ಹೀರೋ ಇಲ್ಲದ ಒಂದು ದಿನ!


Team Udayavani, Oct 3, 2017, 1:11 PM IST

jo5.jpg

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಫ‌ಸ್ಟ್‌ ಕ್ಲಾಸ್‌ ಮಾರ್ಕ್ಸ್ ತೆಗೆಯಲು ಕಾರಣವಾಗಿದ್ದ ಪೆನ್‌ ಅದು. ಅದು ಇದ್ದಕ್ಕಿದ್ದಂತೆಯೇ ತರಗತಿಯಲ್ಲಿ ಕಣ್ಮರೆಯಾಯಿತು. ನನಗೆ ಆಗ ಶಾಲೆಯಲ್ಲಿದ್ದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಶುರುವಾಯಿತು…

23 ವರ್ಷಗಳ ಹಿಂದಿನ ಮಾತು. ನಾನು 7ನೇ ತರಗತಿಯಲ್ಲಿ ಫಸ್ಟ್‌ ಕ್ಲಾಸ್‌ ಬಂದಿದ್ದೆನಾದ್ರೂ ನಮ್ಮಪ್ಪನವರಿಗೆ ಅದ್ಯಾಕೋ ಅವು ಕಡಿಮೆ ಅನ್ಸಿದೊ, ಇಲ್ಲಾ ನನ್ನ ಕೆಪಾಸಿಟಿ ಅದಕ್ಕೂ ಮೀರಿ ಇದೆ ಅಂತಾ “ತಪ್ಪಾಗಿ’ ಭಾವಿಸಿದ್ರೋ ಗೊತ್ತಿಲ್ಲ. ಹೈಸ್ಕೂಲ್‌ಗೆ ಮಾತ್ರ “ಸರ್ಕಾರಿ ಶಾಲೆ ಬೇಡ. ಕಾನ್ವೆಂಟ್‌ಗೆ ಹಾಕಿದ್ರೆ ಸ್ವಲ್ಪ ಶಿಸ್ತು ಕಲೀತಾನೆ’ ಅಂತ ನನ್ನೆದುರಿಗೆ ಒಮ್ಮೆ, ಕುಟುಂಬದವರ ಮುಂದೆ ಮತ್ತೂಮ್ಮೆ ಹೇಳಿ ತಂದು ಸಿರಾದಲ್ಲಿ ಸೇರಿಸಿದ್ರು. ಆ ಕಾನ್ವೆಂಟ್‌ನಲ್ಲೋ, ನಾವು ಇದುವರೆಗೂ ಓದಿದ್ದ ವಾತಾವರಣಕ್ಕೆ ವಿರುದ್ಧವಾದ ಪರಿಸರ. ಅವರು ಹೇಳಿದ್ದನ್ನೇ ನಾವು ಮಾಡಬೇಕು. ಅಲ್ಲಿ ನಮ್ಮ ಇಷ್ಟ ಅನ್ನೋದಿರಲಿಲ್ಲ, ಬದಲಿಗೆ ಅವರಿಷ್ಟವೇ ನಮ್ಮ ಇಷ್ಟ ಆಗಬೇಕಿತ್ತು. 

