![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 23, 2019, 3:40 PM IST
ನೂರು ದಿನದ ಕಾಲ ಇಲಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬಾಳಿದರೆ ಸಾರ್ಥಕ ಒಂಬ ಒಂದು ಸ್ಫೂರ್ತಿದಾಯಕ ಮಾತಿದೆ. ಈ ಮಾತು
ಸ್ಫೂರ್ತಿದಾಯಕವೂ ಹೌದು, ಪ್ರಾಣಘಾತುಕವೂ ಹೌದು. ಭೂಮಿ ಮೇಲೆ ಒಂದು ಜಾಗವಿದೆ. ಆ ಜಾಗದಲ್ಲಿ ಇಲಿಯಾಗಿ ನೂರು ದಿನ ಹೋಗಲಿ ಒಂದು ದಿನವೂ ಬಾಳಲಾಗುವುದಿಲ್ಲ. ಯಾಕೆ ಗೊತ್ತಾ? ಅದು ಜಗತ್ತಿನ ಇಲಿ ಮುಕ್ತ ಪ್ರದೇಶ. ಉತ್ತರ ಧ್ರುವ, ದಕ್ಷಿಣ ಧ್ರುವ ಎನ್ನದಿರಿ.
ಏಕೆಂದರೆ ಇದು ಜನವಸತಿ ಇರುವ ಪ್ರದೇಶ. ಕೆನಡಾದ ಅಲ್ಬರ್ಟಾ ನಗರವೇ ಇಲಿ ರಹಿತ ನಗರವೆಂಬ ಖ್ಯಾತಿಗೆ ಪಾತ್ರವಾಗಿರುವುದು. ಇಲ್ಲಿ ಇಲಿಗಳ ನಿರ್ಮೂಲನಕ್ಕೆ ಪ್ರತ್ಯೇಕ ತಂಡವೇ ಕಾರ್ಯಾಚರಿಸುತ್ತಿದೆ. ಆರೇಳು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.
ಇಲಿಗಳಿಂದ ಕೃಷಿಗೆ ಹಾನಿಯುಂಟಾಗಿ ಆರ್ಥಿಕ ನಷ್ಟವುಂಟಾಗಿತ್ತು. ಅಂದಿನಿಂದ ಶುರುವಾದ ಮನುಷ್ಯ ಮತ್ತು ಇಲಿಗಳ ನಡುವಿನ ಯುದ್ಧದಲ್ಲಿ ಮನುಷ್ಯ ಗೆದ್ದಿದ್ದಾನೆ. ಇಲಿಗಳು ಕಂಡಲ್ಲಿ ನಿರ್ದಾಕ್ಷಿಣ್ಯವಾಗಿ ಸಾಯಿಸಿ ಎಂದು ಸರ್ಕಾರವೇ ಕರಪತ್ರಗಳನ್ನು ಹಂಚುತ್ತದೆ. ಹಾಗಿದ್ದೂ ಆಗೊಮ್ಮೆ ಈಗೊಮ್ಮೆ ಇಲಿಗಳು ಕಣ್ಣಿಗೆ ಬೀಳುವುದುಂಟು. ಅದಕ್ಕೆ ಬೇರೆಡೆಗಳಿಂದ
ಕ್ಯಾರಾವಾನುಗಳಲ್ಲಿ ಬರುವ ಪ್ರವಾಸಿಗರೇ ಕಾರಣ ಎನ್ನುವುದು ಇಲಿ ನಿರ್ಮೂಲನಾ ಅಧಿಕಾರಿಗಳ ದೂರು!
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.