ಬಂದುಬಿಡಲೇ ನಿನ್ನೂರ ಸರಹದ್ದಿಗೆ!?


Team Udayavani, Oct 3, 2017, 1:11 PM IST

jo8.jpg

ಹೇಳೇ ಹುಡುಗಿ, ಎಲ್ಲಿಯ ತನಕ ನಿಲ್ಲಲಿ ನಾ ಇಲ್ಲಿ!? ಕಾಲಕೆಳಗೆ ನುಸುಳಿ ಸಾಗುವ ಕಾಲಚಕ್ರವ ಎಷ್ಟು ಅಂತ ಸದೆಬಡಿದು ನಿಲ್ಲಿಸಿಕೊಳ್ಳಲಿ? ನಾಳೆ ಬೆಳಗಾದರೆ ಅದೇ ಸೂರ್ಯ ಮತ್ತೆ ಹೊಸದಾಗಿ ಬಂದಾನು ಅಷ್ಟೇ! ಆದರೆ, ನಾ ಹಳೆಯವನಾಗಿಯೂ ನಿಲ್ಲಲಾಗದು!

ಅರೆಗಣ್ಣಿನಲ್ಲಿಯೇ ಬಂದಿದ್ದ ಚಂದಿರನು ಹೊರಟು ಹೋದ ಕತ್ತಲೆಯ ಅನಾಥ ಮಾಡಿ! ಕಂದೀಲಿಗೆ ಒಂದಿಷ್ಟು ಪ್ರೀತಿ ಎಣ್ಣೆಯ ಸುರುವಿಕೊಂಡು ಹಚ್ಚಿ ಕೂತಿದ್ದೇನೆ ಮನದ ಬಾಗಿಲಲಿ. ಕಾಯುವ ಕಾತರವೊಂದೆ! ಪ್ರೀತಿಯ ತುಂಬಿಕೊಂಡು ಉರಿಯುತ್ತಿರುವ ಕಂದೀಲ ಬೆಳಕಲ್ಲಿ ನಿನ್ನ ಹೆಜ್ಜೆ ಗುರುತುಗಳ ಕಾಣಬೇಕಿದೆ. ಕಾದು, ಕ್ಷಣವೊಂದು ಯುಗವಾಗಿ ಹೊರಟೇ ಬಿಟ್ಟೆ ಪ್ರೀತಿಯ ಕಂದೀಲ ಬೆಳಕಲ್ಲಿ ನಿನ್ನೊಲವ ಅರಸುತ್ತಾ! ಇದಾಗಲೇ ಅರ್ಧ ದಾರಿ ಸಾಗಿ ಬಂದೆ ಹುಡುಗಿ.

ಎಲ್ಲೂ ನಿನ್ನ ಸುಳಿವಿಲ್ಲ. ಮೂರು ದಿನವಾದರೂ ಮುದುಡಿಕೊಂಡ ಮೊಗ್ಗುಗಳು ಅರಳಿಲ್ಲ. ಅರಳಿ ನಿನ್ನ ಮುಡಿಗೇರದೆ ಸೋತು ನೆಲ ಸೇರುವ ಹೇಡಿತನ ಅವಕ್ಕಿಲ್ಲ! ಹುಡುಗಿ, ಎದೆಯ ಪ್ರೀತಿಗೆ ಭಾಷೆ ಬೇಕಿಲ್ಲ ಅಂದುಕೊಂಡಿದ್ದೇನೆ. ಕಂದೀಲೇ ಮಿಡಿಯುವಾಗ, ಮೊಗ್ಗೆ ಮುನಿದಿರುವಾಗ, ಗರಿಕೆ ಕಾದಿರುವಾಗ ಇನ್ಯಾವ ಪದಗಳ ತಂದು ಅರ್ಥ ಮಾಡಿಸಲಿ!? ಅರ್ಧ ದಾರಿಯ ಸವೆಸಿದವನಿಗೆ ನಿನ್ನೂರ ತಲುಪಲು ಇನ್ನೆಷ್ಟು ದೂರ? ಅದೊಂದು ದೂರವೇ? ಬಂದು ಬಿಡಲೇ ನಿನ್ನೂರ ಸರಹದ್ದಿಗೆ!? ಬಂದು ನಿನ್ನ ಹೆಸರ ಕೂಗಲೇ ಒಮ್ಮೆ ಸುಮ್ಮನೆ?

