ಹಣ್ಣಿನ ಚೀಲ


Team Udayavani, Apr 4, 2019, 6:00 AM IST

Chinnari-Hannina-Bag

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಮೂರು ಜನ ಮಂತ್ರಿಗಳು. ಅವರೆಲ್ಲರಿಗೂ ಬೇರೆ ಬೇರೆ ಜವಾಬ್ದಾರಿಗಳಿದ್ದವು. ಮೊದಲ ಮಂತ್ರಿಯು ರಾಜನು ನೋಡಲಿ ಬಿಡಲಿ ತನ್ನ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿದ್ದನು. ಎರಡನೆಯ ಮಂತ್ರಿ, ರಾಜನು ನೋಡುತ್ತಾನೆ ಎಂದು ತಿಳಿದಾಗ ಮಾತ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಮೂರನೆಯ ಮಂತ್ರಿ ಚೆನ್ನಾಗಿ ಕೆಲಸ ಮಾಡುತ್ತಿರಲಿಲ್ಲ.

ಒಂದು ಸಲ ರಾಜನು ಮೂರು ಜನ ಮಂತ್ರಿಗಳನ್ನೂ ಕರೆದು ನೀವೆಲ್ಲಾ ಕಾಡಿಗೆ ಹೋಗಿ ಒಂದು ಚೀಲದ ತುಂಬ ಹಣ್ಣುಗಳನ್ನು ಕಿತ್ತುಕೊಂಡು ಬರಬೇಕು ಎಂದು ಆಜ್ಞೆ ಮಾಡಿದನು. ಅದರಂತೆ ಮೂರು ಜನರೂ ಕಾಡಿಗೆ ತೆರಳಿ ಹಣ್ಣುಗಳನ್ನು ಕೀಳತೊಡಗಿದರು. ಮೊದಲ ಮಂತ್ರಿಯು ಚೀಲದ ತುಂಬಾ ಹಣ್ಣು ಕಿತ್ತುಕೊಂಡು ಚೀಲದಲ್ಲಿ ತುಂಬಿಕೊಂಡು ಹೊರಟನು. ಎರಡನೆಯ ಮಂತ್ರಿ ಸ್ವಲ್ಪ ಮೈಗಳ್ಳನಾಗಿ­ದ್ದರಿಂದ ರಾಜನು ಚೀಲವನ್ನು ಪೂರ್ತಿಯಾಗಿ ಪರೀಕ್ಷಿಸುವು­ದಿಲ್ಲವೆಂದು ಚೀಲದ ತಳಭಾಗದಲ್ಲಿ ಗಿಡದ ಎಲೆ, ಕಸ ಮುಂತಾದ ತ್ಯಾಜ್ಯಗಳನ್ನು ತುಂಬಿ ಮೇಲ್ಭಾಗದಲ್ಲಿ ಮಾತ್ರ ಹಣ್ಣು­ಗಳನ್ನು ಕಿತ್ತು ತುಂಬಿದನು. ಮೂರನೆಯ ಮಂತ್ರಿ ತುಂಬಾ ಸೋಮಾರಿಯಾ ಗಿದ್ದರಿಂದ ಅವನು ಚೀಲ ಪೂರ್ತಿ ಗಿಡದ ಎಲೆ, ಕಸ ಮುಂತಾದವನ್ನು ತುಂಬಿಕೊಂಡು ಅರಮನೆಗೆ ಬಂದನು.

ಮೂರು ಮಂತ್ರಿಗಳನ್ನೂ ನೋಡಿದ ರಾಜನು, ಅವರು ತಂದ ಚೀಲದ ಸಮೇತ ಬಂಧಿಸಿ ಸೆರೆಮನೆಗೆ ಕಳುಹಿಸಿ ಎಂದು ಆಜ್ಞೆ ಮಾಡಿದನು. ಅದರಂತೆ ಮೂರು ಮಂತ್ರಿಗಳನ್ನು ಒಂದು ತಿಂಗಳ ಕಾಲ ಪ್ರತ್ಯೇಕ ಬಂದೀಖಾನೆಗಳಲ್ಲಿ ಇಡಲಾಯಿತು. ಒಂದು ತಿಂಗಳ ನಂತರ ರಾಜನು ಮಂತ್ರಿಗಳನ್ನು ಕರೆದುಕೊಂಡು ಬರಲು ಸೈನಿಕರಿಗೆ ತಿಳಿಸಿದನು. ಮೊದಲ ಮಂತ್ರಿಯು ತಾನು ತಂದ ಚೀಲದಲ್ಲಿನ ಹಣ್ಣುಗಳನ್ನು ದಿನಾಲೂ ಸೇವಿಸುತ್ತಾ ಚೆನ್ನಾಗಿಯೇ ಆರೋಗ್ಯ ಕಾಪಾಡಿಕೊಂಡಿದ್ದನು. ಎರಡನೆಯ ಮಂತ್ರಿಯ ಬಳಿ ಅರ್ಧ ಚೀಲ ಮಾತ್ರ ಹಣ್ಣಿದ್ದರಿಂದ ಬಹಳ ಬೇಗ ಅವೆಲ್ಲಾ ಖಾಲಿಯಾಗಿ ಕೃಶ ಶರೀರದವನಾಗಿದ್ದನು. ಮೂರನೆಯ ಮಂತ್ರಿಯ ಚೀಲದಲ್ಲಿ ಹಣ್ಣೇ ಇರಲಿಲ್ಲವಾದ್ದರಿಂದ ಆತ ಬಂದೀಖಾನೆಯಲ್ಲಿ ಹಸಿವಿನಿಂದ ಇನ್ನೇನು ಸತ್ತುಹೋಗುವಂತಿದ್ದನು. ಮಂತ್ರಿಗಳಿಗೆ ರಾಜನ ಸಂದೇಶ ಅರ್ಥವಾಗಿತ್ತು.

– ವೀರೇಶ್‌ ಎಸ್‌. ಭದ್ರಶೆಟ್ಟಿ, 9ನೇ ತರಗತಿ, ಸಂಯುಕ್ತ ಕ್ರೀಡಾ ವಸತಿ ಶಾಲೆ, ಚಂದರಗಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.