ರಿಬ್ಬನ್‌ನಿಂದ ರಾಷ್ಟ್ರಧ್ವಜ!


Team Udayavani, Aug 15, 2019, 5:00 AM IST

Rebbon

ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ ಬೆಂಕಿ ಪೊಟ್ಟಣವನ್ನು ತೆರೆದಾಗ ರಿಬ್ಬನ್‌ಗಳು ನಮ್ಮ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಿರುತ್ತವೆ!

ರಹಸ್ಯ:
ಇದಕ್ಕೆ ಬೇಕಾದ ವಸ್ತುಗಳು: ಒಂದು ದೊಡ್ಡ ಬೆಂಕಿಪೊಟ್ಟಣ. ಸುಮಾರು ಮೂರು ಇಂಚ್‌ ಉದ್ದದ ಕೇಸರಿ, ಬಿಳಿ, ಹಸಿರು, ನೀಲಿ ಬಣ್ಣದ ಹತ್ತಿ ಬಟ್ಟೆಯ ರಿಬ್ಬನ್‌ಗಳು, ಒಂದು ರಾಷ್ಟ್ರಧ್ವಜ (ಇದನ್ನು ಚಿಕ್ಕದಾಗಿ ಮಡಚಿದಾಗ, ಬೆಂಕಿಪೊಟ್ಟಣದ ಅರ್ಧ ಭಾಗದಲ್ಲಿ ಕೂರುವಂತಿರಬೇಕು), ಒಂದು ರಟ್ಟಿನ ತುಂಡು.

ಬೆಂಕಿ ಪೊಟ್ಟಣದ ಡ್ರಾಯರನ್ನು ತೆಗೆದು ಅದರೊಳಗಿನ ಕಡ್ಡಿಗಳನ್ನು ಖಾಲಿ ಮಾಡಿ. ಡ್ರಾಯರಿನ ಅರ್ಧಭಾಗಕ್ಕೆ ಒಂದು ರಟ್ಟಿನ ತುಂಡನ್ನು ಅಡ್ಡಕ್ಕೆ ಇಟ್ಟು ಎರಡು ಪ್ರತ್ಯೇಕ ಭಾಗಗಳಾಗುವಂತೆ ಮಾಡಿ. ಒಂದು ಭಾಗದಲ್ಲಿ ರಾಷ್ಟ್ರಧ್ವಜವನ್ನು ಮಡಚಿ ಇಟ್ಟು ಡ್ರಾಯರನ್ನು ಬೆಂಕಿ ಪೊಟ್ಟಣದ ಹೊರ ಹೊದಿಕೆಯೊಳಗೆ ಇಟ್ಟು ಮುಚ್ಚಿ. ಇಷ್ಟನ್ನು ನೀವು ಮೊದಲೇ ಸಿದ್ಧಪಡಿಸಿಟ್ಟುಕೊಂಡಿರಬೇಕು.

ಪ್ರದರ್ಶನದ ಸಮಯದಲ್ಲಿ ಧ್ವಜ ಇರುವ ಬದಿಯು ನಿಮ್ಮ ಕಡೆಗೆ ಇರುವಂತೆ ಬೆಂಕಿ ಪೊಟ್ಟಣವನ್ನು ಹಿಡಿದು ಅದನ್ನು ಅರ್ಧಕ್ಕಿಂತಲೂ ಕಡಿಮೆ ತೆರೆದು ಒಳಗಡೆ ಖಾಲಿ ಎಂಬುದಾಗಿ ಬೆಂಕಿ ಪೊಟ್ಟಣದ ಇನ್ನೊಂದು ತುದಿಯನ್ನು ಪ್ರೇಕ್ಷಕರಿಗೆ ತೋರಿಸಿ. ಆ ಖಾಲಿ ಭಾಗದಲ್ಲಿ ರಿಬ್ಬನ್‌ಗಳನ್ನು ಒಂದೊಂದಾಗಿ ಹಾಕಿ ಪೊಟ್ಟಣವನ್ನು ಮುಚ್ಚಿ. ಪ್ರೇಕ್ಷಕರೆಲ್ಲರಿಗೂ “ಭಾರತ್‌ ಮಾತಾಕೀ ಜೈ, ವಂದೇ ಮಾತರಂ’ ಎಂದು ಗಟ್ಟಿಯಾಗಿ ಹೇಳಲು ಹೇಳಿ. ಅವರು ಈ ಘೋಷಣೆ ಹೇಳಲು ಮೈಮರೆತಾಗ, ಅವರ ಗಮನಕ್ಕೆ ಬಾರದಂತೆ ಧ್ವಜರುವ ತುದಿಯು ಪ್ರೇಕ್ಷಕರ ಕಡೆಗಿರುವಂತೆ ಬೆಂಕಿ ಪೊಟ್ಟಣವನ್ನು ತಿರುಗಿಸಿ. ಅದನ್ನು ತೆರೆದು ಧ್ವಜವನ್ನು ಹೊರತೆಗೆದು ಸರಿಯಾದ ಕ್ರಮದಲ್ಲಿ ಅದನ್ನು ಬಿಡಿಸಿ ಹಿಡಿದುಕೊಳ್ಳಿ. ಈಗ ಪ್ರೇಕ್ಷಕರ ಕೂಗು ಮುಗಿಲು ಮುಟ್ಟುವುದರಲ್ಲಿ ಸಂಶಯವಿಲ್ಲ.

ನಿರೂಪಣೆ: ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.