿಮಣಿ ದೀಪಗಳು ಕಡಿಮೆಯಾಗಿರುವುದರಿಂದ ರಾತ್ರಿಯ ಸಮಯದಲ್ಲಿ ವಿದ್ಯುತ್‌ ಬೆಳಕು ಅನಿವಾರ್ಯ. ಹಾಗಾಗಿ ವಿದ್ಯುತ್‌ ಬಿಲ್‌ ಇವು ಆಲೆಮನೆಯ ಮುಖ್ಯ ಖರ್ಚಾಗಿವೆ. ಇವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ.

ಇಲ್ಲಿನ ಖಾದ್ಯಗಳಿಗೆ ಬೇಡಿಕೆ: ಗ್ರಾಮೀಣ ಭಾಗದ ಜನರು ಕಬ್ಬಿನ ಹಾಲಿನಿಂದ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲು ಎತ್ತಿದ ಕೈ. ಹಳ್ಳಿಗಳಲ್ಲಿ ಆಲೆಮನೆ ಪ್ರಾರಂಭವಾದ ತಕ್ಷಣ ಮಹಿಳೆಯರು ಆಲೆಮನೆಗೆ ತೆರಳಿ ಪಾತ್ರೆಯಲ್ಲಿ ಹಾಲನ್ನು ತುಂಬಿಕೊಂಡು ಬರುವುದಲ್ಲದೇ ಹಾಲಿನಿಂದ ವಿವಿಧ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ.

ಈ ಸಮಯದಲ್ಲಿ ಗ್ರಾಮೀಣ ಭಾಗದ ಬಹುತೇಕರ ಮನೆಗಳಲ್ಲಿ ಆಲೆಮನೆ ಪ್ರಾರಂಭವಾದಾಗಿನಿಂದ ಮುಕ್ತಾಯದ ತನಕವೂ ಪ್ರತಿನಿತ್ಯ ಬೆಳಗ್ಗೆ ಉಪಹಾರಕ್ಕೆ ಕಬ್ಬಿನ ಹಾಲಿನ ದೋಸೆ, ಇಡ್ಲಿ, ತೊಡದೇವು ಇಂತಹ ತಿಂಡಿಗಳೇ ಆಗಿರುತ್ತದೆ. ಕಬ್ಬಿನ ಹಾಲಿನ ಖಾದ್ಯಗಳಿಗೆ ಪಟ್ಟಣಗಳಲ್ಲೂ ಉತ್ತಮ ಬೇಡಿಕೆ ಇದ್ದು ಸೂಕ್ತ ಮಾರುಕಟ್ಟೆ ದೊರೆಯಬೇಕಿದೆ. ಅಲ್ಲದೆ ಜೋನಿ ಬೆಲ್ಲದಲ್ಲಿ ಬಾಳೆಯ ದಿಂಡನ್ನು ಶೇಖರಿಸಿಡುವ ಪದ್ಧತಿ ಕೂಡ ಇದೆ.

ಇಲ್ಲಿ ಮುಖ್ಯವಾಗಿ ಬೆಲ್ಲದ ಅಚ್ಚು, ಜೋನಿ ಬೆಲ್ಲ ಸಿದ್ಧಪಡಿಸುತ್ತಾರೆ. ಇವುಗಳನ್ನು ಕೆಲವು ವ್ಯಾಪಾರಸ್ಥರು ನೇರವಾಗಿ ಆಲೆಮನೆ ಸ್ಥಳಕ್ಕೆ ಬಂದು ಖರೀದಿಸಿದರೆ, ಕೆಲವು ವ್ಯಾಪಾರಿಗಳಿಗೆ ಆಲೆಮನೆಯ ಮಾಲೀಕರು ತಲುಪಿಸುತ್ತಾರೆ. ಇವುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಏರುಗತಿಯಲ್ಲಿದೆ. ಅಲ್ಲದೆ ಕೆಲವು ಕಾರ್ಖಾನೆಗಳಲ್ಲಿ ಬೆಲ್ಲಕ್ಕೆ ಸಕ್ಕರೆ ಬೆರೆಸುವುದರಿಂದ 25 ಕೆ.ಜಿ. ತೂಕದ ಒಂದು ಕ್ಯಾನ್‌ ಆಲೆಮನೆ ಬೆಲ್ಲಕ್ಕೆ ರೂ.900 ರಿಂದ 2000 ರೂ. ತನಕವೂ ದರವಿದೆ.

* ಎಂ. ಎಸ್‌. ಶೋಭಿತ್‌

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.