ಮಾತಾಡ್ಬೇಕು ಅನ್ನಿಸ್ತು, ಪತ್ರ ಬರೆದಿದ್ದೇನೆ…


Team Udayavani, Aug 14, 2018, 6:00 AM IST

12.jpg

ಅವತ್ತು ಬೀಳ್ಕೊಡುವ ಮುನ್ನ, ಮೆಜೆಸ್ಟಿಕ್‌ನಲ್ಲಿ ನನ್ನ ನಂಬರ್‌ ಕೊಟ್ಟಿದ್ದೆ. ಅದ್ಯಾಕೋ ನೀನು ಇನ್ನೂ ಕಾಲ್‌ ಮಾಡಿಲ್ಲ. ಒಂದ್ಸಲ ಕಾಲ್‌ ಮಾಡಿಬಿಡು. ತುಂಬಾ ಮಾತನಾಡುವುದಿದೆ, ಪ್ಲೀಸ್‌..

ಹಾಯ್‌, ಕೆಂಪು ಗುಲಾಬಿ
ಹೇಗಿದ್ದೀಯಾ? ತುಂಬಾ ದಿನಗಳಾದವಲ್ಲಾ ನಾವಿಬ್ಬರೂ ಭೇಟಿಯಾಗಿ. ಕಾಲೇಜು ಮುಗಿದ ಮೇಲೆ ಒಂದೇ ಸಲ ಸಿಕ್ಕಿದ್ದು, ಅದೂ  ಮೆಜೆಸ್ಟಿಕ್‌ನಲ್ಲಿ. ಅವತ್ತು ನೀನು ತುಂಬಾ ಅವಸರದಲ್ಲಿದ್ದೆ. ಹೆಚ್ಚಿಗೆ ಏನೂ ಮಾತನಾಡಲಾಗಲಿಲ್ಲ. ಇರಲಿ, ಮೊನ್ನೆ ಹಬ್ಬಕ್ಕೆಂದು ಮನೆಯನ್ನು ಒಪ್ಪವಾಗಿಸುತ್ತಿದ್ದಾಗ ನಿನ್ನ ನೆನಪನ್ನು ಮರುಕಳಿಸುವ ಪಳೆಯುಳಿಕೆಗಳು ಕಣ್ಣಿಗೆ ಬಿದ್ದವು. ಕೂಡಲೇ ಮನಸ್ಸು ಅಂದಿನ ಸಿಹಿ ಕ್ಷಣಗಳೆಡೆಗೆ ಜಾರಿತು. ಹೃದಯ ನಿನ್ನ ಸಾಮೀಪ್ಯವನ್ನು ಬಯಸಿತು. ಈ ಒಲವಿನ ಓಲೆಯ ಮೂಲಕ ನಿನ್ನನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇನೆ.

ಹೀಗೆ ನಿನ್ನೊಂದಿಗೆ ಮನಸ್ಸು ಬಿಚ್ಚಿ ಮಾತಾಡಲು ಹಂಬಲಿಸಿದ ದಿನಗಳೆಷ್ಟೋ? ಅವತ್ತು ಅಕೌಂಟೆನ್ಸಿ ಎಕ್ಸಾಂ ಇತ್ತು. ಅದೇ ಯೋಚನೆಯಲ್ಲಿ ಮುಳುಗಿದ್ದಾಗ ಅದ್ಯಾವ ಲೋಕದಿಂದ ಬಂದೆಯೋ? ಉದ್ದ ಜಡೆ ಬಿಟ್ಟುಕೊಂಡು ಸರಸರನೆ ನನ್ನೆದುರು ಹಾದುಹೋದೆ, ನೋಡಿದರೂ ನೋಡದವಳಂತೆ! ನನಗಂತೂ ವಿದ್ಯುತ್‌ ಶಾಕ್‌ ತಗುಲಿದ ಅನುಭವ. ಹೇಳಿಕೊಳ್ಳಲಾಗದ ಉತ್ಸಾಹ, ಅದೆಂಥಾ ಸೆಳೆತ ನಿನ್ನದು? ಅಂದಿನಿಂದ, ನಮ್ಮಿಬ್ಬರ ಭವಿಷ್ಯವನ್ನು ಟ್ಯಾಲಿ ಮಾಡುವುದೇ ನನ್ನ ಕೆಲಸವಾಯ್ತು. 

ಎಲ್ಲರಿಗಿಂತ ಮೊದಲು ಕ್ಯಾಂಪಸ್ಸಿನಲ್ಲಿ ಹಾಜರಾಗಿ ನಿನ್ನ ಬರುವಿಕೆಯನ್ನೇ ಕಾಯುತ್ತಿದ್ದೆ. ಆದರೆ ನೀನು ಯಾವಾಗಲೂ ಗೆಳತಿಯರೊಟ್ಟಿಗೆ ಗುಂಪಿನಲ್ಲಿ ಬರುತ್ತಿದ್ದೆ. ಇದೇ ಕಾರಣದಿಂದ, ನನ್ನೊಳಗಿನ ಭಾವನೆಗಳನ್ನು ಹೊರಹಾಕಲು ಮುಜುಗರವಾಗಿ ಹಿಂದಡಿಯಿಡುತ್ತಿದ್ದೆ. ಒಮ್ಮೆ ಸೀನಿಯರ್‌ ಹುಡುಗನೊಬ್ಬ ಕೆಂಪು ಗುಲಾಬಿ ಹಿಡಿದು ನಿನ್ನೆದುರು ನಿಂತಾಗ ನೀನು ಪಟಾರನೆ ಅವನ ಕೆನ್ನೆಗೆ ಬಾರಿಸಿದ್ದೆ! ನನಗೆ ಮತ್ತೂಮ್ಮೆ ಶಾಕು. ಅಂದಿನಿಂದ ಕೆಂಪು ಗುಲಾಬಿ ಎಂಬ ಹೆಸರೇ ನಿನಗೆ ನಿಕ್ಕಿಯಾಯಿತು.

