ಬಾಲ್ಯದ ಬಂಗಾರದ ಕ್ಷಣಗಳು ಮತ್ತೆ ಸಿಗಲಿ


Team Udayavani, Aug 11, 2020, 1:52 PM IST

ಬಾಲ್ಯದ ಬಂಗಾರದ ಕ್ಷಣಗಳು ಮತ್ತೆ ಸಿಗಲಿ

ಸಾಂದರ್ಭಿಕ ಚಿತ್ರ

ಢಣ..ಢಣ… ಘಂಟೆ ಬಾರಿಸುವ ಮೊದಲೇ ಶಾಲೆಯ ಬಾಗಿಲು ತೆರೆದಿರುತ್ತಿತ್ತು. ನಾವು ಹಾಗೂ ನನ್ನಂಥ ಹಲವರು ಅವ್ವ ಕೊಟ್ಟ ಬುತ್ತಿ ಗಂಟನ್ನು ಕೈಲಿ ಹಿಡಿದು, ಪಾಟಿಚೀಲವನ್ನು ಬೆನ್ನಿಗೆ ಏರಿಸಿಕೊಂಡು ಸಂಭ್ರಮದಿಂದ ಶಾಲೆಗೆ ಓಡುತ್ತಿದ್ದೆವು. ಅಕ್ಕಾವ್ರು, ಮಾಸ್ತರ್ರು ಅ…ಆ…ಇ…ಈ.. ಕಲಿಸುತ್ತಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆಯೇ ಊಟಕ್ಕೆ ಬಿಡುತ್ತಿದ್ದರು.

ಸಂಜೆ ಆಟದ ಸಮಯದಲ್ಲಿ ರಾಮು, ಶಾಮ, ಮಲ್ಲು , ಕೆಂಚಪ್ಪ ,ಶೀಲಾ, ಗೌರಿ, ಯಮುನವ್ವ ಎಲ್ಲರೂ ಸೇರಿ ಲಗೋರಿ, ಕಾಲ್ಚೆಂಡು, ಕುಂಟೋ ಬಿಲ್ಲೆ, ಡುಬ್ಬಕ್ಕೆ ಚೆಂಡು ಹೊಡೆಯುವ ಆಟ ಆಡಿ, ಕುಣಿದು ನಲಿಯುತ್ತಿದ್ದೆವು. ಸಂಜೆ ಮನೆಗೆ ಬರುವಾಗ ಹುಣಸೆಮರದಲಿ ಮರಕೋತಿ ಆಡುತ್ತಿದ್ದೆವು. ರಾತ್ರಿಯ ವೇಳೆ ಅಜ್ಜಿಯ ಕತೆಯನು ಕೇಳುತ ಮಲಗುತ್ತಿದ್ದೆವು. ಹೆಚ್ಚಿನ ಸಂದರ್ಭದಲ್ಲಿ ಮಳೆಗಾಲ ಶುರುವಾದ ದಿನವೇ ನಮ್ಮ ಶಾಲೆಯೂ ಆರಂಭವಾಗುತ್ತಿತ್ತು. ನಮ್ಮ ಹಾಜರಿ ಶಾಲೆಯಲ್ಲಿ, ಮಳೆಯ ಹಾಜರಿ ಊರಿನಲ್ಲಿ.

***

ಈಗ ಇದೆಲ್ಲಾ ಬರೀ ನೆನಪು. ನಮ್ಮ ಬಾಲ್ಯದ ಬಂಗಾರದ ದಿನಗಳು ಅವು. ಶಾಲೆ ಪ್ರಾರಂಭದ ದಿನದ ಸಂಭ್ರಮಕ್ಕೆ ಸರಿಸಾಟಿ ಅನ್ನಿಸುವಂಥ ದಿನ ಬೇರೊಂದಿಲ್ಲ. ಕೆಲವರಿಗೆ ಅದು ಸಜೆ, ಇನ್ನು ಕೆಲವರಿಗೆ ಖುಷಿಗೊಂದು ಹೊಸ ಕಾರಣ. ಭರ್ತಿ ಎರಡು ತಿಂಗಳ ಬಿಡುವಿನ ನಂತರ, ಎಲ್ಲಾ ಗೆಳೆಯರು ಸೇರುವ ತಾಣದಲ್ಲಿ ಕಲರವ. ಪಾಠ, ಆಟ, ಚೀರಾಟ, ತಿರುಗಾಟ, ಸಣ್ಣಪುಟ್ಟ ಹೊಡೆದಾಟಕ್ಕೆ ಚಾಲನೆ ಸಿಗುವ ದಿನವಿದು. ನಾವು ನಾಲ್ಕು ಗೋಡೆಗಳ ಮಧ್ಯೆ ಕಲಿತಿದ್ದಕ್ಕಿಂತಲೂ ಹೊರಗಡೆ ಕಲಿತಿದ್ದೇ ಹೆಚ್ಚು. ಆ ಬಾಲ್ಯದ ದಿನಗಳಿಗೆ ಯಾವ ಅಂಕೆ, ಅಡ್ಡಿ, ಆತಂಕ ಇರಲಿಲ್ಲ. ಅಲ್ಲಿ ಸ್ವತ್ಛಂದವಾಗಿ ಹಾರಾಡುತ್ತಾ, ಹಾಡುತ, ನಲಿಯುತ ಕಳೆದುಬಿಟ್ಟಿತು ಬಾಲ್ಯ. ಬದುಕಿನ ತಿರುವಿನಲ್ಲಿ ನಿಂತು ನೋಡಿದಾಗ, ಆ ದಿನಗಳು ಮತ್ತೆ ಮತ್ತೆ ಬರಲಿ ಎಂದು ಆ ದೇವರಿಗೆ ಅಪೀಲು ಹಾಕುತ್ತಲೇ ಇರುತ್ತೇವೆ. ಆದರೆ ಅದು ಬರುವುದಿಲ್ಲ, ನಾವು ಬಿಡುವುದಿಲ್ಲ. ಕಲಿತು ದೊಡ್ಡವರಾಗಿ ದೊಡ್ಡ ಕೆಲಸದಲ್ಲಿ ಇದ್ದರೂ, ಹುಟ್ಟೂರಿನ ನೆನಪು. ಬಾಲ್ಯದಲ್ಲಿ ಕಲಿತ ಶಾಲೆ, ಕಲಿಸಿದ ಮಾಸ್ತರ್‌, ಆತ್ಮೀಯ ಗೆಳೆಯರು, ಬದ್ಧ ವೈರಿಗಳು, ಹಳೆ ಲಡಕಾಸಿ ಸೈಕಲ್ಲು, ಹಳೆ ಹುಣಸೆ ಮರ, ಪ್ರೀತಿ ಪ್ರೇಮದ ಗುಂಗು ಹಿಡಿಸಿ ಎಲ್ಲರಿಗಿಂತ ಮುಂಚೆಯೇ ಮದುವೆ ಮಾಡಿಕೊಂಡು ಹೋದ ಹುಡುಗಿ, ಪೋಲಿ ಕತೆ ಹೇಳುತ್ತಿದ್ದ ತರ್ಲೆ ಗೆಳೆಯರು, ಊರ ಜಾತ್ರೆ, ಹನುಮನ ಗುಡಿಕಟ್ಟೆ, ಭಜನಾ ಮಂಡಳಿ ಹಾಡುಗಳು, ಇಂಥವೇ ಹಲವು ನೆನಪುಗಳು…

