ಸುಮಧುರ ಪ್ರೇಮಗೀತೆಯಲ್ಲಿ ನಿನಗ್ಯಾಕೆ ಅಪಶ್ರುತಿ ಕೇಳಿಸ್ತು?


Team Udayavani, Mar 28, 2017, 3:50 AM IST

28-JOSH-7.jpg

ಪ್ರೀತಿಯ ಮನದೊಡೆಯ, 
ಏನಯ್ಯ ನಿನ್ನ ಲೀಲೆ? ಹೀಗ್ಯಾಕೆ ಅನುಕ್ಷಣವೂ ಎಡೆಬಿಡದೆ, ನಿದ್ದೆಯ ಕನವರಿಕೆಯಲ್ಲೂ, ಹಗಲಿನ ಜೋಂಪಿನಲ್ಲೂ, ಸಂತಸದಲ್ಲಿ, ಕೋಪದಲ್ಲಿ, ವೇದನೆಯಲ್ಲಿ ಅಷ್ಟೆಲ್ಲಾ ಯಾಕೆ, ಎಕ್ಸಾಮ್‌ ಹಾಲ್‌ನಲ್ಲೂ ಕಾಡುವುದೇನೋ ಹುಡುಗ? ಹೊರಗಡೆ ಮೈ ಕೊರೆವ ಚಳಿ, ಒಳಗಡೆ ಧಗಧಗಿಸುವ ನಿನ್ನ ನೆನಪು. ಯಾಕಿಷ್ಟು ಕೋಪ, ತಿರಸ್ಕಾರ ನನ್ನ ಮೇಲೆ? ಯಾಕೋ ಕಣ್ಣೀರಾದೆ ಇಂದು ನಿನ್ನ ನೆನೆದು. ಹರೆಯದಲ್ಲಿ ಈ ಅನುರಾಗ ಚೆಲ್ಲಾಟಗಳು ಇನಿಯನ ದನಿಗಾಗಿ ಹಾತೊರೆಯುವುದು ಸಹಜ ಬಿಡು. ಆದರೆ ಮುಪ್ಪಿನಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ, ಮುಪ್ಪಿನ ಭಯ, ಆತಂಕಗಳು, ಜಿಗುಪ್ಸೆ ಕಾಡದಂತೆ ನಿನ್ನ ಆದರಿಸಿ ಜೊತೆಯಾಗಿರಬೇಕು. ಬರುವ ಸವಾಲುಗಳಿಗೆ ಎದೆಯೊಡ್ಡಿ ನಿನ್ನನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕು ಎನಿಸುತ್ತದೆ. ಆ ಕಾಲವು ನಿರ್ಧರಿಸುತ್ತದೆ ನನ್ನ ಒಲವಿನ ಬಲವು ಎಷ್ಟಿದೆಯೆಂದು. 

ಒಂದೊಮ್ಮೆ ನಿನ್ನನ್ನು ವರ್ಣಿಸಿ ಕವನವನ್ನೋ, ಲೇಖನವನ್ನೋ ಬರೆಯೋಣ ಎಂದುಕೊಳ್ಳುತ್ತೇನೆ. ಪದಗಳು ಸಾಕೆನಿಸುವುದಿಲ್ಲ, ಮುಗಿಯದಷ್ಟು ರಾಶಿ ಭಾವಗಳು. ಏನಿದೆಯೋ ಅಷ್ಟು ನಿನ್ನಲ್ಲಿ? ಈ ತರಹ ಒಬ್ಬ ಹುಡುಗಿಗೆ ನಿನ್ನ ಹುಚ್ಚು ಹಿಡಿಸುವ ಪರಿಯೇನು ಹುಡುಗ? ಮನಸ್ಸು ನಿನ್ನಲ್ಲಿ ಸೋತಾಯಿತು. ಅದೆಂಥ ಮನೋಹರವಾದ ಮೋಹ ನಿನ್ನಲ್ಲಿ ತಳೆದಿದೆ. ಸನಿಹ ಬರಲು ಹಠ ಹಿಡಿವ ಕಣ್ಣ ಬಿಂದುಗಳು ನಿನ್ನ ನೆನೆದಾಗ ಮಾತ್ರ ಸರಾಗವಾಗಿ ಹರಿಯುತ್ತವೆ. ಹೀಗೇಕೆ ನೀ ಮೌನದಿ ದೂರ ಸರಿದೆ, ಜೀವ ಚೇತನವೆ? ಸುಖವಿರಲಿ ದುಃಖವಿರಲಿ ನಿನ್ನ ನೆನಪಿರುತ್ತೆ ಕಣೋ. ಜೀವ ಜೀವದ ಕಣವೂ ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ ಗೆಳೆಯ. ಒಲವಿನ ಭಾವ ತರಂಗಿಣಿಯನ್ನು ಹರಿಸುವ ಸವಿಜೇನ ಪನ್ನೀರು ನೀನು. ಇಷ್ಟು ದಿನದ ನಿನ್ನ ಸಾಂಗತ್ಯದಲ್ಲಿ ಒಂದು ದಿನವೂ ಒಂಟಿಯೆನಿಸಿರಲಿಲ್ಲ. ದೂರವಿದ್ದರೂ ನೀ ನನಗೆ ಸಿಗುವುದಿಲ್ಲ ಎಂದು ತಿಳಿದಿದ್ದರೂ ನಿನ್ನ ನೆನಪಲ್ಲಿ ಬದುಕಬಲ್ಲೆನೆಂದು ಪಣ ತೊಟ್ಟವಳು ನಾನು. ಆದರೂ ನನ್ನ ಪ್ರೀತಿಯಲ್ಲಿ ನಿನಗ್ಯಾಕೆ ಅಪಶ್ರುತಿ ಕೇಳಿಸಿತು? ಕಾರಣ ತಿಳಿಯುತ್ತಿಲ್ಲ.

