ಮತ್ತೆ ಮತ್ತೆ ಹಾಜರಾಗ್ತೇನೆ ಪ್ರೇಮ ಪರೀಕ್ಷೆಗೆ


Team Udayavani, Mar 6, 2018, 3:54 PM IST

mathe-mathe.jpg

ವಿಫ‌ಲನಾದೆ ಎರಡನೇ ಬಾರಿ! ಎದೆಯೊಳಗಿದ್ದ ಎಲ್ಲ ಮಾತುಗಳನ್ನು ಈ ಬಾರಿ ಹೇಳಿಯೇ ಬಿಡಬೇಕೆಂದು ಅವಳೆದುರು ನಿಂತು ಏನನ್ನೂ ಹೇಳಲಾರದೆ ಮೂಕನಾಗಿದ್ದು, ಬಾಯಿಪಾಠ ಮಾಡಿಕೊಂಡಿದ್ದ ಮಾತುಗಳನ್ನೆಲ್ಲ ಮರೆತು ಮೌನಿಯಾಗಿದ್ದು, ನನ್ನ ಕಥೆ. ಅವಳು, ತುಂಬು ತೆನೆ ಹೊತ್ತ ಗಿಡವೊಂದು ಬಾಗಿ ಭುವಿ ನೋಡುವಂತೆ, ಮೊಗದ ತುಂಬ ನಗು ಹೊತ್ತಾಕೆ ನೆಲ ದಿಟ್ಟಿಸಲು ಶುರು ಮಾಡಿದಳಲ್ಲ; ಅದಕ್ಕೆ ಕಾರಣ ನಾಚಿಕೆಯೇ? ಊಹ್ಞೂಂ ತಿಳಿಯದು.

ತುಸು ವಿರಾಮವನ್ನೂ ಪಡೆಯದೆ ಅದಾವುದೋ ಕಾಣದ ಮಾಯೆಗಾಗಿ ಹುಡುಕಾಟ ನಡೆಸುವ ಅವಳ ಕಂಗಳ ಹುಡುಗಾಟಿಕೆಗೆ ಮರುಳಾದ ನನಗೆ ಜೀವನ ಪರ್ಯಂತ ಮರುಳನಾಗಿಯೇ ಇರುವ ಆಸೆ ಹುಟ್ಟುವುದಕ್ಕೆ ಕಾರಣ ಇದೇ ಎಂದು ಹೇಗೆ ಹೇಳಲಿ? ಅವಳ ಕಂಗಳ ಹೊಳಪಿಗೆ ಸೂರ್ಯನೂ ನಾಚುತ್ತಾನೆ, ಅವನ ನಾಚಿಕೆಯ ಕಂಡು ಬೆಳ್ಳಿ ಮೋಡಗಳೂ ನಸುನಗುತ್ತವೆ.

ಮೊಗದಲ್ಲಿ ನಗುವಿದ್ದರೂ ಒಳಗೊಳಗೇ ಕಂಪಿಸುವ ಮೋಡಗಳಿಗೆ ಸೂರ್ಯನನ್ನೇ ಸೋಲಿಸಿದ ಹುಡುಗಿಯ ಮನದ ಬಿಳುಪಿನೆಡೆಗೆ ಕೊಂಚ ಅಸೂಯೆ ಇರಬಹುದೆಂದು ನನಗೆ ಅನ್ನಿಸುವುದಾದರೂ ಏಕೆ? ನಗು, ಕಂಪನ, ಅಸೂಯೆಗಳ ಘರ್ಷಣೆಗೆ ಸಿಕ್ಕು ಜನ್ಮ ತಳೆದ ಸಹಸ್ರ ಸಹಸ್ರ ಹನಿಗಳು ಭುವಿಗೆ ಮುತ್ತಿಕ್ಕುವ ಭರದಲ್ಲಿ, ಮೌನಿಯಾಗಿ ನಿಂತಿದ್ದ ನನ್ನನ್ನು ಸೋಕಿದಾಗಲೇ ವಾಸ್ತವದ ಅರಿವಾಗಿದ್ದು.

ತುಸು ವಿರಾಮವನ್ನೂ ಪಡೆಯದ ಅವಳ ಕಂಗಳೆರಡು ನನ್ನೆಡೆಗೆ  ಹುಡುಕಾಟದ – ಹುಡುಗಾಟದ ನೋಟ ಬೀರುತ್ತಿವೆಯೆಂಬ ಅರಿವಾದದ್ದು. ಅಷ್ಟೇ… ಅಲ್ಲಿಗೆ ಮತ್ತೂಂದು ಪ್ರಯತ್ನ ನಿರಾಯಾಸವಾಗಿ ಸೋತು ಹೋಗಿತ್ತು, ಯಥಾಪ್ರಕಾರ ಈ ಬಾರಿಯೂ ವಿಫ‌ಲನಾದೆ. ಹಾಗಂತ ಸೋಲೊಪ್ಪಿಕೊಳ್ಳಲಾರೆ. ಮತ್ತಷ್ಟು ಸಿದ್ಧತೆ ಮಾಡಿಕೊಂಡೇ ಮೂರನೇ ಬಾರಿಯೂ ಹಾಜರಾಗುತ್ತೇನೆ- ಪ್ರೇಮ ಪರೀಕ್ಷೆಗೆ! ಅಕಸ್ಮಾತ್‌ ಆಗಲೂ ಫೇಲಾದರೆ, ನಾಲ್ಕು, ಐದು ಹಾಗೂ ಆರನೇ ಪ್ರಯತ್ನಗಳೂ ಜಾರಿಯಲ್ಲಿರುತ್ತವೆ!  

ಇಂತಿ
ಮರುಳನಾದವ

* ಶಶಾಂಕ್‌ ಜಿ.ಎಂ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.