***

ಎಲ್ಲವೂ ಸರಿ ಇದ್ದಿದ್ದರೆ, ಈ ವೇಳೆಗೆ ಶಾಲೆ ಆರಂಭವಾಗಿ ಎರಡು ತಿಂಗಳೇ ಕಳೆದಿರಬೇಕಿತ್ತು. ಆದರೆ, ಜಾಗತಿಕ ಮಹಾಮಾರಿ ಕೋವಿಡ್ ದಿಂದ ಇನ್ನೂ ಎರಡು ತಿಂಗಳು ಶಾಲೆ ಶುರುವಾಗುವುದು ಅನುಮಾನ. ಮಳೆಗಾಲ ಮತ್ತು ಶಾಲೆ ಒಟ್ಟಿಗೇ ಆರಂಭವಾಗುತ್ತಿದ್ದ ಕ್ಷಣಕ್ಕೆ ಸಾಕ್ಷಿಯಾಗುವ ಅದೃಷ್ಟ ಇಂದಿನ ಪೀಳಿಗೆಗೆ ಇಲ್ಲ. ಆಟವೆಂದರೆ ಬರಿ ವಿಡಿಯೋ ಗೇಮ್ಸ್ ಮಾತ್ರ ಎಂಬ ಮನಸ್ಥಿತಿ ಬಂದು ಕುಳಿತಿದೆ. ನಮಗೆ ಸಿಕ್ಕಿದಂಥ ಬಾಲ್ಯದ ಅಮೂಲ್ಯ ನೆನಪುಗಳು ಮುಂದಿನ ಪೀಳಿಗೆಗೆ ಸಿಗುವುದು ಅಪರೂಪವೇ ಸರಿ. ಈ ವರ್ಷ ಮಕ್ಕಳ ಕಲಿಕೆಯು ಯಾಂತ್ರಿಕವಾಗಿದೆ.

ಕಲಿಕೆಯ ಮಾಧ್ಯಮವೂ ಬದಲಾಗಿದೆ. ಮಕ್ಕಳ ಶಿಕ್ಷಣ ಯಾವುದಿರಬೇಕೆಂದು, ಮಕ್ಕಳನ್ನು ಒಂದೇ ಒಂದು ಮಾತೂ ಕೇಳದೆ, ಹೆತ್ತವರೇ ನಿರ್ಧರಿಸುತ್ತಿದ್ದಾರೆ.

***

ಆದಷ್ಟು ಬೇಗ ಮಹಾಮಾರಿ ಕೊರೋನಾ ಹೊರಟು ಹೋಗಲಿ. ಮತ್ತೆ ಶಾಲೆ ತೆರೆಯಲಿ ಢಣ..ಢಣ.. ಘಂಟೆಯ ಸದ್ದು ಕೇಳಲಿ. ಸಂಭ್ರಮದಿಂದ ಮಕ್ಕಳು ಬ್ಯಾಗ್‌ ಹೆಗಲಿಗೇರಿಸಿಕೊಂಡು ಕುಣಿಯುತ್ತಾ, ನಲಿಯುತ್ತಾ ಶಾಲೆಯ ಹಾದಿ ಹಿಡಿಯಲಿ. ಮಕ್ಕಳ ಕಲರವವು ಶಾಲೆ ಆವರಣ ತುಂಬಲಿ. ವರ್ಗದ ಕೋಣೆಯಿಂದ ಅ..ಆ..ಇ…ಈ.. ಅ..ಆ… ಇ..ಈ. A..B..C..D.. ಕತೆ, ಹಾಡು, ಕುಣಿತ, ಗಲಾಟೆಯ ಸದ್ದು ಕೇಳಿ ಬರಲಿ. ಭವಿಷ್ಯ ಎಂಬ ಗೂಡೊಳಕ್ಕೆ ಮಕ್ಕಳು ಎಂಬ ಪುಟ್ಟ ಮರಿಗಳು ನುಗ್ಗಿಬರಲಿ.­

 

– ವೃಶ್ಚಿಕಮುನಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.