ಫ‌ಸ್ಟ್‌ ಬೆಂಚ್‌ V/s ಲಾಸ್ಟ್‌ ಬೆಂಚ್‌!  


Team Udayavani, Feb 28, 2017, 3:50 AM IST

-first-bench2.jpg

ನಾವು ಸದಾ ಪುಸ್ತಕದ ಮಧ್ಯೆ ಉಳಿದು ಹೋಗಿ ಅದರ ಆಚೆ ಏನಿದೆ ಅಂತ ನೋಡೋಕೂ ಹೋಗ್ಲಿಲ್ಲ. ಮಾರ್ಕ್ಸ್ನ ಆಚೆ ಇರುವ ಬದುಕಿನ ಗೆರೆಗಳು ನಮಗೆ ಕಾಣಿಸಲೇ ಇಲ್ಲ. ಲಾಸ್ಟ್‌ ಬೆಂಚ್‌ ಬಾಯ್ಸ ಬಾಳಿನ ಸಣ್ಣ ಸಣ್ಣ ಅವಕಾಶಗಳನ್ನು ಬಿಡದಂತೆ ಹಿಡಿದು ಪಳಗಿಸಿಕೊಂಡು ಖುಷಿ ಪಟ್ಟರು. ಮುಲಾಜನ್ನು ಮೂಲೆಗಿಟ್ಟು ಲೈಫ್ನ ಎಂಜಾಯ್‌ ಮಾಡಿದ್ರು.  

ದಪ್ಪನೆಯ ಸೋಡಾಗ್ಲಾಸ್‌ ಕಣ್ಣಿಗೆ, ಬಿಗಿಯಾದ ಟೈ ಕೊರಳಿಗೆ, ಗಿರ ಗಿರ ತಿರುಗುವ ಫ್ಯಾನ್‌ಗಳ ಕೆಳಗೆ ದಿನಪೂರ್ತಿ ಕೆಲಸ. ತಿಂಗಳ ಕೊನೆಗೆ ಒಂದಿಷ್ಟು ಹಣ. ಹೋಗಲಿ ಬಿಡಿ ಅದೆಲ್ಲ ಯಾಕೆ! ಹೆಂಡತಿ ಕಾಟಕ್ಕೆ ಸೈಟ್‌ ಅಂತ ಒಂದು ತಗೊಂಡು, ಮನೆ ಕಟ್ಟೋಕೆ ರೆಡಿಯಾದ ನನಗೆ ಕಾರ್ಪೊàರೇಷನ್‌ನಿಂದ ತಕರಾರು ಬಂದಿತ್ತು. ಕಾರ್ಪೊàರೇಷನ್‌ ಅಧ್ಯಕ್ಷರನ್ನು ಕಂಡು ಮಾತಾಡಿಸಿಯೇ ಬರೋಣ, ಏನಾದರೂ ರಿಕ್ವೆಸ್ಟ್‌ ಮಾಡೋಣ ಅಂತ ಹೋದಾಗ ಆಗಿದ್ದು ನನಗೆ ನಿಜಕ್ಕೂ ಶಾಕ್‌ ಆಯ್ತು! ಅಲ್ಲಿ ಕಾರ್ಪೊರೇಷನ್‌ ಅಧ್ಯಕ್ಷರ ಸೀಟಿನಲ್ಲಿ ಇದ್ದವ, ಪಿಯುಸಿಯಲ್ಲಿ ಲಾಸ್ಟ್‌ ಬೆಂಚಿನಲ್ಲಿ ಕೂರುತ್ತಿದ್ದ ನನ್ನ ಕ್ಲಾಸ್‌ಮೇಟ್‌ ರವಿ. ಇವನು ಇಲ್ಲಿ!? ನನಗೆ ತಲೆ ತಿರುಗುವುದೊಂದೇ ಒಂದೇ ಬಾಕಿ. “ಹೇ ರವಿ, ನೀನು ಇಲ್ಲಿ!?’ ಅಂದೆ. ಅವನು ನನ್ನನ್ನು ಮರೆತಿರಲಿಲ್ಲ. ಆತ್ಮೀಯವಾಗಿ ಕೂರಿಸಿಕೊಂಡು ಮಾತಾಡಿದ. ಕಾಫಿ ತರಿಸಿದ. ಇಬ್ಬರೂ ಕುಡಿದೆವು. ಸಮಸ್ಯೆ ಹೇಳಿಕೊಂಡೆ, ಪರಿಹಾರ ಅವನೇ ತಿಳಿಸಿದ. 