ಪ್ರಾರಂಭದಲ್ಲಿಯೇ ನಮಗೆ ಅರುಣ್‌ ಗೋಲ್ಡ್‌ ನೋಟ್‌ಬುಕ್‌ ಹಾಗೂ ಹೀರೋ (ಇಂಕ್‌) ಪೆನ್‌ನಲ್ಲೇ ಬರೆಯಬೇಕೆಂಬ ಅಲಿಖೀತ ನಿಯಮವೊಂದನ್ನು ಹೇರಿದ್ದರು. ಅವರ ನಿಯಮಗಳಿಂದ ವಿನಾಯಿತಿ ಸಿಗೋದಿಲ್ಲ ಅಂತ ಅರಿವಾದಾಗ ಅವುಗಳನ್ನೇ ಖರೀದಿಸಿದ್ವಿ. ಪೆನ್ನಿಗೆ ಕಪ್ಪು ಇಂಕನ್ನೇ ಬಳಸಬೇಕಾಗಿತ್ತು. ಎಲ್ಲರೂ ಅದನ್ನೇ ಬಳಸುವಾಗ ನಾನು ಮಾತ್ರ ಏಕೆ ರೋದಿಸಬೇಕೆಂದು ಸುಮ್ಮನೇ ಪಾಲಿಸಿದೆ. ಅದರಲ್ಲಿ ಬರೆಯುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡೆ. ಕಾಲ ಕಳೆದಂತೆ ಆ ಹೀರೋ ಪೆನ್ನು ನನಗೆ ಎಷ್ಟು ಆಪ್ತವಾಯಿತೆಂದರೆ ಯಾರಾದರೂ ಬರೆಯಲು ಕೇಳಿದರೆ ಅದನ್ನು ಕ್ಷಣಕಾಲ ಕೊಡಲೂ ನಾನು ಹಿಂಜರಿಯುತ್ತಿದ್ದೆ. ನನ್ನ ಕ್ಲೋಸ್‌ ಫ್ರೆಂಡುಗಳಿಗೂ ಕೊಡುತ್ತಿರಲಿಲ್ಲ! 

ಶಾಲೆಯಲ್ಲಿ ನನಗೆ ಜೊತೆಯಾಗಿದ್ದ ಆ ಹೀರೋ ಪೆನ್ನನ್ನು ದೊಡ್ಡವನಾದ ಮೇಲೂ ಜತನದಿಂದ ಕಾಪಾಡಿಕೊಂಡು ಬಂದಿದ್ದೆ. ಮುಂದೆ 2002ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಕನಾಗಿ ಆಯ್ಕೆಯಾದ ಮೇಲೂ ನಾನು ಅದೇ ಪೆನ್ನಿನಲ್ಲಿಯೇ ನನ್ನ ದಿನಚರಿ ಬರೆಯುತ್ತಿದ್ದೆ. ಯಾವುದೇ ಬೇರೆಯ ಪೆನ್‌ ಬಳಸುತ್ತಿರಲಿಲ್ಲ.     ಅಷ್ಟೇ ಅಲ್ಲ, ನೀಲಿ ಕಲರ್‌ನಲ್ಲಿ ಬರೆಯುತ್ತಲೇ ಇರಲಿಲ್ಲ. ಸಹೋದ್ಯೋಗಿ ಶಿಕ್ಷಕರೆಲ್ಲಾ ನನ್ನ ಮತ್ತು ಆ ಪೆನ್ನಿನ ನಂಟಿನ ಬಗ್ಗೆ ತಿಳಿದು ಆಶ್ಚರ್ಯಪಡುತ್ತಿದ್ದರು. ತರಗತಿಯಲ್ಲಿ ಸಮಯ ಸಿಕ್ಕಾಗಲೆಲ್ಲಾ ನನ್ನ ವಿದ್ಯಾರ್ಥಿಗಳಿಗೂ ಅದರ ಬಗ್ಗೆ ಹೇಳುತ್ತಿದ್ದೆ. 

ಅದೊಂದು ದಿನ ಇದ್ದಕ್ಕಿದ್ದಂತೆ ಶಾಲೆಯಲ್ಲಿಟ್ಟಿದ್ದ ಪೆನ್ನು ಕಾಣೆಯಾಯ್ತು. ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಪೆನ್ನು ಕೊಡೋದಿಲ್ಲ ಎಂಬ ಕಾರಣಕ್ಕಾಗಿಯೇ ಶಿಕ್ಷಕರ್ಯಾರಾದರೂ ಎತ್ತಿಟ್ಟಿರಬೇಕೆಂಬ ಗುಮಾನಿಯಿಂದ ಎಲ್ಲರಲ್ಲೂ ವಿಚಾರಿಸಿದೆ. ಅವರೆಲ್ಲರೂ “ನೀವು ಪೆನ್ನನ್ನು ಕಳೆದುಕೊಂಡಿರಾ?’ ಎಂದು ಅಚ್ಚರಿ ಪಟ್ಟರೇ ವಿನಾ ಪೆನ್ನಿನ ಸುಳಿವು ಸಿಗಲಿಲ್ಲ. ಕೊನೇ ಪ್ರಯತ್ನವೆಂಬಂತೆ ಶಾಲಾ ಕೊಠಡಿಯೊಳಗೆ ಹೋಗಿ ಯಾರಾದ್ರೂ ನನ್ನ ಹೀರೋ ಪೆನ್‌ ತಗೊಂಡ್ರೇನೋ ಎಂದು ಮಕ್ಕಳನ್ನೂ ಕೇಳಿದ್ದಾಯ್ತು.

