ಬಾರೋ ಸಾಧಕರ ಕೇರಿಗೆ : ಪ್ರಾಮಾಣಿಕ ನೌಕರ


Team Udayavani, Dec 15, 2020, 8:19 PM IST

ಬಾರೋ ಸಾಧಕರ ಕೇರಿಗೆ : ಪ್ರಾಮಾಣಿಕ ನೌಕರ

ಮೈಕೆಲ್‌ ಫ್ಯಾರಡೆ, ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ. ಕೇವಲ ಮೂರೋ ನಾಲ್ಕೋ ವರ್ಷ ಶಾಲೆ ಕಲಿತಿದ್ದು ಬಿಟ್ಟರೆ, ಫ್ಯಾರಡೆಗೆ ಯಾವ ಶಾಸ್ತ್ರೀಯ ಶಿಕ್ಷಣವೂ ದೊರೆಯಲಿಲ್ಲ! ಕಡುಬಡತನದ ಕುಟುಂಬದಿಂದ ಬಂದ ಫ್ಯಾರಡೆ, ತನ್ನ ಹದಿಹರೆಯವನ್ನೆಲ್ಲ ಪ್ರಸ್ಸಿನಲ್ಲಿ ಪುಸ್ತಕಗಳಿಗೆ ಬೈಂಡ್‌ ಹಾಕುತ್ತ ಕಳೆಯಬೇಕಾಯಿತು.

ಆದರೆ, ಸ್ವಾಧ್ಯಾಯ ಮಾಡಿ, ಸರ್‌ ಹಂಫ್ರಿ ಡೇವಿಯ ಉಪನ್ಯಾಸಗಳನ್ನು ಕೇಳಿ, ಡೇವಿಯ ಕೈಕೆಳಗೆ ಸಹಾಯಕನಾಗಿ ದುಡಿದ ಫ್ಯಾರಡೆ, ಕೊನೆಗೆ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕನಾಗುವ ಮಟ್ಟಕ್ಕೆ ಬೆಳೆದ. ವಿದ್ಯುತ್‌ ಮತ್ತು ಕಾಂತಶಕ್ತಿಗಳನಡುವಿನ ಸಂಬಂಧವನ್ನು ಬಳಸಿಕೊಂಡು ಅವನು ಮಾಡಿದ ಪ್ರಯೋಗಗಳು ಅವನಿಗೆ ವಿಶ್ವಮನ್ನಣೆ ಗಳಿಸಿಕೊಟ್ಟವು.

ಫ್ಯಾರಡೆ 25ರ ಯುವಕ ನಾಗಿದ್ದಾಗ, ಡೇವಿಯವರ ಅಚ್ಚುಮೆಚ್ಚಿನ ಸಹಾಯಕನಾಗಿದ್ದ. ಹೇಳಿದ ಕೆಲಸವನ್ನು ಚಾಚೂ ತಪ್ಪದೆ, ಕಿಂಚಿತ್‌ ಊನವೂ ಇಲ್ಲದಂತೆ ಮಾಡಿ ಮುಗಿಸುವ ಈ ಹುಡುಗನೆಂದರೆ ಡೇವಿಯವ ರಿಗೂ ಇಷ್ಟ. ಮುಂದೆ, ಫ್ಯಾರಡೆಯೇ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕ ನಾದ ಮೇಲೆ, ಅವನ ಕೈಕೆಳಗೆ ಹಲವರು ಸಹಾಯಕರಾಗಿ ದುಡಿದರು. ಅವರಲ್ಲೊಬ್ಬ- ಆಂಡರ್‌ಸನ್‌. ಸೇನೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿ ಬಂದಿದ್ದ ಪ್ರಾಮಾಣಿಕ ಯೋಧ ಅವನು.

ಫ್ಯಾರಡೆ ವಿದ್ಯುತ್‌ ಮತ್ತು ಕಾಂತಗಳಲ್ಲದೆ ಗಾಜಿನ ತಯಾರಿಯಲ್ಲೂ ಬಹಳಷ್ಟು ಕೆಲಸ ಮಾಡಿದ್ದಾನೆ. ಅನೇಕ ಬಗೆಯ, ವಿವಿಧ ಗುಣಧರ್ಮದ ಗಾಜುಗಳನ್ನು ತಯಾರಿಸುವುದು ಅವನ ಪ್ರಯೋಗಗಳ ಭಾಗವಾಗಿತ್ತು. ಗಾಜಿನ ತಯಾರಿ ಕಷ್ಟ ಮಾತ್ರವಲ್ಲ, ಅಪಾರ ತಾಳ್ಮೆಯನ್ನು ಬೇಡುವ ಕೆಲಸ. ಒಂದೇ ಹದದಲ್ಲಿ ಬೆಂಕಿ ಊದುತ್ತ ಮರಳನ್ನು ಕರಗಿಸಿ ಬೇಕಾದ ದಪ್ಪದ ಗಾಜು ತಯಾರಿಸಬೇಕಾಗಿತ್ತು. ಅಂಥದೊಂದು ಕೆಲಸವನ್ನು ಒಂದು ದಿನ ಫ್ಯಾರಡೆ, ಆಂಡರ್‌ಸನ್‌ಗೆ ವಹಿಸಿ ಉಷ್ಣತೆ ಎಷ್ಟಿರಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ಸೂಚನೆಕೊಟ್ಟ.ಒಂದೇಉಷ್ಣತೆಯಲ್ಲಿಮರಳನ್ನುಕಾಯಿಸುವಂತೆ ಹೇಳಿ ಹೊರಟುಹೋದ. ಆದರೆ, ಬೇರೆ ಕೆಲಸಗಳಲ್ಲಿ ತೊಡಗಿಕೊಂಡ ಫ್ಯಾರಡೆಗೆ ಈ ಗಾಜಿನ ವಿಷಯ ಮರೆತೇ ಹೋಯಿತು. ಸೀದಾ ಮನೆಗೆ ಹೋಗಿಬಿಟ್ಟ! ಆದರೆ, ಹಲವು ಗಂಟೆಗಳು ಕಳೆದ ಮೇಲೆ ಅವನಿಗೆ ತಟ್ಟನೆ ಆಂಡರ್‌ಸನ್‌ನ ನೆನಪಾಯಿತು.

ಗಾಜಿನ ಕೆಲಸವನ್ನು ಮುಗಿಸುವುದಕ್ಕೆ ಹೇಳೇ ಇಲ್ಲವಲ್ಲ ಎಂದು ತಲೆಚಚ್ಚಿಕೊಂಡು, ವಾಪಸು ಪ್ರಯೋಗಾಲಯಕ್ಕೆ ಬಂದು ನೋಡಿದರೆ, ಅಲ್ಲಿ ಆಂಡರ್‌ಸನ್‌ ಉಷ್ಣತೆಯನ್ನು ಸಂಭಾಳಿಸಿಕೊಂಡು ಇನ್ನೂ ಮರಳಿನ ಜಾಡಿ ಹಿಡಿದುಕಾಯಿಸುತ್ತ ನಿಂತಿದ್ದ!

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.