ಕಾಲಚಕ್ರ ಕಾಲ ಬುಡದಲ್ಲಿ ಬಂದು ಕುಣಿಯುತ್ತಿದೆ. ಅರೆಗಳಿಗೆಯೂ ನಿಲ್ಲಲಾರೆನೆಂದು ಒಂದೇ ಸವåನೆ ಹಠವದಕೆ! ಕಾಲವನ್ನೇ ನಿಲ್ಲಿಸಬಲ್ಲೆ ಹುಡುಗಿ! ಆದರೆ ಅದು ಕೈ ಮೀರಿ ಸರಿದು ಹೋಗುವ ಮುನ್ನ ನಿನ್ನ ನೋಡಬೇಕಿದೆ. ಮನಸ್ಸು ನಿನ್ನ ಕಾಣಬೇಕಿದೆ. ನಾನು ಹಾಗೆಂದೇ ನನ್ನ ಜೀವಕ್ಕೆ ಪ್ರಾಮಿಸ್‌ ಮಾಡಿಕೊಂಡಿದ್ದೇನೆ. ನಾನು ನಿನಗೆ ಸೋಲಲು ಸಿದ್ಧ ಕಣೇ, ನನ್ನ ಪ್ರಾಮಿಸ್‌ಗಲ್ಲ! ಅದರೊಂದಿಗೆ ಎಂದಿಗೂ ರಾಜಿಯಿಲ್ಲ.

ನನ್ನ ಪರದೇಶಿ ಮಾಡಲಾರೆ ಎಂದು ಪಕ್ಕಾ ಯೋಚಿಸಿಯೇ ಬಂದಿದ್ದೇನೆ. ಬರುವ ದಾರಿಯಲ್ಲಿ ನನ್ನೆಲ್ಲಾ ಹಳೆಯ ಹುಚ್ಚಾಟಗಳನ್ನು ಮೂಟೆಕಟ್ಟಿ ಸಿಕ್ಕ ಕೊಳಕ್ಕೆ ಎಸೆದು ಬಂದಿದ್ದೇನೆ. ಹಳೆದೆಲ್ಲವ ಅಳಿಸಿಕೊಂಡು ಹೊಚ್ಚಹೊಸದಾಗಿ ಬಂದಿದ್ದೇನೆ ನಿನ್ನೂರಿನ ಅಗಸಿಗೆ! ನನ್ನ ಎದೆ ಬಡಿತಕೂ ಈ ಸಂಜೆ, ಈ ರಾತ್ರಿ, ಹಗಲುಗಳು ದುಬಾರಿ ಎನಿಸಿವೆ. ಹೇಳೇ ಹುಡುಗಿ, ಎಲ್ಲಿಯ ತನಕ ನಿಲ್ಲಲಿ ನಾ ಇಲ್ಲಿ!? ಕಾಲಕೆಳಗೆ ನುಸುಳಿ ಸಾಗುವ ಕಾಲಚಕ್ರವ ಎಷ್ಟು ಅಂತ ಸದೆಬಡಿದು ನಿಲ್ಲಿಸಿಕೊಳ್ಳಲಿ?

ನಾಳೆ ಬೆಳಗಾದರೆ ಅದೇ ಸೂರ್ಯ ಮತ್ತೆ ಹೊಸದಾಗಿ ಬಂದಾನು ಅಷ್ಟೇ! ಆದರೆ, ನಾ ಹಳೆಯವನಾಗಿಯೂ ನಿಲ್ಲಲಾಗದು! ನಿಂತರೂ ನಿಂತೇನು ನಿನ್ನ ಮೊಹಬ್ಬತ್ತಿನ ಮುಂದೆ ಕೇವಲ ಪ್ರತಿಮೆಯಾಗಿ. ನನ್ನಂತೆ ಪ್ರೀತಿಯನ್ನು ಕಾದು ಕಳೆದುಕೊಂಡ ಹುಚ್ಚು ಪ್ರೀಮಿಗಳು ನನ್ನ ಹಿಂಬಾಲಕರಾಗಿ ಬಂದು ನಿನ್ನೂರಿನ ಗಡಿಯಲ್ಲಿ ನನ್ನ ಪ್ರತಿಮೆ ನಿಲ್ಲಿಸಿಹೋಗಬಹುದು! ಇಲ್ಲ, ಇಲ್ಲ ನಾ ಆಗಲಾರೆ ಹಾಗೆಂದಿಗೂ! ಸೋತ ಪ್ರೇಮಿಗಳ ಸಾಲಿನಲ್ಲಿ ನಾನೆಂದೂ ನಿಲ್ಲಲಾರೆ.

* ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

9-bng

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.