ಮಾಸ್ತಿ ಉಡುಪಿ ಹೋಟೆಲ್‌ನ ಚಕ್ಕುಲಿ, ವಡೆ ರುಚಿ ತಿಂದವನೇ ಬಲ್ಲ


Team Udayavani, Jun 17, 2019, 5:00 AM IST

hotel-(2)

ಚಕ್ಕುಲಿ, ನಿಪ್ಪಟ್ಟು ಇವೆಲ್ಲ ಬೇಕರಿ, ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದು ಹೋಟೆಲ್‌ ಚಕ್ಕುಲಿ, ನಿಪ್ಪಟ್ಟು, ಮಸಾಲೆ ವಡೆಯಿಂದಲೇ ಫೇಮಸ್ಸಾಗಿದೆ. ಇತರೆ ತಿಂಡಿಗಳನ್ನೂ ಮಾಡಲಾಗುತ್ತದೆಯಾದ್ರೂ

ಬಹಳಷ್ಟು ಮಂದಿ ಚಕ್ಕುಲಿ, ಮಸಾಲೆ ವಡೆ ತಿನ್ನುವುದಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ಇಂತಹ ಹೋಟೆಲ್‌ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಮಾಸ್ತಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ಬಂದು ಇಲ್ಲಿ ಉಡುಪಿ ಹೋಟೆಲ್‌ ಎಲ್ಲಿ ಅಂತ ಕೇಳಿದರೆ ತೋರಿಸುತ್ತಾರೆ.


ಮೂಲತಃ ಉಡುಪಿಯವರಾದ ಕೇಶವರಾವ್‌ ಕಾಮತ್‌, ಈ ಹೋಟೆಲ್‌ನ ಸಂಸ್ಥಾಪಕರು. ಮದುವೆಯಾದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು, ನಂತರ ಪತ್ನಿ ಶಾರದಾ ಕಾಮತ್‌ರ ಸಹಕಾರದೊಂದಿಗೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಚಿಕ್ಕದಾಗಿ ಕ್ಯಾಂಟೀನ್‌ ಆರಂಭಿಸಿದ್ದರು. ಕೆಲ ವರ್ಷಗಳ ನಂತರ ಮಾಸ್ತಿಯಲ್ಲಿ ಇದ್ದ ಅಯ್ಯಂಗಾರ್‌ ಬೇಕರಿ ಮಾಲೀಕರ ಪರಿಚಯವಾಗಿ, ಅವರು ಇಲ್ಲೇ ಬಂದು ಹೋಟೆಲ್‌ ಪ್ರಾರಂಭಿಸುವಂತೆ ಹೇಳಿದ್ರಂತೆ. ಅದರಂತೆ 1956ರಲ್ಲಿ ಮಾಸ್ತಿಗೆ ಬಂದ ಕೇಶವರಾವ್‌, ಗ್ರಾಮದ ಸರ್ಕಲ್‌ನಲ್ಲಿ ಹೆಂಚಿನ ಮನೆಯನ್ನು ಬಾಡಿಗೆಗೆ ಪಡೆದು ಹೋಟೆಲ್‌ ಪ್ರಾರಂಭಿಸಿದರು. 25 ವರ್ಷಗಳ ನಂತರ ಬಸ್‌ ನಿಲ್ದಾಣದಲ್ಲಿ ಗುಡಿಸಲು ಹಾಕಿಕೊಂಡು, ಅದಕ್ಕೆ ಗೀತಾ ಹೋಟೆಲ್‌ ಎಂದು ನಾಮಕರಣ ಮಾಡಿದರು. 18 ವರ್ಷ ಗುಡಿಸಲಿನಲ್ಲೇ ಹೋಟೆಲ್‌ ನಡೆಸಿದ ನಂತರ ಪೊಲೀಸ್‌ ಠಾಣೆ ಎದುರು ಸ್ವಂತ ಮನೆ ಕಟ್ಟಿಕೊಂಡು ಅದರಲ್ಲೇ ಹೋಟೆಲ್‌ ಮುಂದುವರಿಸಿದರು. ಸದ್ಯ ಇವರ ಪುತ್ರ ಶಿವಪ್ರಸಾದ್‌ ಕಾಮತ್‌, ಪತ್ನಿ ದಿವ್ಯಾ, ತಾಯಿ ಶಾರದಾ ಕಾಮತ್‌ ಸಹಕಾರದೊಂದಿಗೆ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ವಿಶೇಷ ತಿಂಡಿ ಚಕ್ಕುಲಿ, ಮಸಾಲ್‌ ವಡೆ:
ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಚಕ್ಕುಲಿ, ನಿಪ್ಪಟ್ಟಿಗೂ ಈ ಉಡುಪಿ ಹೋಟೆಲ್‌ನಲ್ಲಿ ಮಾಡುವ ಚಕ್ಕುಲಿಗೂ ವ್ಯತ್ಯಾಸವಿದೆ. ಬೆಣ್ಣೆ, ತುಪ್ಪದಲ್ಲಿ ಹಿಟ್ಟನ್ನು ಕಲಿಸಿ ಸ್ಥಳದಲ್ಲೇ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಮಾಡಿಕೊಡಲಾಗುತ್ತದೆ. ಮಸಾಲೆ ವಡೆಯ ರುಚಿಯೂ ಹೆಚ್ಚಿರುತ್ತದೆ. ಚಕ್ಕುಲಿ 5 ರೂ., ಮಸಾಲೆ ವಡೆಗೆ 10 ರೂ. ನಿಗದಿ ಮಾಡಲಾಗಿದೆ. ಬಿಸಿ ಬಿಸಿ ಚಕ್ಕುಲಿ, ವಡೆಯನ್ನು ಶುಂಠಿ ಟೀ, ಕಾಫಿ ಜೊತೆ ತಿನ್ನೊಂದು ಒಂದು ವಿಶೇಷ.

