ಆ ರನ್ನಿಂಗ್‌ ರೇಸ್‌ಗೆ ಹೆಜ್ಜೇನು ಅಂಪೈರ್‌!


Team Udayavani, Sep 26, 2017, 11:31 AM IST

26-ZZ-4.jpg

ಅದೊಂದು ದಿನ ಚೆನ್ನಾಗಿ ನೆನಪಿದೆ. ನನ್ನ ಜೀವನದಲ್ಲೇ ಮರೆಯಲಾರದ ದಿನವದು. ಅವು ನನ್ನ ಬಾಲ್ಯದ ದಿನಗಳು. ದಸರೆಗೆಂದು ಶಾಲೆಗೆ ರಜೆ ಘೋಷಿಸಲಾಗಿತ್ತು. ರಜೆ ಆರಂಭವಾದ ನಾಲ್ಕನೇ ದಿನವೇ ಊರಿನ ಹಳ್ಳ ಕೋಡಿ ಬೀಳುವಂಥ ಮಳೆ ಬಂದಿತ್ತು. ಬೆಳ್ಳಗೆ ನಾಷ್ಟ ಮಾಡಿಕೊಂಡು ನಾನು ಹಾಗು ಗೆಳೆಯರೆಲ್ಲಾ ತೋಟಗಳಲ್ಲಿ ಅಲೆಯಲು ಹೊರಟೆವು. 

ಒಂದೆರಡು ತೋಟ ಅಲೆದವು. ಅಲ್ಲಿ ತಿನ್ನಲು ಏನೂ ಸಿಗಲಿಲ್ಲ. ಎಲ್ಲರಿಗೂ ಬೇಸರವಾಯಿತು. ನಂತರ ಮಾವಿನ ತೋಟಕ್ಕೆ ಹಿಂಭಾಗದಿಂದ ನುಗ್ಗಿದೆವು. ಮರದಲ್ಲೇ ಕುಳಿತುಕೊಂಡಿದ್ದ ಯಜಮಾನ ನಮ್ಮನ್ನು ನೋಡಿ ಒಮ್ಮೆಲೇ ಕೆಳಗೆ ಇಳಿದು ನಮ್ಮನ್ನು ಹಿಡಿಯಲು ಮುಂದಾದ. ನಾವೋ, ಪ್ರಚಂಡ ಓಟಗಾರರು. ಅವನಿಗೆ ಯಾರೂ ಸಿಗದ ಹಾಗೆ ಸುಮಾರು ಅರ್ಧ ಕಿ.ಮೀ. ಓಡಿದೆವು. ಓಡಿ ಓಡಿ ಸುಸ್ತಾದ ಮಾವಿನ ತೋಟದ ಯಜಮಾನ, ಸುಮ್ಮನಾಗಿ ಬಿಟ್ಟ. ನಮಗೂ ಸುಸ್ತಾಗಿತ್ತು. ಬಾಯಾರಿತ್ತು. ಏದುಸಿರು ಬಿಡುತ್ತಲೇ ಆ ಮನುಷ್ಯ ಹಿಂಬಾಲಿಸಿಕೊಂಡು ಬರಲ್ಲ. ನಿಧಾನಕ್ಕೆ ಹೋಗೋಣ ಅನ್ನುತ್ತಲೇ ಸುಮ್ಮನೆ ತಲೆ ಎತ್ತಿ ನೋಡಿದೆವು. ನಮ್ಮ ಊರಿನ ಗೌಡ್ರ ತೋಟ ಕಾಣಿಸಿತು. ಅಲ್ಲಿ ಎಳನೀರು ಕುಡಿದು, ಕೊಬ್ಬರಿ ತಿಂದು ಮನೆಗೆ ಹೋದರಾಯಿತು ಎಂದು ಯೋಚಿಸಿದೆವು. ಅಕಸ್ಮಾತ್‌ ಈಗಲೂ ತೊಂದರೆ ಎದುರಾದರೆ ಏನು ಮಾಡುವುದು ಎಂದು ಮಾತಾಡಿಕೊಂಡು, ನಮ್ಮಲ್ಲಿದ್ದ ಐವರು ಮರ ಏರಿದೆವು. ಉಳಿದ ಮೂವರು ಕೆಳಗಿದ್ದರು. 

ಕೆಳಗೆ ನಿಂತಿದ್ದವರಲ್ಲಿ ಗೆಳೆಯ ರಾಮನೂ ಇದ್ದ. ಅವನು ತಲೆಯನ್ನು ಕೊಡವಿಕೊಳ್ಳುತ್ತಿದ್ದ. ಒಂದು ಹುಳ ಅವನ ಕಿವಿಯ ಬಳಿ ಬಂದು ಗುಂಯ್‌ಗಾಟ್ಟುಟ್ಟಾ ತೊಂದರೆ ಕೊಡುತ್ತಿತ್ತು. ಕೊನೆಗೊಮ್ಮೆ ಸಿಟ್ಟು ಹತ್ತಿ ನೆಲದ ಮೇಲಿದ್ದ ಕಲ್ಲೊಂದನ್ನು ಎತ್ತಿ ಮೇಲಕ್ಕೆಸೆದೇಬಿಟ್ಟ. ಆ ಕಲ್ಲು ಪಕ್ಕದ ಮರಕ್ಕೆ ಬಡಿಯಿತು. ನಮ್ಮ ದುರಾದೃಷ್ಟಕ್ಕೆ, ಅದೇ ಜಾಗದಲ್ಲಿ ಜೇನುಗೂಡಿರಬೇಕೆ?! ಅದನ್ನು ಕಂಡ ತಕ್ಷಣ ನಾವೆಲ್ಲರೂ ಮರಗಳಿಂದ ಕೆಳಗೆ ಒಮ್ಮೆಲೆ ದೊಪ್ಪನೆ ನೆಲಕ್ಕೆ ಹಾರಿದೆವು. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ಯಾರಿಗೂ ಅಂತ ಪೆಟ್ಟಾಗಲಿಲ್ಲ. ಆ ಹೆಜ್ಜೆàನು ಹುಳುಗಳಿಗೆ ಕೋಪ ಬಂದು ನಮ್ಮನ್ನು ಕಚ್ಚಲು ಬಂದವು. ಆಗ ಶುರುವಾಯಿತು ನೋಡಿ ನಮ್ಮ ಒಲಿಂಪಿಕ್‌ ರನ್ನಿಂಗ್‌ ರೇಸ್‌… ಆದರೆ, ಮಾವಿನ ತೋಟದ ಯಜಮಾನನಿಂದ ತಪ್ಪಿಸಿಕೊಂಡಷ್ಟು ಸುಲಭವಾಗಿರಲಿಲ್ಲ ಜೇನು ಹುಳುಗಳಿಂದ ತಪ್ಪಿಸಿಕೊಳ್ಳೋದು.

