ಪ್ರೀತಿ ಅಂದ್ರೆ ಧೋನಿಯ ಸೆಂಚೂರಿಯೂ ಅಲ್ಲ!


Team Udayavani, Apr 11, 2017, 3:50 AM IST

10-josh-8.jpg

ಪ್ರೀತಿಯೆಂದರೆ ಪಾಯಸದೊಳಗಿನ ದ್ರಾಕ್ಷಿ- ಗೋಡಂಬಿ. ಪ್ರೀತಿಯೆಂದರೆ ಕೆ.ಎಸ್‌. ನರಸಿಂಹಸ್ವಾಮಿ ಕವನ. ಪ್ರೀತಿಯೆಂದರೆ ಯೋಗರಾಜ್‌ ಭಟ್ಟರ ಸಿನಿಮಾ.  ಪ್ರೀತಿಯೆಂದರೆ ಧೋನಿ ಹೊಡೆದ ಸೆಂಚುರಿ…. ಇಲ್ಲಾ… ಪ್ರೀತಿ ಅಂದ್ರೆ ಇವ್ಯಾವೂ ಅಲ್ಲ…

ಆತ್ಮಸಂಗಾತಿ,
ಹೇಳಿಕೇಳಿ ನಮ್ಮಿಬ್ಬರದು ಒಂದೇ ಊರು. ನಮ್ಮ ಮನೆಗಳು ಕೂಡ ಅಕ್ಕ-ಪಕ್ಕದವು. ತೊಟ್ಟಿಲಲ್ಲಿ ಆಡುವಾಗಿನಿಂದ ನಾನು ನೀನು ಜೋಡಿ. ಎತ್ತಿಕೊಂಡರೆ ಕೈತುಂಬಾ ಸಿಗುತ್ತಿದ್ದ ನಾನು ಡುಮ್ಮಣ್ಣ.  ನೀನು ಒಣಕಲಿ. ಕಾಲ ಎಂಬುದು ನಿರ್ಧಯಿ. ಅದು ಸರ್ರನೆ ಸರಿದುಬಿಟ್ಟಿತು ನೋಡು. ಆಡುತ್ತಾ ಆಡುತ್ತಾ ಬೆಳೆದುಬಿಟ್ಟೆವು. ನರ್ಸರಿ, ಪ್ರ„ಮರಿ, ಹೈಸ್ಕೂಲ್‌ ಎಲ್ಲಾ ಚಕಾಚಕ್‌ ಕಳೆದುಹೋದವು.

ಹೈಸ್ಕೂಲಿನಲ್ಲಿದ್ದಾಗ ನೀನು ಎರಡು ಜಡೆ ಹಾಕಿಕೊಂಡು ಬರುತ್ತಿದ್ದೆಯಲ್ಲ, ಈಗಲೂ ಆ ದೃಶ್ಯ ನನ್ನ ಮನಃಪಟಲದಿಂದ ಮಾಸಿಲ್ಲ. ತುಂಬಾ ಚೊಕ್ಕಟವಾಗಿ ತಲೆಬಾಚುತ್ತಿದ್ದ ನೀನು ಶಿಸ್ತಿನ ಹುಡುಗಿ.  ಹಣೆಯ ಮೇಲೆ ಹೆದ್ದಾರಿಯಂತೆ ಗೋಚರಿಸುತ್ತಿದ್ದ ಬೈತಲೆಯಲ್ಲಿ ನನ್ನ ಕನಸುಗಳು ಚೆಲ್ಲಿರುತ್ತಿದ್ದವು. ದುಡಿದು ದಣಿಯದ ದೇಹ, ಪ್ರೀತಿಸಿ ದಣಿದಿದೆ. ಪ್ರೀತಿಯನ್ನು ಆರಾಧಿಸಿ, ಪೂಜಿಸಿ, ಸಂತೈಸಿ ನನ್ನ ಅಂಗೈನ ಗೆರೆಗಳು ಮಾಯವಾಗಿವೆ. ನಿನ್ನ ಪ್ರೀತಿಯನ್ನ ಎದೆಗೂಡಿನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆ ಮಾಡುವ ನಾನು ಅಪ್ಪಟ ಪ್ರೇಮಪೂಜಾರಿ. ಗರ್ಭಗುಡಿಯ ಮುಂದೆ ಬೆಳಗುವ ದೀಪದ ಬೆಳಕಿಗೆ ನಿನ್ನ ಪ್ರೀತಿ ಪ್ರಜ್ವಲಿಸುತ್ತದೆ. ಘಂಟೆಯ ನಿನಾದಕ್ಕೆ ನಿನ್ನ ಪ್ರೀತಿ ವಿಚಲಿತಗೊಳ್ಳದು. ಧೂಪದಾರತಿಗಳಿಂದ ನಿನ್ನ ಪ್ರೀತಿ ಸಂಪನ್ನ. ನಾನು ಮಾತ್ರ ಹದಿನಾರು ವರ್ಷಗಳಿಂದ ವ್ರತ ತಪ್ಪಿಸದೆ ನಿತ್ಯ ಪೂಜಿಸುತ್ತಿರುವ ಕರ್ತವ್ಯನಿಷ್ಠ ಜಗತ್ತಿನ ಏಕೈಕ ಪ್ರೇಮಪೂಜಾರಿ. ನನಗೆ ನೀನೇ ಪ್ರಪಂಚ. ಆ ಪ್ರಪಂಚದಲ್ಲಿ ಇರುವುದಾದರೂ ಎಷ್ಟು ಜನ? ನಾನು- ನೀನು ಮತ್ತು ಕೇವಲ ನಾನು- ನೀನು.

