ದೀಪಾವಳಿ ದಿನವೇ ಬೆಂಕಿ ಹೊತ್ತಿಕೊಂಡಿತು


Team Udayavani, Dec 31, 2019, 4:22 AM IST

vc-1

ಇತ್ತೀಚೆಗಂತೂ ಕವಿಮಹಾಶಯರಿಗಾಗಿ ಹಲವಾರು ವಾಟ್ಸಾಪ್‌ ಗುಂಪುಗಳು ಹುಟ್ಟಿಕೊಂಡಿವೆ. ಎಲ್ಲಾ ಗುಂಪುಗಳಲ್ಲೂ ಅವರೇ ಇದ್ದರೂ, ಅಲ್ಲಲ್ಲಿ ಆಗತಾನೆ ಕತೆ, ಕವಿತೆಯನ್ನು ಓದಿಕೊಳ್ಳುತ್ತಿರುವವರೂ ಇದ್ದಾರೆ. ಸಾಹಿತಿ, ಬರಹಗಾರರನ್ನು ಗುಂಪಿಗೆ ಸೇರಿಸುವುದು ಬಲು ಸುಲಭವಾಗಿದೆ. ಪತ್ರಿಕೆಗಳಲ್ಲಿ ಹೆಸರು, ಫೋನ್‌ ನಂಬರ್‌ ಕಂಡರೆ ಮುಗೀತು. ಹೇಳದೇ ಕೇಳದೆ, ಅವರನ್ನೂ ಹೊಸ ಹೊಸ ಗುಂಪುಗಳಲ್ಲಿ ಸೇರಿಸಿಬಿಡುತ್ತಾರೆ. “ನಾನು ನಿಮ್ಮನ್ನು ವಾಟ್ಸಾಪ್‌ ಗುಂಪಿಗೆ ಸೇರಿಸಬಹುದೆ?’ ಅಂತ ಸೌಜನ್ಯಕ್ಕಾದರೂ ಯಾರೂ ಕೇಳುವುದಿಲ್ಲ. ಇಂತಿಪ್ಪ ಜನರೇ, ಪತ್ರಿಕೆಯಲ್ಲಿ ಪ್ರಕಟವಾದ, ನನ್ನ ಬರಹದ ಕೊನೆಗಿದ್ದ ಮೊಬೈಲ್‌ ನಂಬರ್‌ ಅನ್ನು ಹಲವು ಗುಂಪುಗಳಲ್ಲಿ ಹಾಕಿಬಿಡುತ್ತಿದ್ದರು. ಅದರಿಂದ ನಾನು ಬಿಡಿಸಿಕೊಂಡು ಬರುವುದು, ಮತ್ತೆ ಇನ್ನೊಬ್ಬರು ನನ್ನ ಸೇರಿಸುವುದೂ ಮಾಮೂಲಿಯಾಗಿತ್ತು. ಇಂಥದೇ ಮಾರ್ಗದಲ್ಲಿ ಸೇರಿಕೊಂಡ ಗ್ರೂಪ್‌, ಈ ಕಾವ್ಯ ಸಿಂಚನ ವೇದಿಕೆ.

ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಹುರುಪು ಶುರುವಾಯಿತು. ಕಾರಣ, ದೀಪಾವಳಿ. ಏನಾದರು ಮಾಡಲೇಬೇಕು ಅಂತ, ಹಬ್ಬವನ್ನು ನೆಪವಾಗಿಟ್ಟುಕೊಂಡು ಗುಂಪಿನಲ್ಲಿ ಕವನ ಸ್ಪರ್ಧೆಯನ್ನು ಆಯೋಜಿಸಲಾಯಿತು. ಗ್ರೂಪ್‌ನ ಅಡ್ಮಿನ್‌, ಈ ಸ್ಪರ್ಧೆಯ ರೂವಾರಿ. ಬೆಳಗ್ಗೆಯಿಂದ ಸಂಜೆಯವರೆಗೂ ಕವನವನ್ನು ಗುಂಪಿನಲ್ಲಿ ಹಾಕುವುದು. ಉಳಿದವರು ಆ ಕವನಗಳ ವಿಮರ್ಶೆ ಮಾಡುವುದು ಅಂತ ತೀರ್ಮಾನವಾಯಿತು. ಹಾಗೆಯೇ, ನಮ್ಮ ಗುಂಪಿನಲ್ಲೇ ಒಬ್ಬರನ್ನು ಕವನದ ಆಯ್ಕೆಗೆ ನಿರ್ಣಾಯಕನನ್ನಾಗಿ ನೇಮಿಸಲಾಗಿತ್ತು. ಸ್ಪರ್ಧೆ ಏನೋ ಚೆನ್ನಾಗಿ ನಡೆಯಿತು. ಎಲ್ಲ ಕವಿ ಮಹಾಶಯರೂ ತಮಗೆ ತೋಚಿದಂತೆ ಕವನಗಳನ್ನು ಗೀಚಿ ಗುಂಪಿನಲ್ಲಿ ಹಾಕಿದರು. ಆದರೆ, ಸಮಸ್ಯೆ ಎದುರಾಗಿದ್ದೇ ಇಲ್ಲಿಂದ. ಯಾರೂ ವಿಮರ್ಶೆಗೆ ಮುಂದಾಗಲಿಲ್ಲ. ಕೊನೆಗೆ, ನಿರ್ಣಾಯಕ ಮಾತ್ರ ವಿಮರ್ಶೆಯಲ್ಲಿ ತೊಡಗಿದ. ಕಾವ್ಯದ ಗಂಧಗಾಳಿಯೂ ಇಲ್ಲದ ನಿರ್ಣಾಯಕನ ವಿಮರ್ಶೆಯು ಗುಂಪಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಹೀಯಾಳಿಸುವ , ಮೂದಲಿಸುವ ರೂಪದಲ್ಲಿದ್ದ ಅವನ ವಿಮರ್ಶೆಯಿಂದಾಗಿ ಗುಂಪಿನ ಸದಸ್ಯರೆಲ್ಲಾ ಅವರನ್ನು ಹಾಗೂ ಅಡ್ಮಿನ್‌ನನ್ನು ತರಾಟೆಗೆ ತೆಗೆದುಕೊಂಡರು. ಆದರೆ, ವಿಮರ್ಶಕ ತನ್ನ ವಿಮರ್ಶೆ ಸರಿಯಾಗಿದೆ ಎಂದು ಸಮರ್ಥಿಸಲು ಮುಂದಾದರು. ಆಗ, ವಾದ ಜೋರಾಗಿ ಜಗಳದ ರೂಪ ಪಡೆದು, ಕೊನೆಗೆ ವಿಕೋಪಕ್ಕೆ ತಲುಪಿತು. ಇದರಿಂದಾಗಿ ಬೇಸತ್ತ ಅಡ್ಮಿನ್‌ ಮಹಾಶಯರು, ಈ ಕವಿಗಳ ಸಹವಾಸವೇ ಬೇಡ ಎಂದುಕೊಂಡು ಗುಂಪಿನಿಂದ ಹೊರ ನಡೆದರು. ಒಬ್ಬ ಅವಿವೇಕಿಯಿಂದಾಗಿ ಸದುದ್ದೇಶದ ಗುಂಪು ಅಂದು ಅಂತ್ಯ ಕಂಡಿತು.

ಎಲ್ಲರ ಕವನಗಳು ಬಾಯಿ ಮುಚ್ಚಿದವು. ಹೀಗೆ, ದೀಪಾವಳಿಯಂದು ನಮ್ಮ ಗ್ರೂಪ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು.

ವೆಂಕಟೇಶ ಚಾಗಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.