ಆದರೆ ನನ್ನ ವಿಷ್ಯ ಅದಲ್ಲ. ರವಿಯದು. ಶಾಲೆ- ಕಾಲೇಜಿನಲ್ಲಿದ್ದಾಗ ರವಿ ತುಂಬಾ ತಲೆ ಹರಟೆ ಹುಡುಗ. ಎಷ್ಟೋ ಬಾರಿ ನನಗೆ ಧಮಕಿ ಹಾಕಿದವ. “ನೋಡೂ, ಅನ್ನಪೂರ್ಣನ ಮಾತಾಡಿಸಿದರೆ ಸರಿ ಇರಾಕಿಲ್ಲ, ಫ‌ಸ್ಟ್‌ ಬೆಂಚಲ್ಲಿ ಕೂತಿದೀಯ, ಪಸ್ಟ್‌ ಕ್ಲಾಸ್‌ ಆಗಿ ಸುಮ್ಮನೆ ಓದು. ಅವಳು ನನ್ನ ಹುಡುಗಿ’ ಅಂದಿದ್ದ. “ನಾನು ಮಾತಾಡಿಸಲ್ಲ. ಆದರೆ ಅವಳೇ…’ ಅಂತ ಉಸಿರು ಬಿಟ್ಟಾಗ “ಅವೆಲ್ಲಾ ಗೊತ್ತಿಲ್ಲ. ನಾಳೆಯಿಂದ ಕಾಲೇಜಿಗೆ ಬರಿ¤àಯೋ ಇಲ್ವೋ ಡಿಸೈಡ್‌ ಮಾಡು’ ಅಂದಿದ್ದ. ಒರಟ ಅಂದ್ರೆ ಒರಟ.  

ಆದರೆ ನಾವು ತುಂಬಾ ಧಿಮಾಕಿನವರು. 90 ಮಾರ್ಕ್ಸ್ ತಗೆಯುವವರು. ಮೊದಲ ಬೆಂಚಿನವರು. ಈ ಕಾರಣಗಳಿಗೇ ಲೆಕ್ಚರ್‌, ಹುಡುಗಿಯರು ನಮೊjತೆ ಮಾತಾಡೋವಷ್ಟು ಲಾಸ್ಟ್‌ಬೆಂಚಿನವರೊಂದಿಗೆ ಮಾತಾಡುತ್ತಿರಲಿಲ್ಲ. ನಾವು ಸದಾ ಬುಕ್ಸ್‌ ಜೊತೆ. “ತರಗತಿ- ಲೈಬ್ರರಿ- ಮನೆ’ ಇಷ್ಟೇ ನಮ್ಮ ಜೀವನ. ಆದರೆ ರವಿ, ಈಶ, ಸೀನ ಇವರೆಲ್ಲಾ ಲಾಸ್ಟ್‌ ಬೆಂಚಿನ ಹುಡುಗರು. ಅಧ್ಯಾಪಕರಿಂದ ತಾತ್ಸಾರಕ್ಕೆ ಗುರಿಯಾದವರು. ಈಗ ಅನಿಸುತ್ತಿದೆ. ನಿಜಕ್ಕೂ ಲೈಫ್ ಅಂದ್ರೆ ಇವರೆªà ಇರಬೇಕು ಅಂತ. ಬಡ್ಡಿಮಕ್ಳು ಅದೆಷ್ಟು ಎಂಜಾಯ್‌ ಮಾಡಿದ್ರಪ್ಪ! ಕಾಲೇಜಿಗೆ ಬರಿ¤ದ್ರು ಮಿಸ್‌ ಮಾಡದೇ. ಆದರೆ ತರಗತಿಗೆ ಬಂದಿದ್ದು ಕಾಣೆ. ಸದಾ ಕಿರಿಕ್‌ ಪಾರ್ಟಿಗಳು. ಹುಡುಗೀರನ್ನ ರೇಗಿಸೋದು, ಲೆಕ್ಚರ್‌ನ ಕಿಚಾಯಿಸೋದು, ಫ‌ಸ್ಟ್‌ ಬೆಂಚ್‌ ಹುಡುಗರನ್ನ ಗೋಳು ಹುಯೊRಳ್ಳೋದು, ಸಿನೆಮಾ, ಟ್ರಿಪ್‌, ಟ್ರೆಕ್ಕಿಂಗ್‌, ಡೇಟಿಂಗ್‌, ಕಾಲೇಜು ಚುನಾವಣೆ ಅಂತ ಸದಾ ಬ್ಯುಸಿ ಇರೋರು. ನಾವು ಕೂಡ ಬ್ಯುಸಿನೇ… ಆದರೆ ಪುಸ್ತಕಗಳ ಮಧ್ಯೆ!  