ಎಡ ಮೊಣಕೈ ಮೇಲೆ ನಿನ್ನ ಹೆಸರಿನ ಹಚ್ಚೆ ಸದಾ ನಗುತ್ತಿದೆ. ನಾನು ಹೋದಲ್ಲಿ ಬಂದಲ್ಲಿ ನೀನು ಜೊತೆಗಿದ್ದೀಯಾ ಎಂಬ ಉನ್ಮತ್ತ ಭಾವವನ್ನು ಅದು ಉಕ್ಕಿಸುತ್ತದೆ. ಭೌತಿಕವಾಗಿ ದೂರವಿರುವ ನಿನ್ನನ್ನು ಹಚ್ಚೆ ಮಾನಸಿಕವಾಗಿ ಹತ್ತಿರಗೊಳಿಸಿದೆ. ಈ ವಿರಹ, ಆ ಸನಿಹಗಳ ನಡುವಿನ ಪುನಿತಾ ಅವಧಿಯನ್ನು ಏನೆಂದು ಕರೆಯುವುದು? ನಮಗೆ ಬೇಕಿರುವುದು ಪುಟ್ಟ ಅವಧಿಯ ಬದುಕು.  ಹೊಟ್ಟೆಪಾಡಿಗೆಂದು ಹೊರಟು ಬಂದವನು ಊರು ಕಂಡು ವರ್ಷಗಳಾದವು. ಗಾವುದ ಗಾವುದ ದೂರವಿರುವ ನಿನ್ನನ್ನು ಕಾಣಲು ಸದಾ ತವಕಿಸುತ್ತೇನೆ. ನಿನ್ನ ಮಾತು, ನಿನ್ನ ಸನಿಹ, ನಿನ್ನ ಸಾಹಚರ್ಯ ನನ್ನಲ್ಲಿ ಇನ್ನಿಲ್ಲದ ಚೈತನ್ಯವನ್ನು ತುಂಬುತ್ತದೆ. ನೂರಾರು ಜನರ ನಡುವೆ ಇದ್ದರೂ ನಾನಿಲ್ಲಿ ಒಂಟಿ. ನಾನು ಊರುಬಿಟ್ಟು ಬಂದಾಗಿನಿಂದ ಒಂಟಿತನ ಕಾಡಿದೆ. ಈ ಊರಲ್ಲಿ ಬದುಕುವುದಾದರು ಹೇಗೆ ಎಂಬುದೇ ನನಗೆ ಪ್ರಶ್ನೆಯಾಗಿ ಕಾಡಿದೆ.

