ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?


Team Udayavani, Sep 22, 2020, 8:58 PM IST

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಸಾಂದರ್ಭಿಕ ಚಿತ್ರ

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಯೂ ಸಹ , ತಾನು ಅಡ್ಡಿ ಆತಂಕ ಗಳಿಲ್ಲದೇ ನೆಮ್ಮದಿಯಿಂದ ಜೀವನ ನಡೆಸ ಬೇಕೆಂದು ಬಯಸುತ್ತದೆ. ಮನುಷ್ಯನ ವರಸೆ ಇಲ್ಲಿಯೂ ಭಿನ್ನ. ಆತ ನೆಮ್ಮದಿಯ ಜೊತೆಜೊತೆಗೇ ಮತ್ತೂಬ್ಬರನ್ನು ಸಂತೋಷಪಡಿಸಲು, ಅವರನ್ನು ಮೆಚ್ಚಿಸಿ ಏನಾದರೂ ಲಾಭ ಪಡೆಯಲು ಯೋಚಿಸುತ್ತಾನೆ. ದಿನಬೆಳಗಾದರೆ ಸಾಕು; ನನ್ನ ಬಗ್ಗೆ ಜನ ಏನೆನ್ನುತ್ತಾರೆ? ಹೆಚ್ಚು ಗೌರವ, ಮರ್ಯಾದೆ, ಶ್ರೀಮಂತಿಕೆಯನ್ನು ಪಡೆಯುವುದು ಹೇಗೆ ಎಂದೆಲ್ಲಾ ಯೋಚಿಸಿ ಯೋಚಿಸಿ ಹಣ್ಣಾಗುತ್ತಾನೆ.

ಅಷ್ಟು ಮಾತ್ರವಲ್ಲ, ಸಣ್ಣದೊಂದು ಸೋಲಿಗೂ ಕಂಗಾಲಾಗುತ್ತಾನೆ. ಒಳ್ಳೆಯ ದಿನಗಳು ವರ್ಷದ ನಂತರ ಬರಬಹುದು. ಅಲ್ಲಿಯವರೆಗೂ ಏನಾಗುವುದೋ ನೋಡೋಣ. ಗೆಲುವಿಗಾಗಿ ಮರಳಿ ಯತ್ನವ ಮಾಡೋಣ ಎಂದು ಯೋಚಿಸುವುದೇ ಇಲ್ಲ.

ಹೌದು. ಒಂದರ ಹಿಂದೊಂದು ಸೋಲು ಜೊತೆಯಾದರೆ, ಅಷ್ಟಕ್ಕೇ ತಮ್ಮ ಬದುಕೇ ಮುಗಿದು ಹೋಯಿತೆಂದು ಭಾವಿಸುವ ಜನರೇ ನಮ್ಮ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನೆಲ್ಲಾ ನೋಡುವಾಗಲೇ ಅಧ್ಯಾಪಕರೊಬ್ಬರು ಹೇಳಿದ್ದ ಮಾತುಗಳು ನೆನಪಾಗುತ್ತವೆ. ಅವರು ಹೇಳಿದ್ದರು: “ಪರೀಕ್ಷೆಯಲ್ಲಿ ಪಾಸ್‌ ಆದ್ರೆ ಉತ್ತಮ, ಒಂದು ವೇಳೆ ಫೇಲ್‌ ಆದ್ರೆ ಇನ್ನೂ ಉತ್ತಮ!’

ಇದರ ಅರ್ಥ- ಪಾಸ್‌ ಆದ್ರೆ ಮುಂದಿನ ತರಗತಿಗಳಿಗೆ ಹೋಗಬಹುದು. ಒಂದು ವೇಳೆ ಫೇಲ್‌ ಆದ್ರೆ, ಈ ಹಿಂದೆ ನಾವು ಆ ವಿಷಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದಿನ ಸಾರಿ ಚೆನ್ನಾಗಿ ಬರೆದು ಪಾಸಾಗಬಹುದು ಎಂದು. ಜೀವನದ ಪ್ರತಿಯೊಂದು ಘಟ್ಟವೂಒಂದರ್ಥದಲ್ಲಿಪರೀಕ್ಷೆಯೇ.ಅದನ್ನು,ಹೇಗೆಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಒಬ್ಬ ಹಾಡುಗಾರ ಕೋಗಿಲೆಗೆ ಕೇಳಿದನಂತೆ: ನಿನ್ನ ಮಧುರವಾದ ಧ್ವನಿಗೆ ಮನಸೋತಿದ್ದೇನೆ. ನೀನು ಯಾರಿಗೂ ಕಾಣದಂಥ ಈ ಮರದ ಕೊಂಬೆಗಳ ಮಧ್ಯೆ ಅಡಗಿ ಕುಳಿತು ಹಾಡುವೆಯಲ್ಲ,ಅದರಿಂದ ಉಪಯೋಗವಿದೆಯಾ? ಹೀಗಾದರೆ, ನಿನ್ನ ಧ್ವನಿಯನ್ನು ಯಾರು ಗುರುತಿಸುತ್ತಾರೆ? ಯಾರು ನಿನ್ನನ್ನು ಸನ್ಮಾನಿಸುತ್ತಾರೆ? ಯಾರು ಗೌರವಿಸುತ್ತಾರೆ?’

ಅದಕ್ಕೆ ಕೋಗಿಲೆ ಹೇಳಿತಂತೆ: ನಾನು ಹಾಡುವುದು ನನ್ನಖುಷಿಗಾಗಿ. ಯಾರನ್ನೋ ಮೆಚ್ಚಿಸಲು ಹಾಡಿದರೆ ನನಗೆ ತೃಪ್ತಿಯಾಗಲಿ, ನೆಮ್ಮದಿಯಾಗಲಿ ಸಿಗುವುದಿಲ್ಲ. ನನಗೊಂದು ಬದುಕನ್ನೂ, ಆಹ್ಲಾದಕರವಾದ ಪ್ರಕೃತಿತಾಣವನ್ನೂ ಕೊಡುಗೆಯಾಗಿ ನೀಡಿದನಲ್ಲ;

ಆ ದೇವರಿಗೆ ಕೃತಜ್ಞತೆ ಅರ್ಪಿಸಲು, ಅವನಿಗೆ ಧನ್ಯವಾದ ಹೇಳಲು ನಾನು ಹಾಡುತ್ತೇನೆ. ಇಲ್ಲೆಲ್ಲೋ ದೇವನಿರಬಹುದು ಎಂಬ ಭಾವನೆಯೇ ನನಗೆ ಧೈರ್ಯ, ನೆಮ್ಮದಿ, ಸಂತೃಪ್ತಿ ಮತ್ತು ಸಾರ್ಥಕತೆಯನ್ನು ಕೊಡುತ್ತದೆ…’ ಕೋಗಿಲೆಯ ರೀತಿಯಲ್ಲಿ ಮನುಷ್ಯನೂ ಯೋಚಿಸಬೇಕಲ್ಲವೇ?

 

ಎಲ್ ಪಿ. ಕುಲಕರ್ಣಿ, ಬಾದಾಮಿ

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.