ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ


Team Udayavani, Sep 15, 2020, 6:26 PM IST

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ಮದ್ರಾಸ್‌ ಪ್ರಾಂತ್ಯಕ್ಕೆಲ್ಲ ಪ್ರಸಿದ್ಧವಾಗಿದ್ದ ಪ್ರಸಿಡೆನ್ಸಿ ಕಾಲೇಜಿನ ಇಂಟರ್‌ ಮೀಡಿಯೆಟ್‌ ತರಗತಿಗಳಲ್ಲಿ ಶೈಕ್ಷಣಿಕ ವರ್ಷದ ಮೊದಲ ದಿನ. ವಿಜ್ಞಾನ ಪ್ರೊಫೆಸರರು ತರಗತಿ ಪ್ರವೇಶಿಸಿ, ಪ್ಲಾಟ್‌ಫಾರಮ್ಮಿನಲ್ಲಿ ನಿಂತು ಎಲ್ಲರನ್ನೂ ಒಮ್ಮೆ ಅವಲೋಕಿಸುತ್ತ ಬರುವಾಗಕಣ್ಣಿಗೆ ಬಿದ್ದದ್ದು, ಆ ಪುಟ್ಟ ಹುಡುಗ.17 – 18 ರ ಹರೆಯದ, ಮೀಸೆ ಮೂಡುತ್ತಿದ್ದ ಯುವಕರ ಮಧ್ಯದಲ್ಲಿ,14ಕ್ಕೂಕಾಲಿಡದ ಈ ಪುಟ್ಟ ಬಾಲಕ, ಮೊದಲ ಬೆಂಚಲ್ಲಿಕೂತು ಏನು ಮಾಡುತ್ತಿದ್ದಾನೆ? ಯಾರಯ್ಯ ನೀನು? ಕಾಲೇಜಿನ ತರಗತಿಯಲ್ಲಿ ನಿನಗೇನುಕೆಲಸ? ಎಂದು ಸ್ವಲ್ಪಕುತೂಹಲ, ಸ್ವಲ್ಪ ಅಸಹನೆಯಿಂದಕೇಳಿದರು.

ಹುಡುಗ ಎದ್ದುನಿಂತ. ಸ್ವಲ್ಪವೂ ಅಳುಕದೆ ಹೇಳಿದ: ನಾನು ಈ ಕ್ಲಾಸಿನ ವಿದ್ಯಾರ್ಥಿ ಸ್ವಾಮಿ. ಪಾಠಕೇಳಲು ಬಂದಿದ್ದೇನೆ! ಹಾಗೆ ಹೇಳಿದ್ದು ಚಂದ್ರಶೇಖರ ವೆಂಕಟರಾಮನ್‌. ಸಂಕ್ಷಿಪ್ತವಾಗಿ ಸಿ.ವಿ. ರಾಮನ್‌.ಆತನಿಗಿನ್ನೂ13 ತುಂಬಿರಲಿಲ್ಲವೆಂಬುದು ಸತ್ಯವೇ ಆದರೂ, ಆತಕಾಲೇಜು ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಸಂಪಾದಿಸಿಕೊಂಡೇ ಬಂದಿದ್ದ.

ಹತ್ತನೇ ತರಗತಿಯನ್ನು ಹನ್ನೆರಡನೇ ವಯಸ್ಸಿಗೇ ಪೂರೈಸಿಯೇ ಕಾಲೇಜು ಮೆಟ್ಟಿಲು ಹತ್ತಿದ್ದ. ಅಷ್ಟೇಕೆ, ಭೌತಶಾಸ್ತ್ರದ ಉದ್ಗಂಥಗಳನ್ನೆಲ್ಲ ಓದಿಕೊಂಡಿದ್ದ. ಕೆಲವು ವಿಷಯಗಳಲ್ಲಿಕಾಲೇಜಿನ ಪ್ರಾಧ್ಯಾಪಕರಿಗಿದ್ದಷ್ಟೇ ಜ್ಞಾನವನ್ನೂ ಸಂಪಾದಿಸಿದ್ದ. ರಾಮನ್‌ ತನ್ನ ವಯಸ್ಸಿಗೆ ಮೀರಿದ ಜ್ಞಾನವನ್ನು ಸಂಪಾದಿಸಿದ್ದರಷ್ಟೇ ಅಲ್ಲ, ಹಾಗೆ ಹೆಚ್ಚುವರಿ ಜ್ಞಾನ ಸಂಪಾದಿಸಿದ್ದೇನೆಂಬ ಅರಿವೂ ಅವರಿಗಿತ್ತು. ಭೌತಶಾಸ್ತ್ರದ ವಿಷಯದಲ್ಲಿ ತಮ್ಮ ತಿಳಿವಳಿಕೆಯ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ.

