ಮನಸೆ ರಿಲ್ಯಾಕ್ಸ್‌ ಪ್ಲೀಸ್‌ ತಾಳು ಮನವೇ ತಾಳು…


Team Udayavani, Aug 11, 2020, 2:29 PM IST

ಮನಸೆ ರಿಲ್ಯಾಕ್ಸ್‌ ಪ್ಲೀಸ್‌ ತಾಳು ಮನವೇ ತಾಳು…

ಮುರಾರಿಗೆ ಸದಾ ಊರು ಸುತ್ತುವ ಅಭ್ಯಾಸವಿತ್ತು. ಅವನಿಗಿದ್ದುದು ಚಿಕ್ಕ ಸಂಬಳದ ಕೆಲಸ. ಆ ಹಣದಲ್ಲೇ ಸ್ವಲ್ಪ ಉಳಿಸಿ ಟೂರ್‌ ಹೊರಟುಬಿಡುತ್ತಿದ್ದ. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತೇ ಇದೆ. ನನಗೆ ಕೋಶ ಓದುವಷ್ಟು ಪುರುಸೊತ್ತು, ತಾಳ್ಮೆ ಇಲ್ಲ. ಆದರೆ ದೇಶ ಸುತ್ತಬ ಅನ್ನುತ್ತಿದ್ದ. “ಇದೇನಯ್ಯಾ, ವರ್ಷವಿಡೀ ಸುತ್ತುತ್ತಲೇ ಇರ್ತೀಯಲ್ಲ?’ ಎಂದು ಕೇಳಿದರೆ- ನನ್ನ ಕಾಲಲ್ಲಿ ಚಕ್ರ ಇದೆ. ನಾನಾದರೂ ಏನು ಮಾಡಲಿ ಹೇಳಿ… ಎಂದು ನಗುತ್ತಿದ್ದ. ಆದರೆ ಕೋವಿಡ್ ಬಂದದ್ದೇ ನೆಪ; ಮುರಾರಿಗೆ ಗೃಹಬಂಧನ ಆಗಿಹೋಯಿತು. ಅವನು ಕೆಲಸ ಮಾಡುತ್ತಿದ್ದ ಕಂಪನಿ, ಮನೆಯಿಂದಲೇ ಕೆಲಸ ಮಾಡಿ ಎಂದಿತು. ವಾರವಿಡೀ ಕೆಲಸ ಮಾಡಿದವನು, ಭಾನುವಾರ ಎಲ್ಲಾದರೂ ಸುತ್ತಾಡಲು ನಿರ್ಧರಿಸುತ್ತಿದ್ದ. ಆದರೆ ಲಾಕ್‌ಡೌನ್‌ನ ನಿಯಮಗಳು ಅವನ ಎಲ್ಲಾ ಲೆಕ್ಕಾಚಾರಗಳನ್ನೂ ಉಲ್ಟಾ ಮಾಡಿಬಿಡುತ್ತಿದ್ದವು.

ಪರಿಸ್ಥಿತಿ ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಎಂದುಕೊಂಡು ಮುರಾರಿ ಕಾದಿದ್ದೇ ಬಂತು. ಏನೂ ಪ್ರಯೋಜನ ಆಗಲಿಲ್ಲ. ವರ್ಷಗಳ ಕಾಲ ತನ್ನಷ್ಟಕ್ಕೆ ತಾನು ರಾಜ್ಯ- ದೇಶ ಸುತ್ತುತ್ತಿದ್ದ ಮುರಾರಿಗೆ, ಈಗ ಹೊತ್ತು ಕಳೆಯುವುದೇ ದೊಡ್ಡ ತಲೆನೋವಾಯಿತು. ಯಾರ ಜೊತೆಗಾದರೂ ಗಂಟೆಗಟ್ಟಲೆ ಮಾತಾ ಡೋಣ ಅಂದರೆ, ಕೊರೊನಾ ಅದಕ್ಕೂ ಕಲ್ಲು ಹಾಕಿತ್ತು. ಇದರ ಒಟ್ಟು ಪರಿಣಾಮ ಎಂಬಂತೆ- ಮುರಾರಿಗೆ ಡಿಪ್ರಶನ್‌ ಜೊತೆ ಯಾಯಿತು.ಅದುವರೆಗೂ ಗಲಗಲಗಲ ನಗುತ್ತಾ ಮಾತಾಡುತ್ತಿದ್ದವ, ಈಗ ಮೌನದ ಮೊರೆ ಹೋಗಿದ್ದ. ಆನಂತರದಲ್ಲಿ ಇದು ಇನ್ನಷ್ಟು ವಿಕೋಪಕ್ಕೆ ಹೋಗಿ, ಮಾನಸಿಕ ವೈದ್ಯರ ಬಳಿ ಚಿಕಿತ್ಸೆಗೂ ಹೋದ. ಡಿಪ್ರಶನ್‌ ಎಂಬುದು ಮನುಷ್ಯನನ್ನು ಯಾವ ಮಟ್ಟದಲ್ಲಿ ಹಣಿಯಬಲ್ಲದು ಎಂಬುದಕ್ಕೆ ಮುರಾರಿಯ ಬದುಕಿನ ಕಥೆ ಒಂದು ಉದಾಹರಣೆ, ಅಷ್ಟೇ. ಡಿಪ್ರಶನ್‌ಗೆ ಕಾರಣ ಹೀಗೆಯೇ ಇರಬೇಕು ಎಂದೇನೂ ಇಲ್ಲ.

