ಪದ ಹುಟ್ಟಿದ ಕತೆ


Team Udayavani, Jan 14, 2020, 4:53 AM IST

2

ಗಣಕ ತಂತ್ರಜ್ಞಾನ ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅದರಲ್ಲಿ ಅತ್ಯಂತ ಗಹನವಾದ ಕೆಲಸ ಮಾಡಿದವರ ಪೈಕಿ ಗ್ರೇಸ್‌ ಹಾಪ್ಪರ್‌ ಎಂಬಾಕೆಯೂ ಒಬ್ಬಳು. ಗಣಿತದ ವಿದ್ಯಾರ್ಥಿನಿಯಾಗಿದ್ದ ಗ್ರೇಸ್‌, ನೌಕಾದಳದಲ್ಲಿಯೂ ಕೆಲಸ ಮಾಡಿ ಆಫೀಸರ್‌ ಪದವಿಗೇರಿದ ಗಟ್ಟಿಗಿತ್ತಿ. ಗಣಕ ವಿಜ್ಞಾನದಲ್ಲಿ ನಡೆಯುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಬೆಳೆದು ಕೊನೆಗೆ ಆ ಕ್ಷೇತ್ರಕ್ಕಿಳಿದಳು. ಗಣಕ ಲೋಕದಲ್ಲಿ -quot; ಬಗ್‌ -quot; ಎಂಬ ಪದವನ್ನು ಟಂಕಿಸಿದವಳು ಅವಳೇ. ಈ ಪದ ಗಣಕ ಪದಕೋಶವನ್ನು ಸೇರಿದ ಕತೆ ಸ್ವಾರಸ್ಯವಾಗಿದೆ.

ಒಮ್ಮೆ ಆಕೆ ಕೆಲಸ ಮಾಡುತ್ತಿದ್ದ ಗಣಕದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವಂತೆ. ಕ್ರಮವಿಧಿ (Algorithm) ಗಳೆಲ್ಲ ಸರಿಯಾಗೇ ಇದ್ದರೂ ಗಣಕ ಮಾತ್ರ ತಪ್ಪುತಪ್ಪಾದ ಉತ್ತರ ತೋರಿಸುತ್ತಿತ್ತು. ತಂತ್ರಾಂಶದಲ್ಲೇನೂ ಸಮಸ್ಯೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಗಣಕದ ಒಂದೊಂದೇ ಬಿಡಿಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಹೋದಾಗ, ಅದರ ಒಂದು ಸರ್ಕ್ನೂಟ್‌ನ ಮೂಲೆಯಲ್ಲಿ ಎರಡಿಂಚು ಉದ್ದದ ಒಂದು ಹಾತೆ ಸಿಕ್ಕಿಕೊಂಡಿದ್ದದ್ದು ಕಾಣಿಸಿತು. ಇದರಿಂದ ವಿದ್ಯುತ್‌ ಸರಬರಾಜು ಸರಿಯಾಗಿ ನಡೆಯದೆ, ಸಿಗ್ನಲ್‌ಗ‌ಳಲ್ಲಿ ಏರುಪೇರಾಗಿತ್ತು. ಗಣಕ ತಪ್ಪು ಫ‌ಲಿತಾಂಶಗಳನ್ನು ಕೊಡುತ್ತಿದ್ದದ್ದಕ್ಕೆ ಹಾತೆಯೇ ಕಾರಣ ಎಂದು ಕೊನೆಗೂ ತಿಳಿಯಿತು. ಅದನ್ನು ತೆಗೆದ ಮೇಲೆ ಗಣಕದ ಆರೋಗ್ಯ ಸುಧಾರಿಸಿತು!

ಮರುದಿನ ಆಕೆಯ ಸಂಗಡಿಗರು -quot; ಕಂಪ್ಯೂಟರಿಗೇನಾಗಿತ್ತು? ಏನು ಸಮಸ್ಯೆ?-quot; ಎಂದು ವಿಚಾರಿಸಿದಾಗ ಗ್ರೇಸ್‌ -quot; ಏನಿಲ್ಲ, There was a bug & quot; ಎಂದಳಂತೆ. ಬಗ್‌ ಎಂದರೆ ಕೀಟ ಎನ್ನುವರ್ಥದಲ್ಲಷ್ಟೇ ಆಕೆ ಹೇಳಿದ್ದಳು. ಮುಂದೆ, ತಂತ್ರಾಂಶದಲ್ಲಿ ನುಸುಳಿ, ಗಣಕದಲ್ಲಿ ಅರ್ಥಹೀನ ಉತ್ತರ ಕಾಣಿಸಿಕೊಳ್ಳಲು ಕಾರಣವಾಗುವ ಎಲ್ಲಾ ಬಗೆಯ ತಪ್ಪುಗಳಿಗೂ -quot;ಬಗ್‌ -quot; ಎಂಬ ಹೆಸರೇ ಗಟ್ಟಿಯಾಯಿತು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.