ಹೀಗೇ ದಿನಗಳು ಉರುಳಿದವು. ಅಂತೂ ಕಡೆಗೊಂದು ದಿನ ಧೈರ್ಯ ಮಾಡಿ ನಿನ್ನನ್ನು ಮಾತನಾಡಿಸಿಯೇಬಿಟ್ಟೆ. ತೊದಲುತ್ತಾ ನಿಮ್ಮ ಹೆಸರೇನು? ಎಂದು ಕೇಳಿದಾಗ, ಹೆಸರಲ್ಲೇನಿರುತ್ತೆ ಎಂದು ನನ್ನೆಡೆಗೆ ಒಂದು ಮುಗುಳ್ನಗೆ ಚೆಲ್ಲಿ ನೀನು ಹೋಗೇಬಿಟ್ಟೆ! ಆಗ ನನಗೆ ತುಂಬಿದ ಮೆಟ್ರೋದಲ್ಲಿ ಸೀಟ್‌ ಸಿಕ್ಕಷ್ಟೇ ಖುಷಿಯಾಗಿತ್ತು. ಕಾಲೇಜಿನಲ್ಲಿ ಹಾಡಿನ ಸ್ಪರ್ಧೆ ನಡೆದಾಗ ನೀನು, “ಶ್ರೀಕಾರನೇ ಶ್ರೀನಿವಾಸನೇ’ ಎಂದು ಹಾಡಿದ್ದೆಯಲ್ಲ? ಅಬ್ಟಾ! ಎಂಥಾ ಸುಮಧುರ ಧ್ವನಿ ನಿನ್ನದು. ಅಂದಹಾಗೆ, ಇವತ್ತಿಗೂ ಅದೇ ಹಾಡು ನನ್ನ ರಿಂಗ್‌ ಟೋನ್‌. ಅದನ್ನ ಕೇಳಿ ಕೇಳಿ ಸಾಕಾಗಿದೆ, ಮೊದಲು ಚೇಂಜ್‌ ಮಾಡಪ್ಪಾ ಅಂತ ಸ್ನೇಹಿತರು ಬಯ್ದರೂ ನಾನು ಕೇಳಿಲ್ಲ. 

ನಾವಿಬ್ಬರೂ ಹತ್ತಿರವಾದೆವು ಎನ್ನುತ್ತಿದ್ದಾಗಲೇ ಬಂತೊಂದು ಆಘಾತಕಾರಿ ಸುದ್ದಿ. ತಂದೆಗೆ ಹುಷಾರಿಲ್ಲ ಎಂದು ನೀನು ಊರಿಗೆ ಹೊರಟಿದ್ದೆ. ನೆನಪಿಗೆ ಎಂದು ಕೈಲಿದ್ದ ಕೊಡೆಯನ್ನು ನನಗೆ ಕೊಟ್ಟು “ಚೆನ್ನಾಗಿರು’ ಅಂತ ಹೇಳಿಯೇ ಹೋದೆ. ನೀನು ವಾಪಸ್‌ ಬರ್ತೀಯಾ ಅಂತ ದಿನಗಳನ್ನು ಎಣಿಸಿದ್ದೇ ಬಂತು. ಕಾಲೇಜು ಮುಗಿಯಿತೇ ಹೊರತು ನಿನ್ನ ಸುಳಿವಿಲ್ಲ. ಹಾಂ, ಮರೆತಿದ್ದೆ. ಅವತ್ತು ಬೀಳ್ಕೊಡುವ ಮುನ್ನ, ಮೆಜೆಸ್ಟಿಕ್‌ನಲ್ಲಿ ನನ್ನ ನಂಬರ್‌ ಕೊಟ್ಟಿದ್ದೆ. ಅದ್ಯಾಕೋ ನೀನು ಇನ್ನೂ ಕಾಲ್‌ ಮಾಡಿಲ್ಲ. ಒಂದ್ಸಲ ಕಾಲ್‌ ಮಾಡಿಬಿಡು. ತುಂಬಾ ಮಾತನಾಡುವುದಿದೆ, ಪ್ಲೀಸ್‌..                                                                
ನಿನ್ನ ಧ್ವನಿಗಾಗಿ, ನಿನ್ನ ಕರೆಗಾಗಿ ಕಾದಿರುವ                                                                   

ನಾಗರಾಜ್‌ ಬಿ. ಚಿಂಚರಕಿ                                                                                                               

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.