ಸರಿ ಸರಿ, ಪ್ರೇಮ ನಿವೇದನೆಗೆ ನಿಂತ ನನ್ನನ್ನು ಈ ಹಾಳು ಸಂಗತಿಗಳು ಏಕೆ ಕಾಡುತ್ತಿವೆ ಗೊತ್ತಿಲ್ಲ. ಈ ಎಲ್ಲಾ ದರಿದ್ರ ವ್ಯವಸ್ಥೆಯ ನಡುವೆ ನಮ್ಮ ಪ್ರೀತಿಯ ಪ್ರಣತಿ ಬೆಳಗಬೇಕಲ್ಲವೆ? ನಾನು- ನೀನು ಬದುಕಬೇಕಲ್ಲವೆ? ಪ್ರೀತಿಯೆಂದರೆ ಪ್ರಾಮಾಣಿಕತೆ. ಪ್ರೀತಿಯೆಂದರೆ ನಿಯತ್ತು. ಪ್ರೀತಿಯೆಂದರೆ ನವಿರು ಭಾವ. ಪ್ರೀತೆಯೆಂದರೆ ಎಂದೂ ಮರೆಯದ ಹಾಡು. ಪ್ರೀತಿಯೆಂದರೆ ಮನಸು ಮನಸುಗಳ ಪಿಸುಮಾತು. ಪ್ರೀತಿಯೆಂದರೆ ಪಾಯಸದೊಳಗಿನ ದ್ರಾಕ್ಷಿ- ಗೋಡಂಬಿ. ಪ್ರೀತಿಯೆಂದರೆ ಕೆ.ಎಸ್‌. ನರಸಿಂಹಸ್ವಾಮಿ ಕವನ. ಪ್ರೀತಿಯೆಂದರೆ ಯೋಗರಾಜ್‌ ಭಟ್ಟರ ಸಿನಿಮಾ.  ಪ್ರೀತಿಯೆಂದರೆ ಧೋನಿ ಹೊಡೆದ ಸೆಂಚುರಿ. ಪ್ರೀತಿಯೆಂದರೆ ಡಾಲರ್‌ ಎದುರು ರೂಪಾಯಿ ಬೆಲೆಯ ಚೇತರಿಕೆ. ಪ್ರೀತಿಯೆಂದರೆ ರಿಯಲ್‌ ಎಸ್ಟೇಟ್‌. ಪ್ರೀತಿಯೆಂದರೆ ಸೀರಿಯಲ್ಲು. ಪ್ರೀತಿಯೆಂದರೆ ಫೇಸ್‌ಬುಕ್ಕು. ಪ್ರೀತಿಯೆಂದರೆ ಐಫೋನು. ಪ್ರೀತಿಯೆಂದರೆ ಬಯೋತ್ಪಾದನೆ. ಪ್ರೀತಿಯೆಂದರೆ ಎನ್‌ಕೌಂಟರ್‌. ಪ್ರೀತಿಯೆಂದರೆ ವೈರಸ್‌. ಪ್ರೀತಿಯೆಂದರೆ ದರೋಡೆ… ಇಲ್ಲಾ…

ಪ್ರೀತಿಯೆಂದರೆ ಇವ್ಯಾವುವೂ ಅಲ್ಲ. ಪ್ರೀತಿಯೆಂದರೆ ನೀನು. ಜಸ್ಟ್‌ ಯು! ಹಾಗಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ.  ಬಾ ಇಬ್ಬರೂ ಒಂದಾಗೋಣ.  ಪ್ರೀತಿಯ ದೋಣಿಯೇರಿ ದೂರತೀರ ಸಾಗೋಣ. ಬದುಕು ಕಟ್ಟಿಕೊಳ್ಳೋಣ. ನನ್ನ ಈ ಪ್ರೇಮಪತ್ರ ಬೇಗ ಸ್ವೀಕರಿಸು ಮತ್ತು ಅಷ್ಟೇ ಬೇಗ ಉತ್ತರಿಸು. ನಿನ್ನ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ಕಂಡಕ್ಟರ್‌ ಸೋಮು

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.