ಮನದೊಳಗೆ ಬರೆದಿರುವ ಹೆಸರು ನಿನ್ನದೇ…


Team Udayavani, Oct 1, 2019, 5:00 AM IST

a-12

ನನ್ನೊಲವೇ,
ನನ್ನ ನಿನ್ನ ಪರಿಚಯಕ್ಕೆ ಇಂದಿಗೆ ಬರೋಬ್ಬರಿ ಮೂರು ವರ್ಷ, ಮೂರು ತಿಂಗಳು ತುಂಬಿದವು. ಅಂದು ಕಾಲೇಜಿಗೆ ನನ್ನ ಮೊದಲ ಆಗಮನ. ನಿನ್ನದು ಗೊತ್ತಿಲ್ಲ. ತಡಮಾಡಿ ಅವಸವಸರವಾಗಿ ಹಳೆಯ ಹಾಡಿನ ಮಾಧುರ್ಯದಂತೆ ನಡೆದು ಬಂದು ನನ್ನಿಂದ ಅನತಿ ದೂರದ ಬೆಂಚ್‌ ಮೇಲೆ ಕುಳಿತು ನಿಟ್ಟುಸಿರುಬಿಟ್ಟೆ.

ಆ ದಿನ ಇನ್ನೂ ನೆನಪಿದೆ. ಅಕಸ್ಮಾತಾಗಿ ಒಬ್ಬರಿಗೊಬ್ಬರು ನೋಡಿ ನಕ್ಕಾಗಿನಿಂದ, ಎದೆಯ ಗೋಡೆಯ ಮೇಲೆ ಹೃದಯ ಪ್ರೇಮ ಲಹರಿ ಗೀಚಲು ಆರಂಭವಾಯಿತು. ಮನಸ್ಸು ಬಿಡದೇ ನಿನ್ನ ನೆನಪಿನೊಳಗೆ ಚಡಪಡಿಸುತ್ತಿತ್ತು. ನೀನು ದೂರದಿ ಅಲ್ಲೆಲ್ಲೋ ಕಾಣುವ ಅನಾಮಿಕ ಪುಟ್ಟ ದ್ವೀಪ. ನಾನು ಅದನ್ನೇ ತದೇಕಚಿತ್ತದಿಂದ ನೋಡುತ್ತ ನಿಂತಿರುವ ಪ್ರೀತಿಯ ಫ‌ಕೀರ. ಭೋರ್ಗರೆವ ಸಾಗರದ ಎದುರು ಈಜಿ ನಿನ್ನ ಸೇರೋದು, ಬೆಂಕಿಯೊಂದಿಗೆ ಸರಸವಾಡುವುದು ಎರಡೂ ಒಂದೇ ಅಂತ ಗೊತ್ತಾಗಿದ್ದೇ ಆವಾಗ.

ನೋಡಿದಷ್ಟೂ ನೋಡುತ್ತಲೇ ಇರಬೇಕು ಎನ್ನುವ ಸರಳ ಚೆಲುವು ನಿನ್ನದು. ನಿರಭ್ರ ಆಕಾಶದಲ್ಲಿ ತೇಲುವ ಬೆಳದಿಂಗಳಂಥ ನಿನಗೆ ಹೇಳದೆ ಕೇಳದೆ ಶುದ್ಧ ಬಿಳಿ ಹಾಳೆಯಂಥ ನನ್ನ ಒಲವಿನಲ್ಲಿ ನಿನ್ನದೇ ಹೆಸರು ಬರೆದಿರುವೆ. ಅಲ್ಲಿ ಬರೀ ನಿನ್ನದೇ ಕನಸು, ನಿನ್ನದೇ ಕಲ್ಪನೆ, ನಿನ್ನದೇ ತುಂಬು ನಿರೀಕ್ಷೆ.

ನಿನ್ನ ಪ್ರೀತಿಯ ಬಲೆಯೊಳಗೆ ಬಿದ್ದಾಗಿನಿಂದ ಊಟ, ನಿದ್ರೆ, ನೀರಡಿಕೆ ಎಲ್ಲವೂ ಮರೆತು ಹೋಗಿದೆ. ನನ್ನೊಳಗಿನ ಬಹುದಿನಗಳ ಪ್ರೀತಿಯೆಂಬ ಸಿಹಿ ಸಂಕಟಕ್ಕೆ ಪೂರ್ಣರಾಮ ಹಾಕಬೇಕೆಂದರೆ ನಮ್ಮ ಪ್ರೀತಿಗೆ ಆದಷ್ಟು ಬೇಗ ನಿನ್ನ ಒಪ್ಪಿಗೆಯ ಮುದ್ರೆಯೊತ್ತಬೇಕು.

ರಂಗನಾಥ್‌ ಗುಡಿಮನಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.