ನನಗಂತೂ ಆ ದಿನಗಳಲ್ಲಿ ಕೆಲಸ ಹಿಡಿಯುವುದೊಂದೇ ಗುರಿಯಾಗಿತ್ತು. ಅದಕ್ಕೇ ಸೋಡಾಬುಡ್ಡಿ ಕನ್ನಡಕ ಹಾಕಿಕೊಂಡು ಓದಿದೆ. ಈಗ ಅದೇ ಸೋಡಾಬುಡ್ಡಿ ಹಾಕಿಕೊಂಡು ತಿಂಗಳ ಸಂಬಳಕ್ಕೆ ಕಾಯುತ್ತಿದ್ದೇನೆ. ಆದರೆ ರವಿ. ಈಶ, ಸೀನ ಇಂದು ಅದ್ಯಾವ ಪರಿ ಬೆಳೆದು ನಿಂತಿದ್ದಾರೆ ಅಂದರೆ ನನಗೇ ಆಶ್ಚರ್ಯವಾಯಿತು. ಪಿ.ಯು.ಸಿ.ಯಲ್ಲಿ ಮೂರು ಸರಿ ದಂಡಯಾತ್ರೆ ಮುಗಿಸಿ, ಹೇಗೋ ಡಿಗ್ರಿಗೆ ಸೇರಿಕೊಂಡು ಅಲ್ಲೂ ಕಿರಿಕ್‌ ಮಾಡಿಕೊಂಡು ಡಿಗ್ರಿ ಕಂಪ್ಲೀಟ್‌ ಮಾಡಿಕೊಳ್ಳದೇ ಓತ್ಲಾ ಹೊಡೆಯುತ್ತಿದ್ದರು. ಆಮೇಲೆ ನೋಡಿದರೆ ಅವರವರ ಅಭಿರುಚಿಯ ದಾರಿಯನ್ನು ಅವರೇ ಹುಡುಕಿಕೊಂಡು ಹೋಗಿ ಇಂದು ಒಳ್ಳೊಳ್ಳೆ ಸ್ಥಾನದಲ್ಲಿ ಕೂತಿದ್ದಾರೆ. ಈಶ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಅಂತೆ, “ಲೆಕ್ಕ ಹಾಕೋಕೆ ಸಾಧ್ಯವಾಗದಷ್ಟು ದುಡ್ಡು ಮಾಡಿದ್ದಾನೆ’ ಅಂದ ರವಿ. ಸೀನ ಊರಲ್ಲಿ ಜಮೀನಲ್ಲಿ ಒಳ್ಳೆ ಬೆಳೆ ಬೆಳೆಯುತ್ತಿದ್ದಾನಂತೆ. ಗಂಡ ಹೆಂಡತಿ, ಮಕ್ಕಳು ಒಳ್ಳೆ ಸಂಸಾರ ಅವಂದು ಅಂದ. ನನ್ನ ಬಗ್ಗೆ ಕೇಳಿದ. ನನ್ನ ಬಗ್ಗೆ ಹೇಳಿಕೊಳ್ಳೋಕೆ ತುಸು ನಾಚಿಕೆಯೇ ಆಯಿತು.  