ಒಂದಿಬ್ಬರು ತರಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಬೈದು, ಎಚ್ಚರಿಸಿದ್ದೂ ಆಯ್ತು. ಅವರಿಂದಲೂ ನನ್ನ ಪೆನ್ನಿನ ಸುಳಿವು ಸಿಗಲಿಲ್ಲ.  ಹೈಸ್ಕೂಲಿನಲ್ಲಿದ್ದಾಗಿನಿಂದಲೂ ಬಳಸುತ್ತಿದ್ದ ಪೆನ್ನು ಅದು! ಅಲ್ಲಿಂದ ಬೇರೆ ಪೆನ್ನಿನಲ್ಲಿ ಪರೀಕ್ಷೆ ಬರೆದ ನೆನಪೇ ನನಗಿರಲಿಲ್ಲ. ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿ.ಯಲ್ಲಿ ಫಸ್ಟ್‌ ಕ್ಲಾಸ್‌ ಮಾರ್ಕ್ಸ್ ಕೊಡಿಸಿದ್ದ ಪೆನ್ನದು. ಅದರ ಬಗ್ಗೆ ಎಲ್ಲರ ಬಳಿ ಹೇಳಿದ್ದೇ ತಪ್ಪಾಯ್ತು! ಯಾರೋ ಬೇಕೆಂದೇ ಅಪಹರಿಸಿದ್ದಾರೆ ಎಂದೆಲ್ಲಾ ಚಡಪಡಿಸುತ್ತಾ ಹುಸಿ ಮುನಿಸಿನಿಂದಾಗಿ ಕರ್ತವ್ಯ ಮುಗಿಸಿ ಮನೆಗೆ ಬಂದೆ. ಏನಾಶ್ಚರ್ಯ!

ನನ್ನ ಹೀರೋ ಪೆನ್ನು ತನ್ನ ಮಾಮೂಲಿ ಸ್ಥಳದಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿತ್ತು. ಸುಮ್ಮನೆ ಎಲ್ಲರ ಮೇಲೂ ರೇಗಾಡಿದೆನಲ್ಲ ಅನ್ನಿಸಿದಾಗ ನಗು ಬಂತು. ಮರುದಿನ ಶಾಲೆಯಲ್ಲಿ ವಿಷಯ ತಿಳಿಸಿ, “ನಿನ್ನೆ ವಿನಾಕಾರಣ ಎಲ್ಲರನ್ನೂ ಅನುಮಾನದಿಂದ ನೋಡಿದೆ. ದಯವಿಟ್ಟು ಕ್ಷಮಿಸಿ’ ಎಂದೆ ಪೆನ್ನು ನನ್ನ ಬಳಿಯೇ ಇರುವುದು ತಿಳಿದು ಅವರೂ ಖುಷಿಪಟ್ಟರು. ದಶಕಗಳ ಕಾಲ ನನ್ನ ಒಡನಾಡಿಯಾಗಿದ್ದ ಆ ಪೆನ್ನು ಈಗಲೂ ನನ್ನ ಬಳಿಯಿದೆ. ಅದನ್ನು ದಿನಕ್ಕೊಮ್ಮೆ ನೋಡದಿದ್ದರೂ ನನಗೆ ನಿದ್ರೆ ಬರೋದಿಲ್ಲ.

* ಪ. ನಾ. ಹಳ್ಳಿ ಹರೀಶ್‌ ಕುಮಾರ್‌

ಟಾಪ್ ನ್ಯೂಸ್

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.