ಒಮ್ಮೊಮ್ಮೆ ಕನಸಿನಿಂದ ಎಚ್ಚರವಾದರೆ ಇದ್ದಕ್ಕಿದ್ದ ಹಾಗೆ ಮದುವಣಗಿತ್ತಿ ಆಗ್ತೀನೆ. ಪಚ್ಚೆ ಹಸಿರ ಸೀರೆಯುಟ್ಟು, ನನ್ನ ಬಾಳಿನ ಭಾಗ್ಯದ ನಿನ್ನ ಸಿಂಧೂರವನ್ನಿಟ್ಟು ಹಣೆಗೆ, ಹೂ ಮುಡಿದು ನನ್ನ ಸೆರಗಿಗೆ, ನಿನ್ನ ಜೀವದ ಸೆರಗಿಗೆ, ನಿನ್ನ ಸಾಮೀಪ್ಯದ ಶಲ್ಯಕ್ಕೆ ಒಲವಿನ ಗಂಟು ಹಾಕಿ, ನಿನ್ನ ಕಿರು ಬೆರಳಿಗೆ ನನ್ನ ಬೆರಳು ಬೆರೆಸಿ ನಿಂತೆನೆಂದರೆ ನಾನೇ ಸೌಭಾಗ್ಯವತಿ ಅಲ್ಲವೆ? ಕಂಡ ಕನಸುಗಳೆಲ್ಲ ನಿಜವಾಗಿದ್ದರೆ ಬದುಕಿಗೆ ಅರ್ಥವೇನಿರುತ್ತಿತ್ತು ಅಲ್ಲವಾ? ನನಗೂ ತಿಳಿದಿದೆ ನಿನ್ನ ಕೈ ಹಿಡಿದು ನಡೆಯುವಷ್ಟು ಅದೃಷ್ಟವಿಲ್ಲ, ಸಂಗಾತಿಯಾಗಿ ಬಾಳುವ ಸುದಿನವೂ ಮುಂದಿಲ್ಲ. ಯಾವುದೋ ಖಾಲಿ ಎದೆಯಲ್ಲಿ ನಿನ್ನ ಪ್ರತಿ ಬಿಂಬವನ್ನೇ ಮುಂದಿಟ್ಟು ಇದೇ ಪ್ರೀತಿ, ಇದು ನನ್ನೆದೆಯ ಜೀವಾಳ ಎಂದು ಬದುಕಿನ ಬಂಡಿಯನ್ನು ನಡೆಸುತ್ತಿರುವವಳು ನಾನು. 

ನೀನು ನನ್ನ ಜೀವಮಾನದ ಅಫಿಡೆವಿಟ್ಟಿನ ಪ್ರೀತಿಯನ್ನು ನೀಡುತ್ತೀ ಎಂಬ ಸ್ವಾರ್ಥದಿಂದ, ನನಗೆ ಮಾತ್ರ ಸೀಮಿತ ಪ್ರೀತಿ ನೀಡುತ್ತೀಯ ಎಂದು ಪ್ರೀತಿ ಕೊನರಲಿಲ್ಲಯ್ನಾ. ನಿನ್ನ ಅನುರಾಗ ದೊರೆಯದಾದರೂ ನೀನೆಂದೂ ನನ್ನವನೇ. ಕನಸಿನಲ್ಲಿ ಮಾತ್ರ ದಕ್ಕಿದವನು. ಬೆಚ್ಚನೆಯ ಹೃದಯದಲ್ಲಿ ನಿನ್ನ ಒಡನಾಟಕ್ಕಾಗಿ ಕಾದವಳು. ಏನು ಮಾಡಲಿ ಹೇಳು? ಎಷ್ಟೇ ಸಮಾಧಾನ ಹೇಳಿಕೊಂಡರೂ, ಕೆಲವೊಮ್ಮೆ ನಿನ್ನ ಮೇಲಿನ ಒಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. 
                                
ಇಂತಿ ನಿನ್ನ ಅಭಿಸಾರಿಕೆ

ಟಾಪ್ ನ್ಯೂಸ್

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.