
ವಿಧೇಯಳಾಗಿದ್ದ ನನಗೆ ಸಿಕ್ಕಿದ್ದೇನೋ ಗೆಳೆಯಾ?
Team Udayavani, Mar 17, 2020, 4:00 AM IST

ವಿಚಿತ್ರವಾದ ಸತ್ಯವಿದು. ನನಗೆ ನೀನು ಆಡಿದ ಮಾತು ಕಣ್ಣೀರು ತರಿಸಿದ್ರೂ ನೀ ಹೇಳಿದ ಕಾರಣ ಮಾತ್ರ ದಿನದಿಂದ ದಿನಕ್ಕೆ ಉಸಿರು ಕಟ್ಟಿಸುತ್ತಿದೆ. ನಮ್ಮಿಬ್ಬರ ಪ್ರೀತಿಗೆ ಒಂಬತ್ತು ವರ್ಷ ಕಳೆದರೂ ನೀನು ನೀ ನನ್ನ ಮೇಲಿಟ್ಟಿರೋ ನಂಬಿಕೆ ಮಾತ್ರ ಸೊನ್ನೆ. ಯಾವ ಕಾರಣಕ್ಕೆ ನಿನ್ನ ಈ ವಿಚಿತ್ರ ನಡವಳಿಕೆ? ಗೊತ್ತಿಲ್ಲ. ಆದರೆ ನನ್ನ ಪ್ರಶ್ನೆ ಅದಲ್ಲ.
ನೀ ಯಾವಾಗಲೂ ಹೇಳ್ಳೋ ಹಾಗೆ, ಎಲ್ಲ ಹುಡುಗೀರ ಥರ ನೀನು ಇಲ್ಲ. ಅದೇ ನಂಗೆ ತುಂಬಾ ಇಷ್ಟ ಅನ್ನೋ ಮಾತೇ ನಂಗೆ ಕಷ್ಟ ಆಗಿದೆ.
ಬೇರೆ ಹುಡುಗಿಯರ ಥರ ಒಂದಿನ ಕೂಡ, ನಂಗೆ ಇದು ಬೇಕು, ಅದು ಬೇಕು ಅಂತ ಹಠ ಹಿಡಿಯಲಿಲ್ಲ. ಪ್ರತಿ ಹೆಜ್ಜೆ ಇಡುವಾಗ್ಲೂ ನಿನ್ನ ಅನುಮತಿ ತಗೊಂಡೇ ಇಡುತಿ¨ªೆ. ನಂಗೆ ನೀನೇ ಪ್ರಪಂಚ. ನಿನ್ನ ಬಿಟ್ಟು ನನಗೆ ಬೇರೆ ಪ್ರಪಂಚದ ಅರಿವಿಲ್ಲ. ನಿನ್ನ ಮಾತು ಮೀರಿ ಒಂದೇ ಒಂದು ದಿನವೂ ನಡೆದುಕೊಂಡಿಲ್ಲ. ಬೇರೆಯವರ ಕೋಪಕ್ಕೆ ನಾನು ಬಲಿಯಾದಾಗ ಕೂಡ ಪ್ರತಿಕ್ರಿಯೆ ನೀಡಲಿಲ್ಲ. ನೀನು ಕಟ್ಟಿ ಕೊಟ್ಟ ಕನಸಿನ ಕೋಟೆಯಲ್ಲಿ, ರಾಣಿ ತರ ಇದ್ದ ನನಗೆ ಆ ಅರಮನೆಯನ್ನೇ ನೆಲಸಮ ಮಾಡುವ ಪ್ರಯತ್ನ ಮಾಡಿಬಿಟ್ಟೆ.
ಆದರೆ, ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ? ಸುಖ-ದುಃಖ ಎರಡು ಅವನ ಸೂತ್ರದಲ್ಲಿದೆ ಅನ್ನೋ ಹಾಡಿನ ಸಾಲುಗಳು ಮಾತ್ರ ತುಂಬಾ ನೋವುಂಟು ಮಾಡುತ್ತಿವೆ. ಈ ಸಾಲುಗಳ ಹಾಗೆ ಆ ಬ್ರಹ್ಮನ ಹಳೆಯಲ್ಲಿ ನಾನು ರಾಜನ ಜೊತೆ ರಾಣಿ ಥರ ಇರರ್ತಿನೋ ಅಥವಾ ಮುಂದೆ ಏನು ಬರೀಬೇಕಂತ ಗೊತ್ತಾಗ್ತಾ ಇಲ್ಲ…
ಲಕ್ಕಿ ಸಿಂದಗಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.