ನಿನ್ನ ಹೆಜ್ಜೆಗಳ ಗುರುತು ಕಂಡು….


Team Udayavani, Oct 2, 2018, 6:00 AM IST

7.jpg

ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು.

ಒಂಟಿ ಬರಗಾಲಕ್ಕೆ ಒಣಗಿ ಹೋಗಿದ್ದ ಕನಸುಗಳಿಗೆ ನಿನ್ನೆಯಷ್ಟೇ ಒಂದು ಹನಿಯಷ್ಟು ಚಿಗುರು ಮೂಡಿದೆ. ನೋಡು, ಹಾದಿಯೂ ಕೂಡ ಎಷ್ಟು ಸಂಭ್ರಮಿಸುತ್ತಿದೆ?! ಅದಕ್ಕೊಂದು ಫ‌ಲಿತಾಂಶದ ಖುಷಿ. ಹಾದಿಯ ಪಾಲಿಗಿದು ಡಿಸ್ಟಿಂಕ್ಷನ್‌. ನಾನು ಪಾಸಾದೆ. ನನ್ನ ಪ್ರೇಮಕ್ಕೆ, ಕನವರಿಕೆಗೆ ರ್‍ಯಾಂಕ್‌ ಪಡೆದ ಖುಷಿ. ಮಾರ್ಕ್ಸ್ ಕಾರ್ಡ್‌ ಕೊಡಲು ನೀನೇ ಬರುತ್ತೀಯಲ್ವಾ?

ನಿನ್ನನ್ನು ನೋಡಿದ್ದು ಊರ ದಾರಿಯ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಪಾದಗಳ ಗುರುತಿನಲ್ಲಿ. ನಿನ್ನ ಹೆಜ್ಜೆ ಊರಿಸಿಕೊಂಡ ಮಣ್ಣು ಕೂಡ ಒಂದೊಳ್ಳೇ ಲಹರಿಯಲ್ಲಿತ್ತು. ಅಷ್ಟು ಚೆಂದದ ಪಾದಗಳನ್ನು ಈ ಬರಗೆಟ್ಟ ಕಣ್ಣುಗಳು ನೋಡಿಯೇ ಇರಲಿಲ್ಲ. ಊರ ತೇರಿನ ನೂರು ಹಬ್ಬಗಳು ಒಮ್ಮೆಲೇ ಆದಂಥ ಖುಷಿ ಮೊದಲ ಬಾರಿಗೆ ನನ್ನ ಕಣ್ಣಲ್ಲಿ. ಪಾದಗಳ ಗುರುತನ್ನು ಬೆನ್ನು ಹತ್ತಿದವನಿಗೆ ಸಿಕ್ಕಿದ್ದು ನೀನು. 

ನಿಜ ಹೇಳಾ!? ನಿನ್ನ ನೋಡಿದಾಗ ಮೊದಲ ಬಾರಿಗೆ ಅನಿಸಿದ್ದು- ಅದ್ಭುತ ರೂಪವತಿ ಅಂತ ಅಂದಾಜು ಮಾಡಿರಿ¤àವಲ್ಲ; ಅಂಥವಳು ದಿಢೀರ್‌ ಎದುರು ನಿಂತಾಗ ಆಗುವ ಪುಳಕ! ಅದೇ ಕಾರಣಕ್ಕೆ ನಾನು ನಿನ್ನ ಮುಂದೆ ಪೆಕರನಂತೆ ನಿಂತುಬಿಟ್ಟೆ. ಇವನ್ಯಾರೋ ಹುಚ್ಚನಿರಬೇಕು ಅಂತ ಎದೆಯ ಮೇಲಿಂದ ಹಾದು ಮಲಗಿದ್ದ ಜಡೆಯನ್ನು ಹಿಂದಕ್ಕೆ ಎಸೆದು ನೀನು ನಡೆದುಬಿಟ್ಟೆ. ಆಮೇಲೆ ನೋಡುತ್ತಾ ನಿಂತಿದ್ದು ನಿನ್ನ ಪಾದಗಳನ್ನು. ಈ ಪತ್ರದೊಂದಿಗೆ ನಾನು ಅವತ್ತು ಕ್ಲಿಕ್ಕಿಸಿದ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತುಗಳ ಚಿತ್ರಗಳನ್ನು ಲಗತ್ತಿಸಿದ್ದೇನೆ ನೋಡು.

ನೀನು ಪರಿಚಯವಾದ ನಂತರ, ನಿರುದ್ಯೋಗಿಯಾಗಿದ್ದ ನನಗೊಂದು ಕೆಲಸ ಸಿಕ್ಕಿತು ನೋಡು. ಪ್ರೀತಿ ಗೆಲ್ಲಲು ಹೊರಟವನದು ಅದೆಂಥ ರಿಸ್ಕಿನ ಕೆಲಸ ಎಂಬುದು ಈ ಜನರಿಗೇನು ಗೊತ್ತು. ಅವರು ಗೇಲಿ ಮಾಡುವುದನ್ನು ಕಂಡು ಪಾಪ ಎನಿಸುತ್ತದೆ. ನಾನು ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ ಏಳು ವರ್ಷಗಳನ್ನು. ಅಷ್ಟು ದಿನಗಳಲ್ಲಿ ನನ್ನ ಪಾಲಿಗಿದ್ದಿದ್ದು ಕೇವಲ ಮಂಪರಿನಂಥ ಒಂದಿಡೀ ನಿದ್ದೆ, ಬದುಕಲು ನಾಲ್ಕಾರು ತುತ್ತು ಅನ್ನ, ರಾಶಿ ರಾಶಿ ಕನಸುಗಳು, ತೀರದ ಪ್ರಯತ್ನ ಮತ್ತು ನನ್ನ ಹುಚ್ಚಾಟಗಳಿಗೆ ಕ್ಯಾರೇ ಅನ್ನದ ನೀನು.

ಅವತ್ತು ನನ್ನ ಪ್ರೀತಿ ಅರಸುವಿಕೆಯ ಮ್ಯಾರಥಾನ್‌ ಓಟಕ್ಕೆ ಬ್ರೇಕ್‌ ಹಾಕಿಬಿಟ್ಟೆ ನೀನು. ಯಾಕೋ ಹುಡುಗ ಇಷ್ಟು ಹಠ? ನನ್ನಲ್ಲಿ ಅಂಥದ್ದು ಏನಿದೆ? ಯಾಕೆ ಹೀಗೆ ಸಾಯುವಷ್ಟು ಇಷ್ಟ ಪಡ್ತೀಯ? ಅಂದಾಗ ನನ್ನ ಬಳಿ ಮಾತುಗಳಿರಲಿಲ್ಲ. ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು. ಕದ್ದು ಜಾರಿದ ಹನಿಯನ್ನು ಕೊನೆಗೂ ನೀನು ನೋಡಿಬಿಟ್ಟೆ. ಲೇ ಇದೇನೋ ಹುಡುಗನಾಗಿ ಕಣ್ಣೀರು? ಅಂದಾಗ ಮಾತಾಡದೆ ಸುಮ್ಮನೇ ನಿಲ್ಲುವುದಷ್ಟೇ ನನ್ನಿಂದ ಸಾಧ್ಯವಾಗಿದ್ದು. ನಿಧಾನಕ್ಕೆ ಎದ್ದ ನಿನ್ನ ಕೈಗಳು ನನ್ನ ಕೈ ಹಿಡಿದವು ನೋಡು, ಆಗ ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಬಿತ್ತು! 

ಸದಾಶಿವ್‌ ಸೊರಟೂರು.

ಟಾಪ್ ನ್ಯೂಸ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.