ಏನೋ ಆಗಿಬಿಡ್ತು, ನನಗೆ ಏನೋ ಆಗಿಬಿಡ್ತದೆ ಎಂದು ಮನದೊಳಗೇ ಯೋಚಿಸುತ್ತಾ ಕೊರಗುವುದು ಡಿಪ್ರಶನ್‌ನ ಲಕ್ಷಣ. ಎಷ್ಟೋ ಸಂದರ್ಭದಲ್ಲಿ ಡಿಪ್ರಶನ್‌ನ ಕಾರಣಕ್ಕೇ ಕೆಲವರು ಜೀವ ಕಳೆದುಕೊಳ್ಳುವುದೂ ಉಂಟು. ಡಿಪ್ರಶನ್‌ ಇಲ್ಲದ ಮನುಷ್ಯನಿಲ್ಲ ನಿಜ. ಆದರೆ, ಅದು ನಮ್ಮನ್ನು ಕಂಟ್ರೋಲ್‌ ಮಾಡುವಂತೆ, ನಮ್ಮ ಮನಸನ್ನೇ ಚಲ್ಲಾಪಿಲ್ಲಿ ಮಾಡುವಂತೆ ಆಗಬಾರದು. ಡಿಪ್ರಶನ್‌ ಜೊತೆಯಾಗುತ್ತಿದೆ ಎಂಬ ಸೂಚನೆ ಪ್ರತಿ ಮನುಷ್ಯನಿಗೂ ಮೊದಲೇ ಸಿಕ್ಕಿಬಿಡುತ್ತದೆ. ಅಂಥ ಸಂದರ್ಭದಲ್ಲಿ, ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಕೊಳ್ಳಬೇಕು. ಅದು ಚಿತ್ರ ಬಿಡಿಸುವುದಿರಬಹುದು, ಕಥೆ, ಕವಿತೆ, ನಾಟಕ ಕಾದಂಬರಿ ಬರೆಯುವ/ ಓದುವ ಕೆಲಸವೇ ಆಗಿರಬಹುದು, ಪೂಜೆ, ಯೋಗ- ಧ್ಯಾನ ಆಗಬ ಹುದು. ಅಥವಾ ಕೃಷಿ ಕೆಲಸ ಆಗಬಹುದು (ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವ, ಅಡುಗೆ ಕಲಿಯುವ ಕೆಲಸ ಆಗಬಹುದು)- ಒಟ್ಟಿನಲ್ಲಿ, ಒಂದು ದಿನದ ಸಾಕಷ್ಟು ಹೊತ್ತು ಬ್ಯುಸಿ ಆಗುವಂಥ ಒಂದು ಕೆಲಸಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕು. ಅಷ್ಟಾಗಿಬಿಟ್ಟರೆ, ಡಿಪ್ರಶನ್‌ನಿಂದ ಮನಸ್ಸು ತಂತಾನೇ ಹೊರಗೆ ಬಂದುಬಿಡುತ್ತದೆ. ಇಷ್ಟಾದರೆ, ಕೆಟ್ಟ ಯೋಚನೆಗಳಿಗೆ, ನಿರ್ಧಾರಗಳಿಗೆ ಮನಸ್ಸು ಬಲಿಯಾಗು ವುದು ತಪ್ಪುತ್ತದೆ.

 

 

-ಗೀತಾಂಜಲಿ

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.