1906ರಲ್ಲಿ ಲಂಡನ್ನಿಂದಪ್ರಕಟವಾಗುತ್ತಿದ್ದ, ಆಗಿನ ಕಾಲದ ಪ್ರಸಿದ್ಧ ವಿಜ್ಞಾನ ಪತ್ರಿಕೆ ಫಿಲಸಾಫಿಕಲ್‌ಜರ್ನಲ್ ನಲ್ಲಿ ಒಂದುಪ್ರಬುದ್ಧ ಲೇಖನ ಪ್ರಕಟವಾಯಿತು. ಲೇಖಕರ ಹೆಸರು ಚಂದ್ರಶೇಖರ ವೆಂಕಟರಾಮನ್‌, ಬಿ.ಎ ವಿದ್ಯಾರ್ಥಿ, ಪ್ರಸಿಡೆನ್ಸಿ ಕಾಲೇಜು ಎಂದು ಇತ್ತು. ಸಹಜವಾಗಿಯೇ ಆ ಕಾಲೇಜಿನ ಪ್ರಾಧ್ಯಾಪಕರ ಗಮನವನ್ನು ಅದು ಸೆಳೆಯಿತು. ಸೀನಿಯರ್‌ ಪ್ರೊಫೆಸರ್‌ ಒಬ್ಬರು ರಾಮನ್ನರನ್ನುಕರೆದುಕೇಳಿದರು: “ಏನಯ್ಯ, ಈ ಲೇಖನವನ್ನು ನೀನು ನನಗೆ ತೋರಿಸಿಯೇ ಇಲ್ಲವಲ್ಲ?’ ಸ್ವಲ್ಪವೂ ಅಳುಕದೆ ರಾಮನ್‌- ಆರು ತಿಂಗಳ ಹಿಂದೆಯೇ ಅದನ್ನು ತಮ್ಮಕೈಗಿಟ್ಟಿದದೆ. ನಿಮ್ಮ ಪ್ರತಿಕ್ರಿಯೆಯನ್ನೂ ಕೇಳಿದ್ದೆ. ಆದರೆ ನೀವದನ್ನು ಓದಿದ ಬಗ್ಗೆ ಯಾವೊಂದು ಮಾತನ್ನೂ ಆಡಿಲ್ಲ. ಹುಡುಕಿದರೆ ಅದು ನಿಮ್ಮ ಮೇಜು ಅಥವಾ ಕಪಾಟಿನಲ್ಲೇ ಸಿಗಬಹುದು ಎಂದು ಪ್ರತ್ಯುತ್ತರಿಸಿದರು!

ಹೌದು, ಅದು ಪ್ರಾಧ್ಯಾಪಕರ ಮೇಜಿನಲ್ಲೇ ಕಡತಗಳ ಮಧ್ಯೆ ಆರು ತಿಂಗಳಿಂದ ಬಿದ್ದುಕೊಂಡಿತ್ತು! ಇಲ್ಲಿನವರಿಗೆ ಇದ್ದಿಲಾಗಿ ಕಂಡದ್ದು ಹೊರಗಿನವರಿಗೆ ವಜ್ರವೆಂದು ಅರಿವಾಗಿತ್ತು. ರಾಮನ್ನರಿಗೆ ಭೌತಶಾಸ್ತ್ರದ ಬಗ್ಗೆಯಷ್ಟೇ ಅಲ್ಲ, ಸಾಧನೆಯನ್ನು ಗುರುತಿಸುವುದರಲ್ಲಿ ಜನ ತೋರುವ ಔದಾಸೀನ್ಯದ ಬಗ್ಗೆಯೂ ಆಳವಾದ ಅರಿವಿತ್ತು. ಸಾಧನೆ ಮಾಡಿ ಮೌನವಾಗುಳಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾದ ವೇದಿಕೆಯಲ್ಲಿಟ್ಟಾಗಷ್ಟೇ ಅದಕ್ಕೆ ಮರ್ಯಾದೆ ಎಂಬುದು ಬಹುಶಃ ಅವರು ಕಾಲೇಜಿನಲ್ಲಿಕಲಿತ ಹಲವು ಪಾಠಗಳಲ್ಲೊಂದು. ­

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.