ಇತರೆ ತಿಂಡಿ:
ಚಕ್ಕುಲಿ, ವಡೆ, ನಿಪ್ಪಟ್ಟಿನಂತೆ ಈ ಹೋಟೆಲ್‌ನ ರವಾ ಇಡ್ಲಿಯನ್ನೂ ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಇಡ್ಲಿ, ವಡೆ, ಪೂರಿ, ದೋಸೆ ಜೊತೆ ಕಡ್ಲೆ ಚಟ್ನಿ ಅಥವಾ ಪುದೀನಾ, ಕೊತ್ತಂಬರಿ ಸೊಪ್ಪಿನ ಚಟ್ನಿ, ಸಾಂಬಾರ್‌, ಸಾಗು ಕೊಡಲಾಗುತ್ತದೆ. ಮಾಸ್ತಿ ಇನ್ನೂ ಹಳ್ಳಿಯಾಗಿಯೇ ಉಳಿದಿರುವ ಕಾರಣ ದರವೂ ಕಡಿಮೆ ಇದೆ. ನಾಲ್ಕು ಇಡ್ಲಿ ಎರಡು ವಡೆಗೆ 30 ರೂ., ರೈಸ್‌ಬಾತ್‌ ಜೊತೆ ಎರಡು ವಡೆಗೆ 30 ರೂ., ಮೂರು ದೋಸೆ(ಸಟ್‌) 2 ವಡೆ ಸೇರಿ 25 ರೂ. ನಿಗದಿ ಮಾಡಲಾಗಿದೆ. ಮಧ್ಯಾಹ್ನ ಅನ್ನ ಸಾಂಬಾರ್‌, ಮೊಸರನ್ನ ಸಿಗುತ್ತದೆ. ಜೊತೆಗೆ ವಡೆ ತೆಗೆದುಕೊಂಡರೆ 30 ರೂ. ತೆಗೆದುಕೊಳ್ಳಲಾಗುತ್ತದೆ.

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ಸಂಜೆ 5 ರವರೆಗೆ, ವಾರಪೂರ್ತಿ ತೆರೆದಿರುತ್ತೆ

ಹೋಟೆಲ್‌ ವಿಳಾಸ:
ದಿನ್ನಹಳ್ಳಿ ಮುಖ್ಯರಸ್ತೆ, ಪೊಲೀಸ್‌ ಸ್ಟೇಷನ್‌ ಎದುರು, ಮಾಸ್ತಿ ಬಸ್‌ ನಿಲ್ದಾಣ ಸಮೀಪ, ಮಾಸ್ತಿ.

– ಭೋಗೇಶ ಆರ್‌. ಮೇಲುಕುಂಟೆ
– ಫೋಟೋ ಕೃಪೆ: ಎಂ.ಮೂರ್ತಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.