ಯಾರು, ಯಾವ ಕಡೆ ಓಡುತ್ತಿದ್ದೇವೆ ಎಂಬುದೇ ತಿಳಿಯಲಿಲ್ಲ. ದಿಕ್ಕಾಪಾಲಾಗಿ ಎಲ್ಲರೂ ಮನಸ್ಸಿಗೆ ತೋಚಿದ ಕಡೆಗೆ ಓಡಿದೆವು. ಪಕ್ಕದಲ್ಲಿ ಸಜ್ಜೆ ತೋಟ. ಮಳೆ ಬಂದು ಎಲ್ಲಾ ಕಡೆ ಕೆಸರು ಕೆಸರಾಗಿದೆ. ಅಲ್ಲಿ ನಮ್ಮ ಶರವೇಗಕ್ಕೆ ಕಡಿವಾಣ ಬಿತ್ತು. ಎಷ್ಟೇ ಓಡಿದರೂ ಕಾಲು ಹೂತು ಹೋಗುತ್ತಿದ್ದುದರಿಂದ ಜೇನ್ನೊಣಗಳಿಗೆ ನಾವು ಸಿಕ್ಕಿಹಾಕಿಕೊಂಡೆವು. ಕೈ ಕಾಲುಗಳಿಗೆಲ್ಲ ಕಚ್ಚಿಸಿಕೊಂಡೆವು. ಆದರೂ ಅಲ್ಲಿಯೇ ನಿಲ್ಲುವಂತಿರಲಿಲ್ಲ. ಎದ್ದೂ ಬಿದ್ದೂ ಓಡಿದೆವು. ಇದೇ ರೀತಿ ನಾವು ಸುಮಾರು 3 ಕಿ.ಮೀ. ಓಡಿರಬಹುದು. ಅಷ್ಟರಲ್ಲಿ ಹುಳುಗಳು ನಮ್ಮನ್ನು ಬೆನ್ನಟ್ಟುವುದನ್ನು ನಿಲ್ಲಿಸಿದ್ದವು. ನಾವು ನಿಂತೆವು. ಜೇನ್ನೊಣ ಕಚ್ಚಿದ್ದರಿಂದ ನಮ್ಮ ಕೆನ್ನೆ ತುಟಿಗಳೆಲ್ಲಾ ಊದಿಕೊಂಡಿದ್ದವು. ನಾವು ಊರ ಹಾದಿ ಹಿಡಿದೆವು. ಆಗ, ಮತ್ತೆ ಏದುಸಿರು ಬಿಡುತ್ತಾ ದಾರಿಯಲ್ಲಿ, ರಾಮೇಗೌಡರು ತಮ್ಮ ಬಾಳೆಹಣ್ಣಿನ ತೋಟದಿಂದ ಮನೆಗೆ ಹೋಗುತ್ತಿರುವುದು ಕಂಡಿತು. ನಾವು ಮೆಲ್ಲನೆ ಯಾರಿಗೂ ಕಾಣದ ಹಾಗೆ ಅವರ ತೋಟಕ್ಕೆ ನುಗ್ಗಿಬಿಟ್ಟೆವು. ನಮ್ಮ ಅದೃಷ್ಟಕ್ಕೆ ಒಂದು ಬಾಳೆಗೊನೆ ಹಣ್ಣಾಗಿರುವುದು ಸಿಕ್ಕಿತು. ಹೊಟ್ಟೆ ತುಂಬುವವರೆಗೂ ತಿಂದೆವು. ಆಗಷ್ಟೇ ಸಮಾಧಾನವಾಯಿತು. ನಂತರ ಮನೆ ಕಡೆ ಸಾಗಿದೆವು. ಈಗಲೂ ನಾವು ಗೆಳೆಯರೆಲ್ಲಾ ಭೇಟಿಯಾದಾಗ ಆ ದಿನಗಳನ್ನು ನೆನೆದು ಬಿದ್ದೂ ಬಿದ್ದು ನಗುತ್ತೇವೆ.

ಪ್ರಭಾಕರ ಪಿ.

ಟಾಪ್ ನ್ಯೂಸ್

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

Daily Horoscope:

Daily Horoscope: ಹೇಗಿದೆ ನೋಡಿ ಶನಿವಾರದ ನಿಮ್ಮ ಗ್ರಹಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.