ಒಂದು ವಿಷಯವಂತೂ ನಂಗೆ ಕನ್ಪರ್ಮ್ ಆಯಿತು. ಬೆಂಚ್‌ ಯಾವುದು? ಮಾರ್ಕ್‌ಗಳು ಎಷ್ಟು? ಎಂಬುದು ಯಾವತ್ತೂ ಕೂಡ ಮುಖ್ಯವಾಗುವುದಿಲ್ಲ. ಮೊದಲ ಬೆಂಚಿನವರು ಎಂಬ ಧಿಮಾಕು ಕರಗಿ ಹೋಯಿತು. ಅವರು ಕಿರಿಕ್‌ ಪಾರ್ಟಿಯವರು ಎಂಬ ಕಲ್ಪನೆ ಮೆಲ್ಲನೆ ಇಳಿದು ಹೋಯಿತು. ನಿಜಕ್ಕೂ ಅವರೇ ಸರಿ ಅನಿಸಿತು. ನಾವು ಸದಾ ಪುಸ್ತಕದ ಮಧ್ಯೆ ಉಳಿದು ಹೋಗಿ ಅದರ ಆಚೆ ಏನಿದೆ ಅಂತ ನೋಡೋಕೂ ಹೋಗ್ಲಿಲ್ಲ. ಮಾರ್ಕ್ಸ್ನ ಆಚೆ ಇರುವ ಬದುಕಿನ ಗೆರೆಗಳು ನಮಗೆ ಕಾಣಿಸಲೇ ಇಲ್ಲ. ಲಾಸ್ಟ್‌ ಬೆಂಚ್‌ ಬಾಯ್ಸ ಬಾಳಿನ ಸಣ್ಣ ಸಣ್ಣ ಅವಕಾಶಗಳನ್ನು ಬಿಡದಂತೆ ಹಿಡಿದು ಪಳಗಿಸಿಕೊಂಡು ಖುಷಿ ಪಟ್ಟರು. ಮುಲಾಜನ್ನು ಮೂಲೆಗಿಟ್ಟು ಲೈಫ್ನ ಎಂಜಾಯ್‌ ಮಾಡಿದ್ರು.  

ತಮ್ಮ ಬದುಕಿನ ದಾರಿ ಯಾವುದು ಅಂತ ತಮ್ಮ ಬದುಕಿನ ಅನುಭವದಲ್ಲಿಯೇ ಕಂಡುಕೊಂಡ್ರು. ಹಾಗೆಯೇ ಆ ನಿಟ್ಟಿನಲ್ಲಿ ಸಾಗಿ ಇಂದು ನೆಮ್ಮದಿಯನ್ನ ಹುಡುಕಿಕೊಂಡಿದ್ದಾರೆ. ಮೊದಲ ಬೆಂಚಿನವರಿಗಿಂತ ಹೆಚ್ಚು ಹಣ, ಹೆಸರು ಮಾಡಿದ್ದಾರೆ. ಆದರೆ ಹೋಲ್‌ ಸೇಲ್‌ ಆಗಿ ಮೊದಲ ಬೆಂಚಿನವರು ವೇಸ್ಟ್‌, ಲಾಸ್ಟ್‌ ಬೆಂಚಿನವರು ಬೆಸ್ಟ್‌ ಅಂತ ನಾನು ಹೇಳುತ್ತಿಲ್ಲ. ಆದರೆ ಲಾಸ್ಟ್‌ ಬೆಂಚ್‌ ಮತ್ತು ಫ‌ಸ್ಟ್‌ ಬೆಂಚ್‌ ಎಂಬ ತಾರತಮ್ಯ ಸಲ್ಲದು ಎನ್ನುವುದಷ್ಟೇ ನನ್ನ ಅಭಿಪ್ರಾಯ.  

– ಸದಾಶಿವ್‌ ಸೊರಟೂರು, ಶಿಕ್ಷಕರು

ಟಾಪ್ ನ್ಯೂಸ್

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

14

Chikkamagaluru: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

13

Panaji: ಇಲೆಕ್ಟ್ರಿಕ್ ಮೀಟರ್ ಕಳ್ಳತನ ಪ್ರಕರಣ; ಆರೋಪಿ ಬಂಧನ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.